ತುಮಕೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಲ್ಲೂರು ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಶ್ರೀ ಗಂಗಾಮತಸ್ಥ ಬೆಸ್ತರ ಕ್ಷೇಮಾಭಿವೃದ್ಧಿ ಸಂಘ ಕಲ್ಲೂರು ವತಿಯಿಂದ ನಿಜ ಶರಣ ಅಂಬಿಗರ ಚೌಡಯ್ಯ ನವರ 902ನೆ ಜಯಂತಿ ಆಚರಣೆ ನಡೆಯಿತು.
ಕೊರೊನಾ ಹಿನ್ನೆಲೆಯಲ್ಲಿ ಕಲ್ಲೂರು ಗ್ರಾಮ ಪಂಚಾಯಿತಿ ಸಭಾಂಗಣದ ಆವರಣದಲ್ಲಿ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾ.ಪಂ. ಅಧ್ಯಕ್ಷ ಕೆ.ಎಲ್. ರವಿಕುಮಾರ್ ಮಾತನಾಡಿ, ಅಂಬಿಗರ ಚೌಡಯ್ಯನವರ ಶರಣರ ಕಾಲದ ವಚನಕಾರರು ನೇರ ನಡೆ ವ್ಯಕ್ತಿತ್ವ ಹೊಂದಿದವರು ಇವರ ವಚನಗಳು ಸಮಾಜಕ್ಕೆ ಮಾದರಿಯಾಗಿವೆ. ಅಂಬಿಗರ ಚೌಡಯ್ಯ ನವರ ಗಂಗಾಮತಸ್ಥ ಬೆಸ್ತರ ಸಮುದಾಯದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಗ್ರಾ.ಪಂ. ಸದಸ್ಯರಾದ ರಂಗನಾಥ್ ಮಾತನಾಡಿ, ಕುಲಬಾಂದವರು ಒಗ್ಗಟ್ಟಾಗಿರಬೇಕು ಶರಣರನ್ನು ಅನುಸರಿಸಿ ನಡೆಯಬೇಕು ಎಂದರು.
ಗ್ರಾ.ಪಂ. ಸದಸ್ಯರಾದ ಸುಮಿತ್ರಾ ಶಿವಯ್ಯ ಮಾತನಾಡಿ, ಶರಣರು ಹಲವಾರು ವಚನಗಳನ್ನು ರಚಿಸಿದ್ದಾರೆ. ಸಮಾಜಕ್ಕೆ ಮಾದರಿ ಎಂದರು. ಗ್ರಾ.ಪಂ. ಸದಸ್ಯ ನಾಗರಾಜ್, ಗಂಗಾಮತಸ್ಥ ಬೆಸ್ತರ ಕ್ಷೇಮಾಭಿವೃದ್ಧಿ ಸಂಘ ಕಲ್ಲೂರಿನ ಅಧ್ಯಕ್ಷರಾದ ಕೆ ಟಿ ಸೋಮಶೇಖರ್, ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ದಯಾನಂದ್ ಪೊಲೀಸ್ ಇಲಾಖೆ, ಪುಟ್ಟರಾಜು, ಚೆನ್ನಮಲ್ಲಯ್ಯ, ಶಿವಣ್ಣ ತಾತಯ್ಯ, ರಾಜಣ್ಣ ನಾಗರಾಜ್, ಸುರೇಶ್ ಶಿವು, ಹೇಮಂತ್ ಹಾಗೂ ಜನಾಂಗದ ಅಧ್ಯಕ್ಷರಾದ ಕೆ.ಟಿ. ಸೋಮಶೇಖರ, ಕಾರ್ಯದರ್ಶಿ ಆರ್.ಅರುಣ್ ಕುಮಾರ್ ಖಜಾಂಚಿ ವೆಂಕಟೇಶ್, ಭಾಗವಹಿಸಿದ್ದರು.
ಕಿರುಚಿತ್ರ ನಿರ್ದೇಶಕ ಸಾಹಿತಿ ರಾಜ್ಯ ಪ್ರಶಸ್ತಿ ಪುರಸ್ಕೃತ ಕೆ.ಆರ್. ಅರುಣ್ ಕುಮಾರ್ ರವರನ್ನು ಸನ್ಮಾನಿಸಲಾಯಿತು.
ಶ್ರೀಜೈ ಮಾರುತಿ ಮೆಡಿಕಲ್ ಮಾಲೀಕರಾದ ಸೋಮಶೇಖರ್, ಸಹೋದರ ವೆಂಕಟೇಶ್
ಹಾಗೂ ಸಮಾಜದ ಮುಖಂಡರನ್ನು ಗೌರವಿಸಿ ಸನ್ಮಾನಿಸಲಾಯಿತು.
ವರದಿ: ಯತೀಶ್ ಕುಮಾರ್.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy