Author: admin

ತುಮಕೂರು: 15 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ ಅಪರಾಧಿಗೆ ತುಮಕೂರಿನ ಪೋಕ್ಸೋ ನ್ಯಾಯಾಲಯವು 10 ವರ್ಷ ಜೈಲು ಹಾಗೂ 40 ಸಾವಿರ ದಂಡ ಹಾಕಿದ್ದು,  ಅತ್ಯಾಚಾರ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿದೆ. 2019ರಲ್ಲಿ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. 28 ವರ್ಷದ ಮಂಜುನಾಥ್ ಎಂಬುವವನು 15 ವರ್ಷದ ಬಾಲಕಿಯನ್ನ ಅಪಹರಿಸಿ ಅತ್ಯಾಚಾರ ಮಾಡಿದ್ದ. ಈ ಬಗ್ಗೆ ಪೋಕ್ಸೋ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ತುಮಕೂರು ಪೋಕ್ಸೋ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದೆ. ನ್ಯಾಯಾಧೀಶ ಕೃಷ್ಣಯ್ಯ ಅವರು ಆದೇಶ ನೀಡಿದ್ದು, ಸರ್ಕಾರಿ ವಕೀಲೆ ಬಿ.ವಿ. ಗಾಯತ್ರಿ ರಾಜು ವಾದ ಮಂಡಿಸಿದ್ದರು. ಸದ್ಯ ಅತ್ಯಾಚಾರ ಆರೋಪಿಗೆ ಹತ್ತು ವರ್ಷ ಜೈಲು ಹಾಗೂ 40 ಸಾವಿರ ರೂ. ದಂಡ ವಿಧಿಸಿದೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಸರಗೂರು: ತಾಲ್ಲೂಕಿನ ಗಡಿಭಾಗದ ಸರಗೂರಿನಲ್ಲಿ ಒಂದು ವಾರದಿಂದ ಮಳೆ ಸುರಿಯುತ್ತಿರುವುದರಿಂದಾಗಿ ಕಬಿನಿ ಹಿನ್ನೀರು ಪಕ್ಕದಲ್ಲಿ ಗ್ರಾಮದ ಬಸಾಪುರ ಗ್ರಾಮದಲ್ಲಿ ಮನೆಗಳು ನೆಲಸಮವಾಗಿದೆ. ಬಿದರಹಳ್ಳಿ ಗ್ರಾ.ಪಂ. ಬಸಾಪುರ ಗ್ರಾಮದ ನಿವಾಸಿಯಾದ ಮಹದೇವಮ್ಮ, ಮಹದೇವನಾಯಕ ಎಂಬುವರ ಮನೆ ರಾತ್ರಿ 8 ಗಂಟೆಯ ಸಮಯದಲ್ಲಿ ಮಳೆಯಿಂದಾಗಿ ಗೋಡೆಗಳು ಕುಸಿದು ಬಿದ್ದಿವೆ. ಆದರೆ ಅದೃಷ್ಟವಶಾತ್ ಯಾರಿಗೂ ಪ್ರಾಣಪಾಯವಾಗಿಲ್ಲ ಎಂದು ತಿಳಿದು ಬಂದಿದೆ. ವಿಡಿಯೋ ನೋಡಿ..  ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಸರಗೂರು: ತಾಲ್ಲೂಕಿನ ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವ ಸಂಜೆ ವೇಳೆ. ಶ್ರೀ ಮಹದೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಹೆಚ್ಚುವರಿ ಪೊಲೀಸ್ ಅಧಿಕಾರಿ ಶಿವಕುಮಾರ್ ಸಮಿತಿಯ ಅಧ್ಯಕ್ಷ ನಿಂಗರಾಜು ಸದಸ್ಯರು ನಡುವೆ ಮಾತುಕತೆ ನಡೆಸಿದರು. ತಾಲ್ಲೂಕಿಕ್ಕೆ ಪ್ರಥಮವಾಗಿ ನಡೆಯುವ ಜಾತ್ರೆಯಾಗಿದೆ. ಇದೆ ತಿಂಗಳು ನಡೆಯುವ ಕೊನೆಯ ಕಾರ್ತಿಕ ಮಾಸದಲ್ಲಿ ಜಾತ್ರೆಗೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ರವರ ಆದೇಶ ಮೇರೆಗೆ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿನ ಹಾಗೂ ಹೋಗುಗಳ ಬಗ್ಗೆ ತಿಳಿದು ಕೊಂಡು ಪರಿಶೀಲನೆ ಮಾಡಿದರು. ನಂತರ ಸಮಿತಿಯ ಅಧ್ಯಕ್ಷ ನಿಂಗರಾಜು ಮತ್ತು ಸದಸ್ಯರು ಅಧಿಕಾರಿವರಿಗೆ ನಮ್ಮ ಪ್ರತಿ ವರ್ಷ ಕಡೆ ಕಾರ್ತಿಕ ಮಾಸದಲ್ಲಿ ದಿನಾಂಕ .28/11/21 ರಿಂದ 1/12/21 ರವರಗೆ ಜಾತ್ರ ಮಹೊತ್ಸವ ನಡೆಯುತ್ತದೆ. ಜಾತ್ರೆಗೆ ಭಕ್ತರು ಮೈಸೂರು, ಚಾಮರಾಜನಗರ ವಿವಿಧ ಜಿಲ್ಲೆ ಗಳಿಂದ ತಾಲ್ಲೂಕು ಭಾಗಗಳಿಂದ ಭಕ್ತರು ಬರುತ್ತಾರೆ  ಎಂದರು . ನಂತರ ಪೊಲೀಸ್ ಹೆಚ್ಚುವರಿ ಅಧಿಕಾರಿ ಶಿವಕುಮಾರ್ ಮಾತನಾಡಿ, ನಮ್ಮ ರಾಜ್ಯಾದ್ಯಂತ ಕೊವಿಡ್ ಇರುವದರಿಂದ ಸರ್ಕಾರದ ನಿಯಮದ ಪ್ರಕಾರ…

Read More

ಸರಗೂರು: ತಾಲ್ಲೂಕಿನ  ಕುರ್ಣೇಗಾಲ ಗ್ರಾಮದ ಯುವ ಸಮೂಹದವರು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ.ಪುಣ್ಯ ಸ್ಮರಣೆ ಕಾರ್ಯಕ್ರಮವ ಆಯೋಜನೆ ಮಾಡಿದ್ದು, ಗ್ರಾಮ ಪಂಚಾಯಿತಿಯ ಸ್ಥಾಯಿ ಸಮಿತಿ ಅಧ್ಯಕ್ಷ ಬೆಟ್ಟಸ್ವಾಮಿ ಭಾಗವಹಿಸಿದ್ದರು. ತಾಲ್ಲೂಕಿನ ಬಿ.ಮಟಕೇರಿ ಗ್ರಾಪಂನ  ಕುರ್ಣೇಗಾಲ ಗ್ರಾಮದಲ್ಲಿ ಪ್ರಮುಖ ಬೀದಿಗಳಲ್ಲಿ ಮೂಂಬತ್ತಿ ಹಿಡಿದುಕೊಂಡು ಯುವ ಸಮೂಹ ಯುವಕರು  ಮೆರವಣಿಗೆ ಮೂಲಕ ಮಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ, ಮೌನಾಚರಣೆ ಮಾಡುವ ಮೂಲಕ ಗ್ರಾಮಸ್ಥರು ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.  ನಮ್ಮ ಊರಿನ ಕುಟುಂಬದ ಒಬ್ಬ ಸದಸ್ಯರನ್ನು ಕಳೆದುಕೊಂಡಂತೆ ಬಹಳ ನೋವಾಗುತ್ತಿದೆ. ಮುಂದಿನ ದಿನಗಳಲ್ಲಿ ಪುನೀತ್ ರಾಜ್‍ಕುಮಾರ್ ಅವರ, ಪುಣ್ಯ ಸ್ಮರಣಾರ್ಥವಾಗಿ ತಾಲೂಕಿನಲ್ಲಿ ಕುರ್ಣೇಗಾಲ ಗ್ರಾಮದಲ್ಲಿ  ಅರ್ಥಪೂರ್ಣವಾಗಿ ಪುನೀತ್ ಅವರು ಮಾಡುತ್ತಿದ್ದ ಸೇವೆಯಂತೆ ನೊಂದ ಬಡಜನರಿಗೆ ನೆರವಾಗುವ ನಿರ್ಧಾರವನ್ನು ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಕೈಗೊಂಡರು. ಬೆಟ್ಟಸ್ವಾಮಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾಯಿ ಸಮಿತಿ ಅಧ್ಯಕ್ಷ , ಹಾದನೂರು ಗ್ರಾಮ ಪಂಚಾಯಿತಿ…

Read More

ಸರಗೂರು: ದೇವಾಲಯಗಳಲ್ಲಿ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸರಗೂರು ಪಟ್ಟದ  ಪೊಲೀಸ್ ಯಶಸ್ವಿಯಾಗಿದ್ದಾರೆ. ಕೃಷ್ಣ(40)  ಕುಮಾರ ಅಲಿಯಾಸ್ ಸೀನ(28) ಕುಮಾರ (35) ಬಂಧಿತ ಆರೋಪಿಗಗಳಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪಟ್ಟಣದ ಗ್ರಾಮೀಣ ಭಾಗದಲ್ಲಿ ಕೂದಲು ವ್ಯಾಪಾರ ಹಾಗೂ ಚಿನ್ನ ಬೆಳ್ಳಿ ಅಭರಣಗಳಿಗೆ ಪಾಲಿಶ್ ಮಾಡುವ ಕೆಲಸ ಮಾಡುತ್ತಿದ್ದ ಇವರು, ವ್ಯಾಪಾರದ ವೇಳೆ ಮನೆ ಹಾಗೂ ದೇವಾಲಯಗಳನ್ನು ಸೂಕ್ಷ್ಮವಾಗಿ ಗಮನಸಿಕೊಂಡು ಬಳಿಕ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ. ಹಲವಾರು ದಿನಗಳಿಂದ ಒಂದಾದ ಮೇಲೆ ಒಂದರಂತೆ ದೇವಾಲಯಗಳಲ್ಲಿ ಕಳ್ಳತನವಾಗುತ್ತಿದ್ದ ಪ್ರಕರಣವನ್ನು ಬೆನ್ನತ್ತಿದ  ಸರಗೂರು  ಪೊಲೀಸರು,  ಸರ್ಕಲ್ ಇನ್ಸ್ ಪೆಕ್ಟರ್ ಆನಂದ  ನೇತೃತ್ವದಲ್ಲಿ ಪಿಎಸ್ ಐ ಶ್ರಾವಣ ದಾಸ ರೆಡ್ಡಿ ಮಾರ್ಗದರ್ಶನದಲ್ಲಿ ತಂಡವನ್ನು ರಚನೆ ಮಾಡಿ, ಕಾರ್ಯಚರಣೆ ನಡೆಸಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ತಾಲ್ಲೂಕಿನ ಕೊತ್ತೇಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇರುವ ರಂಗಮಂದಿರದಲ್ಲಿ ರಾತ್ರಿ ವೇಳೆ ತಂಗುತ್ತಿದ್ದರು. ಖಚಿತ ಮಾಹಿತಿ ಪಡೆದು ಕಳ್ಳರನ್ನು ಬಂಧಿಸಿ…

Read More

ಕೊರಟಗೆರೆ: ಜಿ.ಕೆ.ವಿ.ಕೆ. ಕೃಷಿ ಮೇಳದಲ್ಲಿ ತಾಲೂಕಿನ ‘ಉತ್ತಮ ಯುವ ಪ್ರಗತಿ ಪರ ಕೃಷಿಕ’ ಪ್ರಶಸ್ತಿಯನ್ನು ಯುವ ಕೃಷಿಕ ದಾಸಾಲಕುಂಟೆಯ ಅಭಿಷೇಕ್ ಅವರಿಗೆ ನೀಡಿ ಗೌರವಿಸಲಾಗಿದೆ. ಅಭಿಷೇಕ್  ಅವರು ಬಿಸಿಎ ವಿದ್ಯಾಭ್ಯಾಸ ಮುಗಿಸಿದ್ದಾರೆ. ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ  ಕೃಷಿ ಬೆಳೆಗಳಾದ ತೊಗರಿ, ಅಗಸೆ, ಮೆಕ್ಕೆ ಜೋಳ ಹಾಗೂ ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ, ಬಾಳೆ, ತರಕಾರಿ ಸೊಪ್ಪುಗಳನ್ನು ಬೆಳೆದು ಅಧಿಕ ಆದಾಯ ಪಡೆಯುತ್ತಿದ್ದಾರೆ. ಕೃಷಿ ಚಟುವಟಿಕೆಗೆ ಪೂರಕವಾಗಿ ಹೈನುಗಾರಿಕೆಯಲ್ಲಿ ತೊಡಗಿ, ಹಸು ಹಾಗೂ ನಾಟಿ ಕೋಳಿ ಸಾಕಣಿಕೆ ಮಾಡಿ ಹೆಚ್ಚಿನ ಆದಾಯವನ್ನು ಪಡೆಯುತ್ತಿದ್ದಾರೆ. ಜೊತೆಗೆ ವಿವಿಧ ರೀತಿಯ ಅರಣ್ಯ ಕೃಷಿಯನ್ನು ಕೂಡ ಬೆಳೆದಿರುತ್ತಾರೆ. ಅಭಿಷೇಕ್ ರವರನ್ನು ಗುರುತಿಸಿದ ತಾಲ್ಲೂಕು ಕೃಷಿ ಇಲಾಖೆ, ಕೃಷಿ ವಿಜ್ಙಾನ ಕೇಂದ್ರವು ಇಂದು ನಡೆದ ಜಿ.ಕೆ.ವಿ.ಕೆ.ಕೃಷಿ ಮೇಳದಲ್ಲಿ “ಉತ್ತಮ ಯುವ ಪ್ರಗತಿ ಪರ ಕೃಷಿಕ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ಯವರು ಸೀಬಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಶಾಸಕರಾದ ಡಾ.ಸಿ.ಎಂ.ರಾಜೇಶ್ ಗೌಡರವರು ನಾರು ನಿಗಮ ಮಂಡಳಿ ಅಧ್ಯಕ್ಷರು ಬಿ.ಕೆ.ಮಂಜಣ್ಣ, ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷರು ಎಸ್.ಆರ್.ಗೌಡ, ಬಿಜೆಪಿ ಗ್ರಾಮಾಂತರ ಅಧ್ಯಕ್ಷರು ರಂಗಸ್ವಾಮಿ, ನಗರ ಅಧ್ಯಕ್ಷರು ವಿಜಯರಾಜ್, ರಘು, ಯುವ ಗ್ರಾಮಾಂತರ ಮೋರ್ಚಾ ಅಧ್ಯಕ್ಷರು ಮದು ಯಾದವ್, ಮುದಿಮಡು ಮಂಜಣ್ಣ, ಯಲಿಯೂರು ಮಂಜಣ್ಣ ರವರು, ನಟರಾಜ್, ಸತ್ಯನಾರಾಯಣ, ನರೇಂದ್ರ, ಸಂತೋಷ್, ಮೂಗನಹಳ್ಳಿ ರಾಮು, ಕರಿಯಣ್ಣ, ಸೋರೆಕುಂಟೆ ರಘು, ಕಿಟ್ಟಪ್ಪ, ಮಂಜುನಾಥ್, ಲಿಂಗರಾಜು ಮುಂತಾದ ಬಿಜೆಪಿ ಮುಖಂಡರು ಕಾರ್ಯಕರ್ತರು ಹಾಜರಿದ್ದರು ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ವರದಿ: ಚಂದ್ರಹಾದನೂರು ಸರಗೂರು: ತಾಲ್ಲೂಕಿನ ಸಮೀಪದ  ನಂಜನಗೂಡು ತಾಲ್ಲೂಕಿನ ಹೆಡಿಯಾಲ ಗ್ರಾ.ಪಂ.ಯಲ್ಲಿ ಕಸದರಾಶಿ ಬಿದ್ದಿದ್ದು, ದುರ್ವಾಸನೆಯಿಂದ ಮೂಗು ಮುಚ್ಚಿಕೊಳ್ಳುವಂತಾಗಿದೆ. ಸರಗೂರು, ಗುಂಡ್ಲುಪೇಟೆ ಮುಖ್ಯ ರಸ್ತೆಯ ಹೆಡಿಯಾಲ ಮಾರ್ಗವಾಗಿ ಹೋಗುವ ರಸ್ತೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಸರಾಶಿ, ಸತ್ತ ನಾಯಿ,  ಕೋಳಿ ತ್ಯಾಜ್ಯಗಳನ್ನು ಅಲ್ಲೆ ಎಸೆಯಲಾಗಿದ್ದು, ಕಸ ವಿಲೇವಾರಿಯಾಗದೆ ಸಾಂಕ್ರಾಮಿಕ ರೋಗದ ಭೀತಿ ಉಂಟಾಗಿದೆ. ಸಾಂಕ್ರಾಮಿಕ ರೋಗ ಕೊವಿಡ್ 19  ಎರಡನೇ ಅಲೆಯ ಸಂದರ್ಭದಲ್ಲಿಯೂ ಎಚ್ಚೆತ್ತು ಕೊಳ್ಳದ ಹೆಡಿಯಾಲ ಗ್ರಾಪಂಹಾಗೂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹೆಡಿಯಾಲ ಆಸ್ಪತ್ರೆಯ ಅಧಿಕಾರಿಗಳು ಜನರ ಆರೋಗ್ಯ ದ ಗಮನ ಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಪಂಚಾಯಿತಿ ಅಧಿಕಾರಿಗಳು ಹಾಗೂ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದರೂ, ಕಂಡೂ  ಕಾಣದಂತಿದ್ದಾರೆ. ಪಂಚಾಯಿತಿ ವತಿಯಿಂದ ಕಸದರಾಶಿಯನ್ನು ತೆರುವುಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇಲ್ಲಿನ ಭಾರತ್ ಗ್ಯಾಸ್  ಏಜೆನ್ಸಿ ಎದುರುಗಡೆ ಇರುವ ರಸ್ತೆಯ ಬದಿಯಲ್ಲಿ ಕಸದ ರಾಶಿ ಬಿದ್ದಿದೆ. ಇದರಿಂದಾಗಿ ಹೆಡಿಯಾಲ ಗ್ರಾಮಸ್ಥರು ಇಲ್ಲಿ ತಿರುಗಾಡಲು ಕೂಡ ಕಷ್ಟಕರವಾಗಿದೆ ಎಂದು…

Read More

ಬೆಂಗಳೂರು : ಕರೋನಾ ಸಾಂಕ್ರಾಮಿಕ ಹಾಗೂ ಲಾಕ್‌ ಡೌನ್‌ ನಿಂದಾಗಿ ಕರಕುಶಲ ಕರ್ಮಿಗಳು ಸರಿಯಾದ ಮಾರುಕಟ್ಟೆ ಇಲ್ಲದೆ ತೊಂದರೆಗೀಡಾಗಿದ್ದಾರೆ. ಕರಕುಶಲ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ದೊರಕದೇ ತೊಂದರೆಗೆ ಸಿಲುಕಿರುವ ಕರಕುಶಲ ಕರ್ಮಿಗಳ ಸಹಾಯಕ್ಕೆ ಇಂತಹ ಮೇಳಗಳ ಬಹಳ ಸಹಕಾರಿ ಎಂದು ಖ್ಯಾತ ನಟಿ ಸಿಂಧು ಲೋಕನಾಥ್‌ ಅಭಿಪ್ರಾಯಪಟ್ಟರು. ಇಂದು ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಇಂದಿನಿಂದ 10 ದಿನಗಳ ಆಯೋಜಿಸಿರುವ ಹಿಂದುಸ್ತಾನ್‌ ಆರ್ಟ್‌ ಮತ್ತು ಕ್ರಾಫ್ಟ್‌ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರೋನಾ ಲಾಕ್‌ಡೌನ್‌ ನಿಂದಾಗಿ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕದೇ ಕರಕುಶಲಕರ್ಮಿಗಳು ತೊಂದರೆಗೀಡಾಗಿದ್ದರು. ಅವರಿಗೆ ಸರಿಯಾದ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ 10 ದಿನಗಳ ಕಾಲ ಕಾಲಾವಕಾಶವನ್ನು ಒದಗಿಸಲಾಗಿದೆ. ಸಾರ್ವಜನಿಕರು ಈ ಮೇಳಕ್ಕೆ ಭೇಟಿ ನೀಡಿ ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಕರಕುಶಲ ಕರ್ಮಿಗಳ ಉತ್ಪನ್ನಗಳನ್ನು ಕೊಂಡು ಅವರಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಹೇಳಿದರು. ಈ ಮೇಳದಲ್ಲಿ ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ…

Read More

ಕೊರಟಗೆರೆ:  ಮಾಜಿ ಉಪ ಮುಖ್ಯಮಂತ್ರಿ, ಶಾಸಕ, ಹಿರಿಯ ಕಾಂಗ್ರೆಸ್ ನಾಯಕರಾದ  ಡಾ.ಜಿ.ಪರಮೇಶ್ವರ್ ಅವರು ಸ್ಥಳೀಯ ರೈತರು ಹಾಗೂ ಜನಪ್ರತಿನಿಧಿಗಳ ಜೊತೆಗೂಡಿ ಇಂದು ಗಂಗಾ ಮಾತೆಗೆ ಬಾಗಿನ ಅರ್ಪಿಸಿದರು. ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬೆಳಧರ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊಲ್ಲಹಳ್ಳಿ ಕೆರೆಯ ಗಂಗಾಮಾತೆಗೆ ಬಾಗಿನ ಅರ್ಪಿಸಿದ ಜಿ.ಪರಮೇಶ್ವರ್, ಇದೇ ವೇಳೆ ಗಂಗಾ ಮಾತೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಾಗಿನ ಅರ್ಪಿಸಲು ಆಗಮಿಸಿದ್ದ ಸಂದರ್ಭದಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿದ್ದರೂ, ಜಿ.ಪರಮೇಶ್ವರ್ ಅವರು ಮಳೆಯ ನಡುವೆಯೂ ಸ್ಥಳೀಯ ರೈತರು ಹಾಗೂ ಜನಪ್ರತಿನಿಧಿಗಳ ಜೊತೆಗೂಡಿ ಬಾಗಿನ ಅರ್ಪಿಸಿದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More