ಕೊರಟಗೆರೆ : ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ದಿನಾಂಕ 28 ರಂದು ನಡೆಯುವ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯನ್ನ ಏರ್ಪಡಿಸಲಾಗಿತ್ತು.
ಸಭೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಿಯನ್ನ ಕಂಡು ಹೈರಾಣಾದ ಸಮುದಾಯದ ಮುಖಂಡರುಗಳು. ಕೊರಟಗೆರೆ ಪಟ್ಟಣದಲ್ಲಿ ಸುಮಾರು 10 ವರ್ಷಗಳಿಂದ ಹಳ್ಳ ಹಿಡಿದಿರುವ 1 ಕೋಟಿ ವೆಚ್ಚದ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿಯು 2011-12 ನೇ ಸಾಲಿನಲ್ಲಿ ಅನುಮೋದನೆಗೊಂಡ ಒಂದು ಕೋಟಿ ಅನುದಾನದ ಕಾಮಗಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಳ್ಳ ಹಿಡಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಭೆಗೆ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಜರಾಗದೇ ಸಮುದಾಯವನ್ನು ಅವಮಾನಿಸುತ್ತಿದ್ದಾರೆ ಹಾಗೂ ಅಧಿಕಾರಿಗಳು ಸಭೆಗೆ ಹಾಜರಾಗದೆ ತಮ್ಮ ಅಧೀನದಲ್ಲಿರುವ ಸಿಬ್ಬಂದಿಗಳನ್ನು ಸಭೆಗೆ ಕಳಿಸುತ್ತಾರೆ ಎಂದು ಸಭೆಯನ್ನು ಮೊಟುಕುಗೊಳಿಸಿ ಹೊರ ನಡೆದ ಘಟನೆಯು ಸಹ ನಡೆಯಿತು.
ಕೊರಟಗೆರೆ ವಿಧಾನಸಭಾ ಕ್ಷೇತ್ರವು ಮೀಸಲು ಕ್ಷೇತ್ರವಾಗಿದ್ದು, ಇಂತಹ ಮೀಸಲು ಕ್ಷೇತ್ರದಲ್ಲಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಸಮುದಾಯವನ್ನು ಗೃಹ ಸಚಿವರ ಕ್ಷೇತ್ರದಲ್ಲೇ ಕಡೆಗಣಿಸುತ್ತಿರುವ ಅಧಿಕಾರಿಗಳು. ವಾಲ್ಮೀಕಿ ಭವನವನದ ಕಾಮಗಾರಿಯನ್ನು ಮಂದಗತಿಯಲ್ಲಿ ಸಾಗಿಸುತ್ತಿರುವುದು ಶಾಸಕರ ಗಮನಕ್ಕೆ ಬರಬೇಕು. ಈಗಾಗಲೇ 55 ಲಕ್ಷ ಹಣ ಬಳಕೆಯಾಗಿದೆ. ಆದರೆ ಕಾಮಗಾರಿ ಪ್ರಗತಿಯಲ್ಲಿಲ್ಲ ಎಂದು ನಾಯಕ ಸಮಾಜದ ಮುಖಂಡ ಓಬಳರಾಜು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ ವಿ ಮಂಜುನಾಥ್ ಮಾತನಾಡಿ ಪಟ್ಟಣದಲ್ಲಿ ವಾಲ್ಮೀಕಿ ಭವನ ವಾಲ್ಮೀಕಿ ಪುತ್ತಲಿ ಸೇರಿದಂತೆ ಸಮುದಾಯದವರಿಗೆ ಕನಿಷ್ಠ ಸ್ಮಶಾನ ಇರುವುದಿಲ್ಲ ಸರ್ಕಾರ ಪರಿಶಿಷ್ಟ ಪಂಗಡದವರಿಗೆ ಕೋಟ್ಯಂತರ ರೂಪಾಯಿಗಳ ಅನುದಾನವನ್ನು ನೀಡುತ್ತಿದ್ದರು ತಾಲ್ಲೂಕು ಆಡಳಿತವು ಹಾಗೂ ಸಂಬಂದಿಸಿದ ಇಲಾಖಾ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆ ಹಾಗೂ ಪಟ್ಟಣ ಪಂಚಾಯಿತಿಯಲ್ಲಿ ಪರಿಶಿಷ್ಟ ಪಂಗಡದ ಜಾತಿಗೆ ಮೀಸಲಿಟ್ಟ ಲಕ್ಷಾಂತರ ರೂಪಾಯಿ ಅನುದಾನವನ್ನು ಬೇರೆ ಬೇರೆ ಕಾಮಗಾರಿಗಳಿಗೆ ಬಳಕೆ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿಲ್ಲವೇ ಅಥವಾ ಈ ಭ್ರಷ್ಟ ಅಧಿಕಾರಿಗಳು ಗುತ್ತಿಗೆದಾರದ ಪರ ಶಾಮೀಲಾಗಿದಾರೆಯೇ ಎಂದು ಪ್ರಶ್ನಿಸಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನಾಮಕವಸ್ತೆಗಷ್ಟೇ ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತಿದ್ದಾರೆ, ಪರಿಶಿಷ್ಟ ಪಂಗಡದ ಜಾತಿಯವರು ಕಾಡಿನಲ್ಲಿ ವಾಸವಿರುವುದು ಅವರು ನಾಡಿಗೆ ಬರುವುದಿಲ್ಲ ಅವರನ್ನು ಒಂದು ದಿನ ನಾಡಿಗೆ ಕರೆಯಿಸಿ ಖುಷಿ ಪಡಿಸುವುದರಲ್ಲಿ ಅಧಿಕಾರಿಗಳು ನಿಸುಮಾರಾದ್ದಾರೆ ಎಂದು ಸಮಾಜದ ಮುಖಂಡ ವಿನಯ್ ಕುಮಾರ್ ಗುಡುಗಿದರು.
ವಾಲ್ಮೀಕಿ ಜಯಂತಿಯನ್ನು ಎಲ್ಲ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಗ್ರಾಮೀಣ ಪ್ರದೇಶದ ಜನರು ಸೇರಿ ಅದ್ದೂರಿಯಾಗಿ ಮಹರ್ಷಿ ವಾಲ್ಮೀಕಿರವರ ಭಾವಚಿತ್ರವನ್ನು ಪಟ್ಟಣದ ಕಣ್ಣಪ್ಪ ದೇವಾಲಯದಿಂದ ರಾಜ ಬೀದಿಗಳಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಮಾಡಿ ಜಯಂತಿಯನ್ನು ಅತ್ಯಂತ ವೈಭವದಿಂದ ಆಚರಿಸಲು ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ಪ್ರಭಾರ ತಹಶೀಲ್ದಾರ್ ರಂಜಿತ್ ಕುಮಾರ್ , ಗ್ರೇಡ್ 2 ತಹಶೀಲ್ದಾರ್
ನರಸಿಂಹಮೂರ್ತಿ, ಇ ಓ ದೊಡ್ಡ ಸಿದ್ದಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಭಾಗ್ಯಮ್ಮ, ಸಮಾಜ ಕಲ್ಯಾಣಧಿಕಾರಿ ಶಿವಣ್ಣ, ಬಿ ಇ ಓ ನಟರಾಜು,ಬಿಸಿಎಂ ಇಲಾಖೆಯ ಅನಂತರಾಜು, ಪಶು ಇಲಾಖೆ ನಾಗಭೂಷಣ, ಎ ಇ ಇ ರವಿಕುಮಾರ್, ಸಬ್ ರಿಜಿಸ್ಟರ್ ಗಿರೀಶ್, ತಾ ಪಂ ಮಧುಸೂಧನ್, ತೋಟಗಾರಿಕೆ ಇಲಾಖೆಯ ನಾಗರಾಜು, ಎ ಇ ಇ ಕೀರ್ತಿ ನಾಯಕ್, ಎ ಎಸ್ ಐ ಧರ್ಮೆಗೌಡ, ರಾಜಸ್ವ ನಿರೀಕ್ಷಕ ಬಸವರಾಜು ಹಾಜರಿದ್ದರು.
ವರದಿ : ಮಂಜುಸ್ವಾಮಿ ಎಂ.ಎನ್. ಕೊರಟಗೆರೆ.