Subscribe to Updates
Get the latest creative news from FooBar about art, design and business.
- ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿಗೆ ತೀರ್ಮಾನ: ಸಿಎಂ ಸಿದ್ದರಾಮಯ್ಯ
- ಅಪ್ರಾಪ್ತೆ ಜೊತೆ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಬಿಜೆಪಿ ಮುಖಂಡನ ಪುತ್ರನ ಬಂಧನ
- ಬೈಕ್ ಟಾಕ್ಸಿ ಚಾಲಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ
- ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕ ನಿರ್ಮಾಣ: ಡಾ.ಜಿ.ಪರಮೇಶ್ವರ್
- ಚಿಕ್ಕನಾಯಕನಹಳ್ಳಿ: ತುಳುನಾಡಿನ ಪಂಜುರ್ಲಿ ದೈವಕ್ಕೆ ಭಕ್ತಿ ಸಮರ್ಪಣೆ
- ಮಧುಗಿರಿ | ಜೀತ ವಿಮುಕ್ತರಿಗೆ ಪುನರ್ ವಸತಿ ಕಲ್ಪಿಸಲು ಒತ್ತಾಯಿಸಿ ಪ್ರತಿಭಟನೆ!
- ಕೊರಟಗೆರೆ ಪಟ್ಟಣ ಪಂಚಾಯಿತಿ ‘ಪುರಸಭೆ’ಯಾಗಿ ಮೇಲ್ದರ್ಜೆಗೆ!
- ಪವಿತ್ರಾ ಗೌಡ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್!
Author: admin
ದೇಶದಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದೆ ಆದರೂ ದಿನದ ಪಾಸಿಟಿವಿಟಿ ಪ್ರಮಾಣ ಶೇಕಡ ೬ರ ಗಡಿದಾಟಿದೆ. ದೇಶದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಹೊಸದಾಗಿ ೧೬,೧೬೭ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದೇ ಅವಧಿಯಲ್ಲಿ ಚೇತರಿಸಿಕೊಂಡು ಬಿಡುಗಡೆಯಾದವರ ಸಂಖ್ಯೆ ೧೫,೫೪೯ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲಿ ಸೋಂಕು ಸಂಖ್ಯೆಯ ಏರಿಳಿತದ ನಡುವೆಯೂ ಸೋಂಕಿನ ದಿನದ ಪಾಸಿಟಿವಿಟಿ ಪ್ರಮಾಣ ಶೇ. ೬,೧೪ ರಷ್ಟು ಇದೆ. ಜೊತೆಗೆ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ ೧,೩೫,೫೧೦ ಮಂದಿಯಲ್ಲಿ ಇದೆ ಎಂದು ಸಚಿವಾಲಯ ತಿಳಿಸಿದೆ. ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟು ಸೋಂಕಿನ ಸಂಖ್ಯೆ ೪.೪೦ ಕೋಟಿ ಸನಿಹದಲ್ಲಿದೆ. ಅಲ್ಲದೆ ಇಲ್ಲಿಯತನಕ ಚೇತರಿಸಿಕೊಂಡು ಬಿಡುಗಡೆಯಾದವರ ಒಟ್ಟು ಸಂಖ್ಯೆ ೪,೩೪,೯೯,೬೫೯ ಮಂದಿಗೆ ಏರಿಕೆಯಾಗಿದೆ.ಜೊತೆಗೆ ಸೋಂಕಿನಿಂದ ೫,೨೬,೭೩೦ ಮಂದಿ ಸಾವನ್ನಪ್ಪಿದ್ದಾರೆ. ಸೋಂಕು ಏರಿಳಿತ ಹಿನ್ನೆಲೆಯಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ ೧,೩೫,೫೧೦ ಮಂದಿಯಲ್ಲಿ ಇದೆ.ಜೊತೆಗೆ ಪಾಸಿಟಿವಿಟಿ…
ಸುಪ್ರೀಂ ಕೋರ್ಟ್ ಬಗ್ಗೆ ಯಾವುದೇ ಭರವಸೆ ಉಳಿದಿಲ್ಲ, ಸೂಕ್ಷ್ಮ ಪ್ರಕರಣಗಳನ್ನು ಕೆಲವು ನ್ಯಾಯಾಧೀಶರಿಗೆ ಮಾತ್ರ ನಿಯೋಜಿಸಲಾಗಿದೆ ಎಂದು ಹಿರಿಯ ನ್ಯಾಯವಾದಿ ಹಾಗು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ದೆಹಲಿಯಲ್ಲಿ ಆಯೋಜಿಸಿದ್ದ ಪೀಪಲ್ಸ್ ಟ್ರಿಬ್ಯೂನಲ್ನಲ್ಲಿ “ನ್ಯಾಯಾಂಗ ದ ರೋಲ್ ಕುರಿತು ಮಾತನಾಡಿದ ಅವರು ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ಕೆಲವು ತೀರ್ಪುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಸುಪ್ರೀಂ ಕೋರ್ಟ್ನಿಂದ ನಿಮಗೆ ಪರಿಹಾರ ಸಿಗುತ್ತದೆ ಎಂದು ನೀವು ಭಾವಿಸಿದರೆ, ನೀವು ತುಂಬಾ ತಪ್ಪಾಗಿ ಭಾವಿಸುತ್ತೀರಿ. ಮತ್ತು ಸುಪ್ರೀಂ ಕೋರ್ಟ್ನಲ್ಲಿ ೫೦ ವರ್ಷಗಳ ಅಭ್ಯಾಸ ಮಾಡಿದ ನಂತರ ಇದನ್ನು ಹೇಳುತ್ತಿದ್ದೇನೆ” ಎಂದು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ನಿಂದ ಮಹತ್ವದ ತೀರ್ಪು ಬಂದರೂ ಅದು ನೆಲದ ವಾಸ್ತವತೆ ಬದಲಾಯಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ನೀಡಿದ ಪ್ರಗತಿಪರ ತೀರ್ಪುಗಳ ಬಗ್ಗೆ ಮಾತನಾಡುತ್ತೀರಿ ಆದರೆ ವಾಸ್ತವಕ್ಕೆ ಭಾರಿ ವ್ಯತ್ಯಾಸವಿದೆ. . ಸುಪ್ರೀಂ ಕೋರ್ಟ್ ಗೌಪ್ಯತೆಯ ತೀರ್ಪು ನೀಡಿದರೆ ಇಡಿ ಅಧಿಕಾರಿಗಳು ನಿಮ್ಮ ಮನೆಗೆ…
ಸಾಗರ: ಹರ್ ಘರ್ ತಿರಂಗ ಅಭಿಯಾನಕ್ಕಾಗಿ ಸಾವಿರಕ್ಕೂ ಅಧಿಕ ರಾಷ್ಟ್ರ ಧ್ವಜ ಸಿದ್ಧವಾಗುತ್ತಿದೆ. ಇದೇ ಸಂದರ್ಭದಲ್ಲಿ ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯ್ತಿ ಕಚೇರಿಗೆ ರವಾನೆಯಾದ ಧ್ವಜವೊಂದರಲ್ಲಿನ ಅಶೋಕ ಚಕ್ರದ ಸಂಕೇತ ಧ್ವಜದ ಬದಿಗೆ ಸರಿದಿದ್ದು, ಅವಮಾನಕರವಾಗಿ ಕಂದು ಬಂದಿದೆ. ಮನೆ ಮನೆಗೆ ರಾಷ್ಟ್ರಧ್ವಜ ಹಂಚುವ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಚಾಲನೆ ನೀಡಿದ ಜನಪ್ರತಿನಿಧಿಗಳು ರಾಷ್ಟ್ರ ಧ್ವಜಗಳನ್ನು ಪ್ರದರ್ಶಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೇಳೆ ಈ ದೋಷವನ್ನು ಗುರುತಿಸಲಾಗಿದೆ. ಧ್ವಜದ ಬಿಳಿ ಬಣ್ಣದ ಸ್ಥಳದ ಮಧ್ಯದಲ್ಲಿರಬೇಕಾದ ಅಶೋಕ ಚಕ್ರ ಪಕ್ಕದಲ್ಲಿದೆ ಎಂಬ ಆಕ್ಷೇಪದ ಮಾತುಗಳು ಕೇಳಿಬಂದಿವೆ. ಈ ಬಗ್ಗೆ ಅರಳಗೋಡು ಗ್ರಾಪಂ ಅಧ್ಯಕ್ಷ ಮೇಘರಾಜ್ ಅರೋಡಿ ಮಾತನಾಡಿ, ಧ್ವಜ ಸಂಬಂಧ ನಿರ್ದಿಷ್ಟ ನಿಯಮಗಳಿರುವ ಹಿನ್ನೆಲೆಯಲ್ಲಿ ದೋಷಪೂರಿತ ಧ್ವಜಗಳ ಬಳಕೆಯಾಗದಂತೆ ಕಟ್ಟೆಚ್ಚರ ಅಗತ್ಯ. ದೋಷಗಳಿರುವ ರಾಷ್ಟ್ರಧ್ವಜ ಬಳಕೆಯಾಗದಂತೆ ನಿಗಾ ವಹಿಸಲಾಗಿದೆ. ಸಿದ್ಧಪಡಿಸಲಾದ ಬಾವುಟಗಳಲ್ಲಿ ದೋಷಗಳಿರದಂತೆ ಪರಿಶೀಲನೆ ನಡೆಸಲಾಗುತ್ತಿದೆ. ಸೋಮವಾರ ಸಹ ಗ್ರಾ.ಪಂ. ಕಚೇರಿಯಲ್ಲಿ ಧ್ವಜಗಳ ಪರಿಶೀಲನೆ ಮಾಡಲಾಗುತ್ತಿದೆ ಎಂದರು.…
ಸಾಮಾಜಿಕ ಜಾಲತಾಣಗಳಲ್ಲಿ ಸದಾ ಹತ್ತು ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಸದಾ ವಿವಾದಾತ್ಮಕ ವಿಡಿಯೋಗಳೇ ಸಾಮಾಜಿಕ ಜಾಲತಾಣಗಳಲ್ಲಿ ಜನರಿಂದ ವೀಕ್ಷಣೆಗೊಳಪಡುತ್ತವೆ. ಇದೀಗ ರೈಲಿನಲ್ಲಿ ಕಣ್ಸನ್ನೆಯೊಂದಿಗೆ ಆರಂಭವಾದ ಪ್ರೇಮ, ಲವ್ ಲೆಟರ್ ವರೆಗೆ ಮುಂದುವರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೊದಲ ನೋಟದ ಪ್ರೇಮ ಅನ್ನೋವಂತಹ ಪ್ರೇಮ ಪ್ರಕರಣ ಇದಾಗಿದ್ದು, ಚಲಿಸುವ ರೈಲಿನಲ್ಲಿ ಹುಡುಗ ಮತ್ತು ಹುಡುಗಿ ಪರಸ್ಪರ ಕಣ್ಸನ್ನೆ ಮೂಲಕವೇ ಮಾತನಾಡುತ್ತಾ, ವಿಚಾರ ವಿನಿಮಯ ಮಾಡುತ್ತಿದ್ದಾರೆ. ಹುಡುಗ ಪದೇ ಪದೇ ಹುಡುಗಿಯನ್ನು ನೋಡುತ್ತಾ ನಗುತ್ತಿರುತ್ತಾನೆ. ಎಲ್ಲರೂ ನೋಡುತ್ತಿರುವುದನ್ನು ಕಂಡ ಹುಡುಗಿ ಕೊಂಚ ಸಂಕೋಚದಿಂದಲೇ ನೋಡುತ್ತಿರುತ್ತಾಳೆ. ಆದರೆ ಹುಡುಗ ಎದುರಿಕೆ ಸಿಕ್ಕ ತಕ್ಷಣವೇ ಲವ್ ಲೆಟರ್ ಕೊಟ್ಟೇ ಬಿಡುತ್ತಾಳೆ. ಈ ವಿಡಿಯೋ ನೋಡಿದವರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರು ಇದೆಲ್ಲ, ಕೇವಲ ಆಕರ್ಷಣೆ ಅಷ್ಟೇ ಇದು ರಿಯಲ್ ಲೈಫ್ ಅಲ್ಲ ಎಂದರೆ, ಇನ್ನು ಕೆಲವರು, ಇದು ಸಿನಿಮಾ ಕಥೆಯನ್ನೂ ಹೋಲುವ ಪ್ರೇಮಾ ಎಂದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…
ತುರುವೇಕೆರೆ: ಮಹಿಳೆಯ ಕಣ್ಣಿಗೆ ಖಾರದ ಪುಡಿ ಎರಚಿದ ಕಳ್ಳರು ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ದೋಚಿ ಪರಾರಿಯಾಗಲು ಯತ್ನಿಸಿದ ಘಟನೆ ತುರುವೇಕೆರೆ ತಾಲೂಕು ದಂಡಿನ ಶಿವರ ಹೋಬಳಿಯ ಹಾಲುಗೊಂಡನಹಳ್ಳಿಯಲ್ಲಿ ನಡೆದಿದೆ. ಸುಜಾತಾ ಎಂಬ ಮಹಿಳೆ ತೋಟಕ್ಕೆ ತೆರಳುತ್ತಿದ್ದ ವೇಳೆ, ಕಳ್ಳತನಕ್ಕೆ ಹೊಂಚು ಹಾಕಿದ್ದ ಕಳ್ಳರು, ಕಣ್ಣಿಗೆ ಖಾರದ ಪುಡಿ ಎರಚಿ ಮಾಂಗಲ್ಯ ಸರವನ್ನು ದೋಚಲು ಯತ್ನಿಸಿದ್ದಾರೆ. ಈ ವೇಳೆ ಸಮಯ ಪ್ರಜ್ಞೆ ಮೆರೆದ ಗ್ರಾಮಸ್ಥರು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳರನ್ನು ಹಿಡಿದ ಗ್ರಾಮಸ್ಥರು ತಕ್ಷಣವೇ ದಂಡಿನ ಶಿವರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವರದಿ: ಸುರೇಶ್ ಬಾಬು ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತುಮಕೂರು: ಕೋಳಿ ಫಾರಂಗೆ ನೀರು ನುಗ್ಗಿದ ಪರಿಣಾಮ 35 ಸಾವಿರ ಕೋಳಿಗಳ ಮಾರಣಹೋಮ ನಡೆದಿರುವ ಘಟನೆ ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ಯಾಲದಹಳ್ಳಿಯಲ್ಲಿ ನಡೆದಿದೆ. ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಈ ನಡುವೆ ನಾರಾಯಣಪ್ಪ ಎಂಬವರ 8 ಕೋಳಿ ಫಾರಂಗಳಿಗೆ ನೀರು ನುಗ್ಗಿದ್ದು, ಸುಮಾರು 35 ಸಾವಿರ ಕೋಳಿಗಳ ಮಾರಣಹೋಮ ನಡೆದಿದೆ. ಘಟನೆ ಹಿನ್ನೆಲೆಯಲ್ಲಿ 80 ಲಕ್ಷ ರೂಪಾಯಿ ನಷ್ಟ ಸಂಭವಿಸಿದ್ದು, ಸಾಲ ಮಾಡಿ ಕೋಳಿ ಸಾಕಣಿಕೆಗೆ ಇಳಿದಿದ್ದ ನಾರಾಯಣಪ್ಪ ಇದೀಗ ಭಾರೀ ನಷ್ಟದಿಂದ ಕಂಗಾಲಾಗಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಆಗಸ್ಟ್ 9ಕ್ಕೆ ಪ್ರತಿಯೊಬ್ಬ ಕನ್ನಡಿಗರ ಮನೆ ಮೇಲೆ ಕನ್ನಡದ ಹಳದಿ ಮತ್ತು ಕೆಂಪು ಬಣ್ಣದ ಬಾವುಟ ರಾರಾಜಿಸಲಿ ಎಂದು ಕರ್ನಾಟಕ ರಣಧೀರರ ವೇದಿಕೆ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು.ಕೆ.ಆರ್ ರವರು ಸ್ವಾಭಿಮಾನಿ ಕನ್ನಡಿಗರಿಗೆ ಕರೆ ನೀಡಿದ್ದಾರೆ. ಹೇಳಿಕೆ ಹೀಗಿದೆ: ಕರ್ನಾಟಕ ರಾಜ್ಯವೂ ಈ ಹಿಂದೆ ಮೈಸೂರು ಸಂಸ್ಥಾನ ಎಂಬ ಹೆಸರಿನ ಸ್ವತಂತ್ರ ದೇಶ, ಸಾಮ್ರಾಜ್ಯವಾಗಿತ್ತು. ಆದರೆ ಈ ಒಕ್ಕೂಟ ಭಾರತದ ಸ್ವಾತಂತ್ರ್ಯ ಸಲುವಾಗಿ ನಮ್ಮ ದೇಶವನ್ನು ರಾಜ್ಯವನ್ನಾಗಿ ಕೆಳದರ್ಜೆ ಇಳಿಸಲಾಯಿತು ಎಂದರೆ ತಪ್ಪಾಗಲಾರದು, 09 ಆಗಸ್ಟ್ 1947 ರಲ್ಲಿ ಒಕ್ಕೂಟ ಭಾರತದ ರಾಯಭಾರಿಯಾದ ನರಸಿಂಹ ರಾವ್ ರವರ ಮಾತುಕತೆಯಿಂದ ಅಂದಿನ ಮೈಸೂರು ದೇಶದ/ಸಾಮ್ರಾಜ್ಯದ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ತಮ್ಮ ಸಾಮ್ರಾಜ್ಯವನ್ನು ಭಾರತದ ಒಕ್ಕೂಟಕ್ಕೆ ಸಂಯೋಜಿಸಿ ಒಪ್ಪಂದಕ್ಕೆ ಸಹಿ ಹಾಕಿದರು. ಆ ಮಹಾರಾಜರು ಅಂದು ಮಾಡಿದ ತಪ್ಪಿನಿಂದ ಇಂದಿಗೂ ಕನ್ನಡಿಗರು ನೋವು, ಮೋಸ ವಂಚನೆ, ದ್ರೋಹಗಳನ್ನು ಅನುಭವಿಸುತ್ತಾ ಬರುತ್ತಿದ್ದೇವೆ ಎಂದರೆ ತಪ್ಪಾಗಲಾರದು. ಒಕ್ಕೂಟಕ್ಕೆ ಸೇರಲು ಅಂದು ಒಡೆಯರ್ ರವರು ಸಹಿ ಹಾಕಿದ್ದು 3 ವಿಚಾರಗಳಿಗೆ:…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪ್ರಧಾನ ರಸ್ತೆಯಲ್ಲಿರುವ ಸಾರಿಗೆ ಸಂಸ್ಥೆಯ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿರುವ ಶೌಚಾಲಯವು ಗಬ್ಬುನಾರುತ್ತಿದ್ದ ಹಿನ್ನಲೆ ಸಾರ್ವಜನಿಕರ ದೂರಿನ ಪ್ರಕಾರ ನಮ್ಮ ತುಮಕೂರು ಮಾಧ್ಯಮವು ಸಾರಿಗೆ ಬಸ್ ನಿಲ್ದಾಣದ ಅವ್ಯವಸ್ಥೆಯ ಬಗ್ಗೆ ನಮ್ಮ ತುಮಕೂರು ಮಾಧ್ಯಮ ವಿವರವಾದ ವರದಿ ಪ್ರಕಟಿಸಿತ್ತು. ಈ ವರದಿಯನ್ನು ಗಮನಿಸಿದ ಹಿರಿಯೂರು ತಾಲ್ಲೂಕಿನ ನೂತನವಾಗಿ ಆಯ್ಕೆಗೊಂಡಿರುವ. ಶಿವರಂಜನಿ ಯಾದವ್ ಅವರು ನಗರಸಭೆ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರಾದ ಅಶೋಕ್, ಮೀನಾಕ್ಷಿ ಹಾಗೂ ಸಂಧ್ಯಾ ಅವರೊಡನೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸಾರಿಗೆ ಸಂಸ್ಥೆಯ ಗಣಕಿ ಸಹಾಯಕರನ್ನು ತರಾಟೆಗೆ ತೆಗೆದುಕೊಂಡರು. ನಾನಾ ಕಡೆಗಳಿಂದ ಬಂದಂತಹ ಪ್ರಯಾಣಿಕರು ಹಿರಿಯೂರು ನಗರದ ಬಸ್ ನಿಲ್ದಾಣಕ್ಕೆ ಆಗಮಿಸಿ ತಮ್ಮ ತಮ್ಮ ಊರುಗಳಿಗೆ ತೆರಳುತ್ತಾರೆ. ಆದರೆ ಸಾರಿಗೆ ಸಂಸ್ಥೆಯ ಆವರಣದಲ್ಲಿರುವ ಶೌಚಾಲಯವು ಸಹ ತೀರ ಅವ್ಯವಸ್ಥಿತ ಗೊಂಡಿದ್ದು ಶೌಚಾಲಯವು ಸಹ ತೀರ ಹದಗೆಟ್ಟಿದೆ. ಇದರಿಂದ ನಾನಾ ಖಾಯಿಲೆಗಳಿಗೆ ಇಲ್ಲಿಗೆ ಬರುವಂತಹ ಪ್ರಯಾಣಿಕರು, ಸಾರ್ವಜನಿಕರು ತುತ್ತಾಗುತ್ತಿದ್ದಾರೆ. ಆದರಿಂದ ಈ…
ಕೊರಟಗೆರೆ: ತಾಲ್ಲೂಕಿನ ಕಲ್ಲುಗುಟ್ಟರಹಳ್ಳಿ ಗ್ರಾಮದ ಭೀಮೇಗೌಡನ ಮಗ ರಾಮಕೃಷ್ಣಪ್ಪ 65 ವರ್ಷದ ವ್ಯಕ್ತಿ ಪಟ್ಟಣಕ್ಕೆ ಹೋಗಲು ಜಂಪೇನಹಳ್ಳಿ ಕ್ರಾಸ್ ಬಳಿ ಬಸ್ ಗಾಗಿ ಕಾಯುತ್ತಿದ್ದಾಗ ತೋವಿನಕೆರೆ ಮಾರ್ಗದಿಂದ ಅತಿ ವೇಗವಾಗಿ ಬಂದ ದ್ವಿಚಕ್ರ ವಾಹನ ಸವಾರನೋರ್ವ ತನ್ನ ದ್ವಿಚಕ್ರ ವಾಹನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗದೆ ಏಕಾಏಕಿ ವಿಶ್ರಾಂತಿ ಗೃಹದ ಬಳಿ ನಿಂತಿದ್ದ ರಾಮಕೃಷ್ಣಪ್ಪ ಅವರಿಗೆ ಗುದ್ದಿದ್ದಾನೆ. ದ್ವಿಚಕ್ರ ವಾಹನ ಗುದ್ದಿದ ರಭಸಕ್ಕೆ ರಾಮಕೃಷ್ಣಪ್ಪ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ತಕ್ಷಣ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಮೃತ ರಾಮಕೃಷ್ಣಪ್ಪನ ಜೊತೆಯಲ್ಲಿದ್ದ ಸಂಬಂಧಿ ವಿಜಯ್ ಕುಮಾರ್ ದೂರು ದಾಖಲಿಸಿದ್ದಾರೆ. ಕೊರಟಗೆರೆ ಪೋಲಿಸ್ ಠಾಣಾ ನೂತನ ಅಧಿಕಾರಿ ಸಿಪಿಐ ಸುರೇಶ್ ಹಾಗೂ ಪಿಎಸ್ ಐ ನಾಗರಾಜು ಪ್ರಕರಣ ದಾಖಲಿಸಿಕೊಂಡು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ…
ಹಲಸಿನ ಕಾಯಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಲ್ಲದೇ ನಮ್ಮ ದೇಹದಲ್ಲಿರುವ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಮಧುಮೇಹಿಗಳ ಅತ್ಯುತ್ತಮ ಆಹಾರ ಇದಾಗಿದೆ ಎಂದು ತಜ್ಞರು ಹೇಳುತ್ತಾರೆ. ಹಲಸಿನ ಹಣ್ಣನ್ನು ದೋಸೆ, ಇಡ್ಲಿ ಮೊದಲಾದ ರೂಪದಲ್ಲಿ ಸೇವಿಸುತ್ತೇವೆ. ಇತ್ತೀಚೆಗೆ ನಡೆದ ಸಂಶೋಧನೆಯೊಂದರ ಪ್ರಕಾರ ಅನ್ನ, ಗೋಧಿ ಬದಲಿಗೆ ಹಲಸಿನ ಕಾಯಿಯನ್ನು ಸೇವಿಸಬಹುದು ಎನ್ನಲಾಗಿದೆ. ಹಲಸಿನ ಹಣ್ಣನ್ನು ಹಿಟ್ಟಿನ ರೂಪದಲ್ಲಿ ಬಳಕೆ ಮಾಡುವುದರಿಂದ ಕಾರ್ಬೋಹೈಡ್ರೇಟ್ ಗಳು ಕಡಿಮೆ ಆಗುತ್ತವೆ. ಕ್ಯಾಲರಿಗಳನ್ನು ಕಡಿಮೆ ಮಾಡಿ ತೂಕ ಇಳಿಸಲು ನೆರವಾಗುತ್ತವೆ. ಇದೊಂದು ಸ್ಥಳೀಯ ಆಹಾರವೂ ಆಗಿರುವುದರಿಂದ ಇದರಲ್ಲಿರುವ ಪೌಷ್ಟಿಕಾಂಶಗಳು ದೇಹಕ್ಕೆ ಹೆಚ್ಚು ಉಪಕಾರಿಯಾದವು ಎಂಬುದನ್ನು ಸಂಶೋಧನೆ ದೃಢಪಡಿಸಿದೆ. ಹಲಸಿನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ದೇಹದಲ್ಲಿ ಶಕ್ತಿ ಬಲವರ್ಧನೆ ಆಗುವುದರ ಜೊತೆ ಕ್ಯಾನ್ಸರ್ ಗುಣಕಾರಿಯಾಗಿಯೂ ಬಳಕೆಯಾಗುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz