ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಕೆನರಾ ಬ್ಯಾಂಕ್ ಮೇಲ್ಬಾಗದಲ್ಲಿ ಹರ್ಷಿಲ್ ಸೂಪರ್ ಮಾರ್ಕೆಟನ್ನು ಶ್ರೀ ದಿವ್ಯ ಜ್ಞಾನಾನಂದಗಿರಿ ಸ್ವಾಮೀಜಿ ಮತ್ತು ಶಾಸಕ ಹೆಚ್.ವಿ.ವೆಂಕಟೇಶ್ ರವರು ಭಾನುವಾರ ಉದ್ಘಾಟಿಸಿದರು.
ಗ್ರಾಮಕ್ಕೆ ಇಂತಹ ಮಾರುಕಟ್ಟೆಗಳು ಅಗತ್ಯವಾಗಿದ್ದು, ವ್ಯವಸ್ಥಿತವಾಗಿ ಸೂಪರ್ ಮಾರ್ಕೆಟ್ ರಚನೆಯಾಗಿದೆ ಎಂದು ಮಾಜಿ ಶಾಸಕರಾದ ವೆಂಕಟರಮಣಪ್ಪ ತಿಳಿಸಿದರು.
ಗೃಹಪಯೋಗಿಯ ಎಲ್ಲಾ ವಸ್ತುಗಳು ಒಂದೇ ಸೂರಿನಡಿ ದೊರೆಯುತ್ತಿದ್ದು, ಗ್ರಾಹಕರಿಗೆ ಹೆಚ್ಚು ಅನುಕೂಲಕವಾಗಿದೆ. ವಿದ್ಯಾರ್ಥಿಗಳು, ಗೃಹಿಣಿಯರು, ಪುರುಷರಿಗೆ ಮತ್ತು ವ್ಯಾಪಾರಿಗಳಿಗೆ ಅಗತ್ಯವಾದ ಎಲ್ಲಾ ವಸ್ತುಗಳ ಮಾರಾಟವಿದೆ. ಅಗತ್ಯ ಇರುವವರಿಗೆ ಮನೆ ಬಾಗಿಲಿಗೇ ಸರಕುಗಳನ್ನು ಪೂರೈಕೆ ಮಾಡಲಾಗುವುದು ಎಂದು ಮಾಲೀಕರಾದ ಟಿ.ಉಮೇಶ್ ತಿಳಿಸಿದ್ದಾರೆ.
ನ್ಯಾಯಾಧೀಶರಾದ ಜಿ.ಮಂಜುನಾಥ, ಡಾ.ಹರೀಶ್, ಪಿಎಸ್ ಐ ಮಾಳಪ್ಪ ನಾಯ್ಕೋಡ್, ಎಸ್.ಟಿ.ನಾಗರಾಜು, ಪಿ.ಸಿ.ಗೋಪಿ, ಎಲ್.ಕೆ.ರಾಘವೇಂದ್ರ, ಭಾನುಪ್ರಕಾಶ್, ಎನ್.ಆರ್.ಅಶ್ವಥ್, ಜಿ.ಬಿ.ಸತ್ಯನಾರಾಯಣ, ಕೋಡಿಪಲ್ಲಿ ರಾಮಚಂದ್ರಪ್ಪ, ಎಂ.ಸಿ.ಜಯರಾಂ, ಷಂಶುದ್ದೀನ್ ಮುಂತಾದವರು ಬೇಟಿ ನೀಡಿ ಶುಭ ಹಾರೈಸಿದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q