ದಂಗಲ್ ಸಿನಿಮಾ ಖ್ಯಾತಿಯ ನಿತೀಶ್ ತಿವಾರಿ ಅವರು ಬಾಲಿವುಡ್ ನಲ್ಲಿ ʼರಾಮಾಯಣʼ ಸಿನಿಮಾ ಮಾಡುವ ವಿಚಾರ ಎಲ್ಲರಿಗೂ ತಿಳಿದೇ ಇದೆ.
ದಂಗಲ್ ಸಿನಿಮಾ ಖ್ಯಾತಿಯ ನಿತೀಶ್ ತಿವಾರಿ ಅವರು ಬಾಲಿವುಡ್ ನಲ್ಲಿ ʼರಾಮಾಯಣʼ ಸಿನಿಮಾ ಮಾಡುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಇದರಲ್ಲಿ ರಣಬೀರ್ ಕಪೂರ್, ಸಾಯಿಪಲ್ಲವಿ ಅವರು ರಾಮ-ಸೀತೆ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಅವರು ಹಣ ಹಾಕಲಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಬಹುಕೋಟಿ ವೆಚ್ಚದ ಈ ಸಿನಿಮಾಗೆ ಯಶ್ ಕೂಡಾ ನಿರ್ಮಾಪಕ ಎಂದು ಅಧಿಕೃತ ಘೋಷಣೆ ಆಗಿದೆ.
ಹನುಮಂತನಾಗಿ ಸನ್ನಿ ಡಿಯೋಲ್ ನಟಿಸಲಿದ್ದಾರೆ. ಕುಂಭಕರ್ಣನ ಪಾತ್ರಕ್ಕೆ ಬಾಬಿಡಿಯೋಲ್ ಅವರನ್ನು ಸಂಪರ್ಕ ಮಾಡಲಾಗಿದೆ ಎಂದು ವರದಿಯೊಂದು ತಿಳಿಸಿದೆ. ವಿಜಯ್ ಸೇತುಪತಿ ರಾವಣನ ಕಿರಿಯ ಸಹೋದರ ವಿಭೀಷಣನ ಪಾತ್ರವನ್ನು ಮಾಡಬಹುದು ಎಂದು ಹೇಳಲಾಗಿದೆ.
ಎಪ್ರಿಲ್ 12ರಂದು ಯಶ್ ಅವರ ನಿರ್ಮಾಣ ಸಂಸ್ಥೆ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಜೊತೆ ‘ರಾಮಾಯಣʼ ಚಿತ್ರಕ್ಕೆ ಬಂಡವಾಳ ಹೂಡಲಿದೆ ಎಂದು ಘೋಷಣೆ ಮಾಡಲಾಗಿದೆ. ಮುಂದಿನ ತಿಂಗಳಲ್ಲಿ ರಾಮಾಯಣದ ಪಾತ್ರವರ್ಗ, ಸಿಬ್ಬಂದಿಯನ್ನು ಹೇಳಲಾಗುವುದು. ಆದರೆ ರಾವಣನ ಪಾತ್ರ ಮಾಡುವವರು ಯಾರೆಂದು ಇನ್ನೂ ನಿಗೂಢವಾಗಿದೆ. ಬಲ್ಲ ಮೂಲಗಳಿಂದ ಈ ಪಾತ್ರವನ್ನು ಯಶ್ ಅವರೇ ಮಾಡುವುದಾಗಿ ಹೇಳಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296