ವರದಿ: ಆಬಿದ್ ಮಧುಗಿರಿ
ಮಧುಗಿರಿ: ತಾಲೂಕಿನ ದೊಡ್ಡೇರಿ ಹೋಬಳಿಯ ಸಜ್ಜೆಹೊಸಳ್ಳಿ ಗ್ರಾಮ ಪಂ ವ್ಯಾಪ್ತಿಯ ಸುವರ್ಣಮುಖಿ ನದಿಯಲ್ಲಿ ಭೂತಾಯಿಯ ಒಡಲನ್ನು ಬಗೆದು, ಕಳ್ಳರು ಹಾಡ ಹಗಲಲ್ಲೇ ಮರಳನ್ನು ದೋಚುತಿದ್ದಾರೆ.
ಹಗಲು ಇರುಳು ಎನ್ನದೆ ರಾಜ ರೋಷವಾಗಿ ಯಾವ ಇಲಾಖೆಯ ಅಧಿಕಾರಿಗಳ ಭಯ ಇಲ್ಲದೆ ಪ್ರಕೃತಿಯ ನೈಸರ್ಗಿಕ ಮರಳನ್ನು ಟ್ರ್ಯಾಕ್ಟರ್ ಗಳಲ್ಲಿ ತುಂಬಿಕೊಂಡು ಪ್ರತಿ ಟ್ಯಾಕ್ಟರ್ ಲೋಡಿಗೆ ಇಷ್ಟು ಹಣ ಎಂಬಂತೆ ನಿಗದಿ ಮಾಡಿಕೊಂಡು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ.
ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ಸುವರ್ಣಮುಖಿ ನದಿ ತುಂಬಿ ಹರಿದಿದ್ದು, ಇದರಿಂದ ಹೆಚ್ಚಾಗಿ ಮರಳು ಬಂದು ಈ ಭಾಗದಲ್ಲಿ ಸಂಗ್ರಹವಾಗಿದೆ, ಆದರೆ ಖಾಸಗಿ ಟ್ರ್ಯಾಕ್ಟರ್ ಮಾಲೀಕರು ಇದನ್ನೇ ದಂಧೆ ಮಾಡಿಕೊಂಡು ಖಾಸಗಿ ವ್ಯಕ್ತಿಗಳಿಗೆ ಮರಳು ಸರಬರಾಜು ಮಾಡುವುದಕ್ಕೆಈ ಪ್ರಕೃತಿ ನೈಸರ್ಗಿಕ ಮರಳನ್ನೇ ದೋಚುತ್ತಿದ್ದಾರೆ.
ಟ್ಯಾಕ್ಟರ್ ನಂಬರ್ ಕಾಣದಂತೆ ಮರೆ ಮಾಜಿ ಮರಳನ್ನು ತುಂಬಿ ಮಾರಾಟ ಮಾಡುತ್ತಿದ್ದರು ಹಾಗೂ ಇಷ್ಟೆಲ್ಲಾ ಅಕ್ರಮ ಹಾಡ ಹಗಲಲ್ಲೇ ನಡೆಯುತ್ತಿದ್ದರು, ಕ್ರಮಕ್ಕೆ ಮುಂದಾಗ ಬೇಕಾದ ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಇನ್ನಿತರ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾಣದಂತೆ ಮೌನವಹಿಸಿದ್ದಾರೆ. ಒಂದು ಪಕ್ಷ ಕಾಣುತ್ತಿದ್ದರು ನಮಗೂ ಅದಕ್ಕೆ ಸಂಬಂಧವಿಲ್ಲದ ರೀತಿ ಕಣ್ಮುಚ್ಚಿ ಕುಳಿತಿದ್ದಾರೋ ಎಂಬುದೇ ಸಾರ್ವಜನಿಕ ವಲಯದಲ್ಲಿ ಯಕ್ಷಪ್ರಶ್ನೆಯಾಗಿದೆ ?
ಇನ್ನಾದರೂ ಮರಳು ಅಕ್ರಮ ಸಾಗಾಟ ಮತ್ತು ಮರಳು ದಂದೆಕ್ಕೋರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜನಸಾಮಾನ್ಯರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಧ್ಯಮ ಮೂಲಕ ಒತ್ತಾಯಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA