ಮಧುಗಿರಿ: ಬಹುಜನ ಸಮಾಜ ಪಾರ್ಟಿ(BSP) ವತಿಯಿಂದ ಮಧುಗಿರಿ ತಾಲೂಕಿನ ರಾಜ ಬೀದಿಗಳಲ್ಲಿ ‘ಸಂವಿಧಾನ ಸಂರಕ್ಷಣಾ ಜನಜಾಗೃತಿ’ ಜಾಥಾ ನಡೆಯಿತು.
ಜಾಥಾವನ್ನುದ್ದೇಶಿಸಿ ಮಾತನಾಡಿದ ಬಿಎಸ್ ಪಿ ಮುಖಂಡರು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಕ್ಕೆ ಇಷ್ಟು ವರ್ಷ ಮತ ನೀಡಿ ತೊಂದರೆಗೆ ಅನುಭವಿಸಿದ್ದೀರಿ, ಇನ್ನು ಮುಂದೆ ಬಿಎಸ್ ಪಿ ಪಕ್ಷಕ್ಕೆ ಮತ ನೀಡಿ, ರೈತರಿಗೆ ಸಾಲ ಮನ್ನಾ, ಬಡವರಿಗೆ ಗುಡಿಸಲು ಮುಕ್ತ ಯೋಜನೆ ಮೂಲಕ ಮನೆ ಮಂಜೂರು ಮಾಡುತ್ತೇವೆ. ಬಡವರ ಅಭಿವೃದ್ಧಿಯಾಗಬೇಕಾದರೆ ಕರ್ನಾಟಕದಲ್ಲಿ ಬಿಎಸ್ ಪಿ ಅಧಿಕಾರ ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ರಾಮ್ ಜಿ. ಗೌತಮ್ , ಕರ್ನಾಟಕ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಆರ್.ಮುನಿಯಪ್ಪ, ರಾಜ್ಯ ಕಾರ್ಯದರ್ಶಿ ವಾಸು, ನಾಗೇಂದ್ರಪ್ಪ, ಮಂಜುನಾಥ, ರಾಜಸಿಂಹ ಬೆಲ್ಲದ ಮಡುಗು ಶಿವಕುಮಾರ್, ತಾಲೂಕ್ ಅಧ್ಯಕ್ಷರು ಗೋಪಾಲ್ ಚಂದ ಪಾಶ, ನಾಗರಾಜು, ಶಿವು ಸೇರಿದಂತೆ ಹಲವು ಬಿಎಸ್ಪಿ ಮುಖಂಡರು ಜಾಥಾದಲ್ಲಿ ಭಾಗವಹಿಸಿದ್ದರು.
ವರದಿ: ದೊಡ್ಡೇರಿ ಮಹಾಲಿಂಗಯ್ಯ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz