ಪಾವಗಡ: ಶ್ರಾವಣ ಮಾಸದಲ್ಲಿ ಪಾವಗಡದ ಶನಿಮಹಾತ್ಮ ಸ್ವಾಮಿಯ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತದೆ. ಅದರಂತೆ ಈ ವರ್ಷವೂ ಕಳೆದ ಮೂರು ವಾರಗಳಿಂದ ಶ್ರೀ ಸ್ವಾಮಿಯ ದರ್ಶನ ಭಾಗ್ಯಕ್ಕಾಗಿ ಕರ್ನಾಟಕವಲ್ಲದೆ ಅಂತರಾಜ್ಯಗಳಿಂದ ಭಕ್ತ ಸಮೂಹ ಕಿಕ್ಕಿರಿದು ಬಂದಿದ್ದು ಸಾಕ್ಷಿಯಾಗಿದೆ.
ನಂಬಿ ಬಂದ ಭಕ್ತರ ಬದುಕಿನಲ್ಲಿ ಅನೇಕ ಅಚ್ಚರಿಗಳನ್ನು ಮೂಡಿಸುತ್ತಿರುವ ಶನಿಮಹಾತ್ಮ ಮತ್ತು ಶೀತಲಾಂಬ ತಾಯಿಯ ಲೀಲೆಗೆ ವರ್ಷದಿಂದ ವರ್ಷಕ್ಕೆ ಭಕ್ತರ ಬರುವಿಕೆ ಹೆಚ್ಚಳವಾಗುತ್ತಿದೆ.
ಇಲ್ಲಿ ವಿಶೇಷವಾಗಿ ನವಗ್ರಹ ಹೋಮ, ಚಂಡಿಕ ಹೋಮ ಇನ್ನಿತರೆ ಪೂಜಾ ಕೈಂಕರ್ಯ ಕಂಡ ಭಕ್ತರು ಪುನೀತರಾಗುತ್ತಿದ್ದಾರೆ. ಇನ್ನು ಶೀತಲಾಂಬಿಕೆ ಪೂಜೆ ಮಾಡಿದರೆ ಮದುವೆ ಆಗದವರಿಗೆ ಕಂಕಣ ಬಲ ಮನಶಾಂತಿ ನೆಮ್ಮದಿ ಕರುಣಿಸುತ್ತಾಳೆ ಎಂಬ ನಂಬಿಕೆ ಅಚಲವಾಗಿದೆ.
ಮತ್ತೊಂದು ವಿಶೇಷ ಅಂದ್ರೆ ಬಂದಂತಹ ಭಕ್ತರಿಗೆ ಎಲ್ಲಿಯೂ ಸಮಸ್ಯೆಯಾಗದಂತೆ ಎಸ್ ಎಸ್ ಕೆ ಸಂಘದವರು ಜಾಗೃತವಾಗಿ ಮೂಲಭೂತ ಸೌಕರ್ಯಗಳಾದ ಪ್ರಸಾದ, ಕೊಠಡಿ, ದರ್ಶನ ಸೌಲಭ್ಯ ನಿರ್ವಹಣೆ ಮಾಡುತ್ತಿರುವುದು ಮೆಚ್ಚುಗೆ ವ್ಯಕ್ತವಾಗಿದೆ.
ಎಸ್ ಎಸ್ ಕೆ ಸಂಘದ ಅಧ್ಯಕ್ಷರು ಆನಂದರಾವ್ ಅವರು ಮಾತನಾಡಿ, ಕೊನೆ ಶ್ರಾವಣ ಶನಿವಾರ ಸುಮಾರು 1 ಲಕ್ಷಕ್ಕೂ ಅಧಿಕ ಭಕ್ತರು ಬರುವ ನಿರೀಕ್ಷೆಯಿದೆ. ಒಟ್ಟಾರೆ ಕಡೇ ಶ್ರಾವಣ ಶನಿವಾರ ಪಾವಗಡದ ಶನಿಮಹಾತ್ಮ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರು ಹೆಚ್ಚು ಭಾಗವಹಿಸುವ ನಿರೀಕ್ಷೆಯಿದ್ದು. ಸುರಕ್ಷತೆಯಿಂದ ಮರಳಿ ಮನೆಗೆ ಸೇರಬೇಕು ಅನ್ನುವುದು ಸಂಘದ ಒತ್ತಾಸೆಯಾಗಿದೆ ಎಂದು ತಿಳಿಸಿದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q