ಮಧುಗಿರಿ : ಎಲ್ಲರೂ ಸಮಾನತೆಯಿಂದ ಬದುಕು ಸಾಗಿಸಲು ಡಾ.ಬಿ.ಆರ್ ಅಂಬೇಡ್ಕರ್ ರವರು ಬರೆದಿರುವ ಸಂವಿಧಾನವೇ ಮೂಲ ಕಾರಣ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಹೆಚ್. ಕೆಂಚಮಾರಯ್ಯ ಹೇಳಿದರು
ತಾಲ್ಲೂಕಿನ ಐ ಡಿ ಹಳ್ಳಿ ಗ್ರಾಮದ ಸಂತೆ ಮೈದಾನದಲ್ಲಿ ಮಾನವ ಹಕ್ಕುಗಳ ರಕ್ಷಣಾ ವೇದಿಕೆ ವತಿಯಿಂದ ಸಂವಿಧಾನ ದಿನಾಚರಣೆ ಮತ್ತು ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ಕೆ. ಎ.ಎಸ್. ಅಧಿಕಾರಿ ಎಲ್.ಸಿ.ನಾಗರಾಜ ಮಾತನಾಡಿ, ಭಾರತದ ಸರ್ವ ಪ್ರಜೆಗೂ ಸಮಾನ ಶಿಕ್ಷಣ, ಸರ್ವರಿಗೂ ಹಕ್ಕುಗಳನ್ನು ನೀಡಿರುವ ಸಂವಿಧಾನ ಜಾರಿಗೆ ತಂದ ಈ ದಿನವನ್ನು ನಾವೆಲ್ಲರೂ ವಿಶೇಷವಾಗಿ ಗೌರವಿಸಬೇಕು ಹಬ್ಬದ ದಿನವಾಗಿ ಆಚರಿಸಬೇಕು ಮತ್ತು ಸಂವಿಧಾನ ಜಾರಿಗೆ ಶ್ರಮಿಸಿರುವ ಎಲ್ಲಾ ಮಹಾನ್ ನಾಯಕರನ್ನು ಅವರ ಸೇವೆಯನ್ನು ನಾವು ಸದಾಕಾಲ ಸ್ಮರಿಸಬೇಕು, ನಾನು ಬಡತನದಿಂದ ಓದಿಕೊಂಡು ಗ್ರಾಮೀಣ ಭಾಗದ ಕೂಲಿ ಕೆಲಸ ಮಾಡುವ ಕುಟುಂಬದಿಂದ ಬಂದಿದ್ದು ನಾನು ಇಂದು ಕೆ.ಎ.ಎಸ್. ಅಧಿಕಾರಿ ಯಾಗಲು ಸಂವಿಧಾನವೇ ಮೂಲ ಕಾರಣವಾಗಿದ್ದು ಇಂದು ನಾನು ಅಧಿಕಾರಿ ಯಾಗಿದ್ದೇನೆ ಎಂದು ತಿಳಿಸಿದರು.
ವಕೀಲ ತಿಪ್ಪಾಪುರ ಜಯಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರ , ಮುಖ್ಯ ಭಾಷಣಕಾರರಾಗಿ ಜನ ಕಲೋಟಿ ರಂಗಧಾಮಯ್ಯ ಆಗಮಿಸಿದ್ದರು.
ವಕೀಲ ಹಾಗೂ ಮಾನವ ಹಕ್ಕುಗಳ ರಕ್ಷ ಣಾ ವೇದಿಕೆಯ ರಾಜ್ಯಾಧ್ಯಕ್ಷ ಬಿ.ನರಸಿಂಹಮೂರ್ತಿ ಮಾತನಾಡುತ್ತಾ ಕಾನೂನಿನ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಡಾ. ಮುಕುಂದಪ್ಪ , ತುಮಕೂರು ಮಾಜಿ ನಗರಸಭಾ ಸದಸ್ಯ ನರಸಿಯಪ್ಪ, ನಿವೃತ್ತ ಉಪನ್ಯಾಸಕ ರಾಮಣ್ಣ, ವಕೀಲರಾದ ರಾಧಿಕಾಗಂಗಾಧರ್, ಮುಖಂಡರಾದ ಜಿಲಾನ್, ವಜೀರ್ ಬಾಷಾ ಪತ್ರಕರ್ತ ಜಲಾಲ್ ಭಾಷಾ, ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಶ್ರೀರಾಮಪ್ಪ, ಬಾಲಕೃಷ್ಣ ಉಪಸ್ಥಿತರಿದ್ದರು.
ಐ.ಡಿ.ಹಳ್ಳಿ ಗ್ರಾಮ ಪಂಚಾಯಿತಿ ಮುಂಭಾಗದಿಂದ ಪ್ರಮುಖ ಬೀದಿಗಳ ಮುಖಾಂತರ ಕಾಲ್ನಡಿಗೆಯಿಂದ ಸಂತೆ ಮೈದಾನಕ್ಕೆ ಆಗಮಿಸಿ, ಗಣ್ಯರು ಡಾ. ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy