ಮಧುಗಿರಿ: ಕಸಬಾ ಬಸವನಹಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಎನ್.ಹನುಮಂತರಾಯಪ್ಪ ಶಾಲಾ ವಿದ್ಯಾರ್ಥಿಗಳಿಗೆ ತಟ್ಟೆ ಲೋಟ ವಿತರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಳ್ಳವರು ಎಲ್ಲರೂ ಸಹ ದಾನ ಮಾಡುವುದಿಲ್ಲ, ಹೃದಯ ಇರುವಂತಹವರು ಅಥವಾ ಮಕ್ಕಳ ಕಲಿಕೆಗೆ ಪೂರ್ವಕವಾಗಿ ಸಹಾಯ ಮಾಡಬೇಕೆಂಬ ಮನೋಭಾವನೆ ಇರುವವರು ಅಥವಾ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕೆಂಬ ಮನಸ್ಸುಳ್ಳವರು ದಾನ ಧರ್ಮ ಮಾಡುತ್ತಾರೆ, ಆ ನಿಟ್ಟಿನಲ್ಲಿ ಮಧುಗಿರಿಯ ಶ್ರೀವಾರು ಹೋಟೆಲ್ ಮಾಲೀಕರಾದ ರಘು ಹಾಗೂ ಶ್ರೀನಿವಾಸ್ ಶೆಟ್ಟಿ ಬಹಳ ದೊಡ್ಡ ಮನಸ್ಸು ಮಾಡಿದ್ದು ಜೊತೆಗೆ ಶಿಕ್ಷಕಿ ಶೋಭಾ ರವರ ಕಾಳಜಿಯಿಂದ ನಾಲ್ಕು ಶಾಲೆ ಮಕ್ಕಳಿಗೆ ಉಚಿತವಾಗಿ ಊಟ ಮಾಡಲಿಕ್ಕೆ ಅನುಗುಣವಾಗಿ ತಟ್ಟೆ ಹಾಗು ಹಾಲು ಕುಡಿಯಲು ಲೋಟದ ವ್ಯವಸ್ಥೆ ಮಾಡಿಕೊಟ್ಟಿದ್ದು ಇದು ತುಂಬಾನೇ ಒಳ್ಳೆಯ ಸಮಾಜಮುಖಿ ಕಾರ್ಯ ಇಂತಹ ಕಾರ್ಯಗಳು ನಿರಂತರವಾಗಿ ಸಾಗಲಿ ಎಂದು ಆಶಿಸಿದರು.
ಮಧುಗಿರಿ ರೋಟರಿ ಕ್ಲಬ್ ಅಧ್ಯಕ್ಷರಾದ ಶಿವಲಿಂಗಪ್ಪ ಮಾತನಾಡಿ, ಸರಕಾರಿ ಶಾಲಾ ಶಿಕ್ಷಕರ ಮುತವರ್ಜಿಯಿಂದ ಗ್ರಾಮೀಣ ಭಾಗದ ಮಕ್ಕಳು ಇಂದು ನಗರ, ಪಟ್ಟಣ ಪ್ರದೇಶದ ಕಾನ್ವೆಂಟ್ ಶಾಲೆಗೆ ಸರಿಸಮಾನವಾಗಿ ಶೈಕ್ಷಣಿಕ ಸಾಧನೆ ಮಾಡುವಂತಹ ಸಾಮರ್ಥ್ಯ ತೋರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ, ಇನ್ನು ಮುಂದಾದರೂ ಜನಪ್ರತಿನಿಧಿಗಳು, ಉಳ್ಳವರು ಗ್ರಾಮೀಣ ಭಾಗದ ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ಸಹಾಯ ಹಸ್ತ ಚಾಚಿ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು.
ಶಿಕ್ಷಕಿ ಶೋಭಾ ಅವರು ಮಾತನಾಡಿ, ದಾನಿಗಳ ಸಹಯೋಗದಿಂದ ಈ ದಿನ ಕಿರಿಯ ಪ್ರಾಥಮಿಕ ಪಾಠಶಾಲೆ ಬಸವನಹಳ್ಳಿ, ಮಂಡರಗುಟ್ಟೆ, ಡಿ.ಎಮ್ ಬಡಾವಣೆ ಹಾಗೂ ಗುರು ಒಡೆಯರಹಳ್ಳಿ ಈ ನಾಲ್ಕು ಶಾಲೆಯ ಮಕ್ಕಳಿಗೆ ಉಚಿತ ತಟ್ಟೆ ಲೋಟ ವಿತರಿಸಲಾಗಿದೆ, ಸರಕಾರಿ ಶಾಲೆಯ ಮಕ್ಕಳ ಕುಂದು ಕೊರತೆಗಳನ್ನು ನಿವಾರಿಸಲು ಇಂತಹ ಸಮಾಜಮುಖಿ ಕೆಲಸ ಕಾರ್ಯಗಳ ಅವಶ್ಯಕತೆ ತುಂಬಾನೇ ಇದೆ, ಆದ್ದರಿಂದ ದಾನಿಗಳು ಸ್ವಯಂ ಪ್ರೇರಿತವಾಗಿ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮುಂದಾಗಿ ಮತ್ತು ಇಂತಹ ಸಮಾಜಮುಖಿ ಕೆಲಸ ಕಾರ್ಯಗಳಿಗೆ ಹೆಚ್ಚಿನದಾಗಿ ಕೈಜೋಡಿಸಿ ಈ ಮೂಲಕ ಸರಕಾರಿ ಶಾಲಾ ಮಕ್ಕಳ ಬೆನ್ನೆಲುಬಾಗಿ ನಿಲ್ಲಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರ ಅಧ್ಯಕ್ಷರು ಲಕ್ಷ್ಮಿ ರಂಗಯ್ಯ, ಸಿ ಆರ್ ಸಿ ತಿಮ್ಮರಾಜು, ರವೀಶ್, ಎನ್ಪಿಎಸ್ ಸಂಘದ ಅಧ್ಯಕ್ಷ ರಂಗನಾಥ್, ಎಸ್ ಡಿ ಎಮ್ ಸಿ ಅಧ್ಯಕ್ಷ ಕಾಂತರಾಜ್, ಹಾಗೂ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.
ವರದಿ: ಅಬಿದ್, ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA