ಮಧುಗಿರಿ: ಜೀವನದಲ್ಲಿ ಪ್ರಕೃತಿ ಅರಣ್ಯಕ್ಕೆ ಹೆಚ್ಚಿನ ಹೊತ್ತು ನೀಡಿ ಗಿಡ ಮರಗಳನ್ನು ಬೆಳೆಸುವುದರಿಂದ ಶುದ್ಧ ಗಾಳಿ ಸಿಗುತ್ತೆ ಹಾಗೂ ಅತ್ಯುತ್ತಮ ಸ್ಥಿತಿಯಲ್ಲಿ ತಾಪಮಾನವನ್ನು ಕಾಪಾಡಿಕೊಳ್ಳಬಹುದು ಎಂದು ಉಪ ವಿಭಾಗ ಅಧಿಕಾರಿಗಳಾದ ರಿಷಿ ಆನಂದ್ ಹೇಳಿದರು.
ರಾಜ್ಯ ಸರಕಾರ ಆದೇಶದಂತೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಅರಣ್ಯ ಇಲಾಖೆ ಮತ್ತು ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮಕ್ಕೆ ಉಪವಿಭಾಗ ಅಧಿಕಾರಿಗಳಾದ ರಿಷಿ ಆನಂದ್ ಸಸಿ ನೆಡುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ನಂತರ ಮಾಧ್ಯಮದೊಂದಿಗೆ ಮಾತನಾಡಿ, ಪರಿಸರ ನಮ್ಮೆಲ್ಲರನ್ನು ರಕ್ಷಿಸುತ್ತದೆ ಹಾಗೆ ನಾವು ಪರಿಸರ ಉಳಿಸಲು ಶ್ರಮ ಪಡಬೇಕು. ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಲ್ಲರೂ ಗಿಡ ಮರ ಬೆಳೆಸುವುದರಿಂದ ಮಾತ್ರ ಸ್ವಚ್ಛ ಸುಂದರ ಪರಿಸರದ ಬದುಕಾಗುತ್ತದೆ ಎಂದರು.
ತಾಲೂಕು ದಂಡಾಧಿಕಾರಿಗಳಾದ ಸಿಬ್ಗತುಲ್ಲಾ ರವರು ಮಾತಾಡಿ, ಆಮ್ಲಜನಕದ ಪ್ರಾಮುಖ್ಯತೆಯನ್ನು ನಾವು ಕಳೆದ ಕೋವಿಡ್ ಸಂದರ್ಭದಲ್ಲಿ ನೋಡಿದ್ದೇವೆ ಆದ್ದರಿಂದ ಸಸಿಗಳನ್ನು ನೆಡುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನೀಡೋಣ ಸ್ವಂತ ಅಥವಾ ಬಾಡಿಗೆ ಮನೆ ಇರಲಿ ತಲಾ ಮನೆಯವರು ಮನೆ ಮುಂದೆ ಎರಡು ಗಿಡ ನೆಟ್ಟು ಮರವಾಗಿ ಬೆಳೆಸುವುದು ತುಂಬಾನೆ ಅವಶ್ಯಕವಾಗಿದ್ದು ಈ ಕಾರ್ಯದಿಂದ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಕೈಜೋಡಿಸಿದಂತೆ ಎಂದರು.
ಅರಣ್ಯ ಇಲಾಖೆ ಅಧಿಕ್ಷಕರಾದ ರವಿ ರವರು ಮಾತನಾಡಿ, ನಾವು ಪ್ರತಿ ವರ್ಷದಂತೆ ಜುಲೈ ಮೊದಲನೇ ವಾರದಲ್ಲಿ ವನಮಹೋತ್ಸವವನ್ನು ಆಚರಿಸುತ್ತಾ ಬಂದಿದ್ದೇವೆ, 1950 ರಿಂದ ಕೆ ಮುನ್ಸಿ ಸಾಹೇಬರು ಅಂದಿನ ಕೃಷಿ ಸಚಿವರಾಗಿದ್ದರು ಆಗ ಎಲ್ಲಿ ನಗರಗಳ ಬೆಳವಣಿಗೆ ಇಂದ ಅರಣ್ಯ ನಾಶವಾಗುತ್ತೋ ಎಂಬ ಸಮಯ ಪ್ರಜ್ಞೆಯಿಂದ ಕೆ ಮುನ್ಸಿ ರವರು ಮರ ಗಿಡ ಬೆಳೆಸದೆ ಹೋದರೆ ಎಲ್ಲಿ ಪ್ರಕೃತಿ ವಿಕೋಪ ಆಗುತ್ತೆ ಎಂದು ಇಡೀ ದೇಶ ವ್ಯಾಪ್ತಿ ಗಿಡ ಮರಗಳ ಬೆಳವಣಿಗೆ ಹಾಗೂ ಅದರ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಅರಿವು ಮೂಡಿಸುವ ಉದ್ದೇಶದಿಂದ ವನಮಹೋತ್ಸವ ಕಾರ್ಯಕ್ರಮವನ್ನು ಜಾರಿಗೆ ತಂದರು, ಜೀವ ವೈವಿಧ್ಯತೆ ಸಮತೋಲನೆ ಇರಬೇಕಾದರೆ 33% ಅರಣ್ಯ ಇರಲೇಬೇಕು ಅರಣ್ಯ ಇಲ್ಲವಾದಲ್ಲಿ ಜೀವ ವೈವಿಧ್ಯತೆ ಸಮತೋಲನೆ ಇರಲ್ಲ ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಮನೆಗೊಂದು ಗಿಡ ಊರಿಗೆ ಒಂದು ವನ ಎಂಬಂತೆ ಇರಲೇಬೇಕು ಆ ದೃಷ್ಟಿಯಿಂದ ಸರಕಾರ ಇಂದು ನಮಗೆ 5000 ಗಿಡ ನೆಡುವ ಗುರಿ ನೀಡಿದೆ, ಈಗಾಗಲೇ ಎಲ್ಲಾ ಗಿಡಗಳನ್ನು ನೆಟ್ಟಿದ್ದು ಎಲ್ಲರೂ ತಮ್ಮ ಮನೆಗಳ ಸುತ್ತಮುತ್ತ ಎಲ್ಲಿ ಜಾಗವಿದಿಯೋ ಮತ್ತು ಸರಕಾರಿ ಖಾಲಿ ಜಾಗದಲ್ಲಿ ಗಿಡ ನೆಟ್ಟು ಪ್ರಕೃತಿ ಸಮತೋಲನ ಆಗುವ ರೀತಿಯಲ್ಲಿ ಹಾಗೂ ಹಸಿರು ಹೊದಿಕೆ ಬೆಳವಣಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ವಲಯ ಅರಣ್ಯ ಇಲಾಖೆ ಆರ್.ಎಫ್.ಒ ಶೈಲಾ, ಅರಣ್ಯ ಇಲಾಖೆ ಮುತ್ತುರಾಜ್, ಪುರಸಭೆ ಮುಖ್ಯ ಅಧಿಕಾರಿ ನಜ್ಮಾ ಎ.ಅಬಕಾರಿ ಇಲಾಖೆ ನಿರೀಕ್ಷಕರಾದ ರಾಮಮೂರ್ತಿ, ಉಪ ವಿಭಾಗ ಅಧಿಕಾರಿಗಳ ಕಚೇರಿಯ ಸಿಬ್ಬಂದಿ ಸುದರ್ಶನ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ವರ್ಗ ಇದ್ದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA