ತುಮಕೂರು: ಸಮಾನ ಅವಕಾಶ ಕೊಟ್ಟು ಸಮ ಸಮಾಜ ನಿರ್ಮಾಣ ಮಾಡದಿದ್ದರೆ ಪ್ರಜಾಪ್ರಭುತ್ವದ ಸೌಧವನ್ನೇ ಧ್ವಂಸ ಮಾಡುತ್ತಾರೆ ಎಂದು 1949 ಜನವರಿಗೆ 25 ರಂದು ಅಂಬೇಡ್ಕರ್ ಹೇಳಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ತುಮಕೂರಿನಲ್ಲಿ ಕೆ.ಎನ್. ರಾಜಣ್ಣ ಅವರ ಅಮೃತ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಪ್ರಜಾಪ್ರಭುತ್ವದ ಅಂಶಗಳನ್ನು ಪ್ರತಿಯೊಬ್ಬರು ಓದಬೇಕು. ಸಂವಿಧಾನ ರೂಪಿತವಾಗಿದೆ, ಯಾವುದರ ಮೇಲೆ ಚರ್ಚೆ ಆಗಿದೆ ಎಂದು ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ನಾವು ಸಮ ಸಮಾಜ ನಿರ್ಮಾಣ ಮಾಡಬೇಕಿದೆ ಎಂದರು.
ಇಂದು ಸಮ ಸಮಾಜ ನಿರ್ಮಾಣ ಆಗದಿರುವುದಕ್ಕೆ ನಾವು ಕಾರಣರಲ್ಲ, ಬದಲಾಗಿ, ಅಕ್ಷರ ಸಂಸ್ಕೃತಿಯಿಂದ ಬಹುಸಂಖ್ಯಾತರನ್ನು ದೂರ ಇಟ್ಟಿದ್ದೆ ಕಾರಣವಾಗಿದೆ. ಚತುವರ್ಣ ವ್ಯವಸ್ಥೆಯಿಂದ ಅಸಮಾನತೆ ನಿರ್ಮಾಣವಾಯಿತು. ಮನುಷ್ಯತ್ವ ಬೆಳಸಿಕೊಳ್ಳಬೇಕು, ಇಲ್ಲದಿದ್ದರೆ ದ್ವೇಷ ಉದ್ಭವಿಸುತ್ತದೆ, ಇದ್ರಿಂದ ಅಸಮಾನತೆ ತೊಡೆದು ಹಾಕಲು ಸಾಧ್ಯವಿಲ್ಲ ಎಂದರು.
ರಾಜಕೀಯ ಮತ್ತು ಸಹಕಾರಿ ಕ್ಷೇತ್ರದಲ್ಲಿ ಬಡವರನ್ನು ಮೇಲೆತ್ತಬೇಕೆಂಬ ಗುಣವನ್ನು ಸಚಿವ ರಾಜಣ್ಣ ಅವರಲ್ಲಿ ಕಾಣಲು ಸಾಧ್ಯವಾಗಿದೆ. ಆದ್ರಿಂದ ಅವರು ನನಗೆ ಇಷ್ಟವಾಗಲಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW