ತಿಪಟೂರು: ರಾಜ ಕಾಲುವೆ ಒತ್ತುವರಿ ತೆರವುಕಾರ್ಯಚರಣೆ ಮುಂದುವರಿದಿದ್ದು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಒಂದು ಇಂಚು ಜಾಗ ಅನ್ಯರಪಾಲಾಗಲು ಬಿಡುವುದಿಲ್ಲ ಎಂದು ಶಾಸಕ ಷಡಕ್ಷರಿ ಪುನರ್ ಉಚ್ಚರಿಸಿದರು.
ತಿಪಟೂರು ನಗರದ ಶಾಸಕರ ಕಚೇರಿಯಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ದಿನದ ಬಾಡಿಗೆ ಆಧಾರದ ಮೇಲೆ ಕೆಲ ದಿನಗಳ ಮಟ್ಟಿಗೆ ಅಯ್ಯಪ್ಪ ಪೂಜೆ ಮಾಡುತ್ತೇವೆ ಎಂದು ಲಿಖಿತ ಬರೆದು ಕೊಟ್ಟಿದ್ದರು. ಈಗ ಜಾಗ ನಮಗೆ ಸೇರಬೇಕೆಂದು ಬಯಸಿ ಮುಜರಾಯಿ ಇಲಾಖೆ ಜಾಗದ ಮೇಲೆ ಹಕ್ಕು ಸಾಧಿಸಲು ಮುಂದಾಗಿದ್ದಾರೆ.
ಒಂದು ವೇಳೆ ಮಂದಿರ ಕಟ್ಟಲೇ ಬೇಕೆಂದಿದ್ದರೆ ನಗರ ಸಭೆ ಸಿಎ ನಿವೇಶನವನ್ನು ಕಡಿಮೆ ಬೆಲೆಗೆ ಕೊಡಿಸುವ ಭರವಸೆ ಕೊಡುತ್ತೇನೆ. ಜೊತೆಗೆ ನನ್ನಿಂದಾದ ಅನುದಾನವನ್ನು ಒದಗಿಸುವೆ, ಆದರೆ ಮುಜರಾಯಿ ಇಲಾಖೆಯ ಜಾಗವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದರು.
ದೇವಸ್ಥಾನದ ಪೋಳಿಯನ್ನು ಕ್ರಮಬದ್ಧವಾಗಿ ಮತ್ತು ಶಾಸನಬದ್ಧವಾಗಿ ನಿರ್ಮಿಸಬೇಕೆಂದು ಅನಧಿಕೃತವಾಗಿ ನಿರ್ಮಿಸ ಲಾಗಿರುವ ಶೆಡ್ ಅನ್ನು ತೆರವಿಗೆ ಆದೇಶ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಮೂರು ಕೋಟಿ ರೂಪಾಯಿ ಪ್ರಸ್ತಾವನೆ ಸಲ್ಲಿಸಲಾಗಿದ್ದು ಮೊದಲ ಹಂತವಾಗಿ ಈಗಾಗಲೇ 50 ಲಕ್ಷ ಬಿಡುಗಡೆಯಾಗಿದೆ. ಪಕ್ಕದಲ್ಲಿರುವ ವಿನೋದ ಚಿತ್ರಮಂದಿರವನ್ನು ಸಹ ನೆಲವನ್ನು ಸಮಗೊಳಿಸಿ, ದೇವಸ್ಥಾನದ ಅಕ್ಕ ಪಕ್ಕ 40ಡಿ ಜಾಗ ಬಿಟ್ಟು ಬಡವರಿಗೆ ಅನುಕೂಲವಾಗುವ ಸಮುದಾಯ ಭವನ ನಿರ್ಮಿಸಲಾಗುವುದು ಎಂದು ಶಾಸಕರು ತಿಳಿಸಿದರು. ಈ ಸಭೆಯಲ್ಲಿ ಪೌರಾಯುಕ್ತರು ಬದನಗಡ್ಡಿಅವರು ಸಹ ಇದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA