ಪಾವಗಡ : ಸಿ.ಕೆ.ಪುರ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರಾಗಿದ್ದ ಸುವರ್ಣಮ್ಮನವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅರುಂಧತಿ ನಾಗಲಿಂಗಪ್ಪನವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ಸಿ.ಕೆ.ಪುರ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 15 ಸದಸ್ಯರುಗಳಿದ್ದು, ಇದರಲ್ಲಿ 8 ಸದಸ್ಯರು ಅರುಂಧತಿ ನಾಗಲಿಂಗಪ್ಪನವರ ಪರ ಮತ ಚಲಾಯಿಸಿದ್ದು, ಇವರ ಪ್ರತಿಸ್ಪರ್ಧೆ ಸಣ್ಣಬೊಮ್ಮಕ್ಕ ಸಣ್ಣಚಿತ್ತಪ್ಪ ನವರಿಗೆ 5 ಸದಸ್ಯರು ಮತ ನೀಡಿದ್ದಾರೆ. ಇನ್ನುಳಿದ ಇಬ್ಬರು ಸದಸ್ಯರು ಗೈರು ಹಾಜರಾಗಿದ್ದರಿಂದ ಅರುಂಧತಿ ನಾಗಲಿಂಗಪ್ಪನವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ತಹಶೀಲ್ದಾರ್ ಸಂತೋಷ್ ಕುಮಾರ್ ಅವರು ಚುನಾವಣೆಯ ಅಧಿಕಾರಿಯಾಗಿ ಆಗಮಿಸಿದ್ದು ತಮ್ಮ ಕರ್ತವ್ಯವನ್ನು ನಿರ್ವಹಿಸಿದರು.
ಈ ವೇಳೆ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಶಾಂತಿನಿಕೇತನ ಕಾನ್ವೆಂಟಿನ ಅಧ್ಯಕ್ಷರಾದ ಕೊತ್ತೂರು ನಾಗೇಶ್ ರವರು ಮಾತನಾಡುತ್ತಾ, ಸಿ.ಕೆ.ಪುರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಬೇಕು ಹಾಗೂ ಮೂಲಭೂತ ಸೌಕರ್ಯಗಳ ಕಡೆಗೆ ಹೆಚ್ಚುನ ಒತ್ತು ಇಡಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡ ಕೊಂಡಪ್ಪನವರು ಮಾತನಾಡುತ್ತಾ ಸಿ.ಕೆ.ಪುರ ಗ್ರಾಮ ಪಂಚಾಯತಿಯಲ್ಲಿ ಈ ಬಾರಿ ಒಕ್ಕಲಿಗ ಜನಾಂಗಕ್ಕೆ ಪ್ರಾತಿನಿಧ್ಯ ನೀಡಲಾಗಿದ್ದು , ಇವರು ಎಲ್ಲಾ ಸದಸ್ಯರ ಹಾಗೂ ಪಂಚಾಯತಿಯ ಅಧಿಕಾರಿಗಳನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರಾಜಮ್ಮ , ಪಿ ಡಿ ಓ ರಂಗಸ್ವಾಮಿ, ಸದಸ್ಯರಾದ ಕೊತ್ತೂರು ಹೇಮಲತಾ ವೆಂಕಟೇಶ್, ಗಿರೀಶ್, ಚಂದ್ರಕಲಾ, ರತ್ನಮ್ಮ , ಕಮಲಮ್ಮ , ದೊಡ್ಡಣ್ಣ , ಲಕ್ಷ್ಮಮ್ಮ ಈರಣ್ಣ, ಮಹಾಲಿಂಗಪ್ಪ, ಸುವರ್ಣಮ್ಮ, ಬಿಲ್ ಕಲೆಕ್ಟರ್ ನಾಗರಾಜು ಕೊತ್ತೂರು ದೊಡ್ಡರಂಗಪ್ಪ, ರಂಗಧಾಮಪ, ,ಜೆಸಿಪಿ ಹನುಮಂತರಾಯಪ್ಪ ಹರಿಹರಪುರ ಸೋಲಾರ್ ಅಶ್ವಥ್, ಗುತ್ತಿಗೆದಾರ ಹನುಮಂತರಾಯಪ್ಪ , ಸಿಕೆಪುರ ಅಂಗಡಿ ಕರಿಯಣ್ಣ , ಅಂಜಿನಪ್ಪ, ಜಯರಾಮಪ್ಪ ಟಿ.ಎನ್. ಕೋಟೆ ರಾಜಪ್ಪ ಇನ್ನೂ ಹಲವಾರು ಹೆಚ್ಚಿನದಾಗಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ: ರಾಮಪ್ಪ ಸಿ.ಕೆ.ಪುರ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA