ಉತ್ತರ ಪ್ರದೇಶ: ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಮದುವೆ ಮೆರವಣಿಗೆ ವೇಳೆ ಮಾಜಿ ಪ್ರಿಯತಮೆಯೊಬ್ಬಳು ವರನ ಮೇಲೆ ಆಯಸಿಡ್ ಎರಚಿದ ಘಟನೆ ನಡೆದಿದೆ. ಪರಿಣಾಮ ಈ ದಾಳಿಯಿಂದ ವರನಿಗೆ ಸುಟ್ಟ ಗಾಯಗಳಾಗಿವೆ. ವರನ ಹತ್ತಿರವಿದ್ದ ಮೂವರು ಮಹಿಳೆಯರಿಗೂ ಕೂಡ ಇದರಿಂದ ಗಾಯಗಳಾಗಿವೆ.
ಬಲ್ಲಿಯಾದಲ್ಲಿರುವ ದುಮರಿ ಗ್ರಾಮದಲ್ಲಿ ರಾಕೇಶ್ ಬಿಂದ್ ಎಂಬ ವರನ ಮದುವೆ ಮೆರವಣೆಗೆ ನಡೆಯುತ್ತಿದ್ದ ವೇಳೆ, ಆತನ ಮಾಜಿ ಪ್ರಿಯತಮೆ ವರನ ಬಳಿ ಬಂದು ತನ್ನ ಕೈಯಲ್ಲಿದ್ದ ಆಯಸಿಡ್ ಬಾಟಲಿಯಿಂದ ಆತನ ಮೇಲೆ ದಾಳಿ ನಡೆಸಿದ್ದಾಳೆ. ಯುವತಿಯನ್ನು ಕೂಡಲೇ ಬಂಧಿಸಿದ ರಾಕೇಶ್ ಸಂಬಂಧಿಕರು ಆಕೆಗೆ ಸರಿಯಾಗಿ ಥಳಿಸಿದ್ದಾರೆ.
ಆಯಸಿಡ್ ದಾಳಿಯಿಂದ ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ನಂತರ ವರನು ಮದುವೆ ಮನೆಗೆ ತೆರಳಿ ವಧುವಿಗೆ ತಾಳಿ ಕಟ್ಟಿದ್ದಾನೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296