Author: admin

ತುಮಕೂರು: ಡಿ ಕೊರಟಗೆರೆಯ ಜಾತ್ರೆಯಲ್ಲಿ ಹಾಲಿ ಶಾಸಕರ ಬ್ಯಾನರ್ ಕಟ್ಟಿದ್ದಕ್ಕೆ ಮಾಜಿ ಶಾಸಕರ ಬೆಂಬಲಿಗರಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿರುವ ಘಟನೆ ನಡೆದಿದೆ. ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧ ಜೆಡಿಎಸ್ ಮುಖಂಡ ಪಾಲನೇತ್ರಯ್ಯ  ಗಂಭೀರ ಆರೋಪ ಮಾಡಿದ್ದು, ಶಾಸಕ ಡಿ.ಸಿ.ಗೌರಿಶಂಕರ್ ಫ್ಲಕ್ಸ್ ಕಟ್ಟುವ ವಿಚಾರಕ್ಕೆ ಗಲಾಟೆ ನಡೆದು ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಡಿ.ಕೊರಟಗೆರೆ ಜಾತ್ರಾ ಮಹೋತ್ಸವಕ್ಕೆ ಹಾಲಿ ಶಾಸಕ ಗೌರಿಶಂಕರ್ ಫ್ಲಕ್ ಕಟ್ಟಲು ಪಕ್ಷದ ಬೆಂಬಲಿಗರು ಮುಂದಾಗಿದ್ದರು. ಈ ವೇಳೆ 20 ಜನರ ಗುಂಪು ಹಲ್ಲೆ ನಡೆಸಿದ್ದು, ಪರಿಣಾಮವಾಗಿ ಜೆಡಿಎಸ್ ಕಾರ್ಯಕರ್ತ ಸಿರಾಜ್ ಹಾಗೂ ಮತ್ತೊರ್ವನಿಗೆ ಗಂಭೀರ ಗಾಯವಾಗಿದೆ. ಉಮೇಶ್ ಚಂದ್ರು ಮತ್ತು ಬೆಂಬಲಿಗರ ಮೇಲೆ ಈ ಆರೋಪ ಕೇಳಿ ಬಂದಿದ್ದು, ಸದ್ಯ ಹಲ್ಲೆಗೊಳಗಾದವರು ತುಮಕೂರಿನ ವಿನಾಯಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವರದಿ : ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…

Read More

ಹಿರಿಯೂರು: ತಾಲ್ಲೂಕಿನ ಹಿರಿಯೂರು ನಗರಗಳಲ್ಲಿ ಶುಚಿತ್ವ ಕಾಪಾಡದ ಹೋಟೆಲ್ ಗಳಿಗೆ ನಗರಸಭೆಯ ನೂತನ ಅಧ್ಯಕ್ಷರಾದ ಎಸ್. ಶಿವರಂಜಿನಿ ಯಾದವ್ ದಿಢೀರ್ ದಾಳಿ ನಡೆಸಿ ಹೊಟೇಲ್ ಗಳಲ್ಲಿ ಶುಚಿತ್ವ ಕಾಪಾಡಲು ತಾಕೀತು ಮಾಡಿದರು. ಶುಕ್ರವಾರದಂದು ಹಿರಿಯೂರು ನಗರದ ವಿವಿಧ ಹೋಟೆಲ್ ಗಳಿಗೆ ನಗರಸಭೆಯ ಆರೋಗ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ದಿಢೀರ್ ದಾಳಿ ನಡೆಸಿ ಸ್ವಚ್ಛತೆಯನ್ನು ಕಾಪಾಡುವಂತೆ ಅವರು ಎಚ್ಚರಿಕೆ ನೀಡಿದರು. ಹಿರಿಯೂರು ನಗರದ ಸ್ವಚ್ಛತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ, ಇದೇ ಪುನರಾವರ್ತನೆಯಾದರೆ, ಸಾರ್ವಜನಿಕರಿಂದ ದೂರು ಬಂದರೆ ಎಷ್ಟೇ ಪ್ರಭಾವಿಗಳಿಂದ ಒತ್ತಡ ತಂದರೂ ನಾನು ಕೇಳುವುದಿಲ್ಲ. ಕಠಿಣಕ್ರಮ ಕೈಗೊಳ್ಳಲಾಗುವುದು ಎಂದರು. ಗ್ರಾಮಾಂತರ ಪ್ರದೇಶಗಳಿಂದ ಬಂದ ಜನರಿಗೆ ಶುಚಿ-ರುಚಿಯಾದ ಊಟ-ತಿಂಡಿ ಸಿಗುವಂತಾಗಬೇಕು. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ, ವಿವೇಚನೆಯಿಂದ ಹೋಟೆಲ್ ಗಳನ್ನು ನಡೆಸಬೇಕು ಎಂದುಹೋಟೆಲ್ ಮಾಲಿಕರಿಗೆ ಶಿವರಂಜನಿ ಯಾದವ್ ಸೂಚಿಸಿದರು. ಈ ಸಂದರ್ಭದಲ್ಲಿ ಹಿರಿಯೂರು ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರುಗಳಾದ ಸಂಧ್ಯಾ ಮತ್ತು ಮೀನಾಕ್ಷಿ ಮಾತನಾಡಿ, ಸ್ವಚ್ಛ, ಸುಂದರ, ನೈರ್ಮಲ್ಯ ನಗರವನ್ನಾಗಿಸಲು ಎಲ್ಲಾ ಹೋಟೆಲ್, ಉದ್ದಿಮೆ, ಬೀದಿಬದಿ,…

Read More

ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ಪ್ರಸನ್ನ ಕುಮಾರ್ ರವರು ಇಂದು ನಿಧನರಾಗಿದ್ದಾರೆ. ವಿಶ್ವ ಪ್ರಸಿದ್ಧಿ ದಿವ್ಯಸ್ಥಳವಾದ ಗೊರವನಹಳ್ಳಿಯ ಶ್ರೀ ಮಹಾಲಕ್ಷ್ಮಿ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ಪ್ರಸನ್ನಕುಮಾರ್ ರವರು ಇಂದು ವಿಧಿವಶರಾಗಿದ್ದಾರೆ. ಗೊರವರನಹಳ್ಳಿ ಕ್ಷೇತ್ರದ ನಿರ್ಮಾತೃ ಶ್ರೀಮತಿ ಕಮಲಮ್ಮನವರ ಏಕೈಕ ಪುತ್ರರಾದ ಇವರು ತಾಯಿಯ ಮರಣದ ನಂತರ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಸೇವೆ  ಸಲ್ಲಿಸುತ್ತಿದ್ದರು. ಕಳೆದೊಂದು ವಾರದಿಂದ ಬೆಂಗಳೂರಿನ ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಇವರು ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಕೊರಟಗೆರೆ: ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯ ಹಾಗೂ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಬೋರಣ್ಣ ಸ್ವಪಕ್ಷದಲ್ಲೇ ಇದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಶಿವರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಬೋರಣ್ಣ ಮತ್ತು ರಂಗನರಸಯ್ಯ ತಾಲ್ಲೂಕು ಒಕ್ಕಲಿಗ ಸಂಘದ ವಿಷಯವಾಗಿ ಕ್ಷೇತ್ರದ ಶಾಸಕರಾದ ಡಾ.ಜಿ. ಪರಮೇಶ್ವರ್ ರವರ ಬಳಿ ಹೋದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಕೆಲ ಮುಖಂಡರು ಅವರಿಗೆ ಹಾರ ಹಾಕಿ ಪೋಟೋ ತೆಗೆದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ಅರಿತ ಬೋರಣ್ಣ ನೊಂದು ಈ ಪತ್ರಿಕಾ ಹೇಳಿಕೆ ನೀಡಿದ್ದಾರೆ ಇದು ಕಾಂಗ್ರೆಸ್ ಪಕ್ಷದವರಿಗೆ ಶೋಭೆ ತರುವುದಿಲ್ಲ, ಶಾಸಕರು ಕೂಡ ಇಂತಹ ಘಟನೆ ಬಗ್ಗೆ ಅವರ ಕಾರ್ಯಕರ್ತರಿಗೆ ಬುದ್ದಿ ಹೇಳಬೇಕು. 150 ವರ್ಷದ ಹಳೆಯ ಪಕ್ಷಕ್ಕೆ ಈ ರೀತಿಯ ಸ್ಥಿತಿ ಇದೆಯೇ..? ಬೋರಣ್ಣ ನಮ್ಮ ಹಿರಿಯ ಮುಖಂಡರಾಗಿದ್ದು ಪಕ್ಷದ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ ಎಂದು ಶಿವರಾಮಯ್ಯ ಹೇಳಿದರು. ತಾಲ್ಲೂಕು ಜೆಡಿಎಸ್ ಪಕ್ಷ ಕಾರ್ಯಾದ್ಯಕ್ಷ ನರಸಿಂಹರಾಜು…

Read More

ತುಮಕೂರು: ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಶ್ರೀರಾಮನಗರ ವಾರ್ಡ್ ನಂಬರ್ ಐದು ಇವರ ಸಹಯೋಗದೊಂದಿಗೆ ನಗರದ ಶಿರಾಗೇಟ್ ನ ಡಿ.ಎಂ.ಪಾಳ್ಯ ಡಾನ್ ಬೋಸ್ಕೋ ಶಾಲಾವರಣದಲ್ಲಿ 2022 23 ನೇ ಸಾಲಿನ ಕ್ರೀಡಾ ಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಕ್ರೀಡಾಕೂಟಕ್ಕೆ ವಿವಿಧ ಗಣ್ಯರು ಚಾಲನೆ ನೀಡಿದರು. ಸಂಪ್ರದಾಯದಂತೆ ಮಕ್ಕಳಿಗೆ ಕ್ರೀಡಾಸಕ್ತಿ ಮೂಡಿಸುವ ಸಲುವಾಗಿ ವಿವಿಧ ಶಾಲೆಗಳಿಂದ ಆಗಮಿಸಿದ ಕ್ರೀಡಾಪಟುಗಳಿಂದ ಪತಸಂಚಲನ ನಡೆಸಲಾಯಿತು . 100 ಮೀಟರ್ ಓಟ, 200 ಮೀಟರ್ ಓಟ, ಕಬಡ್ಡಿ, ಫುಟ್ಬಾಲ್. ಗುಂಡು ಎಸೆತ ಸೇರಿದಂತೆ ವಿವಿಧ ಕ್ರೀಡೆಗಳು ನಡೆದವು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶ್ರೀರಾಮನಗರ ಪ್ರಾಥಮಿಕ ಪಾಠಶಾಲೆಯ ಎಸ್ ಡಿ ಎಂಸಿ ಅಧ್ಯಕ್ಷ ಬಶೀರ್ ಅಹ್ಮದ್, ಕಳೆದ ಮೂರು ವರ್ಷಗಳಿಂದ ಶಾಲೆಗಳಲ್ಲಿ ಕೋವಿಡ್ ಕಾರಣದಿಂದಾಗಿ ಯಾವುದೇ ರೀತಿಯ ಕ್ರೀಡಾ ಚಟುವಟಿಕೆಗಳು ನಡೆದಿರಲಿಲ್ಲ. ಇದೀಗ ಶಿಕ್ಷಣ ಇಲಾಖೆ ಕ್ರೀಡಾ ಚಟುವಟಿಕೆಗಳಿಗೆ ಅನುಮತಿ ನೀಡಿದ್ದು ಹಿನ್ನೆಲೆಯಲ್ಲಿ ಹೋಬಳಿ ಮಟ್ಟದ ಕ್ರೀಡಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.…

Read More

ತುಮಕೂರು: ಕುಟುಂಬವೊಂದು ತಮ್ಮ ಮುದ್ದಿನ ಗಿಣಿಯನ್ನು ಹುಡುಕಿಕೊಟ್ಟವರಿಗೆ 50 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಕರಪತ್ರ ಅಂಟಿಸುವ ಮೂಲಕ ಭಾರೀ ಸುದ್ದಿಯಾಗಿತ್ತು. ಇದೀಗ ಕೊನೆಗೂ ಗಿಣಿ ಮಾಲಿಕರ ಮಡಿಲು ಸೇರಿದ್ದು, ಹುಡುಕಿಕೊಟ್ಟವರ ಕೈಗೆ ಭರ್ಜರಿ ಬಹುಮಾನ ಸಿಕ್ಕಿದೆ. ರುಸ್ತುಮ್ ಎಂಬ ಹೆಸರಿನ ಗಿಣಿ ನಾಪತ್ತೆಯಾದ ಗಿಣಿಯಾಗಿದ್ದು, ಈ ಗಿಣಿಯು ತುಮಕೂರಿನ ಬಡ್ಡಿಹಳ್ಳಿಯ ತೋಟವೊಂದರ ಮರದ ಮೇಲೆ ಪತ್ತೆಯಾಗಿತ್ತು. ಗಿಣಿಯನ್ನು ನೋಡಿದ ಬಡ್ಡಿಹಳ್ಳಿಯ ಕೃಷ್ಣಮೂರ್ತಿ ಮತ್ತು ಶ್ರೀನಿವಾಸ್ ಎಂಬವರು ತಮ್ಮ ಮನೆಗೆ ಕೊಂಡು ಹೋಗಿ ಸಾಕುತ್ತಿದ್ದರು. ಇತ್ತ ಗಿಣಿ ನಾಪತ್ತೆಯಾದ ಬಗ್ಗೆ ಪೋಸ್ಟರ್ ಕಂಡು ಗಿಣಿಯ ಮಾಲಿಕ ಅರ್ಜುನ್ ಅವರಿಗೆ ಕರೆ ಮಾಡಿದ್ದು, ಅವರು ತಕ್ಷಣ ಬಂದು ಈ ಗಿಣಿ ನಮ್ಮದು ಎಂದು ಖಾತರಿ ಪಡಿಸಿಕೊಂಡಿದ್ದಾರೆ.ಇನ್ನೂ ಗಿಣಿಯನ್ನು ಹುಡುಕಿಕೊಟ್ಟವರಿಗೆ ತಮ್ಮ ಮಾತಿನಂತಯೇ ಅರ್ಜುನ್ 85 ಸಾವಿರ ರೂಪಾಯಿ ಬಹುಮಾನ ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…

Read More

ಸರಗೂರು : ತಾಲ್ಲೂಕಿನ ಹೆಚ್. ಡಿ.ಕೋಟೆಯ ಹೆಬ್ಬಾಳ ಅಣ್ಣೆಕಟ್ಟೆಯಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಕೌಶಲ್ಯ ಅಭಿವೃದ್ಧಿ ಮೀನುಗಾರರನ್ನು ತರಬೇತಿ  ಶಿಬಿರ ಶನಿವಾರ ನಡೆಸಲಾಯಿತು. ಗ್ರಾಪಂ ಅಧ್ಯಕ್ಷ ಗೋವಿಂದಚಾರಿ ಶಿಬಿರಕ್ಕೆ  ಚಾಲನೆ ನೀಡಿ ಮಾತನಾಡಿ, ಹೊಸಬೀರ್ವಾಳ್ ಗ್ರಾಮದಲ್ಲಿ ಸಾಕಷ್ಟು ಜನರಿಗೆ ಸರಿಯಾದ ಜಮೀನಿಲ್ಲ. ಹಾಗಾಗಿ ಇಲ್ಲಿನ ಜನರಿಗೆ ಮೀನು ಸಾಕಣೆ ಅನುಕೂಲಕರವಾಗಲಿದೆ. ಸರ್ಕಾರ ಮೀನು ಸಾಕಣೆ ಸೌಲಭ್ಯ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮೀನುಗಾರಿಕೆ ಇಲಾಖೆ ಅಧಿಕಾರಿ ಸಿದ್ದಯ್ಯ.ತಾಲ್ಲೂಕಾಧಿಕಾರಿ ರೇಣುಕಾಸ್ವಾಮಿ, ಗ್ರಾಮಿಣಮಹೇಶ್, ಸರಗೂರುಕೃಷ್ಣ, ಸೌಭಾಗ್ಯ ಶಿವಚನ್ನ, ಭಾಗ್ಯಸಿದ್ದರಾಜು, ಚಿಕ್ಕನಾಯಕ, ಪುಟ್ಟಮ್ಮ ಸಿದ್ದರಾಜು, ರೇಖಾನಾಗನಾಯಕ, ಶಿವರಾಜು, ಚಂದ್ರ, ಶ್ರೀನಿವಾಸ್,  ಜಗದೀಶಗೌಡ, ಸಂಘದ ಸದಸ್ಯರು ಮೃತ್ಯುಂಜಯ ರಂಗಸ್ವಾಮಿ ಸಿದ್ದರಾಜು,  ಬಸವರಾಜು,  ಚಂದ್ರನಾಯಕ,  ಸಿದ್ದರಾಜು,  ನಿಂಗರಾಜು,  ಸುರೇಶ, ಮಂಜುನಾಥ್ ಸಿದ್ದರಾಜು  ಮೊದಲಾವರು ಭಾಗವಹಿಸಿದ್ದರು. ವರದಿ: ಚಂದ್ರ ಹಾದನೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ನವದೆಹಲಿ: ಮುಂದಿನ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಬಲ ಮಾರ್ಗದರ್ಶನ ಇರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸುಸ್ತಾಗಲಿ, ನಿವೃತ್ತಿಯಾಗಲಿ ಇಲ್ಲ. ಅವರು ನಿರಂತರ ಹೋರಾಟಗಾರರು. ಅವರು ಭಾಜಪದೊಂದಿಗೆ ಸದಾ ಇದ್ದಾರೆ. ಅವರಿಗೆ ತಮ್ಮದೇ ಆದ ಮಹತ್ವವಿದ್ದು, ಪಕ್ಷದ ವರಿಷ್ಠರಿಗೂ ಅವರ ಮಹತ್ವದ ಅರಿವಿದೆ. ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದರು. ಯಡಿಯೂರಪ್ಪನವರು ನಿರಂತರ ಪರಿಶ್ರಮದ ನಾಯಕ, ಅವರಿಗೆ ರಾಜಕೀಯ ಬಿಡುವು ಅನ್ನುವುದೇ ಇಲ್ಲ, ರಾಜಕೀಯದಲ್ಲಿ ನಿರಂತರವಾಗಿ ಬಿಎಸ್ ವೈ ಇರುತ್ತಾರೆ, ಹೋರಾಟವೇ ಅವರ ಬದುಕಿನ ಮೂಲಮಂತ್ರ. ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪನವರ ಬಲ, ಮಾರ್ಗದರ್ಶನ ಇರಲಿದೆ ಎಂದು ಅವರು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಹಿರಿಯೂರು: ಜುಲೈ 22ರಿಂದ 24ರವರೆಗೆ  ಹಿರಿಯೂರಿನ ನೆಹರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಪುರುಷರ ಹಾಗೂ ಮಹಿಳೆಯರ ಖೋಖೋ ಪಂದ್ಯಾಟ ದೀಪಾಲಂಕೃತ ಖೋಖೋ ಅಸೋಸಿಯೇಷನ್ ಕಪ್-2022ಗೆ ಕ್ರೀಡಾ ಪ್ರಿಯರಿಂದ ಭರ್ಜರಿ ಸ್ವಾಗತ ದೊರೆತಿದೆ ಸುಮಾರು ಐದು  ಸಾವಿರಕ್ಕಿಂತಲೂ ಹೆಚ್ಚು ಜನರು  ಕುಳಿತುಕೊಂಡು ಕ್ರೀಡೆಯನ್ನು ವೀಕ್ಷಿಸುವ ಗ್ಯಾಲರಿ ವ್ಯವಸ್ಥೆ ಮಾಡಲಾಗಿದ್ದು,  ಕ್ರೀಡಾ ಅಭಿಮಾನಿಗಳು,  ಸಾರ್ವಜನಿಕರು ವೀಕ್ಷಿಸಬಹುದಾಗಿದೆ. ಮೈದಾನ ಪ್ರವೇಶಕ್ಕೆ ಯಾವುದೇ ಪ್ರವೇಶ ಶುಲ್ಕ ವಿಧಿಸಲಾಗಿಲ್ಲ  ಎಂದು ಹಿರಿಯೂರು ತಾಲ್ಲೂಕಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಆಪ್ತಸಹಾಯಕರಾಗಿರುವ ನಿರಂಜನಮೂರ್ತಿ ತಿಳಿಸಿದರು. ಖೋ ಖೋ ಪಂದ್ಯಾವಳಿಯ ಕರ್ನಾಟಕ ಸ್ಟೇಟ್ ಜಾಯಿಂಟ್ ಸೆಕ್ರೆಟರಿ ಮಾತನಾಡಿ,  ಈ ಕ್ರೀಡೆಗೆ ನಮಗೆ ಎಲ್ಲಾ ರೀತಿಯ ಮೂಲಭೂತ ವ್ಯವಸ್ಥೆಯನ್ನು ಹಿರಿಯೂರು ತಾಲ್ಲೂಕಿನ ಶಾಸಕಿಯಾದ ಪೂರ್ಣಿಮಾ ಶ್ರೀನಿವಾಸ್ ಅವರು ಒದಗಿಸಿದ್ದು,  ಹಾಗೂ ರಾಜ್ಯ ಪ್ರವರ್ಗ -1 ರ ಗೊಲ್ಲ ಸಮುದಾಯದ ರಾಜ್ಯಾಧ್ಯಕ್ಷರಾದ ಡಿ.ಟಿ.ಶ್ರೀನಿವಾಸ್ ಅವರಿಗೂ  ಇದೇ ವೇಳೆ ಅಭಿನಂದನೆ ಸಲ್ಲಿಸಿದರು. ಶಿವಪ್ರಸಾದ್, ವೆಂಕಟೇಶ್ ಸೇರಿದಂತೆ ಇತರರು ಸಹ ನಮ್ಮ ತುಮಕೂರು ಮಾಧ್ಯಮದ ಜೊತೆಗೆ ಮಾತನಾಡಿ,…

Read More

ಸರಗೂರು: ತಾಲೂಕಿನ ಪಟ್ಟಣದ ಅಂಬೇಡ್ಕರ್ ಭವನದ ಬಳಿಯ ವಿಕಲಚೇತನರೊಬ್ಬರ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ಗುರುವಾರ ರಾತ್ರಿ ಘಟನೆ ನಡೆದಿದ್ದು, ಶುಕ್ರವಾರ ಬೆಳಗ್ಗೆ 7:30ರ ವೇಳೆ ಅಂಗಡಿ ಬಾಗಿಲು ತೆರೆಯಲು ಮಾಲಿಕ ಎಸ್.ಸಿ. ಪುಟ್ಟರಾಜು ಆಗಮಿಸಿದ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ವಿಕಲ ಚೇತನರಾಗಿರುವ ಎಸ್.ಸಿ.ಪುಟ್ಟರಾಜು ಅವರು ಸ್ನೇಹಿತರ ಸಹಕಾರದೊಂದಿಗೆ ಪುಟ್ಟ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಇದೀಗ ಜೀವನಾಧಾರವಾಗಿದ್ದ ಅಂಗಡಿಗೆ ಕಳ್ಳರು ನುಗ್ಗಿರುವುದರಿಂದ ದಿಕ್ಕು ತೋಚದೇ ಕಂಗಾಲಾಗಿದ್ದಾರೆ. ಪುಟ್ಟರಾಜು ಅವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲಾ. ಆದರೂ ಪುಟ್ಟ ಅಂಗಡಿಯಿಂದ ಬಂದ ಹಣದಿಂದ ಜೀವನ ನಡೆಸುತ್ತಿದ್ದರು. ಆದರೆ ಇದೀಗ ಅವರ ಅಂಗಡಿಯಲ್ಲೂ ಕಳ್ಳತನ ನಡೆಸಲಾಗಿದೆ.  ಈ ಪ್ರದೇಶದಲ್ಲಿ ಸರಣಿ ಕಳ್ಳತನ ನಡೆಸಲಾಗುತ್ತಿದ್ದರೂ, ಪೊಲೀಸರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಪಟ್ಟಣದಲ್ಲಿ ಗಸ್ತು ನಡೆಸುತ್ತಿಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವರದಿ: ಚಂದ್ರ ಹಾದನೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More