ತುಮಕೂರು: ಗಣಪತಿ ಹಬ್ಬವನ್ನು ಹಬ್ಬವಾಗಿ ಆಚರಿಸಲು ಪೊಲೀಸ್ ಇಲಾಖೆಯಿಂದ ಯಾವುದೇ ತೊಂದರೆಯಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ನಡೆದು ಕೊಂಡರೆ ಕಾನೂನಿನ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಅಶೋಕ್ ಕೆ.ವಿ. ಎಚ್ಚರಿಕೆ ನೀಡಿದರು.
ನಗರದ ಕುಂಚಿಟಿಗ ಸಮುದಾಯಭವನದಲ್ಲಿ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕರೆಯಿದ್ದ ತುಮಕೂರು ತಾಲೂಕು ಗಣಪತಿ ಪ್ರತಿಷ್ಠಾಪನಾ ಸಮಿತಿಗಳ ಪದಾಧಿಕಾರಿಗಳ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಿಜೆ ಮಾಡಿಫೈಡ್ ವೆಹಿಕಲ್ ಗಳಲ್ಲಿ ಬರುವ ಟ್ಯಾಬ್ಲೋಗಳಿಗೆ ಅವಕಾಶವಿಲ್ಲ. ಒಂದು ಗಣಪತಿಗೆ ಎರಡು ಸ್ಪೀಕರ್ ಬಳಸಲು ಅವಕಾಶವಿದೆ. ಮನೆಯ ಒಳಗೆ ಪೂಜಿಸುವ ಗಣಪತಿಗಳನ್ನು ಹೊರತು ಪಡಿಸಿ, ಬಯಲಿನಲ್ಲಿ ಪೂಜಿಸುವ ಎಲ್ಲಾ ಗಣಪತಿಗಳಿಗೂ ಅನುಮತಿ ಕಡಾಯ ಎಂದು ಸ್ಪಷ್ಟಪಡಿಸಿದರು.
ಡಿಜೆ ಬಳಸಲು ಸುಪ್ರೀಂಕೋರ್ಟ್ ಕೆಲವು ನಿಬಂಧ ವಿಧಿಸಿದೆ. ಸಾರ್ವಜನಿಕ ಸ್ಥಳ, ಸ್ಕೂಲು, ಕಾಲೇಜು, ಆಸ್ಪತ್ರೆಗಳು ಹಾಗೂ ವ್ಯಾಪಾರಿ ಸ್ಥಳಗಳ ಮುಂದೆ ಜನರಿಗೆ ತೊಂದರೆಯಾಗದಂತೆ ಮೆರವಣಿಗೆ ಶಾಂತ ರೀತಿಯಿಂದ ನಡೆಯಬೇಕು. ಮುಂಚೆಯೇ ಪೊಲೀಸ್ ಇಲಾಖೆಗೆ ತಿಳಿಸಿದರೆ, ಉತ್ಸ ವದ ದಿನ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಇಲಾಖೆ ತೆಗೆದುಕೊಂಡು, ಗಣೇಶ ಮೆರವಣಿಗೆ ಸುಗಮವಾಗಿ ಸಾಗಲು ಅನುವು ಮಾಡಿಕೊಡಲಾಗುವುದು. ಹಾಗಾಗಿ ಗಣಪತಿ ವಿಸರ್ಜನೆಯ ದಿನಾಂಕ ಮತ್ತು ರೂಟ್ ಮ್ಯಾಪ್ ಮೊದಲೇ ತಿಳಿಸಿದರೆ, ಸೂಕ್ತ ಬಂದೋಬಸ್ತ್ ಗೆ ನೇರವಾಗಲಿದೆ. ಸಾಮೂಹಿಕ ಗಣಪತಿ ವಿಸರ್ಜನೆಗೆ ಮುಂದಾದರೆ ಅದಕ್ಕೂ ಸಹ ಪೊಲೀಸ್ ಇಲಾಖೆ ಸಹಕರಿಸಲಿದೆ.
– ಕೆ.ವಿ.ಅಶೋಕ್, ಎಸ್ಪಿ.
ತುಮಕೂರಿನ ಕುಂಚಿಟಿಗ ಸಮುದಾಯ ಭವನದಲ್ಲಿ ಗಣಪತಿ ಪ್ರತಿಷ್ಠಾಪನಾ ಮಂಡಳಿಯವ ರೊಂದಿಗಿನ ಸಭೆಯಲ್ಲಿ ಎಸ್ ಪಿ ಕೆ.ವಿ.ಅಶೋಕ್ ಮಾತನಾಡಿದರು. ಎಸ್ ಪಿ ಗೋಪಾಲ್, ಡಿವೈಎಸ್ಪಿಗಳಾದ ಚಂದ್ರಶೇಖರ್, ಪುಟ್ಟೇಗೌಡ ಮತ್ತಿತರರಿದ್ದರು.
ಗಣಪತಿ ಪ್ರತಿಷ್ಠಾಪನೆಗೆ ಬೇಕಾದ ಎಲ್ಲಾ ಅನುಮತಿಗಳನ್ನು ಸಿಂಗಲ್ ವಿಂಡೋ ಮೂಲಕ ವಿತರಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಕೆ.ಇ.ಬಿ. ಅನುಮತಿಗೆ ಅವರು ಸ್ಥಳ ಪರಿಶೀಲನೆ ಮಾಡಬೇಕಿರುವುದರಿಂದ ಕೊಂಚ ವಿಳಂಬವಾಗಿದ್ದು, ಅವರಿಗೂ ಸಹ ನಿಗದಿತ ಅವಧಿಯೊಳಗೆ ಅನುಮತಿ ನೀಡುಂತೆ ಕೋರಲಾಗುವುದು ಎಂದ ಎಸ್.ಪಿ. ಅವರು ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಬಿ.ಹೆಚ್. ರಸ್ತೆಯ ಎರಡು ಬದಿಯಲ್ಲಿ ಕಟ್ಟಲು ಅವಕಾಶವಿದೆ. ಅದಕ್ಕೆ ಸ್ಥಳೀಯ ಸಂಸ್ಥೆಯ ಪರವಾನಗಿ ಅಗತ್ಯ. ಆದರೆ ರಸ್ತೆಯ ಮಧ್ಯದಲ್ಲಿ ಕಟ್ಟಲು ಅವಕಾಶವಿಲ್ಲ ಹಾಗೂ ಒಂದು ಧರ್ಮ, ಸಮುದಾಯವನ್ನು ಹೀಗಳೆಯುವ ಮತ್ತು ನಿಷೇಧಿತ ಪದಗಳನ್ನು ಮುದ್ರಿಸುವುದಿಲ್ಲ. ಈಗಾಗಲೇ ಮುದ್ರಕರ ಸಭೆಯಲ್ಲಿ ಈ ಸಂಬಂಧ ಸೂಚನೆ ನೀಡಲಾಗಿದೆ ಒಂದು ಸಮುದಾಯವನ್ನು ಗುರಿಯಾಗಿಸಿದ ಯಾವುದೇ ಫ್ಲೆಕ್ಸ್, ಬ್ಯಾನರ್ ಬಳಕೆ ಮಾಡು ವಂತಿಲ್ಲ ಎಂದರು.
ಗಣಪತಿ ಕೂರಿಸುವ ಸ್ಥಳದಲ್ಲಿ ಸಿಸಿಟಿವಿ ಕಡ್ಡಾಯ: ಗಣಪತಿ ಪ್ರತಿಷ್ಠಾಪನೆ, ಉತ್ಸವ ಮತ್ತು ವಿಸರ್ಜನೆ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನವನ್ನು ಪೊಲೀಸ್ ಇಲಾಖೆ ಹರಿಸಲಿದೆ. ಆಯೋಜಕರು ನಿಗಾವಹಿಸಬೇಕು. ಗಣಪತಿ ಕೂರಿಸುವ ಸ್ಥಳದಲ್ಲಿ ಸಿಸಿಟಿವಿ ಕ್ಯಾಮರ ಕಡ್ಡಾಯ, ಇದರಿಂದ ಮುಂದಾಗಬಹುದಾದ ಅನಾಹುತ ತಪ್ಪಿಸಲು, ಹಾಗೂ ಆಗಿರಬಹುದಾದ ಅನಾಹುತಕ್ಕೆ ಕಾರಣ ಏನು ಎಂದು ತಿಳಿದುಕೊಳ್ಳಲು ಸಹಕಾರಿಯಾಗಿದೆ. ಇದರಿಂದ ಪರಿಸ್ಥಿತಿಯ ಲಾಭ ಪಡೆದು ಸಮಾಜ ವಿರೋಧಿ ಶಕ್ತಿಗಳು ಲಾಭ ಪಡೆಯುವುದನ್ನು ತಡೆಗಟ್ಟಬಹುದು ಎಂದರು.
500ಕ್ಕೂ ಹೆಚ್ಚು ಕ್ಯಾಮರಾ: ತುಮಕೂರು ನಗರದಲ್ಲಿ ಸುಮಾರು 500ಕ್ಕೂ ಹೆಚ್ಚು ಕ್ಯಾಮರಗಳ ಮೂಲಕ ಪ್ರತಿಯೊಂದು ವರಿಯಾದ ಚಲನವಲನಗಳನ್ನು ಪೊಲೀಸ್ ಇಲಾಖೆ ಗಮನಿಸುತ್ತಿದೆ. ಕುಡಿದು ಬಂದ ಗಲಾಟೆ ಮಾಡುವುದು, ಸಾರ್ವಜನಿಕರಿಗೆ ತೊಂದರೆ ನೀಡಿದರೆ ಕಾನೂನಿನ ಕುಣಿಕೆ ಬಿಗಿಯಾಗಲಿದೆ. ಗಣಪತಿ ಹಬ್ಬವನ್ನು ಶಾಂತವಾಗಿ, ಸಂತೋಷದಿಂದ ಎಲ್ಲರೂ ಹಬ್ಬದ ರೀತಿ ಆಚರಿಸಲು ಪೊಲೀಸ್ ಇಲಾಖೆಯ ಸಹಕಾರವಿದೆ ಎಂದು ಎಸ್.ಪಿ ಅಶೋಕ್ ಕೆ.ವಿ ತಿಳಿಸಿದರು.
ಸಭೆಯಲ್ಲಿ ತುಮಕೂರು ನಗರ ಡಿವೈಎಸ್ಪಿ ಚಂದ್ರಶೇಖರ್, ಗ್ರಾಮಾಂತರ ಡಿವೈಎಸ್ಪಿ ಪುಟ್ಟೇಗೌಡ ಹಾಗೂ ಪೊಲೀಸ್ ಸಿಬ್ಬಂದಿಗಳು, ವಿವಿಧ ಗಣಪತಿ ಪ್ರತಿಷ್ಠಾಪನಾ ಸಮಿತಿಗಳ ಆಯೋಜಕರು ಭಾಗವಹಿಸಿದ್ದರು.
ಸೋಶಿಯಲ್ ಮೀಡಿಯಾ ಕಂಟೆಂಟ್ ಹಾಕೋ ಮುನ್ನ ಎಚ್ಚರವಿರಲಿ:
ಎಮ್.ವಿ.ಸೀ. ಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಗಣಪತಿ ವಿಸರ್ಜನೆ, ಉತ್ಸವ ಕಳೆದ ಮೂರು ವರ್ಷಗಳಿಂದ ಯಾವುದೇ ರೀತಿಯ ಅಹಿತಕರ ಘಟನೆಯಿಲ್ಲದೆ ನಡೆದುಕೊಂಡು ಬರುತ್ತಿದೆ. ಈ ವರ್ಷವೂ ಅದೇ ರೀತಿ ನಡೆಸಲು ಆಯೋಜಕರು ಸಹಕರಿಸಬೇಕೆಂಬುದು ಇಲಾಖೆ ಮನವಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಬರುವ ಕಂಟೆಂಟ್ ಗಳನ್ನು ವೈರಲ್ ಮಾಡುವ ಮೊದಲು ಅದರ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ತಪ್ಪಿಗೆ ಸಿಕ್ಕಿ ಹಾಕಿಕೊಳ್ಳುವ ಅಪಾಯವಿದೆ.. ಸೂಕ್ಷ್ಮ ಸ್ಥಳಗಳಲ್ಲಿ ಮೆರವಣಿಗೆ ಸಾಗುವಾಗ ತಾಳ್ಮೆ ಇರಲಿ. ಪ್ರಚೋದನೆಗೆ ಒಳಗಾಗುವುದು ಬೇಡ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
