Subscribe to Updates
Get the latest creative news from FooBar about art, design and business.
- ವಕ್ಫ್ ಆಸ್ತಿ ಖಾತಾ ಅಪ್ ಡೇಟ್ ಕೆಲಸ ತಿಂಗಳೊಳಗೆ ಮುಗಿಸಬೇಕು: ಅಧಿಕಾರಿಗಳಿಗೆ ಸಚಿವ ಜಮೀರ್ ಗಡುವು
- ಮಂಡ್ಯ: ನುಡಿಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ
- ಮುನಿರತ್ನ ಪ್ರಕರಣವನ್ನು ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
- ವೈ.ಎನ್.ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊನೆಗೂ ಆ್ಯಂಬುಲೆನ್ಸ್ ಭಾಗ್ಯ!: ಬೈಕ್ ನಲ್ಲಿ ಮೃತದೇಹ ಸಾಗಿಸಿದ ಘಟನೆ ಬೆನ್ನಲ್ಲೇ ಕ್ರಮ
- ಹೆಚ್ ಡಿಕೆ, ಬಿಎಸ್ ವೈ ಸಿಎಂ ಆಗಿದ್ದಾಗ ಅಕ್ರಮ ಡಿನೋಟಿಫಿಕೇಷನ್ ಆಗಿದೆ: ಸಚಿವರಿಂದ ಗಂಭೀರ ಆರೋಪ
- ವಾಕಿಂಗ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದ ಎಂಬಿಬಿಎಸ್ ವಿದ್ಯಾರ್ಥಿ ಸಾವು!
- ಜಾತಿ ನಿಂದನೆ ಪ್ರಕರಣ: ಶಾಸಕ ಮುನಿರತ್ನಗೆ ಬಿಗ್ ರಿಲೀಫ್
- ವೈ.ಎನ್.ಹೊಸಕೋಟೆ ಸರ್ಕಾರಿ ಶಾಲೆ: ಬಾಲಕಿಯರ ವಾಲಿಬಾಲ್ ನಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
Author: admin
ದಿನೇ ದಿನೇ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುತ್ತಿರುವುದರಿಂದ ಸಿಲಿಕಾನ್ ಸಿಟಿ ಡೇಂಜರ್ ಸಿಟಿಯಾಗಿ ಪರಿವರ್ತನೆಯಾಗಿದೆ. ಇಂದು ಒಂದೇ ದಿನ 22317 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು,ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. ನಿನ್ನೆ 20121 ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು. ಇದೀಗ 22 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿಗೆ ಕಡಿವಾಣ ಹಾಕುವ ಉದ್ದೇಶದಿಂದ ವೀಕೆಂಡ್ ಕಫ್ರ್ಯೂ ಜಾರಿಗೊಳಿಸಲಾಗಿದ್ದರೂ ಯಾವುದೆ ಪ್ರಯೋಜನವಾಗುತ್ತಿಲ್ಲ.ಕಳೆದ ವಾರ ವೀಕೆಂಡ್ ಜಾರಿಯಲ್ಲಿದ್ದರೂ ನೂರಾರು ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು. ಇಂದು ಮತ್ತು ನಾಳೆ ವೀಕೆಂಡ್ ಜಾರಿಯಲ್ಲಿದ್ದರೂ ನಾಳೆ ಇನ್ನೆಷ್ಟು ಮಂದಿಗೆ ಸೋಂಕು ಕಾಣಿಸಿಕೊಳ್ಳುವುದೋ ಎಂಬ ಭೀತಿ ಆರಂಭವಾಗಿದೆ. ಸೋಂಕು ತಡೆಗೆ ಏನೆ ಕ್ರಮ ಕೈಗೊಂಡರೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸುವ ಸಾಧ್ಯತೆಗಳಿವೆ. ವರದಿ ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…
ದುಷ್ಕರ್ಮಿಗಳು ರೈಲ್ವೆ ಹಳಿಯ ಮೇಲೆ ಹಾಕಿದ್ದ ಸಿಮೆಂಟ್ ಪಿಲ್ಲರ್ಗೆ ರಾಜಧಾನಿ ಎಕ್ಸ್ಪ್ರೆಸ್ ಡಿಕ್ಕಿ ಹೊಡೆದಿದ್ದು, ಕೆಲ ಕಾಲ ಆತಂಕ ಮೂಡಿಸಿದೆ. ಗುಜರಾತ್ನ ದಕ್ಷಿಣ ಭಾಗದಲ್ಲಿ ಈ ದುರ್ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮುಂಬೈ, ದೆಹಲಿ ನಡುವೆ ಸಂಚರಿಸುವ ರಾಜಧಾನಿ ಎಕ್ಸ್ಪೆಕ್ಸ್ ರೈಲು ಶುಕ್ರವಾರ ಸಂಜೆ 7.10ರ ಸುಮಾರಿನಲ್ಲಿ ಘಟನೆ ನಡೆದಿದೆ. ದುಷ್ಕರ್ಮಿಗಳು ಸಿಮೆಂಟ್ ಪಿಲ್ಲರ್ ಅನ್ನು ರೈಲ್ವೆ ಹಳಿಯ ಮೇಲೆ ಹಾಕಿದ್ದಾರೆ. ರೈಲು ಢಿಕ್ಕಿ ಹೊಡೆದ ರಬಸಕ್ಕೆ ಪಿಲ್ಲರ್ ಹಳಿಯ ಮೇಲಿಂದ ಪಕ್ಕಕ್ಕೆ ತಳ್ಳಲ್ಪಟ್ಟಿದೆ.ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ. ರೈಲ್ವೆ ಸಂಚಾರಕ್ಕೂ ಅಡಚಣೆಯಾಗಿಲ್ಲ. ಘಟನೆಯ ಬಗ್ಗೆ ಲೋಕೋ ಪೈಲಟ್ ಸ್ಟೆಷನ್ ಮಾಸ್ಟರ್ಗೆ ಮಾಹಿತಿ ನೀಡಿದ್ದಾರೆ. ವಲ್ಸಾದ್ ಗ್ರಾಮೀಣ ಭಾಗದ ಪೊಲೀಸರು ಕೇಸು ದಾಖಲಿಸಿದ್ದು, ದುಷ್ಕರ್ಮಿಗಳನ್ನು ಬಂಧಿಸಲು ಕ್ರಮ ಕೈಗೊಂಡಿದ್ದಾರೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ವಿಷ ಪೂರಿತ ಮದ್ಯ ಸೇವನೆಯಿಂದ ಐವರು ಸಾವನ್ನಪ್ಪಿರುವ ಘಟನೆ ನಳಂದ ಜಿಲ್ಲೆಯಲ್ಲಿ ನಡೆದಿದ್ದು , ಇಬ್ಬರ ಸ್ಥಿತಿ ಗಂಭೀರವಾಗಿದೆ. ಬಿಹಾರ್ ಕೆಲವು ರಾಜ್ಯಗಳಲ್ಲಿ ವಿಷ ಪೂರಿತ ಮದ್ಯ ಸೇವನೆಯಿಂದ ಆಗಾಗ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ನಿನ್ನೆ ಐವರು ಸಾವನ್ನಪ್ಪಿರುವ ಘಟನೆ ಸೊಹ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಛೋಟಿಪಹಡಿ ಮತ್ತು ಪಹಾಡ್ತಲ್ಲಿ ಎಂಬ ಗ್ರಾಮಗಳಲ್ಲಿ ಈ ಘಟನೆ ನಡೆದಿದೆ. ಭಾಗೋ ಮಿಸ್ತ್ರಿ(55), ಮುನ್ನಾ ಮಿಸ್ತ್ರಿ(55), ಧರ್ಮೇಂದ್ರ(50), ನಾಗೇಶ್ವರ್(50) ಮತ್ತು ಕಾಳಿಚರಣ್ ಮಿಸ್ತ್ರಿ (50) ಮೃತಪಟ್ಟವರಾಗಿದ್ದಾರೆ.ಮದ್ಯ ಸೇವನೆಯಿಂದ ಮೃತಪಟ್ಟಿದ್ದಾರೆ ಎಂದು ಅವರ ಸಂಬಂಧಿಗಳು ಸ್ಪಷ್ಟನೆ ನೀಡಿದ್ದಾರೆ. ಈ ಪ್ರದೇಶಗಳಿಗೆ ಡಿಎಸ್ಪಿ ಮತ್ತು ಎಸ್ಎಚ್ಒ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮತ್ತೊಂದು ಪ್ರಮುಖ ವಿಷಯವೆನೆಂದರೆ ಬಿಹಾರ್ ಸರ್ಕಾರ ರಾಜ್ಯದಲ್ಲಿ ಮದ್ಯ ಸೇವನೆ ಮತ್ತು ಮಾರಾಟ ಹಾಗೂ ಸಾಗಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ವರದಿ: ಆಂಟೋನಿ ಬೇಗೂರು
ಕೊರೊನಾ ಸೋಂಕು ನಾಗಾಲೋಟದಲ್ಲಿ ಸಾಗುತ್ತಿದೆ. ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 2.7 ಲಕ್ಷ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 225 ದಿನಗಳಲ್ಲಿ ಅತಿ ಹೆಚ್ಚು ಪ್ರಕರಣಗಳಿವಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಇದರ ಜತೆಯಲ್ಲಿ 7743 ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ಮತ್ತಷ್ಟು ಆತಂಕ ಎದುರಾಗಿದೆ. ಕೊರೊನಾ ಸೋಂಕಿನಿಂದ 314 ಮಂದಿ ಸಾವನ್ನಪ್ಪಿದ್ದಾರೆ. ದಿನವೊಂದಕ್ಕೆ ಸೋಂಕು ಕಾಣಿಸಿಕೊಳ್ಳುವವರ ಸಂಖ್ಯೆ ಶೇ.16.28ರಷ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ನಿನ್ನೆ ಒಂದೇ ದಿನದಲ್ಲಿ 1,38,331 ಮಂದಿ ಸೋಂಕಿತರು ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಒಟ್ಟು 15,50,357 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಯಲ್ಲಿ 314 ಮಂದಿ ಕೋವಿಡ್ನಿಂದ ಮೃತಪಟ್ಟಿರುವುದು ಸೇರಿದಂತೆ ದೇಶಾದ್ಯಂತ ಈ ಸೋಂಕಿಗೆ ಸುಮಾರು 4,48,549 ಮಂದಿ ಬಲಿಯಾಗಿದ್ದಾರೆ.ನವದೆಹಲಿ, ಮಹಾರಾಷ್ಟ್ರ, ಕೇರಳ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಖಂಡ, ಮಣಿಪುರ ಸೇರಿದಂತೆ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು,…
ತುಮಕೂರು: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಶನಿವಾರ ರೋಟರಿ ಬಿಲ್ವಪ್ರಿಯ ಬೆಳ್ಳಾವಿ ವತಿಯಿಂದ ಕ್ಯಾತ್ಸಂದ್ರದ 33ನೇ ವಾರ್ಡಿನ ಎಲ್ಲ ಪೌರಕಾರ್ಮಿಕರಿಗೆ, ಹೂ ಮಾರುವ ಮಹಿಳೆಯರಿಗೆ ಹಾಗೂ ಮನೆಕೆಲಸ ಮಾಡುವ ಹೆಂಗಸರಿಗೆ ಬ್ಲಾಂಕೆಟ್ ಗಳನ್ನು ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ರವಿ ಜಿ.ಆರ್. ಕ್ಯಾತ್ಸಂದ್ರದ ಮುಖಂಡರು ರೋಟರಿಯ ಬಗ್ಗೆ ಮಾತನಾಡಿ, ರೋಟರಿಯ ಸೇವೆ ಶ್ಲಾಘನೀಯ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ರೋಟರಿ ಬಿಲ್ವಪ್ರಿಯ ಬೆಳ್ಳಾವಿ ಅಧ್ಯಕ್ಷ ಪ್ರಸಾದ್ ಕೆ.ಜೆ. ಸಹಿತ ರೋಟರಿ ಸದಸ್ಯರು ಭಾಗಿಯಾಗಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತುಮಕೂರು: ಸುಗ್ಗಿ ಹಬ್ಬ ಸಂಕ್ರಾಂತಿ ಎಂದರೆ, ಎಲ್ಲಡೆ ಸಡಗರ ಸಂಭ್ರಮ. ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷವಾಗಿ ಆಚರಿಸಲಾಗುವ ಹಬ್ಬ ಉತ್ತರಾಯಣ ಪುಣ್ಯಕಾಲ ಎಂದು ಕರೆಯುತ್ತಾರೆ. ಈ ಹಬ್ಬದ ದಿನ ವಿವಿಧ ಭಕ್ಷ್ಯಗಳಾದ ವಿಶೇಷ ಕಡಲೆ, ಅವರೆ, ಕಬ್ಬು, ಗೆಣಸು, ಉಗ್ಗಿ, ಪೊಂಗಲ್ ಬಳಸಲಾಗುವುದು. ಅದರಲ್ಲಿ ಗೆಡ್ಡೆ ಗೆಣಸು, ಮರ ಗೆಣಸು ವಿಶೇಷವಾಗಿದೆ. ಅದೇ ರೀತಿ ಬಳ್ಳಿ ಗೆಣಸು ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ತಿಟ್ಟೆ ಗೆಣಸು ಎಂದು ಇದನ್ನು ಕರೆಯುತ್ತಾರೆ. ಈ ಗೆಣಸು ಸಂಕ್ರಾಂತಿ ವಿಶೇಷ ಸರಿ… ಅಲ್ಲದೇ ಈಗ ಕೋವಿಡ್ ನಂತಹ ಸಮಯದಲ್ಲಿ ಈ ಗೆಣಸು ಆರೋಗ್ಯಕ್ಕೆ ಲಾಭದಾಯಕವಾಗಿದೆ. ನಗರದ ಹನುಮಂತಪುರದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಮಾರುಕಟ್ಟೆಯಲ್ಲಿ ಇದು ಲಭ್ಯವಿದೆ. ಸ್ಥಳೀಯ ರೈತರು ವಿಶೇಷವಾಗಿ ಈ ಬಳ್ಳಿ ಗೆಣಸನ್ನು ಬೆಳೆಯುತ್ತಿದ್ದು, ಇದನ್ನು ಸುಗ್ಗಿ ಕಾಲಕ್ಕೆ ಮಾರಾಟ ಮಾಡುತ್ತಾರೆ. ಈ ಗೆಣಸಿನಿಂದಾಗುವ ಆರೋಗ್ಯದ ಲಾಭಗಳನ್ನು ವಿವರಿಸಿ ಮಾತನಾಡಿದ ರೈತ ಕೃಷ್ಣಪ್ಪ, ನಾವು ನಮ್ಮ ತಾತನ ಕಾಲದಿಂದಲೂ ಬಳ್ಳಿ ಗೆಣಸು ಬೆಳೆದು…
ತುಮಕೂರು: ತುಮಕೂರು ಜಿಲ್ಲೆಯ ತಿಪಟೂರಿನ ಸುಪ್ರಸಿದ್ಧ ಹತ್ಯಾಳ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ವ್ಯಕ್ತಿಯೊರ್ವ ಹುಚ್ಚಾಟ ನಡೆಸಿರುವ ಘಟನೆ ನಡೆದಿದೆ. ರಾತ್ರಿ ಹತ್ಯಾಳ ಸ್ವಾಮಿ ದೇವಸ್ಥಾನದ ಮುಂದೆ ಬೈಕ್ ಗಳಿಗೆ ಬೆಂಕಿ ಹಚ್ಚಿ, ಬಾಟಲ್ ಗಳನ್ನ ಹೊಡೆದು ಹಾರಾಟ-ಚೀರಾಟ ನಡೆಸಿದ್ದಾನೆ. ಮಾನಸಿಕ ಅಸ್ವಸ್ಥನ ರೀತಿ ಬೆತ್ತಲೆಯಾಗಿ ಆತಂಕ ಸೃಷ್ಟಿಸಿದ್ದಾನೆ ಎನ್ನಲಾಗಿದೆ. ಹತ್ಯಾಳು ದೇವೇಗೌಡ ಎಂಬ ವ್ಯಕ್ತಿಯಿಂದ ಈ ಕೃತ್ಯ ನಡೆದಿದ್ದು, ದೇವಸ್ಥಾನದ ಆವರಣದಲ್ಲಿ ಇಟ್ಟಿದ್ದ ಅಂಗಡಿಗಳಲ್ಲಿನ ಪೆಪ್ಸಿ ಬಾಟೆಲ್ ಹೊಡೆದು ಹುಚ್ಚಾಟ ಮೆರೆದಿದ್ದಾನೆ. ಅಲ್ಲದೆ, ಅಂಗಡಿಯಲ್ಲಿನ ಹೂವಿನ ಹಾರಗಳನ್ನ ಕೊರಳಿಗೆ ಹಾಕಿಕೊಂಡು ಪುಂಡಾಟ ನಡೆಸಿದ್ದಾನೆ. ಪುಂಡಾಟ ನಡೆಸುತ್ತಿದ್ದ ವ್ಯಕ್ತಿ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಲಾಗಿ, ಮಾಹಿತಿ ತಿಳಿದ ಕೆ.ಬಿ. ಕ್ರಾಸ್ ಪೊಲೀಸರು ಪುಂಡನನ್ನ ವಶಕ್ಕೆ ಪಡೆದಿದ್ದಾರೆ. ಇನ್ನು ದೇವಸ್ಥಾನದ ಸಿಬ್ಬಂದಿಗಳು ಮೆಟ್ಟಿಲುಗಳನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಮೆಟ್ಟಿಲ ಮೇಲಿದ್ದ ಗಾಜುಗಳನ್ನು ತೆಗೆದು ನೀರಿನ ಮೂಲಕ ಸ್ವಚ್ಚಗೊಳಿಸಿದ್ದಾರೆ. ಸ್ಥಳಕ್ಕೆ ತಿಪಟೂರು ಎಸಿ, ದಿಗ್ವಿಜಯ ಬೋಡಕೆ, ತಹಶೀಲ್ದಾರ್ ಚಂದ್ರಶೇಖರ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ…
ಚಿತ್ರದುರ್ಗ: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಇದ್ದರೂ, ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಜನರು ವೀಕೆಂಡ್ ಕರ್ಫ್ಯೂಗೆ ಕ್ಯಾರೇ ಅನ್ನದೇ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಸರ್ಕಾರವು ಶುಕ್ರವಾರ ರಾತ್ರಿ 8ರಿಂದ ಸೋಮವಾರ ಬೆಳಿಗ್ಗೆ 5 ಘಂಟೆಯವರೆಗೂ ವೀಕೆಂಡ್ ಕರ್ಫೂ ಜಾರಿಗೊಳಿಸಿದೆ. ಆದರೆ ಹೆಸರಿಗೆ ಮಾತ್ರವೇ ಕರ್ಫ್ಯೂ ಇದ್ದು, ಸಾರ್ವಜನಿಕರು ಪೂಜೆಗಳಿಗೆ ಬೇಕಾಗುವ ಕಬ್ಬು , ಹೂ, ತರಕಾರಿ ಕೊಂಡುಕೊಳ್ಳುವಲ್ಲಿ ನಿರತರಾದರು. ನಗರದಲ್ಲಿ ಕೊವಿಡ್ ನಿಯಮಗಳನ್ನು ಪಾಲಿಸದೇ ಜನ ಎಂದಿನಂತೆಯೇ ವ್ಯವಹರಿಸುತ್ತಿರುವುದು ಕಂಡು ಬಂತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತುಮಕೂರು: ಸುಗ್ಗಿ ಹಬ್ಬ ಮಕರ ಸಂಕ್ರಾಂತಿ ಎಂದರೆ ಎಲ್ಲೆಡೆಯೂ ಸಡಗರ ಸಂಭ್ರಮ ಅದರಲ್ಲೂ ಗ್ರಾಮೀಣ ಪ್ರದೇಶಗಳ ಸಂಕ್ರಾಂತಿ ಸೊಗಡು ಜಾತ್ರೆಯಂತೆ ಇರುತ್ತದೆ ಆದರೆ ಮಹಾಮಾರಿ ಸೋಂಕು ಕೋವಿಡ್ ಹೆಚ್ಚಳದಿಂದಾಗಿ ಇಂದಿನ ವರ್ಷದ ಸುಗ್ಗಿ ಸಂಕ್ರಾಂತಿ ಕಮರಿಹೊಗಿದೆ. ಸರ್ಕಾರದ ವಾರಾಂತ್ಯದ ಕರ್ಫ್ಯೂ ಹಿನ್ನೆಲೆ ಜನರ ಸಂಕ್ರಾಂತಿ ಸಡಗರ ಸಂಭ್ರಮಕ್ಕೆ ತಣ್ಣಿರು ಎರಚಿದಂತಾಗಿದೆ. ಸಂಕ್ರಾಂತಿ ವಿಶೇಷ ಗೋವು ಹೌದು. ಸುಗ್ಗಿ ಹಬ್ಬಕ್ಕೆ ಗೋವುಗಳನ್ನ ಸಿಂಗಾರ ಮಾಡಿ ಗೊದೋಳಿ ಸಮಯದಲ್ಲಿ ಕಿಚ್ಚು ಹಾಯಿಸುವುದು ಗ್ರಾಮೀಣ ಪ್ರದೇಶದ ಸಂಪ್ರದಾಯ ಪದ್ದತಿ. ಈ ನಡುವೆಯೂ ನಗರದ ಬೆಳಗುಂಬದಲಿ ಮೀನಾಕ್ಷಿ ಧನ ಲಕ್ಷ್ಮಿ ಎಂಬುವವರ ಮನೆಯಲ್ಲಿ ಸಡಗರ ಸಂಭ್ರಮದ ಸಂಕ್ರಾಂತಿ ಹಬ್ಬ ಆಚರಿಸಲಾಯಿತು. ಮನೆಯ ಮಂದಿಯಲ್ಲಾ ಹೊಸ ಬಟ್ಟೆ ಧರಿಸಿ ದೇವರ ಜೊತೆಗೆ ಅಕಳನ್ನು ಪೂಜೆಸಲಾಯಿತು ಮನೆಯ ಮಕ್ಕಳು ಪ್ರೀತಿಯಿಂದ ಅಕಳಿಗೆ ಕಡಲೆ, ಅವರೆ, ಕಬ್ಬು ತಿನ್ನಿಸುವುದರ ಜೊತೆಗೆ ಸಂಭ್ರಮ ಪಟ್ಟರು. ಗೋವುನ್ನು ಪೂಜೆಸಿ ನಮಸ್ಕರಿಸಿ ಮನೆ ಮಂದಿಯಲ್ಲಾ ಸಂಭ್ರಮದ ಸಂಕ್ರಾಂತಿಯ ದಿನವನ್ನು ಆನಂದಿಸಿದರು. ಈ ನಡುವೆ ಮನೆಯ ಸದಸ್ಯ…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾರ್ಡ್ ನಂ 16ರಲ್ಲಿನ ಹೆಸರುವಾಸಿಯಾಗಿರುವ ಊರ ಆಂಜನೇಯ ಸ್ವಾಮಿಗೆ ಇಂದು ಮಕರ ಸಂಕ್ರಾಂತಿ ಹಬ್ಬ ಹಾಗೂ ಶ್ರೀ ಆಂಜನೇಯ ಸ್ವಾಮಿಗೆ ವಾರದ ಪೂಜೆಯ ಪ್ರಯುಕ್ತ ಹೂವಿನ ಅಲಂಕಾರ , ಮಹಾಮಂಗಳಾರತಿ ಹಾಗೂ ಭಕ್ತಾಧಿಗಳಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ನೆರವೇರಿಸಲ್ಪಟ್ಟಿತ್ತು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು, ಅರ್ಚಕರ ಕುಟುಂಬಸ್ಥರು ಹಾಗೂ ಶ್ರೀ ಆಂಜನೇಯ ಸ್ವಾಮಿಯ ಭಕ್ತಾದಿಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು . ವರದಿ: ಮುರುಳಿಧರನ್ ಆರ್. ಹಿರಿಯೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy