ಸರಗೂರು: ಪಟ್ಟಣದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ರಾಯಚೂರು ಜಿಲ್ಲೆ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡನ ಸೇವೆಯಿಂದ ವಜಾಗೊಳಿಸಿ ಬೃಹತ್ ಪ್ರತಿಭಟನೆ ನಡಿಸಲಾಯಿತು.
ಸರಗೂರು ಪಟ್ಟಣದ ಅಂಗಡಿ ಮುಗ್ಗಟ್ಟು ಮಾಲಿಕರು ಸೇರಿದಂತೆ, ಸರಗೂರು ಬಂದ್ ಗೆ ಸಂವಿಧಾನ ಸಂರಕ್ಷಣಾ ಸಮಿತಿ ವರ್ತಕರ ಮಂಡಳಿ ಕರೆ ನೀಡಿದ ಬಳಿಕ ಎಲ್ಲಾ ಬಂದ್ ಗೆ ಬೆಂಬಲ ನೀಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಭವನದಿಂದ ಶುರುವಾದ ಮೆರವಣಿಗೆ ತಹಶೀಲ್ದಾರ್ ಕಚೇರಿವರೆಗೆ ನಡೆಯಿತು. ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಅನುಯಾಯಿಗಳು , ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನ ಜನರು ಭಾರೀ ಜನಸಂಖ್ಯೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ಮಲ್ಲಿಕಾರ್ಜುನ ಗೌಡ ಅವರನ್ನು ಸೇವೆಯಿಂದ ವಜಾಗೊಳಿಸಿ ಮತ್ತು ಗಡಿಪಾರು ಮಾಡಿ ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ, ಪ.ಪಂ. ಸದಸ್ಯ ಎಸ್.ಎಲ್.ರಾಜಣ್ಣ, ಮಲ್ಲಿಕಾರ್ಜುನ ಗೌಡ ಕಿಡಿಗೇಡಿ, ದೇಶದ್ರೋಹಿ, ಮನುವಾದಿ ಮನಸ್ಥಿತಿಯ ನ್ಯಾಯಾಧೀಶ ಎಂದು ಆಕ್ರೋಶ ವ್ಯಕ್ತಪಡಿಸಿ, ಅವರನ್ನು ತಕ್ಷಣವೇ ವಜಾಗೊಳಿಸಿ, ಗಡಿಪಾರು ಮಾಡಲು ಒತ್ತಾಯಿಸಿದರು.
ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ತಕ್ಷಣವೇ ಸರ್ಕಾರ ನ್ಯಾಯಾಧೀಶರ ವಿರುದ್ಧ ಕ್ರಮಕೈಗೊಳ್ಳದಿದ್ದರೆ, ಮೈಸೂರಿನಿಂದ ಬೆಂಗಳೂರುವರೆಗೆ ಪಾದಯಾತ್ರೆ ಯನ್ನು ಹಮ್ಮಿಕೊಳ್ಳಗುತ್ತದೆ ಎಂದರು.
ಜೆಡಿಎಸ್ ಪಕ್ಷದ ಮುಖಂಡ ಜಯಪ್ರಕಾಶ್, ದಸಂಸ ಜಿಲ್ಲಾ ಸಂಚಾಲಕರಾದ ಕೋಟೆ ಬೆಟ್ಟಯ್ಯ, ಹೆಚ್.ಸಿ.ನರಸಿಂಹಮೂರ್ತಿ ಇನ್ನೂ ಮುಖಂಡರು ಮಾತನಾಡಿದರು.
ಈ ಪ್ರತಿಭಟನೆಯಲ್ಲಿ ಮುದ್ದುಮಲ್ಲಯ್ಯ ಹೈರಿಗೆ, ಶಿವಣ್ಣ ಸರಗೂರು, ಶಿವಕುಮಾರ್, ಮುತ್ತಯ್ಯ, ಸರಗೂರು ಕೃಷ್ಣ, ಶಿವಣ್ಣ ಬಿಡಗಲು, ಇಟ್ನರಾಜಣ್ಣ, ಲಕ್ಷಣ್, ಮಹೇಶ್ ಜೀವಾ, ಸಂಶೋಧಕರ ಸಂಘದ ರಾಜ್ಯಾಧ್ಯಕ್ಷ ಮರಿದೇವಯ್ಯ, ಮಹಾನಾಯಕ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ದೈತ್ಯ ರಾಜು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಾದ ಚಿಕ್ಕವೀರನಾಯಕ, ಭಾಗ್ಯಲಕ್ಷ್ಮಿ, ಶಿವರಾಜ್ ಕಂದೇಗಾಲ, ಹಾದನೂರು ಗ್ರಾಮದ ಮಹದೇವಯ್ಯ, ಪ್ರಕಾಶ್, ಪುಟ್ಟಸ್ವಾಮಿ, ಸಿದ್ದರಾಜು, .ಶಿವರಾಜ್ ಅರಸು, ಸುರೇಶ್, ಲೋಕೇಶ್, ಚಿಕ್ಕಣ್ಣ, ಶಿವಲಿಂಗಯ್ಯ, ಮಂಜು, ಮಲ್ಲೇಶ್, ಗ್ರಾ.ಪಂ. ಸದಸ್ಯ ಬೆಟ್ಟಸ್ವಾಮಿ, ಗೊವಿಂದರಾಜು ಕೂಡಿಗಿ, ಕುಮಾರ್ ಚೌಂಗೌಡನಹುಂಡಿ, ಸಿದ್ದರಾಜು ಹೊಸಹೆಗ್ಗುಡಿಲು, ಪಪಂ ಸದಸ್ಯ ಶ್ರೀನಿವಾಸ, ಸಿದ್ದರಾಜು ಹೂವಿನಕೊಳ, ಸಿದ್ದರಾಜು ದೇವಲಾಪುರ ಮೊದಲಾದವರು ಭಾಗವಹಿಸಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB