Author: admin

ಕೊರಟಗೆರೆ : ಬಡಜನರ ತುರ್ತು ಸೇವೆಗಾಗಿ ಸರಕಾರ ನೀಡಿರುವ ತುರ್ತುವಾಹನದ ನಿರ್ವಹಣೆ ವಿಫಲವಾಗಿದೆ. ಆರೋಗ್ಯ ಸಚಿವರು ತಕ್ಷಣ ತುರ್ತುವಾಹನದ ಅವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಬೇಕಿದೆ. ರಾಜ್ಯ ಸರಕಾರ ಗ್ರಾಮೀಣ ಪ್ರದೇಶದ ಬಡಜನರ ಆರೋಗ್ಯಕ್ಕೆ ತಕ್ಷಣ ರಕ್ಷಣೆ ನೀಡಬೇಕಿದೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಆಗ್ರಹಿಸಿದ್ದಾರೆ. ಶನಿವಾರ ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿರತೆ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ವಯೋವೃದ್ದ ರೈತ ಮತ್ತು ಇಬ್ಬರು ಮಕ್ಕಳ ಆರೋಗ್ಯ ವಿಚಾರಿಸಿದ ನಂತರ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ನಂತರ ಚರ್ಚಿಸಿ ಮಾತನಾಡಿದರು. ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 3 ತುರ್ತುವಾಹನ, ತೋವಿನಕೆರೆ ಮತ್ತು ಕೋಳಾಲದಲ್ಲಿ ತಲಾ ಒಂದು ತುರ್ತುವಾಹನದ ಸೌಲಭ್ಯವಿದೆ. ತುರ್ತುವಾಹನ ಲಭ್ಯವಿದ್ದರೂ ಸಹ ಅಧಿಕಾರಿಗಳ ನಿರ್ವಹಣೆ ವಿಫಲತೆಯಿಂದ ಬಡಜನರಿಗೆ ಸಮಸ್ಯೆ ಸೃಷ್ಟಿಯಾಗಿದೆ. ಆರೋಗ್ಯ ಸಚಿವರು ತಕ್ಷಣ ತುರ್ತುಸೇವೆಯ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯ ಮಾಡಿದರು. ಅಪಘಾತ ಆದಾಗ ತುರ್ತುವಾಹನ ಬರೋದಿಲ್ಲ. ಗರ್ಭೀಣಿಯರ ಹೆರಿಗೆ ವೇಳೆಯು ಸಹಾಯಕ್ಕೆ ತುರ್ತಾಗಿ…

Read More

ಮೈಸೂರು: ನಾವು ಮನೆಯಲ್ಲಿ ಕೂತರು ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂದಿನ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರನ್ನು ಮನೆಗೆ ಕಳುಹಿಸುತ್ತೇವೆ. ಆ ಚುನಾವಣೆಯಲ್ಲಿ ಸಿದ್ದರಾಮಯ್ಯ ಮನೆಗೆ ಹೋಗುವ ಕಾರ್ಯಕ್ರಮ ಇದೆ. ಆ ಕಾರಣದಿಂದ ಅವರು ಮನೆಯಲ್ಲೇ ಕೂತಿರುತ್ತಾರೆ ಎಂದು ವ್ಯಂಗ್ಯವಾಡಿದರು. ಇನ್ನು, ಪಕ್ಷ ಸಂಘಟನೆಯ ಬಗ್ಗೆ ಕೋರ್ ಕಮಿಟಿಯಲ್ಲಿ ಚರ್ಚೆ ನಡೆಯುತ್ತಿದೆ. ಪಕ್ಷ ಮತ್ತಷ್ಟು ಬಲಗೊಳ್ಳಲಿದೆ ಹಾಗೂ ಈ ಬಾರಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನವನ್ನು ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಆಂಟೋನಿ ಬೇಗೂರು ಭೂಮಿ ಮೇಲೆದ್ದು ಗದರಿಸಿತು ಕಡಿದಾದ ಬೆಟ್ಟ ಮೇಲ್ಭಾಗವು ಸಾಕಷ್ಟು ಉದ್ದವಾಗಿದೆ ಎಲ್ಲೆಲ್ಲೂ ಹಸಿರು ಹೊದಿಕೆ ರಕ್ಷಣಾತ್ಮಕ ಗೋಡೆ ಸ್ವರ್ಗದ ರಥದಂತೆ…! ಬಿಳಿ ಮೋಡವನ್ನು ನುಡಿಸುತ್ತಿದೆ ಕಾನಮಠದ ಧಾಂತೇಕಂ ಪರಿಕಲ್ಪನೆ ಮೋಡಗಳು ಎಲ್ಲೆಡೆ ಇವೆ ಪರ್ವತದ ಬದಿಯಲ್ಲಿ ಸುರಿಯುವ ಮಳೆ ಅವರೋಹಣ ಪರ್ವತ ತೇವ ಹಿಮವನ್ನು ಸ್ಫಟಿಕೀಕರಿಸಿ ಪ್ರಯೋಜನವನ್ನು ಹುಡುಕುವ ಅವಧಿಯಲ್ಲಿ ನದಿ ನೀರಿನಲ್ಲಿ ಹಣ್ಣಾಗುತ್ತವೆ ಬೇಸಿಗೆ ಲಾಭದಾಯಕವಾಗಿದೆ ಈ ಪರ್ವತಗಳು ಶೇಖರಣಾ ಉಗ್ರಾಣವಲ್ಲವೇ? ಪರ್ವತವು ನೀಡಿದ ಚಿಲುಮೆ ನೀರು ಮತ್ತು ಉಪ್ಪುನೀರು ಮನುಕುಲದ ದೊಡ್ಡ ಭರವಸೆ ಪರ್ವತದ ಸೌಂದರ್ಯವನ್ನು ಆಸ್ವಾದಿಸಿದ ವ್ಯಕ್ತಿ ಇಲ್ಲಿ ಮಹಲು ಸಹ ಸ್ಥಾಪಿಸಲಾಗಿದೆ ಸಂತೋಷದ ಸ್ವಭಾವವೂ ಸತ್ತುಹೋಯಿತು ಒತ್ತಡದಿಂದ ಅವಳ ಉಸಿರು ಮುರಿದುಹೋಯಿತು ಹೆಚ್ಚುವರಿ ಶಾಖದಿಂದಾಗಿ ಒಟ್ಟು ಸಂಪನ್ಮೂಲಗಳು ವ್ಯರ್ಥವಾಗುತ್ತವೆ ಸಮುದ್ರಕ್ಕಾಗಿ ಕಾಯಿರಿ ಎದ್ದೇಳು ಮನುಷ್ಯ! ಪೂರ್ವ ಪಶ್ಚಿಮ ಘಟ್ಟಗಳು ಕೈ ಜೋಡಿಸಿ ಪೂಜಿಸು! ನೀಲಗಿರಿಯ ಭೂಮಿಯನ್ನು ರಕ್ಷಿಸುವುದು — ಇನ್ನು ಮುಂದೆ ಸ್ವಾರ್ಥ ಬಿಡು ಜಗತ್ತನ್ನು ಉಳಿಸಿ ನಿಮ್ಮ ಪೀಳಿಗೆಯನ್ನು ಹಿಂದಕ್ಕೆ ತೆಗೆದುಕೊಳ್ಳಿ..!…

Read More

ಸಾಮಾಜಿಕ ಕಾರ್ಯ ಕರ್ತ ಮಾಧವ ರಾವ್ ಬಾಗಲ್( 1895-1986) ಅವರು ದಿ 9/12/1950 ರಲ್ಲಿ ಕೊಲ್ಹಾಪುರದಲ್ಲಿ ಪ್ರಪ್ರಥಮವಾಗಿ ಡಾ. ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿದ್ದರು.ಇದು ಡಾ.ಬಿ ಆರ್ ಅಂಬೇಡ್ಕರ್ ಅವರ ಜೀವಂತದ ಅವಧಿಯಲ್ಲೇ ನಡೆದದ್ದು.ಬಾಬಾಸಾಹೇಬರು ಈ ಮೂರ್ತಿಯ ದರ್ಶನ ಕೂಡಾ ಮಾಡಿದ್ದರು. ಮಹಾರಾಷ್ಟದ ಕೊಲ್ಹಾಪುರನಗರದಲ್ಲಿರುವ ಹಿಂದೂ ಚೌಕ್ ನಲ್ಲಿ ಈ ಮೂರ್ತಿ ಒಂದು ಐತಿಹಾಸಿಕ ಮೂರ್ತಿಯಾಗಿದೆ.ಇದು ವಿಶ್ವದ ಮೊಟ್ಟ ಮೊದಲ ಪ್ರತಿಮೆಯಾಗಿದೆ.1950 ಬಾಬಾಸಾಹೇಬರ ಮೂರ್ತಿಯನ್ನು ಅನಾವರಣ ಮಾಡಲಾಗಿತ್ತು.ಮಾಧವರಾವ್ ಬಾಗಲ್ ಅವರು ಸಮಿತಿಯ ಅಧ್ಯಕ್ಷರಾಗಿದ್ದರು.ಬಾಬಾಸಾಹೇಬರು ಬದುಕಿರುವಾಗಲೇ ಈ ಮೂರ್ತಿ ನಿರ್ಮಾಣ ಮಾಡಲಾಗಿದ್ದು ಇದನ್ನು ಬಾಳ್ ಚೌಹಾಣ ಅನ್ನುವವರು ತಯಾರಿಸಿದ್ದರು. ಅದೇ ರೀತಿಯಲ್ಲಿ ನಮ್ಮ ಮೂಲನಿವಾಸಿ ಅಂಬೇಡ್ಕರ್ ಸಂಘದವತಿಯಿಂದ 2ನೇ ಮೂರ್ತಿಯಾಗಿದ್ದು ಇದು 11/12/22ರಂದು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮೂರ್ತಿ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ತಾವೆಲ್ಲರೂ ಬಂದು ಭಾಗವಹಿಸಿ. ನೀವು ಬನ್ನಿ ನಿಮ್ಮವರನ್ನು ಕರೆತನ್ನಿ ಈ ಕಾರ್ಯಕ್ರಮನ ಯಶಸ್ವಿಗೊಳ್ಳಿಸೋಣ… ಜೈ ಭೀಮ್ ಜೈ ಮೂಲನಿವಾಸಿ ಅಂಬೇಡ್ಕರ್ ಸಂಘ… ಇಂತೀ ನಿಮ್ಮ ಪಿ ಲೋಕೇಶ್ ನಮ್ಮತುಮಕೂರು.ಕಾಂನ…

Read More

ಕಾಂತಾರ ಸಿನಿಮಾ ಸಕ್ಸಸ್, ನಿರ್ದೇಶಕ ಹಾಗೂ ನಿರ್ಮಾಪಕರು ಮರುಚಿಂತಿಸುವಂತೆ ಮಾಡಿದೆ ಎಂದು ಖ್ಯಾತ ನಿರ್ದೇಶಕ ರಾಜಮೌಳಿ ಹೇಳಿದ್ದಾರೆ. ಕಾಂತಾರ ಸಕ್ಸಸ್ ಬಗ್ಗೆ ಮೊದಲ ಬಾರಿಗೆ ಮಾತನಾಡಿರುವ ರಾಜಮೌಳಿ, ಕಾಂತಾರ ಗಳಿಕೆ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹೆಚ್ಚು ಹಣ ಗಳಿಸಲು ಬಿಗ್ ಬಜೆಟ್ ಸಿನಿಮಾವನ್ನೇ ಮಾಡಬೇಕಿಲ್ಲ. ಕಡಿಮೆ ಬಜೆಟ್‌ನ, ಒಳ್ಳೆಯ ಫ್ಲ್ಯಾನ್ ಇರುವ ಸಿನಿಮಾ ಕೂಡ ಉತ್ತಮ ಕಲೆಕ್ಷನ್ ಮಾಡಬಹುದು. ಇದಕ್ಕೆ ಕಾಂತಾರ ಉತ್ತಮ ಉದಾಹರಣೆ ಎಂದು ರಾಜಮೌಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕರಿಗೆ ಇದು ಎಕ್ಸಾಯಿಟ್ ಆಗಿರುತ್ತದೆ. ಆದರೆ ನಿರ್ದೇಶಕರಾಗಿ ನಾವು ಏನು ಮಾಡುತ್ತೀವಿ ಅಂತ ಮರುಚಿಂತಿಸಬೇಕಾಗಿದೆ’ ಎಂದು ಹೇಳಿದರು. ರಾಜಮೌಳಿ ಹೆಚ್ಚಾಗಿ ಬಿಗ್ ಬಜೆಟ್ ಸಿನಿಮಾಗಳನ್ನು ಮಾಡಿ ಸಕ್ಸಸ್ ಕಂಡವರು. ಇದೀಗ ಕಡಿಮೆ ಬಜೆಟ್ ನ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿ ಬೀಗುತ್ತಿರುವ ರೀತಿ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಾಂತಾರ ಸಕ್ಸಸ್ ಸಿನಿಮಾ ತಂತ್ರದ ಬಗ್ಗೆ ಮರುಚಿಂತಿಸುವಂತೆ ಮಾಡಿದೆ ಎಂದು ರಾಜಮೌಳಿ ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…

Read More

ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಲು ಪ್ರತಿದಿನ ಜೇನುತುಪ್ಪವನ್ನು ಸೇವಿಸಿ > ತೆಂಗಿನಕಾಯಿ ಅಥವಾ ಎಳ್ಳಿನ ಎಣ್ಣೆಯಿಂದ ಪಾದದ ಅಡಿಭಾಗವನ್ನು ಹಗುರವಾಗಿ ಪ್ರತಿದಿನ ಮಸಾಜ್ ಮಾಡಿ > ದ್ವಿದಳ ಧಾನ್ಯಗಳು, ಮೊಟ್ಟೆಯಂತಹ ಪ್ರೋಟೀನ್ ಭರಿತ ಸೇವಿಸಿ > ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ಕುಡಿಯಿರಿ ಖಾಲಿ ಹೊಟ್ಟೆಯಲ್ಲಿ ಕ್ಯಾರೆಟ್ ಜ್ಯೂಸ್ ಕುಡಿಯಿರಿ ಬಾದಾಮಿ, ವಾಲ್ ನಟ್ ಗಳನ್ನು ಆಹಾರದಲ್ಲಿ ಸೇರಿಸಿ. ವಾರಕ್ಕೆ ಒಮ್ಮೆಯಾದರೂ ಮಾಂಸಾಹಾರಿಗಳು ಮೀನನ್ನು ಸೇವಿಸಿದರೆ ಉತ್ತಮ ಕಾರಣ ಮೀನಿನಲ್ಲಿ ಒಮೆಗಾ-3 ಕೊಬ್ಬಿನ ಆಮ್ಲಗಳು ಇರುವುದರಿಂದ ಕಣ್ಣಿಗೆ ಉತ್ತಮವಾಗಿ ಇರುತ್ತದೆ. ಕಣ್ಣನ್ನು ಹತ್ತು ನಿಮಿಷಕ್ಕೆ ಒಂದು ಬಾರಿ ಅಥವಾ ಸಮಯ ಸಿಕ್ಕಾಗ ಕಣ್ಣನ್ನು ಮಿಟಿಕಿಸಿ ನಿಯಮಿತವಾಗಿ ಆಗ ಕಣ್ಣುಗಳು ಫ್ರೆಶ್ ಆಗಿ ಇರುತ್ತದೆ. ಮುಂಜಾನೆ ಅಥವಾ ಸಂಜೆಯ ವೇಳೆ ಬಿಸಿಲಿನಲ್ಲಿ ನೀವು ಇದ್ದಾಗ ಆಗ ಬರುವ ಸೂರ್ಯನ ಕಿರಣಗಳು ನಿಮ್ಮ ಕಣ್ಣುಗಳಿಗೆ ಉತ್ತಮ ಚಿಕಿತ್ಸೆ ಆಗಿರುತ್ತದೆ. ಮೊಬೈಲ್ ಹಾಗೂ ಕಂಪ್ಯೂಟರ್ ಬಳಸುವಾಗ ಬ್ರೈಟ್ನೆಸ್ ಕಡಿಮೆ ಇಟ್ಟು ಉಪಯೋಗಿಸಿ. ಪಾಲಕ್ ಸೊಪ್ಪನ್ನು ನಿಮ್ಮ…

Read More

ಉಡುಪಿ : ಖಾಸಗಿ ಬಸ್, ಕಾರು ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನೆಲ್ಲಿಕಾರು ಗ್ರಾಮದಲ್ಲಿ ನಡೆದಿದೆ. ಖಾಸಗಿ ಬಸ್, ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ನಾಗರಾಜು (40), ಪತ್ನಿ ಪ್ರತ್ಯುಷಾ (32) ಹಾಗೂ 2 ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಧರ್ಮಸ್ಥಳದಿಂದ ಶೃಂಗೇರಿಗೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿದೆ. ಕಾರ್ಕಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು: ಗಡಿ ವಿವಾದ ಕುರಿತು ಮಹಾರಾಷ್ಟ್ರ ಸಂಸದರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಅಮಿತ್ ಶಾ ಅವರನ್ನು ಭೇಟಿಯಾಗುವಂತೆ ಕರ್ನಾಟಕ ಸಂಸದರಿಗೆ ಸೂಚನೆ ನೀಡಿದ್ದಾರೆ. ಜೊತೆಗೆ ತಾವು ಕೂಡ ಸ್ವತಃ ದೆಹಲಿಗೆ ತೆರಳಿ ಮಾತುಕತೆ ನಡೆಸಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ. ಈಗಾಗಲೇ ಮಹಾರಾಷ್ಟ್ರದ ನಿಯೋಗ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಯಾವುದೇ ವ್ಯತ್ಯಾಸ ಆಗುವುದಿಲ್ಲ. ಈ ಹಿಂದೆ ಕೂಡ ಮಹಾರಾಷ್ಟ್ರ ಈ ರೀತಿಯ ಪ್ರಯತ್ನ ಮಾಡಿದೆ. ಈ ಪ್ರಕರಣ ಸುಪ್ರೀಂ ಕೋರ್ಟ್​​​ನಲ್ಲಿದೆ. ಗಡಿ ವಿಚಾರದಲ್ಲಿ ನಮ್ಮ ಸರ್ಕಾರ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ. ಗಡಿ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸೋಮವಾರ ಭೇಟಿ ಮಾಡುವಂತೆ ರಾಜ್ಯ ಸಂಸದರಿಗೆ ತಿಳಿಸಿದ್ದೇನೆ. ನಾನೂ ಕೂಡ ರಾಜ್ಯದ ನ್ಯಾಯ ಸಮ್ಮತ ನಿಲುವನ್ನು ತಿಳಿಸಲು…

Read More

ಪತ್ನಿ ಮೋಸ ಮಾಡಿದಳೆಂದು ಪತಿ 42 ವರ್ಷಗಳಿಂದ ಮನೆಯಲ್ಲಿ ಅನ್ನ ತಿನ್ನದೆ ಚಹಾ ಕುಡಿದು ಜೀವನ ಸಾಗಿಸುತ್ತಿದ್ದಾನೆ. ಜೈಪುರದ ರಾಮಚಂದ್ರ ಮತ್ತು ಸೀತಾ ಗಂಡ ಹೆಂಡತಿ. ಆದರೆ ಒಂದು ದಿನ ರಾಮಚಂದ್ರ, ಸೀತೆಗೆ ಅನ್ನ ಹಾಕಲು ಹೇಳಿದ. ಸೀತೆ ಅಸ್ವಸ್ಥಳಾಗಿದ್ದರಿಂದ ಅನ್ನ ಹಾಕಲು ಸಾಧ್ಯವಾಗಿರಲಿಲ್ಲ. ಪತ್ನಿಯ ಮೇಲೆ ಸಿಟ್ಟಿಗೆದ್ದ ಪತಿ 42 ವರ್ಷಗಳಿಂದ ಅನ್ನ ತಿನ್ನದೆ ಕೇವಲ ಚಹಾ, ಇತರೆ ತಿಂಡಿಗಳನ್ನು ತಿನ್ನುತ್ತಿದ್ದಾನೆ. ಆದರೆ ಅವರು ಇವತ್ತಿಗೂ ಹೆಂಡತಿ ಜೊತೆ ಉತ್ತಮ ಸಂಬಂಧಹೊಂದಿದ್ದಾರೆ. ವಿಭಿನ್ನ ಅನ್ನಿಸಿದರು ವಿಚಿತ್ರ ನೈಜ ಘಟನೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಳಗ್ಗೆ ಎದ್ದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿ.ಕೆ.ಶಿವಕುಮಾರ್ ಒದ್ದಾಡುತ್ತಿದ್ದಾರೆ. ಆದರೆ ನಾವೆಲ್ಲರೂ ಇದ್ದೇವೆ, ಧೈರ್ಯವಾಗಿರಪ್ಪ ಎಂದು ಆತ್ಮಸ್ಥೆರ್ಯ ತುಂಬುತ್ತಿದ್ದೇವೆಂದು ಡಾ.ಜಿ.ಪರಮೇಶ್ವರ್ ಹೇಳಿದ್ದು, ಈ ಹೇಳಿಕೆ ಸದ್ಯ ಚರ್ಚೆಗೆ ಗ್ರಾಸವಾಗಿದೆ. ಪಕ್ಷವೊಂದರ ಅಧ್ಯಕ್ಷ ಸ್ಥಾನ ನಿಭಾಯಿಸುವುದು ಸುಲಭವಲ್ಲ. ಟಿಕೆಟ್ ಕೊಡಬೇಕು, ಗೆಲ್ಲಿಸಬೇಕು, ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ನನಗೆ ಸಾಮರ್ಥ್ಯ ಇದೆ ಎಂದೇ 8 ವರ್ಷ ಅಧ್ಯಕ್ಷ ಸ್ಥಾನ ನೀಡಿದ್ದರು ಎಂದಿದ್ದಾರೆ. ತುಮಕೂರಿನ ಕೊರಟಗೆರೆಯಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ್, ಯಾವುದೇ ವ್ಯಕ್ತಿ ಪಕ್ಷ ಬರಬೇಕಾದರೇ ಉದ್ದೇಶ, ಕ್ಷೇತ್ರದ ಕೆಲಸ ಆಗಬೇಕು. ಕೆಲಸ ಮಾಡುವ ಸಾಮರ್ಥ್ಯ ಇರಬೇಕು. ಆ ಸಾಮರ್ಥ್ಯ ನನಗಿದೆ ಅಂದುಕೊಂಡಿದ್ದೇನೆ. ಬೇರೆಯವರಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಸಮರ್ಥ ನಾಯಕ ಎಂದು ನನ್ನನ್ನ ಪಕ್ಷ ಗುರುತಿಸಿದೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More