ಮಧುಗಿರಿ/ದೊಡ್ಡೇರಿ: ವಿಶ್ವದ ಅತ್ಯಂತ ದೊಡ್ಡ ಶಕ್ತಿ ತಾಯಿ ಎಂದು ಪರಿಷತ್ ಸದಸ್ಯ ಆರ್ ರಾಜೇಂದ್ರ ರಾಜಣ್ಣ ತಿಳಿಸಿದರು.
ಮಧುಗಿರಿ ತಾಲ್ಲೂಕಿನ ರಂಟವಳು ಗ್ರಾ.ಪಂ ಗೆ ಸೇರಿದ ಪುಲಮಘಟ್ಟ ಗ್ರಾಮದಲ್ಲಿ ಆಯೋಜಿಸಿದ್ದ ಕರುನಾಡು ಸೇನೆ ಹಾಗೂ ಬೆಂಗಳೂರಿನ ಆಕಾಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಆಚರಿಸಿದ ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ಮೇಳ ತಪಾಸಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆತ್ತು ಹೊತ್ತು ಸಾಕಿ ಸಲಹಿ ಏನೆ ಕಷ್ಟಗಳು ಬಂದರೂ ಸಹ ಎದೆ ಗುಂದದೆ, ಬಡತನ ವಿರಲಿ ಶ್ರೀಮಂತಿಕೆ ಇರಲಿ, ನನ್ನ ಮಕ್ಕಳು ಎಲ್ಲ ರಂತೆ ಜಗತ್ತಿನಲ್ಲಿ ಉತ್ತಮ ನಾಗರಿಕನಾಗಿ ಬಾಳಲಿ ಎಂಬ ಕನಸನ್ನು ಹೊತ್ತು ನಮ್ಮೆಲ್ಲರ ನ್ನು ಸಾಕುತ್ತಾರೆ. ಅಮ್ಮನ ಕನಸನ್ನು ನನಸು ಮಾಡುವುದು ಮಕ್ಕಳಾದ ನಮ್ಮ ಮೇಲಿದೆ ಎಂದರು.
ತಾಯಿಗೆ ಮಾತೃದೇವೋಭವ ಎಂದು ದೇವರ ಸ್ಥಾನವನ್ನು ನೀಡಲಾಗಿದೆ ಅವರು ಮುಪ್ಪಾದಾಗ ನಮ್ಮನ್ನು ಹೇಗೆ ಸಾಕಿ ಬೆಳೆಸಿದಳೋ ಅದೇ ರೀತಿ ನಾವು ಅವರನ್ನು ಸಾಕಿದಾಗ ಮಾತ್ರ ಅವರ ಋಣ ತೀರಿಸಲು ಸಾಧ್ಯವಾಗುತ್ತದೆ ಎಂದರು.
ಮಧುಗಿರಿ ಕ್ಷೇತ್ರದ ಮಾಜಿ ಸಹಕಾರ ಸಚಿವರು ಹಾಲಿ ಶಾಸಕರಾದ ಕೆ.ಎನ್.ರಾಜಣ್ಣ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಶೂ ಭಾಗ್ಯ ಕೊಡಿಸಿದ್ದರು. ಶೈಕ್ಷಣಿಕ ವರ್ಷಾರಂಭದಲ್ಲಿ ತಾಲೂಕಿನ ಎಲ್ಲಾ ಅಂಗನವಾಡಿ ಮಕ್ಕಳಿಗೆ ಎರಡು ಜೊತೆ ಯೂನಿಫಾರಂ ಮತ್ತು ಒಂದು ಜೊತೆ ಶೂ ಕೊಡಿಸಲು ಮುಖ್ಯಮಂತ್ರಿಗಳಲ್ಲಿ ಚರ್ಚಿಸಿ ಸಿದ್ಧತೆ ಮಾಡುತ್ತಿದ್ದಾರೆ. ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟು ಎಲ್ಲಾ ಮಕ್ಕಳು ಸಹ ವಿದ್ಯೆ ಪಡೆದು ತಮ್ಮ ಜೀವನ ರೂಪಿಸಿಕೊಳ್ಳಲಿ ಎಂಬ ಸದುದ್ದೇಶ ಹೊಂದಿದ್ದಾರೆ. ಅವರ ಕನಸನ್ನು ಈಡೇರಿಸುವಲ್ಲಿ ನೀವೆಲ್ಲರೂ ಸಹ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದರು. ರಾಜ್ಯದ ಎಲ್ಲಾ ಶಾಸಕರು ಸಹ ಇಂತಹ ಕಾರ್ಯಕ್ರಮಗಳನ್ನು ಮಾಡಿದರೆ ರಾಜ್ಯವು ಅಭಿವೃದ್ಧಿಯ ಕಡೆ ಹೋಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಯಂದಿರುಗಳಿಗೆ ಸೀರೆ ವಿತರಣೆ ಮಾಡಲಾಯಿತು. ಕಾರ್ಯ ಕ್ರಮದಲ್ಲಿ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ನಾಗೇಶ್ ಬಾಬು, ಎಂ.ಜಿ.ಶ್ರೀನಿವಾಸ ಮೂರ್ತಿ ಕೆ.ಪಿ.ಸಿ.ಸಿ. ಕಾನೂನು ಘಟಕ ದ ರಾಜ್ಯ ಕಾರ್ಯಾಧ್ಯಕ್ಷ ಅನಂತನಾಯ್ಕ, ಮಧುಗಿರಿ ಪುರಸಭಾ ಮಾಜಿ ಅಧ್ಯಕ್ಷ ಲಾಲ ಪೇಟಿ ಮಂಜುನಾಥ್, ಕುರುಬರಹಳ್ಳಿ ಯುವ ಮುಖಂಡ ಹರ್ಷ, ರಂಟವಳ ಮಂಡಲ ಪಂಚಾಯಿತಿ ಮಾಜಿ ಪ್ರಧಾನ ಪಾಪಣ್ಣ, ಬಡವನಹಳ್ಳಿ ಗ್ರಾ.ಪಂ ಮಾಜಿ ಸದಸ್ಯ ದೇವರಾಜ್, ರೈತ ಸಂಘದ ಸುನಿಲ್, ರಫೀಕ್, ಮಧುಗಿರಿಯ ಪಾರ್ವತಿ ಶರ್ಮ, ಮಹಿಳಾ ಸಮಾಜದ ಅಧ್ಯಕ್ಷ ಸಹನಾ ನಾಗೇಶ್, ರಂಟವಳ ಕೃಷ್ಣಪ್ಪ, ವಿ.ಎಸ್.ಎಸ್.ಎನ್ ಮಾಜಿ ಅಧ್ಯಕ್ಷ ಸಣ್ಣರಾಮಯ್ಯ ಇತರರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


