ಮಾಯಸಂದ್ರದ ಕೃಷಿ ಇಲಾಖೆಯಲ್ಲಿ ರೈತರು ಬೆಳೆದ ರಾಗಿಯನ್ನು ಬೆಂಬಲ ಬೆಲೆಗೆ ಮಾರಲು FIDಯಲ್ಲಿ ದಾಖಲಾದ ತಪ್ಪು ಮಾಹಿತಿಯು ಇದೀಗ ತೊಂದರೆಯಾಗಿ ಪರಿಣಮಿಸಿದೆ.
ಬೆಂಬಲ ಬೆಲೆಗೆ ಮಾರುವ ಪ್ರತಿಯೊಬ್ಬ ರೈತನು FID ಹೊಂದಿರಬೇಕೆಂದು ಸರ್ಕಾರ ಕಾನೂನು ಮಾಡಿತ್ತು. ಈ ಕಾನೂನೇ ರೈತರಿಗೆ ಮುಳುವಾಗಿದೆ. ಒಂದು ಎಕರೆ , ಒಂದೂವರೆ ಎಕರೆ ಇರುವ ರೈತರಿಗೆ ತಾವು ಮಾಡಿಸಿದ FIDಯಲ್ಲಿ 10 ಎಕರೆ , 12 ಎಕರೆ ಜಮೀನು ತೋರಿಸುತ್ತಿದೆ. ಇದರಿಂದ ಕೇವಲ ಒಂದು ಎಕರೆ ಹೊಂದಿರುವ ರೈತರನ್ನು ” BIG FORMER ” ಎಂದು ಕೃಷಿ ಇಲಾಖೆ ಅವರಿಂದ ರಾಗಿ ಕೊಳ್ಳಲು ನಿರಾಕರಿಸಿದೆ.
ಸ್ಥಳೀಯ ನಿವಾಸಿಯಾದ ಗಿರೀಶ್ ಎಂಬುವರ ಹೆಸರಿನಲ್ಲಿ ಯಾವುದೇ ಪಹಣಿ ಇಲ್ಲದಿದ್ದರೂ ಸಹ ಸುಮಾರು ಹತ್ತು ಜನರ ಪಹಣಿಯನ್ನು ಅವರ FID ಸೇರಿಸಲಾಗಿದೆ. ಮಾಯಸಂದ್ರದ ಅಂಬೇಡ್ಕರ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ” ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ( ರಿ )” ಸಂಘದ ಉಪಾಧ್ಯಕ್ಷರಾದ MR ಲೋಕೆಶ್’ರವರು ” ರೈತರಿಗೆ ಸರಿಯಾದ ಸಮಯಕ್ಕೆ ಬೆಂಬಲ ಬೆಲೆ ನೀಡಿದರೆ , 5 ಎಕರೆಯಲ್ಲಿ ದುಡಿಯುವ ರೈತರು10 ಎಕರೆಯಲ್ಲಿ ದುಡಿಯುತ್ತಾರೆ , ಆದರೆ FIDಯಲ್ಲಿನ ದೊಡ್ಡ ರೈತ, ಸಣ್ಣ ರೈತ ಎಂಬ ತಾರತಮ್ಯದಿಂದ ರೈತನ ಜೀವನ ಬೀದಿಗೆ ಬಂದಿದೆ ” ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ರೈತರಿಗೆ ಆಗುತ್ತಿರುವ ಈ ಅನ್ಯಾಯದ ಬಗ್ಗೆ ಮಾತನಾಡಿದ ಸಂಘದ ಅಧ್ಯಕ್ಷರಾದ ಮೋಹನ್ ಕುಮಾರ್, ” ಜಿಲ್ಲಾಧಿಕಾರಿಗಳಿಗೆ ಮತ್ತು ತಹಶೀಲ್ದಾರ್’ರವರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗುವುದು , ಒಂದು ವೇಳೆ ಇನ್ನೊಂದು ವಾರದಲ್ಲಿ ಈ ಸಮಸ್ಯೆ ಬಗೆಹರಿಯದೇ ಹೋದರೆ ಪಟ್ಟಣದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ” ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ಚಂದ್ರಶೇಖರ್ ಮತ್ತು ಸೂಳೆಕೆರೆಯ ಚಂದ್ರಣ್ಣನವರು ಹಾಗೂ ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy