nammatumakuru

    Subscribe to Updates

    Get the latest creative news from FooBar about art, design and business.

    What's Hot

    ಶೆಟ್ಟಿಹಳ್ಳಿ ಹಾಲು ಉತ್ಪಾದಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರದಿಂದ ₹2 ಲಕ್ಷ ಧನಸಹಾಯ

    August 6, 2026

    ಬೀದರ್ ನೂತನ ಅಪರ ಜಿಲ್ಲಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಸುರೇಖಾ ನೇಮಕ

    August 6, 2026

    ಕರ್ನಾಟಕದ ಮೊದಲ ಎಲೆಕ್ಟಾ ಯುನಿಟಿ ಎಂಆರ್–ಲೈನಾಕ್ ಯಂತ್ರ ಅನಾವರಣ, ಕ್ಯಾನ್ಸರ್ ರೋಗಿಗಳಿಗೆ HCG ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ

    August 6, 2026
    Facebook Twitter Instagram
    ಟ್ರೆಂಡಿಂಗ್
    • ಶೆಟ್ಟಿಹಳ್ಳಿ ಹಾಲು ಉತ್ಪಾದಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರದಿಂದ ₹2 ಲಕ್ಷ ಧನಸಹಾಯ
    • ಬೀದರ್ ನೂತನ ಅಪರ ಜಿಲ್ಲಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಸುರೇಖಾ ನೇಮಕ
    • ಕರ್ನಾಟಕದ ಮೊದಲ ಎಲೆಕ್ಟಾ ಯುನಿಟಿ ಎಂಆರ್–ಲೈನಾಕ್ ಯಂತ್ರ ಅನಾವರಣ, ಕ್ಯಾನ್ಸರ್ ರೋಗಿಗಳಿಗೆ HCG ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ
    • ಹೊಳೆನರಸೀಪುರಕ್ಕೆ ನೂತನ ವಸತಿ ಸಚಿವ ಕೆ.ಎಂ.ಶಿವಲಿಂಗೇಗೌಡ ಭೇಟಿ: ಪಟಾಕಿ, ಸೇಬಿನ ಹಾರ ಹಾಕಿ ಭವ್ಯ ಸ್ವಾಗತ
    • ಸಚಿವ ಸಂಪುಟ ವಿಸ್ತರಣೆ: ಎಚ್.ಕೆ. ಪಾಟೀಲ್ ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಗದಗ–ಬೆಟಗೇರಿ ನಗರಸಭೆಯ 22 ಸದಸ್ಯರ ಸಾಮೂಹಿಕ ರಾಜೀನಾಮೆ
    • ತುಮಕೂರು ಕಾಂಗ್ರೆಸ್ ನಲ್ಲಿ ಆಕ್ರೋಶ ಸ್ಫೋಟ: ವಿಪಕ್ಷ ಸಾಲಿನಲ್ಲಿ ಆಸನ ಕೋರಿದ ಟಿ.ಬಿ. ಜಯಚಂದ್ರ, ಹೆಚ್ ಡಿಕೆಯನ್ನು ಹೊಗಳಿದ ಶಾಸಕ ಶ್ರೀನಿವಾಸ್
    • ಸಚಿವ ಸ್ಥಾನ ಸಿಗಲಿಲ್ಲವೆಂದು ಪಕ್ಷದ ವಿರುದ್ಧ ಮಾತಾಡುವುದು ಸರಿಯಲ್ಲ: ಪ್ರಿಯಾಂಕ್ ಖರ್ಗೆ
    • ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಚುರುಕು: 105 ಅಡಿಗೆ ತಲುಪಿದ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಉದ್ಧಟತನ ಕಲಿಸಿದ ಪಾಠ
    ಲೇಖನ January 7, 2026

    ಉದ್ಧಟತನ ಕಲಿಸಿದ ಪಾಠ

    By adminJanuary 7, 2026No Comments3 Mins Read
    story

    ಒಮ್ಮೆ ಒಬ್ಬ ರಾಜ ಕುದುರೆ ಏರಿ ವನವಿಹಾರ ಮಾಡುತ್ತಾ, ಸೈನಿಕರಿರುವ ತನ್ನ ಬಿಡಾರದಿಂದ ಕಾಡಿನ ಸೌಂದರ್ಯ ಸವಿಯಲು ಬಹಳ ದೂರ ಒಬ್ಬನೇ ಬಂದು ಬಿಡುತ್ತಾನೆ. ಇತ್ತ ಬಿಡಾರಗಳಲ್ಲಿ ವಿಹರಿಸುತ್ತಿದ್ದ ಸೈನಿಕರು ರಾಜನಿಲ್ಲದಿರುವುದನ್ನು ಕಂಡು ರಾಜನನ್ನು ಹುಡುಕುತ್ತಾ ಹೊರಡುತ್ತಾರೆ. ಇತ್ತ ರಾಜ ಕಾಡಿನ ಒಂದು ಪ್ರದೇಶಕ್ಕೆ ಬಂದು ಒಂದು ಮರದ ಕೆಳಗೆ ಕುದುರೆ ನಿಲ್ಲಿಸುತ್ತಾನೆ. ಇದ್ದಕ್ಕಿದ್ದಂತೆ ಮರೆಯಲ್ಲಿದ್ದ ಅಡಗಿದ್ದ ಶತ್ರುಗಳು ಕುದುರೆ ಏರಿಕೊಂಡು ಬಂದು ರಾಜನನ್ನು ಮುತ್ತಿಗೆ ಹಾಕುತ್ತಾರೆ, ಆದರೆ ರಾಜ ಖತ್ತಿಯನ್ನು ಬಿಡಾರದಲ್ಲೇ ಬಿಟ್ಟು ಬಂದಿರುತ್ತಾನೆ, ಖತ್ತಿ ಹಿಡಿದ ಶತ್ರುಗಳು ಸುತ್ತಲೂ  ರಾಜನನ್ನು ಸುತ್ತುವರಿಯುತ್ತಾರೆ, ಈಗೇನು ಮಾಡುವುದು ಅಂದುಕೊಳ್ಳುವಾಗ ಅದೇ ಮರದ ಮೇಲೆ ಕಟ್ಟಿಗೆ ಕಡಿಯಲೆಂದು ಖತ್ತಿ ಹಿಡಿದು ಹತ್ತಿದ್ದ ಜವರನೆಂಬ ವ್ಯಕ್ತಿ ಮಹಾರಾಜರೇ ತೆಗೆದುಕೊಳ್ಳಿ ಎಂದು ತನ್ನ ಕೈಲಿದ್ದ ಖತ್ತಿಯನ್ನು ರಾಜನ ಎದುರು ಬೀಳುವಂತೆ ಕೆಳಗೆ ಎಸೆಯುತ್ತಾನೆ. ರಾಜ ಆ ಖತ್ತಿಯನ್ನು ತೆಗೆದುಕೊಂಡು ಶತ್ರುಗಳನ್ನು ಸದೆಬಡಿಯುತ್ತಾನೆ, ಉಳಿದ ಶತ್ರುಗಳು ಅಲ್ಲಿಂದ ಪಲಾಯನಗೈಯುತ್ತಾರೆ.

    ನಂತರ, ಜವರನು ಮರದಿಂದ ಕೆಳಗೆ ಇಳಿದು ಬರುತ್ತಾನೆ. ಆಗ ರಾಜ ಜವರನ ಸಮಯ ಪ್ರಜ್ಞೆಗೆ ಮೆಚ್ಚಿ ನಾಳೆ ನಿನ್ನನ್ನು ಅರಮನೆಯಲ್ಲಿ ಸನ್ಮಾನಿಸುತ್ತೇನೆ ಎಂದು ಅವನ ಖತ್ತಿಯನ್ನು ಅವನಿಗೆ ಹಿಂತಿರುಗಿಸಿ, ನಂತರ ಅಲ್ಲಿಗೆ ಬಂದ ತನ್ನ ಸೈನಿಕರೊಡನೆ ಹೊರಡುತ್ತಾನೆ.  ಜವರನು ತನ್ನ ಮನದಲ್ಲಿ ತಾನು ಮಹಾಜರ ಪ್ರಾಣವನ್ನು ಕಾಪಾಡಿದೆ ಎಂಬ ಹುಮ್ಮಸ್ಸಿನ ಪಿತ್ತ ನೆತ್ತಿಗೇರಿದಂತವನಾಗಿ ಹೊರಡುತ್ತಿದ್ದ ರಾಜನನ್ನು ತಡೆದು ರಾಜರೇ ನಿಮ್ಮನೊಂದು ಪ್ರಶ್ನೆ ಕೇಳಲೇ ಎಂದಾಗ ರಾಜ ಆಗಲೆಂದು ತಲೆ ಆಡಿಸುತ್ತಾನೆ ಆಗ ಜವರನು ಶತ್ರುಗಳು ನಿಮ್ಮನ್ನು ಮುತ್ತಿಗೆ ಹಾಕಿದಾಗ ನಿರಾಯುಧರಾಗಿದ್ದ ನಿಮಗೆ ಮನಸ್ಸಿನಲ್ಲಿ ಹೇಗೆ ಅನ್ನಿಸಿತು ಅಂದಾಗ ರಾಜನ ಕೋಪ ನಿತ್ತಿಗೇರಿ, ಕೋಪ ಸಹಿಸದ ರಾಜನು ಜವರನ ಕೈಲಿದ್ದ ಖತ್ತಿಯನ್ನು ಕಿತ್ತುಕೊಂಡು, ತನ್ನ ಸೈನಿಕರಿಗೆ ಕೂಡಲೇ ಇವನನ್ನು ಬಂಧಿಸಿ, ರಾಜನನ್ನು ಪ್ರಶ್ನಿಸುವ ದುಸ್ಸಾಹಸ ಮಾಡಿದ್ದಾನೆ, ಕೂಡಲೇ ಇವನಿಗೆ ಗಲ್ಲು ಶಿಕ್ಷೆ ನೀಡುತ್ತಿದ್ದೇನೆ ಎಂದಾಗ ಜವರನು ಅತ್ಯಂತ ಭಯಬೀತನಾಗಿ ಪ್ರಭು ನನ್ನನ್ನು ಕ್ಷಮಿಸಿ ನಾನು ಈ ಸನ್ನಿವೇಶದಲ್ಲಿ ಇಂತಹ ಪ್ರಶ್ನೆ ಕೇಳಬಾರದಿತ್ತು, ನನ್ನನ್ನು ಶಿಕ್ಷಿಸಬೇಡಿ ನನ್ನದು ತಪ್ಪಾಯಿತು ಎಂದು ಎಷ್ಟು ಪರಿಪರಿಯಾಗಿ ಕೇಳಿದರೂ ಕೇಳದ ರಾಜನು ಅವನಿಗೆ ಸರಪಣಿ ಬಿಗಿಸಿ ಅರಮನೆಗೆ ಎಳೆದುಕೊಂಡು ಬರುತ್ತಾನೆ.

    ದಾರಿಯುದ್ದಕ್ಕೂ ತನಗೆ ಬರಲಿರುವ ಸಾವಿನ ನೋವನ್ನು ನೆನೆದುಕೊಂಡು ಅರಚಾಡುತ್ತಾ, ಕಿರುಚಾಡುತ್ತಾ ಬರುತ್ತಾನೆ. ಕೊನೆಗೆ ನೇಣಿನ ಕಂಬದ ಮೇಲೆ ನಿಲ್ಲಿಸುತ್ತಾರೆ, ಆಗ ಜವರನು ದಯೆತೋರಿ ಪ್ರಭು ನನ್ನ ಅಹಂನಿಂದ ನಾನು ಇಂತಹ ಪ್ರಶ್ನೆ ಕೇಳಿದ್ದು ನನಗೆ ಅರಿವಾಯಿತು ನನ್ನನ್ನು ಬಿಟ್ಟು ಬಿಡಿ ಎಂದಾಗ ರಾಜನು ಅವನ ಹತ್ತಿರಕ್ಕೆ ಬಂದು ನೋಡು ನಿನಗೆ ನಿನ್ನ ಮನಸ್ಸಿನಲ್ಲಿ ಈಗ ಹೇಗೆ ಅನ್ನಿಸುತ್ತಿದೆಯೋ ಹಾಗೆಯೇ, ನನಗೂ ನಿರಾಯುಧನಾದ ನನ್ನ ಮೇಲೆ ಇದ್ದಕ್ಕಿದ್ದಂತೆ ಆಕ್ರಮಣ ಮಾಡಿದಾಗ ನನಗೂ ಹೀಗೆಯೇ ಅನ್ನಿಸಿತು. ರಾಜನಾಗುವ ಮೊದಲು ನಾನು ಕೂಡ ನಿನ್ನ ಹಾಗೆ ಒಬ್ಬ ಮನುಷ್ಯ, ಇದ್ದಕ್ಕಿದ್ದಂತೆ ಬರುವ ಸಾವಿಗೆ ಯಾರೂ ಭಯ ಪಡುವುದಿಲ್ಲ ಆದರೆ, ಸಾವು ತನ್ನ ಕಣ್ಣ ಮುಂದೆ ಇದ್ದಾಗ ಎಲ್ಲರಿಗೂ ಸಹಜವಾಗಿಯೇ ನನ್ನ ಬದುಕು ಹೀಗೆ ಅಂತ್ಯವಾಗುತ್ತಿದೆಯಲ್ಲಾ ಎಂಭ ಭಯ ಉಂಟಾಗುತ್ತದೆ. ಮತ್ತು ರಾಜರು ಸಾವಿಗೆ ಭಯಪಡುವುದಿಲ್ಲ ಆದರೆ ತನ್ನ ಸಾವಿನ ನಂತರ ತನ್ನ ರಾಜ್ಯದ ಪರಿಸ್ಥಿತಿ ಏನಾಗುವುದೋ ಎಂದು ಭಯಪಡುತ್ತಾರೆ. ಅಷ್ಟೇ ರಾಜನನ್ನು ಕಾಪಾಡಿದ ನಂತರ ನಿನಗೆ ನಿನ್ನ ಅಹಂ ನಿನ್ನನ್ನು ಹಾಗೆ ಪ್ರಶ್ನೆ ಕೇಳುವಂತೆ ಮಾಡಿತು, ನಿನಗೆ ಒಂದು ಪಾಠ ಕಲಿಸಲು ನಾನು ಹೀಗೆ ಮಾಡಿದೆ ಅಷ್ಟೇ ನಿನ್ನನ್ನು ಶಿಕ್ಷಿಸುವುದಿಲ್ಲ ಸನ್ಮಾನಿಸುತ್ತೇನೆ ನನ್ನ ಪ್ರಾಣ ಕಾಪಾಡಿದ್ದೀಯ ಎಂದಾಗ ಜವರ ತನ್ನ ತಪ್ಪನ್ನು ತಿಳಿದು, ನಂತರ ಸನ್ಮಾನಗೊಂಡನು.

    ನೀತಿ: ಕೆಲವು ಸಮಯದಲ್ಲಿ ನಮ್ಮ ಉದ್ಧಟತನ ನಮ್ಮ ಸರಹದ್ದು ಮೀರಿದಾಗ ಇಂತಹ ದುರವಸ್ಥೆ ಅನುಭವಿಸಬೇಕಾಗುತ್ತದೆ.

    venugopal
    ವೇಣುಗೋಪಾಲ್

    ಸಂಪಾದಕರ ಮಾತು

    ‘ಉದ್ಧಟತನ ಕಲಿಸಿದ ಪಾಠ’ ಎಂಬ ಈ ದಿನದ ಕಥೆ ಅಧಿಕಾರ, ಅಹಂ ಮತ್ತು ಮಾನವೀಯತೆಯ ನಡುವಿನ ಸೂಕ್ಷ್ಮ ಸಮತೋಲನವನ್ನು ಸರಳವಾದ ಕಥನದಲ್ಲಿ ಮನಮುಟ್ಟುವಂತೆ ಹೇಳುತ್ತದೆ. ಸಂಕಷ್ಟದ ಕ್ಷಣದಲ್ಲಿ ವಿವೇಕದಿಂದ ನಡೆದುಕೊಂಡ ಜವರನ ಧೈರ್ಯ ಶ್ಲಾಘನೀಯವಾದರೂ, ಅದೇ ಧೈರ್ಯ ಅಹಂಕಾರವಾಗಿ ಮಾರ್ಪಟ್ಟಾಗ ಹೇಗೆ ಅಪಾಯದ ಅಂಚಿಗೆ ಕೊಂಡೊಯ್ಯುತ್ತದೆ ಎಂಬ ಸಂದೇಶ ಕಥೆಯ ಮರ್ಮ.

    ರಾಜನ ಪಾತ್ರದ ಮೂಲಕ ಲೇಖಕರು ಮತ್ತೊಂದು ಮಹತ್ವದ ಸತ್ಯವನ್ನು ತೆರೆದಿಡುತ್ತಾರೆ—ಪದವಿ ಎತ್ತರವಾದರೂ ಭಯ, ನೋವು, ಅಸ್ಥಿರತೆ ಮಾನವನ ಸಹಜ ಗುಣಗಳು. ನಿರಾಯುಧನಾಗಿದ್ದ ಕ್ಷಣದಲ್ಲಿ ರಾಜ ಅನುಭವಿಸಿದ ಭಾವನೆ ಮತ್ತು ನಂತರ ಜವರನಿಗೆ ನೀಡಿದ ಪಾಠ, ‘ಅನುಭವವೇ ಶ್ರೇಷ್ಠ ಗುರು’ ಎಂಬುದನ್ನು ನೆನಪಿಸುತ್ತದೆ.

    ಇಂದಿನ ಸಮಾಜದಲ್ಲಿ ಮಾತು ಮತ್ತು ವರ್ತನೆಯ ಗಡಿ ಮೀರಿದರೆ ಅದರ ಪರಿಣಾಮ ಎಷ್ಟು ಗಂಭೀರವಾಗಬಹುದು ಎಂಬ ಎಚ್ಚರಿಕೆಯನ್ನು ಈ ಕಥೆ ನೀಡುತ್ತದೆ. ಸಮಯಪ್ರಜ್ಞೆ, ವಿನಯ ಮತ್ತು ಮಿತಿಮೀರದ ಧೈರ್ಯ—ಇವೇ ವ್ಯಕ್ತಿಯನ್ನು ಗೌರವಕ್ಕೆ ತರುತ್ತವೆ ಎಂಬ ಸಂದೇಶ ಓದುಗರಿಗೆ ಸ್ಪಷ್ಟವಾಗಿ ತಲುಪುತ್ತದೆ.  ನೀತಿ ಮಾತನ್ನು ಉಪದೇಶವಾಗಿ ಅಲ್ಲ, ಅನುಭವವಾಗಿ ಕಟ್ಟಿಕೊಟ್ಟಿರುವ ಲೇಖಕ ವೇಣುಗೋಪಾಲ್ ಅವರಿಗೆ ಅಭಿನಂದನೆಗಳು. ಈ ಕಥೆ ಓದುಗರನ್ನು ಸ್ವಯಂಮೌಲ್ಯಮಾಪನಕ್ಕೆ ಪ್ರೇರೇಪಿಸುವಲ್ಲಿ ಯಶಸ್ವಿಯಾಗಿದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಕರ್ನಾಟಕದ ಮೊದಲ ಎಲೆಕ್ಟಾ ಯುನಿಟಿ ಎಂಆರ್–ಲೈನಾಕ್ ಯಂತ್ರ ಅನಾವರಣ, ಕ್ಯಾನ್ಸರ್ ರೋಗಿಗಳಿಗೆ HCG ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ

    August 6, 2026

    ಬಿಡುಗಡೆಗೂ ಮುನ್ನ ಭಾರಿ ನಿರೀಕ್ಷೆ ಮೂಡಿಸಿದ “ಓ ಮೈ ಡಾಗ್”  ಆಗಸ್ಟ್ 7ರಂದು  ಅದ್ದೂರಿ ರಿಲೀಸ್

    August 5, 2026

    ಕೃಷಿ ಲೋಕ /ಕಾಡು ಹಣ್ಣು.. | ಕೋಳಿ ಜುಟ್ಟು ಹಣ್ಣು

    August 2, 2026

    Leave A Reply Cancel Reply

    Our Picks

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತಿಪಟೂರು

    ಶೆಟ್ಟಿಹಳ್ಳಿ ಹಾಲು ಉತ್ಪಾದಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರದಿಂದ ₹2 ಲಕ್ಷ ಧನಸಹಾಯ

    August 6, 2026

    ತಿಪಟೂರು: ತಿಪಟೂರು ಗ್ರಾಮಾಂತರ ತಾಲೂಕಿನ ಬಿಳಿಗೆರೆ ವಲಯದ ಕುಪ್ಪುರು ಕಾರ್ಯಕ್ಷೇತ್ರದ ಶೆಟ್ಟಿಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ…

    ಬೀದರ್ ನೂತನ ಅಪರ ಜಿಲ್ಲಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಸುರೇಖಾ ನೇಮಕ

    August 6, 2026

    ಕರ್ನಾಟಕದ ಮೊದಲ ಎಲೆಕ್ಟಾ ಯುನಿಟಿ ಎಂಆರ್–ಲೈನಾಕ್ ಯಂತ್ರ ಅನಾವರಣ, ಕ್ಯಾನ್ಸರ್ ರೋಗಿಗಳಿಗೆ HCG ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ

    August 6, 2026

    ಹೊಳೆನರಸೀಪುರಕ್ಕೆ ನೂತನ ವಸತಿ ಸಚಿವ ಕೆ.ಎಂ.ಶಿವಲಿಂಗೇಗೌಡ ಭೇಟಿ: ಪಟಾಕಿ, ಸೇಬಿನ ಹಾರ ಹಾಕಿ ಭವ್ಯ ಸ್ವಾಗತ

    August 6, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.