ವಿಶೇಷ ವರದಿ: ಅಬಿದ್ ಮಧುಗಿರಿ
ಮಧುಗಿರಿ: ಪಟ್ಟಣದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಡಿಪೋ ಪ್ರಾರಂಭಗೊಂಡು ಸುಮಾರು ಎಂಟು ವರ್ಷಗಳು ಕಳೆದರೂ ಸಾರ್ವಜನಿಕರಿಗೆ ಸಮರ್ಪಕವಾದ ಸಾರಿಗೆ ಸೇವೆ ಸಿಗುತ್ತಿಲ್ಲ.
ಪಾವಗಡ ತಾಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಿಂದ ಬೆಂಗಳೂರಿಗೆ ನೇರ ಬಸ್ ಸೌಲಭ್ಯವಿದೆ. ಆದರೆ ಮಧುಗಿರಿ ತಾಲ್ಲೂಕಿನ ಐಡಿಹಳ್ಳಿ ಹೋಬಳಿಯ ತಾಡಿ ಗ್ರಾಮದಿಂದ ಮಾತ್ರ ಬೆಂಗಳೂರಿಗೆ ನೇರ ಬಸ್ ಸೌಲಭ್ಯವಿದೆ. ಇನ್ನುಳಿದ ಮಿಡಿಗೇಶಿ ಹೋಬಳಿಯ ಪ್ರಯಾಣಿಕರು ಪಾವಗಡದಿಂದ ಬರುವ ಬಸ್ಸುಗಳಲ್ಲಿ ಸೀಟ್ ಇದ್ದರೆ ಕುಳಿತುಕೊಳ್ಳಬಹುದು ಇಲ್ಲದಿದ್ದರೆ ಸ್ಟಾಂಡಿಂಗ್ ನಲ್ಲೇ ರಾಜಧಾನಿಗೆ ಪ್ರಯಾಣ ಬೆಳೆಸಬೇಕಾಗುತ್ತದೆ.
ದೊಡ್ಡೇರಿ ಪುರವರ ಕೊಡಿಗೆನಹಳ್ಳಿ ಹೋಬಳಿಗಳ ಜನತೆ ಮಧುಗಿರಿಗೆ ಬಂದು ಇಲ್ಲಿಂದ ಸಾರಿಗೆ ಬಸ್ಸುಗಳಲ್ಲಿ ಸೀಟು ಸಿಕ್ಕಿದರೆ ಆರಾಮವಾಗಿ ಪ್ರಯಾಣ ಬೆಳೆಸಬಹುದು. ಇಲ್ಲದಿದ್ದರೆ, ಖಾಸಗಿ ಬಸ್ಸುಗಳಲ್ಲಿ ಬೆಂಗಳೂರು ತಲುಪಬೇಕಾಗುತ್ತದೆ.
ಕೆ.ಎನ್. ರಾಜಣ್ಣನವರು ಶಾಸಕರಾಗಿದ್ದಾಗ ಸಾರ್ವಜನಿಕರ ಮನವಿಗೆ ಸ್ಪಂದಿಸಿ 4 ಸಿಂಗಲ್ ಬಸ್ ಸೇವೆಯನ್ನು ಲೋಕಾರ್ಪಣೆಗೊಳಿಸಿದ್ದರು. ನಂತರದ ದಿನಗಳಲ್ಲಿ ಈ ಬಸ್ ಸೇವೆ ಸ್ಥಗಿತಗೊಂಡಿದ್ದು, ಕೋರ್ಟ್ ಕಚೇರಿ ಆಸ್ಪತ್ರೆ ಕೆಲಸಗಳಿಗೆ ಬೆಂಗಳೂರಿಗೆ ಹೋಗಬೇಕಾದ ಪ್ರಯಾಣಿಕರು ಪಾವಗಡದಿಂದ ಬರುವ ಬಸ್ ಗಳಲ್ಲಿ ಪ್ರಯಾಣಿಸಬೇಕು. ಇಲ್ಲದಿದ್ದರೆ ಇಲ್ಲಿಂದ ತುಮಕೂರಿಗೆ ಹೋಗಿ ಅಲ್ಲಿಂದ ತುಮಕೂರು–ಬೆಂಗಳೂರು ಬಸ್ ಗಳಲ್ಲಿ ಬೆಂಗಳೂರು ತಲುಪಬೇಕಾದ ಸ್ಥಿತಿ ಇದೆ.
ಪಾವಗಡ ದಿಂದ ಬರುವ ಸಾರಿಗೆ ಬಸ್ಸುಗಳಲ್ಲಿ ಹಿಂಬದಿಯ ಸೀಟುಗಳಲ್ಲಿ ಬಟ್ಟೆಯ ಲಗೇಜುಗಳನ್ನು ತುಂಬಿರುತ್ತಾರೆ. ಮಧುಗಿರಿಯ ಪ್ರಯಾಣಿಕರಿಗೆ ಸೀಟುಗಳು ಸಿಗುವುದಿಲ್ಲ. ತಾಲೂಕಿನ ಜನಪ್ರತಿನಿಧಿಗಳು ಸಾರಿಗೆ ವ್ಯವಸ್ಥೆಯನ್ನು ಉತ್ತಮಗೊಳಿಸುವರೇ ಎಂದು ಪ್ರಯಾಣಿಕರು ನಿರೀಕ್ಷಿಸುತ್ತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz