ಮಧುಗಿರಿ: ಪಟ್ಟಣದ ಹೊರವಲಯದಲ್ಲಿರುವ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ತಾಲೂಕಿನ ಜಾಮ್ಯ ಮಸೀದಿ ವತಿಯಿಂದ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಆಗಮಿಸಿದ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣನವರು ಸಾಮೂಹಿಕ ಪ್ರಾರ್ಥನೆಯಲ್ಲಿ ನಮಾಜ್ ಟೋಪಿ ಧರಿಸಿ ಪ್ರಾರ್ಥನೆಯಲ್ಲಿ ಭಾಗಿಯಾದರು.
ನಮಾಜ್ ಬಳಿಕ ಮಾತನಾಡಿದ ಸಚಿವರು, ಅಲ್ಪಸಂಖ್ಯಾತರ ಸಮುದಾಯದ ಆಶೀರ್ವಾದದಿಂದ ರಾಜ್ಯದಲ್ಲಿ ರಾಜಕೀಯ ಬದಲಾವಣೆಗೆ ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ನಾವು ಸಹ ಎಲ್ಲರೂ ಸದಾಕಾಲ ನಿಮ್ಮ ಜೊತೆ ಇರುತ್ತೇವೆ, ನಿಮ್ಮ ಮೇಲೆ ಯಾವುದೇ ದಬ್ಬಾಳಿಕೆ, ತೊಂದರೆಯಾಗದಂತೆ ನಿಮ್ಮ ಜೊತೆಯಲ್ಲಿ ಇದ್ದು, ನೀವು ಎಲ್ಲರೂ ಕೂಡ ಸುಖ-ಶಾಂತಿಯಿಂದ ಇರುವ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತೇವೆ ಎಂದರು.
ಈ ಸಾಮೂಹಿಕ ಪ್ರಾರ್ಥನೆಯಲ್ಲಿ ನನಗೂ ಪ್ರಾರ್ಥನೆ ಮಾಡಲು ಅನುವು ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ ಅವರು ಬಕ್ರೀದ್ ಹಬ್ಬದ ಶುಭಾಶಯಗಳನ್ನು ಕೋರಿದರು.
ಧರ್ಮ ಗುರುಗಳಾದ ಯಾಸಿರ್ ಅರ್ಫತ್ ಹಬ್ಬದ ಸಂದೇಶ ಸಾರಿದರು. ಪ್ರಾರ್ಥನೆಯ ಬಳಿಕ ಮುಸ್ಲಿಂ ಭಾಂದವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಧರ್ಮ ಗುರುಗಳಾದ ಯಾಸಿರ್ ಅರ್ಫಾತ್, ಜಾಮಿಯಾ ಮಸೀದಿ ಅಧ್ಯಕ್ಷರಾದ ಅಲೀಮ್, ಉಪಾಧ್ಯಕ್ಷರಾದ ಸಾಧಿಕ್, ಕಾರ್ಯದರ್ಶಿ ಸೈಯದ್ ಕರೀಂ, ಅಲ್ಪಸಂಖ್ಯಾತರ ಮುಖಂಡರಾದ ಅಯ್ಯುಬ್, ಬಾಬಾ ಫಕ್ರುದ್ದೀನ್ ಶರೀಫ್, ಹರ್ಷದ ಹುಸೇನ್, ಬೈಜು, ಸೈಯದ್ ಅಲಾವುದ್ದೀನ್ , ಸಮಿ, ವಾಜಿದ್, ಝಬಿವುಲ್ಲಾ, ನವಾಬ್, ಮುನ್ನ ಟೈಲರ್, ಸೈಯದ್ ಸಿಕಂದರ್, ಮನ್ನು ಹಾಗೂ ಮಸೀದಿ ಪದಾಧಿಕಾರಿಗಳು ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಇದ್ದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA