ತುಮಕೂರು: ಸಹಕಾರಿ ಸಂಘಗಳಲ್ಲಿ ಪಾರದರ್ಶಕತೆ ಬಹಳಮುಖ್ಯವಾಗಿದ್ದು, ಆಡಳಿತ ಪಾರದರ್ಶಕವಾಗಿದ್ದಲ್ಲಿ ಆರ್ಥಿಕ ವಹಿವಾಟು ಸುಗಮವಾಗಿ ಸಹಕಾರಿಯು ಸುಸ್ಥಿರವಾಗಿ ಪ್ರಗತಿಪಥದಲ್ಲಿ ನಡೆಯಲು ಸಾಧ್ಯ ಎಂದು ಶ್ರೀ ದೇವಿ ವಿದ್ಯಾ ಸಂಸ್ಥೆ ಅಧ್ಯಕ್ಷರಾದ ಡಾ. ಎಂ.ಆರ್ ಹುಲಿನಾಯ್ಕರ್ ಸಲಹೆ ನೀಡಿದರು.
ಅವರು ಭಾನುವಾರ ನಗರದ ಶಿರಾ ಗೇಟ್ ನ ಕಾಳಿದಾಸ ಪದವಿ ಪೂರ್ವ ಕಾಲೇಜಿನ ಶ್ರೀ ಸಿರಿಯಪ್ಪ ಒಡೆಯರ್ ಸಭಾಂಗಣದಲ್ಲಿ ನಡೆದ ಶ್ರೀ ಕವಿರತ್ನ ಕಾಳಿದಾಸ ಪತ್ತಿನ ಸಹಕಾರ ಸಂಘದ 11 ನೇ ವರ್ಷದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿ ಈ ಸಂಘವು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದ್ದು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವಿವಿಧ ಸಂಘ ಸಂಸ್ಥೆಗಳ ಮೂಲಕ ಆರ್ಥಿಕ ಭದ್ರತೆ ಹೊಂದಿ ಒಬ್ಬರಿಗೊಬ್ಬರು ಪೂರಕವಾಗಿ ಸಹಾಯಕ ಸಹಕಾರ ನೀಡುವಂತಾಗ ಬೇಕೆಂದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ರೇವಣ್ಣ ಸಿದ್ದೇಶ್ವರ ಮಠದ ಪೀಠಾಧ್ಯಕ್ಷರಾದ ಶ್ರೀ ಬಂಧುಶೇಖರ್ ಒಡೆಯರು ಮಾತನಾಡಿ ಶೇರುದಾರರು, ಠೇವಣಿದಾರರು ಮತ್ತು ಸಾಲಗಾರರ ಸಕಾಲಿಕ ಮರುಪಾವತಿಯಿಂದ ಕವಿರತ್ನ ಕಾಳಿದಾಸ ಸಂಘವು ಉತ್ತಮವಾಗಿ ನಡೆಯುತ್ತಿದ್ದು ಸಂಘದ ಸಾಧಕರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರೋತ್ಸಾಹಿಸುತ್ತಿರುವುದಕ್ಕೆ ಅಧ್ಯಕ್ಷರಿಗೆ, ಪದಾಧಿಕಾರಿಗಳಿಗೆ ಅಭಿನಂದಿಸಿದರು.
ಸಮಾರಂಭದಲ್ಲಿ ವಿವಿಧ ಸಾಧನೆ ಮಾಡಿರುವ ಹಾಗೂ ಪ್ರಶಸ್ತಿ ಪಡೆದಿರುವ ನಾಗಮ್ಮ, ನರಸಿಂಹಮೂರ್ತಿ, ಸುನೀತಾನಟರಾಜು, ಡಿ.ಟಿ ಓರಗಲ್ಲಯ್ಯ, ಡಾ.ಗಂಗಾಧರ್ ಕೋಟ್ಯಾವರ್, ಡಾ ಪ್ರಭಾಕರ್ ರೆಡ್ಡಿ, ಡಾ.ನಾಗರಾಜು ಡಾ.ದರ್ಶನ್ ಎಂ.ಧರ್ಮರಾಜ ನಟರಾಜು ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಸಂಘದ ನಿರ್ದೇಶಕರಾದ ಎ. ಆರ್ ವೆಂಕಟೇಶಪ್ಪ ಸನ್ಮಾನಿತರ ಪರವಾಗಿ ಡಾ. ಗಂಗಾಧರ್ ಕೋಟ್ಯಾವರ್ ಮಾತನಾಡಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಎಲ್.ಸುಶೀಲಾ, ನಿರ್ದೇಶಕರಾದ ನಟರಾಜ, ವಿ.ಆರ್ ವೆಂಕಟೇಶಪ್ಪ, ಎಸ್.ಆರ್. ಹರೀಶ್, ಡಿ. ಶಿವರಾಜಯ್ಯ, ಸಿ.ಟಿ.ಮುದ್ದುಕುಮಾರ್, ಸಿ.ರಂಗಧಾಮ್ಮಯ್ಯ, ಕೆ.ಎಸ್. ರಾಮಚಂದ್ರಯ್ಯ, ಡಾ.ಸಿ.ಟಿ ಗುರುಪ್ರಕಾಶ್ ಕೆ. ಪುಷ್ಪ, ಟಿ.ಯೋಗೀಶ್, ಕೆ.ವಿರೂಪಾಕ್ಷಪ್ಪ, ಸಿ.ಜಿ ಎಸ್.ಸುರೇಶ್ ಸಿಬ್ಬಂದಿ ವರ್ಗ ಇದ್ದರು. ನಿರ್ದೇಶಕರಾದ ಡಿ. ಶಿವರಾಮಯ್ಯ ಸ್ವಾಗತಿಸಿದರು. ಕೆ.ವಿರೂಪಾಕ್ಷಪ್ಪ ಕಾರ್ಯಕ್ರಮ ನಿರೂಪಿಸಿದರು. ಡಾ.ಸಿ.ಟಿ ಗುರುಪ್ರಕಾಶ್ ವಂದಿಸಿದರು.
ಆರಂಭಿಕ ವರ್ಷ 2014-15 ರಲ್ಲಿ 60 ಸಾವಿರ ನಿವ್ವಳ ಲಾಭಗಳಿಸಿದ್ದ ಸಂಘವು 2025-26ನೇ ಸಾಲಿಗೆ 53,86,215 ರೂ ನಿವ್ವಳ ಲಾಭ ಗಳಿಸಿ ಪ್ರಗತಿಯತ್ತ ದಾಪುಗಾಲಿರಿಸಿದೆ. ಶೇರುದಾರರ ನಂಬಿಕೆ, ಪ್ರೀತಿ, ಹಾಗೂ ಕಾರ್ಯಕಾರಿ ಮಂಡಳಿಯ ಸಹಕಾರ ಈ ಸಾಧನೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಲಾಭಾಂಶದಲ್ಲಿ ಸಮಾಜದ ಬಡ ವಿದ್ಯಾರ್ಥಿಗಳ ಶಾಲಾ ಶುಲ್ಕ ಕಟ್ಟಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವ ಜೊತೆಗೆ ಸಹಕಾರಿಗೂ ಸ್ವಂತ ಕಟ್ಟಡ ನಿರ್ಮಿಸಲಾಗುವುದು.
— ಎಂ.ಧರ್ಮರಾಜ್, ಅಧ್ಯಕ್ಷರು, ಕವಿರತ್ನ ಕಾಳಿದಾಸ ಪ.ಸ.ಸಂಘ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
