ಮಧುಗಿರಿ ತಾಲ್ಲೂಕು ಕೊಂಡವಾಡಿ ಗ್ರಾಮದಲ್ಲಿ ಅಂದಿನಿಂದಲೂ ನೆಲೆಗೊಂಡಿರುವ ಶ್ರೀ ಉಧ್ಬವ ಬಂಗಾರು ಕಾಟುಮ ಲಿಂಗೇಶ್ವರ ಸ್ವಾಮಿ ಜಾತ್ರೆಯು,ಪ್ರತೀ ವರ್ಷ ಶಿವರಾತ್ರಿ ಹಬ್ಬದ ಪ್ರಯುಕ್ತ ಬಹಳ ವಿಜೃಂಭಣೆಯಿಂದ ನಡೆಯುತ್ತದೆ.
ವಾಡಿಕೆಯಂತೆ ,ಈ ಬಾರಿಯೂ ದೇವಸ್ಥಾನದ ಟ್ರಸ್ಟ್ ,ಭಕ್ತ ಮಹಾಶಯರು,ಮತ್ತು ಸಾರ್ವಜನಿಕರ ಸಹಕಾರದಿಂದ ಈ ಬಾರಿಯೂ ಜಾತ್ರೆ ಪ್ರಯುಕ್ತ ಎಲ್ಲ ವಿಧಿ ವಿಧಾನಗಳನ್ನು ಆಚರಿಸಲಾಯಿತು.
ಅದರಲ್ಲಿಯೂ ವಿಶೇಷವಾಗಿ ಗುರುವಾರದಂದು ದೇವಾಲಯದ ಪ್ರಾಂಗಣದಲ್ಲಿ “ನೂರಾ ಒಂದು ಎಡೆ ” ಪೂಜೆಯನ್ನು ವಿದ್ಯುಕ್ತವಾಗಿ ಶ್ರದ್ದೆ ಮತ್ತು ಭಕ್ತಿ ಗಳಿಂದ ಆಚರಿಸಲಾಯಿತು. ಈ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಸಾವಿರಾರು ಜನ ದೂರ ದೂರುಗಳಿಂದಲೂ ಆಗಮಿಸಿ ಸ್ವಾಮಿ ಕೃಪೆಗೆ ಪಾತ್ರರಾದರು..
ಎಂತಹ ಬರಗಾಲದಲ್ಲೂ ಸಹ ಜಾತ್ರೆಯ ಆಚರಣೆಗಳು ನಿಲ್ಲದೆ ನಡೆದುಕೊಂಡು ಬಂದಿರುವುದು ಈ ಜಾತ್ರೆಯ ವಿಶೇಷ. ಗ್ರಾಮದ ಪ್ರತಿ ಮನೆಗಳಲ್ಲೂ ಹಬ್ಬದ ವಾತಾವರಣ,ಮನೆಗಳನ್ನೆಲ್ಲ ಸುಣ್ಣ ಬಣ್ಣ ಮಾಡಿ ಸಿಂಗರಿಸಿಕೊಂಡು ಊರಿಗೆ ಊರೇ ಜಾತ್ರೆಯ ಸಡಗರದಲ್ಲಿ ಮುಳುಗಿತ್ತು.
ಈ ದೇವಸ್ಥಾನದ ಒಕ್ಕಲು ,ಮತ್ತು ಸಕಾಲ ಕರ್ನಾಟಕ ಸರ್ಕಾರ ದ ಆಡಳಿತಾಧಿಕಾರಿಗಳೂ ಆದ ಚಿಕ್ಕ ಮಾಲೂರಿನ ಎಲ್.ಸಿ.ನಾಗರಾಜು ರವರು ,ತಮ್ಮ ತಂದೆ ತಾಯಿಯವರ ನೆನಪಿಗಾಗಿ ,ದಶಕಗಳಿಂದಲೂ ಜಾತ್ರೆಯ ಉಸ್ತುವಾರಿ ವಹಿಸಿಕೊಳ್ಳುವುದರ ಜೊತೆಗೆ ಪ್ರಸಾದ ವ್ಯವಸ್ಥೆಯನ್ನು ಸಹ ನಡೆಸಿಕೊಂಡು ಬಂದಿದ್ದಾರೆ ” ಬಹಳ ಪುರಾತನ ದೇವಾಲಯವಾದ ಇಲ್ಲಿ ಬಹಳ ಹಿಂದಿನಿಂದಲೂ ಜಾತ್ರೆ ನಡೆಯುತ್ತಾ ಬಂದಿದ್ದರೂ ಯಾವುದೇ ರೀತಿಯ ವ್ಯವಸ್ಥೆ ಗಳಿರಲಿಲ್ಲ,ಎತ್ತಿನ ಗಾಡಿಗಳಲ್ಲಿ ಮತ್ತು ನಡೆದು ಜಾತ್ರೆಗೆ ಬರುವವರು ಬುತ್ತಿ ತರಬೇಕಿತ್ತು.ದೇವರ ಅನುಗ್ರಹ ದಿಂದ ನಮ್ಮ “ಜನಮುಖಿ” ಸಂಸ್ಥೆ ಆಶ್ರಯದಲ್ಲಿ ಪ್ರಸಾದ ವ್ಯವಸ್ಥೆ ಮಾಡುತ್ತಿದ್ದೇವೆ.ಇದೇ ರೀತಿ ಮುಂದೆಯೂ ಸಹ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನೆರವೇರಬೇಕಿದೆ ” ಎಂದು ಮಾಧ್ಯಮದವರೊಂದಿಗೆ ಮಾತನಾಡಿದರು.
ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಹನಮಂತನಾಥ ಸ್ವಾಮೀಜಿಯವರು ಬಂದಿದ್ದ ಭಕ್ತರಿಗೆ ಆಶೀರ್ವಚನ ನೀಡುತ್ತಾ “ಇಂತಹ ದೇವತಾ ಕಾರ್ಯಗಳು ,ಜಾತ್ರಾ ಮಹೋತ್ಸವಗಳು ,ನಡೆಯುವುದರಿಂದ ಜನರಲ್ಲಿ ಪರಸ್ಪರ ದಾಮರಸ್ಯ ,ಭಾಂಧವ್ಯ ಗಳು ಬೆಳೆಯುತ್ತವೆ ಎಂದು ನುಡಿದರು.
ಮಧುಗಿರಿಯ ಓಂಕಾರಾನಂದ ನಾಥ ಸ್ವಾಮೀಜಿ,ಕೊರಟಗೆರೆ ಮಾಜಿ ಶಾಸಕ ಸುಧಾಕರಲಾಲ್,ಬಿ.ಜೆ.ಪಿ ಜಿಲ್ಲಾ ಅಧ್ಯಕ್ಷ ಬಿ.ಕೆ.ಮಂಜುನಾಥ್, ಕೊಂಡವಾಡಿ ಚಂದ್ರಶೇಖರ್
ತುಂಗೋಟಿ ರಾಮಣ್ಣ,ಕೆಂಚಮಾರಯ್ಯ,ರಂಗನಾಥ್,ದೊಡ್ಡಯ್ಯ,ಗೋಪಾಲರಾವ್,ಶಂಕರಶೆಟ್ಟಿ,ದೊಡ್ಡಲಿಂಗಯ್ಯ,ಪ್ರಭಾಕರ್ ರೆಡ್ಡಿ, ಬಿ.ಕೆ.ಪ್ರಕಾಶ್, ಕೊಂಡವಾಡಿ ಶಿವರಾಮ್ ಮುಂತಾದವರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದರು.
ಜಾತ್ರಾ ಮಹೋತ್ಸವಕ್ಕೆ ಬಂದಿದ್ದ ಭಕ್ತರಿಗೆ ,ನೆಲಮಂಗಲದ ಜನಮುಖಿ ಸಂಸ್ಥೆಯ ಅಧ್ಯಕ್ಷ ರಾದ ಶ್ರೀಮತಿ ದಿ.ನಾಗರತ್ನ ರವರ ಸವಿ ನೆನಪಿಗಾಗಿ ಗುರುವಾರದಂದು ಇಡೀ ದಿನ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಶ್ರೀ ಬಂಗಾರು ಕಾಟುಮಲಿಂಗೇಶ್ವರ ಸೇವಾ ಟ್ರಸ್ಟ್ ನಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಮತ್ತು ಎಲ್ಲ ಸದಸ್ಯರ ಸಹಕಾರದೊಂದಿಗೆ ಜಾತ್ರೆಯ ಎಲ್ಲ ಕಾರ್ಯಗಳೂ ಸುಸೂತ್ರವಾಗಿ ನಡೆದವು.
ವರದಿ:ಅಬಿದ್ ಮಧುಗಿರಿ