ಕೊರಟಗೆರೆ: ಪುರಾತನ ಗಂಗಾಧರೇಶ್ವರ ಕೆರೆಯ ವಾಲ್ ಬಿರುಕು ಬಿದ್ದ ಪರಿಣಾಮ ಕೆರೆಯ ನೀರು ಭಾರೀ ಪ್ರಮಾಣದಲ್ಲಿ ಪೋಲಾಗುತ್ತಿದ್ದು, ಕೆರೆಗಳು ಖಾಲಿ ಇದ್ದ ಸಂದರ್ಭದಲ್ಲಿ ಬಿರುಕು ಬಿಟ್ಟ ಸ್ಥಳಗಳನ್ನ ಸರಿಪಡಿಸುತ್ತಿದ್ದರೆ. ಇಂದು ಅಪಾರ ಪ್ರಮಾಣದ ನೀರು ವ್ಯರ್ಥವಾಗುತ್ತಿರಲಿಲ್ಲ.
ಮುಂದಿನ ದಿನಗಳಲ್ಲಿ ಕೆರೆಗಳಿಂದ ಭಾರಿ ಗಂಡಾಂತರ ಸೃಷ್ಟಿಯಾಗುವ ಸನ್ನಿವೇಶ ಸೃಷ್ಟಿಯಾಗಿದೆ. ಕೆರೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಕೊರಟಗೆರೆಯಲ್ಲಿ ಇಲ್ಲವೇ ಇಲ್ಲ. ಅದರಿಂದಲೇ ಇಷ್ಟೆಲ್ಲ ಅವಾಂತರಗಳಿಗೆ ಕಾರಣವಾಗುತ್ತದೆ ಎಂದು ರೈತರ ಆರೋಪಿಸಿದರು.
ಮಳೆ ಬಂದಾಗ ಕೆರೆಗಳ ಬಿರುಕು ಕಾಣುತ್ತದೆ ಈ ಅಧಿಕಾರಿಗಳಿಗೆ , ಸಂಬಂಧಪಟ್ಟ ಅಧಿಕಾರಿಗಳು ಕೆರೆಗಳ ಬಗ್ಗೆ ಜಾಗೃತಿ ವಹಿಸಬೇಕು ಎಂಬ ಮಾತುಗಳು ಕೇಳಿ ಬಂತು.
ಗಂಗಾಧರೇಶ್ವರ ಕೆರೆಯಲ್ಲಿ ಆಗಿರುವ ಸಮಸ್ಯೆಯ ಬಗ್ಗೆ ರೈತರು ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ತಹಶೀಲ್ದಾರ್ ಮಂಜುನಾಥ್ ಖುದ್ದು ಪರಿಶೀಲಿಸಿದಾಗ ಎಂಟು ಅಡಿ ಆಳದಷ್ಟು ಕೆರೆಯ ವಾಲ್ ಬಳಿ ಬಿರುಕು ಹಾಗೂ ಕುಸಿತವಾಗಿದ್ದನ್ನ ಕಂಡು ಹಿಡಿದಿದ್ದು, ತಕ್ಷಣ ಆರ್ ಐ, ವಿ ಎ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನ ಕೆರೆಯ ಬಳಿ ಕರೆಸಿ, ಕೂಡಲೇ ಬಿರುಕು ಬಿಟ್ಟ ಸ್ಥಳಕ್ಕೆ ಮರಳಿನ ಚೀಲಗಳನ್ನು ತುಂಬುವಂತೆ ಅಧಿಕಾರಿಗಳಿಗೆ ತಹಶೀಲ್ದಾರ್ ಸೂಚನೆ ನೀಡಿದರು.
ಸದ್ಯ ಪಟ್ಟಣ ಪಂಚಾಯತಿ ಅಧಿಕಾರಿಗಳು ಜೆಸಿಪಿಯನ್ನ ಕರೆಸಿ ಮರಳಿನ ಚೀಲಗಳನ್ನ ಬಿರುಕು ಬಿಟ್ಟ ಸ್ಥಳಕ್ಕೆ ತುಂಬಿ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಅನಿಲ್, ತಹಶೀಲ್ದಾರ್ ಮಂಜುನಾಥ್, ಕಂದಾಯ ಅಧಿಕಾರಿಗಳು ಬಸವರಾಜು, ಪವನ್, ಪಟ್ಟಣ ಪಂಚಾಯಿತಿ ಹೆಲ್ತ್ ಆಫೀಸರ್ ಹುಸೇನ್, ಆರ್ ಐ ವೇಣುಗೋಪಾಲ್, ಸೇರಿದಂತೆ ರೈತರಾದ ರಂಗನಾಥ್ ಇತರರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q