ಮಧುಗಿರಿ: ಕಳೆದ ಹಲವಾರು ವರ್ಷಗಳಿಂದ ಪಕ್ಷದ ಕಾರ್ಯಕರ್ತರ ಶ್ರಮದಿಂದ ಈ ದೇಶಾದ್ಯಂತ ಇಂದು ಬಿಜೆಪಿ ಪಕ್ಷ ಸಂಘಟನಾತ್ಮಕವಾಗಿ, ರಾಜಕೀಯವಾಗಿ ಬೆಳೆದು ಅಧಿಕಾರದ ಚುಕ್ಕಾಣಿ ಹಿಡಿದಿದೆ, ಸಂಘಟನಾ ಹಾಗೂ ದೇಶದ ಜನರ ಮೇಲೆ ಮೋದಿ ಅವರು ವಿಶ್ವಾಸ ಇಟ್ಕೊಂಡು ದೇಶದಲ್ಲಿ ಪರಿವರ್ತನೆ ಆಗಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ದಿಂದಯಲ್ ಜಿ ಕಂಡ ಅಂತ್ಯೋದಯ ಕಾರ್ಯಕ್ರಮ ಅನುಷ್ಠಾನಗೊಳ್ಳಬೇಕು ಎಂದಾಗ ಜನರು ಸಂಪೂರ್ಣ ಬೆಂಬಲ ಸೂಚಿಸಿ ಅಧಿಕಾರ ಕೊಟ್ಟಿದ್ದಾರೆ. ಹಿಂದೆ ಅಟಲ್ಜಿ ಅವರು ದೇಶದ ಪ್ರಧಾನಿಯಾಗಿದ್ದಾಗ ಈ ದೇಶವನ್ನು ಮುನ್ನಡೆಸಿ ಸಾಲದಲ್ಲಿ ಮುಳುಗಿದ ದೇಶವನ್ನು ಸಾಲ ಮುಕ್ತವಾಗಿ ಮಾಡಿ ದೇಶದ ಎಲ್ಲಾ ರಾಜ್ಯಗಳನ್ನು ಅಭಿವೃದ್ಧಿಪಡಿಸಲು ಚಿಂತೆ ಮಾಡಿದರು. ಅದೇ ರೀತಿ ಮೋದಿಯವರು ಸಹ ದೇಶದ ಜನಸಾಮಾನ್ಯರ ನೆಮ್ಮದಿಗೆ, ಅಭಿವೃದ್ಧಿಗೆ ಸಹಕರಣ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ದೇಶಭಕ್ತರ ಆಧಾರದ ಮೇಲೆ ದೇಶ ಕಟ್ಟಲು ಮುಂದಾಗಿದ್ದು ಆದ್ದರಿಂದ ನಮ್ಮ ಪಕ್ಷವು ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಆತ್ಮೀಯವಾಗಿ ಕಾರ್ಯಕರ್ತರಿಗೆ ಹಾಗೂ ಜನಸಾಮಾನ್ಯರಿಗೆ ಗೌರವ ಕೊಡುವ ಏಕೈಕ ವ್ಯಕ್ತಿ ಎಂದರೆ ಅದು ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ರವರು. ಹಿಂದುಳಿದ ವರ್ಗದಿಂದ ನಾನು 2008ರಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದಾಗ ಆ ಸಮಯದಲ್ಲಿ ನನಗೆ ಒಂದು ಕಿವಿ ಮಾತು ಹೇಳಿದರು. ಅದು ಏನೆಂದರೆ, ಪಕ್ಷಕ್ಕೆ ಗೌರವ ಕೊಟ್ಟು ಕೆಲಸ ಮಾಡಿದಾಗ ಮಾತ್ರ ಪಕ್ಷದಲ್ಲಿ ಉನ್ನತ ಸ್ಥಾನಕ್ಕೆ ಏರಬಹುದು. ಇವತ್ತು ಆ ಮಾತು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ನಾನು ಜಿಲ್ಲಾ ಅಧ್ಯಕ್ಷ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದೇನೆ. ಜಿಲ್ಲೆಯಲ್ಲಿ ಇಂತಹ ವ್ಯಕ್ತಿ ಇರುವುದೇ ನಮ್ಮ ಪುಣ್ಯ ಇವರ ಮಾರ್ಗದರ್ಶನ ನೆರಳಲ್ಲಿ ಹಲವಾರು ಕಾರ್ಯಕರ್ತರು ಬೆಳೆದು ಉನ್ನತ ಸ್ಥಾನದಲ್ಲಿ ಕೆಲಸ ಮಾಡುತ್ತಿರುವುದು ನಾವು ನೋಡಬಹುದು, ಈ ದಿನ ನಮ್ಮ ಮಧುಗಿರಿ ಮಂಡಲ ಕಚೇರಿಗೆ ಬಂದು ಕಾರ್ಯಕರ್ತರನ್ನು ಕುರಿತು ಮಾತನಾಡಿರುವುದು ನಮ್ಮ ಸೌಭಾಗ್ಯ ಎಂದು ತಿಳಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷರಾದ ನರಸಿಂಹಮೂರ್ತಿ ಮಾತನಾಡಿ, ತಾಲೂಕಿನ ಬಿಜೆಪಿ ಮಂಡಲ ಅಧ್ಯಕ್ಷ ಸ್ಥಾನ ಮಾನ ನನಗೆ ಸಿಕ್ಕಿದೆ ಅಂದರೆ ಅದು ನಮ್ಮ ಗುರುಗಳು ಸಚಿವರಾದ ಬಿ ಸಿ ನಾಗೇಶ್ ರವರ ಆದರ್ಶ ಮಾರ್ಗದಿಂದ ಮಾತ್ರ,ಸಚಿವರು ಮಾರಮ್ಮ ತಾಯಿಯ ದರ್ಶನ ಪಡೆದು ಈ ದಿನ ನಮ್ಮ ಮಂಡಲ ಕಚೇರಿಗೆ ಭೇಟಿ ಕೊಟ್ಟಿರುವುದು ತುಂಬಾನೇ ಸಂತೋಷದ ವಿಚಾರ, ಸಚಿವರು ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಕ್ಕೇರಬೇಕು, ಪಕ್ಷಕ್ಕೆ ಇವರ ಶ್ರಮ ಹೋರಾಟ ನಮ್ಮೆಲ್ಲ ಕಾರ್ಯಕರ್ತರಿಗೆ ಒಂದು ಮಾರ್ಗದರ್ಶನ ಇದ್ದಹಾಗೆ, ಕಾರ್ಯಕರ್ತರು ಇವರ ಮಾರ್ಗದರ್ಶನವನ್ನು ಸದ್ಬಳಕೆ ಮಾಡಿಕೊಳ್ಳಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮೀಪತಿ, ರಾಜ್ಯ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಬಾಬು, ಮಾಜಿ ಶಾಸಕರಾದ ಗಂಗಹನುಮಯ್ಯ, ರಾಜ್ಯ ಕಾರ್ಯಕಾರಿಣಿ ಸದಸ್ಯ ರುದ್ರೇಶ್.ಎಂ.ವೈ, ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಹನುಮಂತರಾಜು ದುರ್ಗಿ ವೆಂಕಟೇಶ್, ಮಂಡಲ ಒಬಿಸಿ ಮೋರ್ಚಾ ಅಧ್ಯಕ್ಷ ಜಗಧೀಶ ಆಚಾರ್, ಹಿರಿಯ ಮುಖಂಡರಾದ ಡಾ.ವೆಂಕಟರಾಮಯ್ಯ, ಜಿಲ್ಲಾ ಮಾಧ್ಯಮ ಪ್ರಮುಖ್ ಆದಿಶೇಷ ಗುಪ್ತ, ಕಾರ್ಯಾಲಯ ಕಾರ್ಯದರ್ಶಿ ಸುರೇಶ್, ಯುವ ಮೋರ್ಚಾ ಅಧ್ಯಕ್ಷ ಕಾರ್ತಿಕ್ ಆರಾಧ್ಯ, ಪದಾಧಿಕಾರಿಗಳಾದ ತಿಮ್ಮಜ್ಜ, ಡಾ.ವೆಂಕಟರವಣಪ್ಪ, ನಾಗೇಂದ್ರ, ಜಯಣ್ಣ, ದೀಕ್ಷಿತ್ ಹಾಗೂ ಮುಂತಾದವರು ಇದ್ದರು.
ವರದಿ : ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy