Author: admin

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರು ನಿಧನರಾದ ನೋವು ಇನ್ನೂ ಅಭಿಮಾನಿಗಳನ್ನು ಬಿಟ್ಟು ಹೋಗಿಲ್ಲ. ಈ ನಡುವೆ  ಆತ್ಮಗಳ ಜೊತೆಗೆ ಮಾತನಾಡುತ್ತೇನೆ ಎಂದು ಹೇಳಿಕೊಳ್ಳುತ್ತಿರುವ ಚಾರ್ಲಿ ಚಿಟ್ಟೆಂಡೆನ್(Charlie Chittenden) ಅವರು ಅಪ್ಪು ಆತ್ಮದೊಂದಿಗೆ ಮಾತನಾಡಿದ್ದಾರೆ. ಸುಶಾಂತ್ ಸೇರಿದಂತೆ ಹಲವರ ಆತ್ಮಗಳ ಜೊತೆಗೆ ಮಾತನಾಡಿದ್ದ ಚಾರ್ಲಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದರು. ಅಂತೆಯೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆತ್ಮದ ಜೊತೆಗೆ ಕೂಡ ಮಾತನಾಡಿದ್ದೇನೆ ಎಂದು ಹೇಳಿ ಅವರು ವಿಡಿಯೋ ಬಿಡುಗಡೆ ಮಾಡಿದ್ದಾರೆ.  ನಿಮ್ಮ ಅಭಿಮಾನಿಗಳಿಗೆ ಏನು  ಹೇಳುತ್ತೀರಿ ಎಂದು ಚಾರ್ಲಿ ಅಪ್ಪು ಅವರನ್ನು ಪ್ರಶ್ನಿಸಿದ್ದು, ಈ ವೇಳೆ “ಐ ಲವ್ ದೆಮ್” (ಎಲ್ಲರನ್ನೂ ಪ್ರೀತಿಸುತ್ತೇನೆ) ಎಂಬ ಪ್ರತಿಕ್ರಿಯೆ ಬಂದಿದೆ.  ಇನ್ನೂ ಹಲವು ಪ್ರಶ್ನೆಗಳನ್ನು ಸ್ಟೀವ್ ಕೇಳಿದ್ದರೂ ಯಾವುದಕ್ಕೂ ಸರಿಯಾದ ಉತ್ತರ ಬಂದಿಲ್ಲ ಎಂದು ಅವರು ಹೇಳಿದ್ದಾರೆ. ಅಪ್ಪುವಿನ ಆತ್ಮದ ಮಾತಿನ ನಡುವೆ ಹಾರ್ಟ್ ಫೇಲ್,  ಡಾಕ್ಟರ್, ಡಾಕ್ಟರ್ ಎಂಬ ಮಾತುಗಳನ್ನು ಅಪ್ಪು ಆಡಿದ್ದಾರೆ ಎಂದು ಚಾರ್ಲಿ…

Read More

ಗುರುಗದಹಳ್ಳಿ. ತಿಪಟೂರು ತಾಲೂಕಿನ ಹೊನವಳ್ಳಿ ಹೋಬಳಿಯ ಗುರುಗದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಯಾಣಿಕರ ತಂಗುದಾಣದ ಅವ್ಯವಸ್ಥೆಯಿಂದ ಕೂಡಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕಿಡಿಗೇಡಿಗಳ ಉಪಟಳದಿಂದ ತಂಗುದಾಣ ಅಸ್ತವ್ಯವಸ್ಥವಾಗಿದೆ. ಹೌದು ಗುರುಗದಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಬರುವ ಪ್ರಯಾಣಿಕರ ನಿಲ್ದಾಣ ತುಂಬಾ ಹದಗೆಟ್ಟು ಶೌಚಾಲಯದಂತೆ ಬಳಕೆಯಾಗುತ್ತಿದೆ. ಮತ್ತು ಮೇಲ್ಚಾವಣಿ ಮುರಿದು ಬೀಳುವ ಸ್ಥಿತಿಯಲ್ಲಿದ್ದು ಪ್ರಯಾಣಿಕರು ಭಯಭೀತರಾಗಿದ್ದಾರೆ. ಇಲ್ಲಿ ರಾತ್ರಿ ಸಮಯ ಪುಂಡ ಪೋಕರಿಗಳ ಹಾವಳಿಯಿಂದ ಪ್ರಯಾಣಿಕರ ನಿಲ್ದಾಣ ಬಾರ್ ನಂತೆ ಕಾಣುತ್ತಿದೆ. ಎಣ್ಣೆಯ ಬಾಟಲ್ ಗಳನ್ನು ನಿಲ್ದಾಣದ ಒಳಗಡೆ ಒಡೆದು ಹಾಕಿ  ಪುಂಡಾಟ ತೋರುತ್ತಿದ್ದಾರೆ ಮತ್ತು ನಿಲ್ದಾಣದ ಅಕ್ಕಪಕ್ಕ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಹೊಲಸು ವಾಸನೆ ಹರಡಿ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಇಲ್ಲಿ ಕುಳಿತುಕೊಳ್ಳುವ ಯಾವ ಯಾವ ವ್ಯವಸ್ಥೆ ಇಲ್ಲ.ಇನ್ನು ಮಳೆಗಾಲ ಆರಂಭವಾದಾಗ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಪ್ರಯಾಣಿಕರಿಗೆ ನಗರಕ್ಕೆ ಹೋಗಲು ಬಸ್ ಕಾಯುವಾಗ ನಿಲ್ದಾಣದ ಒಳಗಡೆ ನಿಲ್ಲಬೇಕು ಆದರೆ ಇಲ್ಲಿನ ಅವ್ಯವಸ್ಥೆ ಮತ್ತು ವಾಸನೆ ವಾಸನೆಯಿಂದ ಒಳಗಡೆ …

Read More

ರಾಮನಗರ: ಚನ್ನಪಟ್ಟಣದ ಎಲೆಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಪುನೀತ್‌ ರಾಜಕುಮಾರ್ ಅಭಿಮಾನಿ ವೆಂಕಟೇಶ್‌ (25) ಮನೆಗೆ ನಟ ರಾಘವೇಂದ್ರ ರಾಜಕುಮಾರ್ ಭಾನುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಪುನೀತ್‌ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ವೆಂಕಟೇಶ್‌ ಇದೇ 4ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಕಣ್ಣುಗಳನ್ನು ಕುಟುಂಬದವರು ದಾನ ಮಾಡಿದ್ದರು. ಅದನ್ನು ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಗತ್ಯವುಳ್ಳವರಿಗೆ ಕಸಿ ಮಾಡಲಾಗಿತ್ತು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಸರಗೂರು: ಹೆಚ್.ಡಿ.ಕೋಟೆ ತಾಲ್ಲೂಕಿನ ಅಂಕನಾಥಪುರ ಗ್ರಾಮ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಗ್ರಾಮವಾಗಿದ್ದು, ಸುಮಾರು 20 ವರ್ಷಗಳಿಂದಲೂ ರಸ್ತೆ  ಕಾಮಗಾರಿ ಚರಂಡಿ ವ್ಯವಸ್ಥೆ ಮನೆ ನಿರ್ಮಾಣ, ಬಸ್ಸು ಸಂಪರ್ಕ, ಸ್ಮಶಾನ ಇನ್ನೂ ಮುಂತಾದ ಸಮಸ್ಯೆ ಗಳ ಪರ್ವ ಗ್ರಾಮದ್ದಾಗಿದೆ. ಅದರ ಮಧ್ಯದಲ್ಲೂ 2019 ರಂದು ಅತಿವೃಷ್ಟಿಯಿಂದಾಗಿ ತಾರಕ ಜಲಾಶಯದಿಂದ ಹರಿದು ಬಂದು ನೀರಿನಿಂದ ಸೇತುವೆ ಸಂಪೂರ್ಣ ಕೊಚ್ಚಿಹೋಗಿದ್ದು ಇದನ್ನು ನಿರ್ಮಿಸಲು ನವಂಬರ್ 2021 ವರಗೆ ಕಾಯಬೇಕಾಯಿತ್ತು. ಆದರೆ ಈ ಸೇತುವೆಯನ್ನು ಕಳಪೆ ಮಟ್ಟದಲ್ಲಿ ನಿರ್ಮಿಸಿ ಗ್ರಾಮದ ಜನರು ಇನ್ನೂ ಹೆಚ್ಚಿನ ಅತಂಕದಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೇತುವೆಯ ಅಕ್ಕ ಪಕ್ಕದಲ್ಲಿ ಕಂದಕಗಳು ಉಂಟಾಗಿದ್ದು ಕಲ್ಲು ಗಳು ಕಿತ್ತುಹೋಗಿವೆ. ಹಾಗೆಯೇ ಮಳೆ ನೀರು ನದಿಗೆ ಹೋಗುವಂತೆ ಚರಂಡಿ ನಿರ್ಮಿಸಿಲ್ಲ ಜೊತೆಗೆ ಸೆತುವೆಗೆ ಸರಿಹೊಂದುವಂತೆ ರಸ್ತೆ ಸಂಪರ್ಕ ವನ್ನು  ನಿರ್ಮಿಸಿಲ್ಲ . ಜೇಡಿ ಮಣ್ಣು ಹಾಕಿದ್ದು, ಬೈಕ್ ಕಾರು ಮತ್ತು ಇತರೆ ವಾಹನಗಳು ಸಂಚರಿಸಲು ಅಗದೆ ಜಾರಿ ಬೀಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ  ಈ ಎಲ್ಲಾ…

Read More

ತುಮಕೂರು: ನಗರದ “ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘ”ಕ್ಕೆ ನೂತನ ಅಧ್ಯಕ್ಷರಾಗಿ ನಟರಾಜು ಜಿ.ಎಲ್. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರಿಗೆ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸಿ.ಸಿ.ಬಾರಕೇರ, ಹಳೆಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಶ್ರೀನಿವಾಸಮೂರ್ತಿ.ಟಿ,  ಪ್ರಧಾನ ಕಾರ್ಯದರ್ಶಿ ಯತೀಶ್ ಕುಮಾರ್, ಖಜಾಂಚಿ ಮಹಮದ್ ಗೌಸ್ ಪೀರ್, ಸಂಚಾಲಕ ಬುದ್ದೇಶ್, ನಿರ್ದೇಶಕ ಪವನ್ ಆರ್. ಹಾಗೂ ಸಂಘದ ಪದಾಧಿಕಾರಿಗಳು, ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳು ಅಭಿನಂದನೆಗಳನ್ನು ತಿಳಿಸಿದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ವರದಿ:  ದೊಡ್ಡೇರಿ ಮಹಾಲಿಂಗಯ್ಯ ಮಧುಗಿರಿ: ಕೋಡಿಹಳ್ಳಿ ಆದಿಜಾಂಬವ ಮಹಾಸಂಸ್ಥಾನ ಬೃಹನ್ನಮಠ ಸಂಸ್ಥಾಪಕರಾದ “ಪರಮಪೂಜ್ಯ  ಶ್ರೀ ಶ್ರೀ ಶ್ರೀ ಮಾರ್ಕಂಡೇಯ ಮುನೀ ದೇಶಿಕೇಂದ್ರ ಸ್ವಾಮೀಜಿ’ ಅವರು ಶಾಂತಿ ಹೊಂದಿದ ಹಿನ್ನೆಲೆಯಲ್ಲಿ ಅವರಿಗೆ ಭಾವಪೂರ್ವಕ ಶ್ರದ್ದಾoಜಲಿ ಹಾಗೂ ನುಡಿ ನಮನ ಕಾರ್ಯಕ್ರಮ ಮಧುಗಿರಿಯ ಅಂಬೇಡ್ಕರ್ ಪ್ರತಿಮೆಯ ಬಳಿ ಶನಿವಾರ ನಡೆಯಿತು. ಇ.ಓ.ದೊಡ್ಡ ಸಿದ್ದಯ್ಯ, ಕೃಷಿಇಲಾಖೆ ಎ.ಡಿ.ಹನುಮಂತರಾಯಪ್ಪ, ಸಿದ್ದಪುರ ರಂಗಶಾಮಣ್ಣ, HMT ನರಸಿಪ್ಪ, ದೊಡ್ಡೇರಿ ಮಹಾಲಿಂಗಪ್ಪ, ಅಶೋಕ , ನಾಗೇಶ್ , ಶಿವಕುಮಾರ್,  ಮಂಜುನಾಥ ಐಡಿಹಳ್ಳಿ, ರವಿ, ಯುವರಾಜು, ಬೇಡತ್ತೂರು ತಿಪ್ಪೇ ಸ್ವಾಮಿ, ಪಾಂಡುರಂಗಯ್ಯ, ದೊಡ್ಡಹೊಸಹಳ್ಳಿಮೂರ್ತಿ, ಸಂಜೀವಮೂರ್ತಿ, ಜೀವಿಕಮಂಜು ಹನುಮಂತರಾಯಪ್ಪ,ಸಿದ್ದಾಪುರಸಂಜೀವಯ್ಯ ನಾಗೇನಹಳ್ಳಿಸುನಿಲ್,  ಹಾಗೂ ಸಮಸ್ತ ಮಾದಿಗ ಸಮುದಾಯ ಹಾಗೂ ಮಾದಿಗ ದಂಡೊರ ಸಂಘಟನೆ ಮಧುಗಿರಿ ಕಾರ್ಯಕ್ರಮದಲ್ಲಿ ಭಾಗಿಯಾಯಿತು.  ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿ ಆದಿಜಾಂಬವ ಮಹಾಸಂಸ್ಥಾನ ಬೃಹನ್ನಮಠ ಸಂಸ್ಥಾಪಕರಾದ “ಪರಮಪೂಜ್ಯ  ಶ್ರೀಶ್ರೀಶ್ರೀ ಮಾರ್ಕಂಡೇಯ ಮುನೀ ದೇಶಿಕೇಂದ್ರ ಸ್ವಾಮೀಜಿ’ ರವರು  ಲಿಂಕೈಕ್ಯರಾಗಿದ್ದು,            ಪರಮಪೂಜ್ಯರು ಮಾದಿಗ ಸಮುದಾಯದ ಎಲ್ಗೆಗಾಗಿ, ಬಡವರ ಧ್ವನಿಯಾಗಿ, ನೊಂದವರಿಗೆ ನೆರಳಾಗಿ,…

Read More

ಸಿರಾ: ನಗರದ ಕರ್ನಾಟಕ ಪ್ಲೆಕ್ಸ್ ಮಳಿಗೆಯಲ್ಲಿ ಸಿರಾ ತಾಲ್ಲೂಕು ಕುಂಚ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಭೆಯಲ್ಲಿ ಸಂಘದ ಕಾರ್ಯದರ್ಶಿಯಾದ ಕಲಾಕಾರ್ ಹುಲಿಕುಂಟೆರವರು ಪುನೀತ್  ರಾಜ್ ಕುಮಾರ್ ರವರ ಕುರಿತು ಮಾತನಾಡುತ್ತ, ಅತೀ ಚಿಕ್ಕವಯಸ್ಸಿನಲ್ಲೇ ಬಹುದೊಡ್ಡ ಸಾಧನೆ ಮಾಡಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದು ಹೆತ್ತವರಿಗೆ, ನಾಡಿಗೆ ಕೀರ್ತಿ ತಂದು , ಅಕಾಲಿಕವಾಗಿ ಅಗಲಿದ ಪುನೀತ್ ರಾಜ್ ಕುಮಾರ್ ರವರ ಆತ್ಮಕೆ ಶಾಂತಿ ಸಿಗಲಿ ಎಂದು ಸಂಘದ ಪರವಾಗಿ ಭಗವಂತನಲ್ಲಿ ಪ್ರಾರ್ಥಿಸಿದರು.  ಇದೇ ವೇಳೆಯಲ್ಲಿ ಸಂಚಾಲಕರಾದ ಗಿರಿಧರ್ ರವರು ಮಾತನಾಡುತ್ತ, ಪುನೀತ್ ರಾಜ್ ಕುಮಾರ್ ರವರ ಅಕಾಲಿಕವಾಗಿ  ಅಗಲಿದ ಪರಿಣಾಮ ನಾಡಿಗೆ ಮತ್ತು ತುಂಬಲಾರದ ನಷ್ಟವುಂಟಾಗಿದೆ. ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಭಗವಂತನ ಧೈರ್ಯ ಮತ್ತು ನೋವು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು. ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಆರ್ಟ್ ಸನ್ ಶ್ರೀನಿವಾಸ ರವರು ಮತ್ತು ಅಧ್ಯಕ್ಷರಾದ ಕರ್ನಾಟಕ…

Read More

ಬೆಂಗಳೂರು: ರಾಜ್ಯದ ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಸಿರಿಧಾನ್ಯ ನೀಡಲಾಗುವುದು ಎಂದು ಕೃಷಿ ಸಚಿವ  ಹೇಳಿದ್ದಾರೆ. ಹೊಸದುರ್ಗ ತಾಲ್ಲೂಕಿನ ಸಾಣೆಹಳ್ಳಿ ತರಳಬಾಳು ಶಾಖಾಮಠದಲ್ಲಿ ಆಯೋಜಿಸಿದ್ದ ಶಿವ ಸಂಚಾರ ನಾಟಕೋತ್ಸವ ಬೆಳ್ಳಿ ಹಬ್ಬದ ಸಮಾರಂಭದಲ್ಲಿ ಮಾತನಾಡಿದ ಅವರು, ಶಾಲಾ ಮಕ್ಕಳ ಬಿಸಿಯೂಟಕ್ಕೆ ಸಿರಿಧಾನ್ಯಗಳನ್ನು ನೀಡಲಾಗುವುದು ಎಂದು ತಿಳಿಸಿದರು. 2023ಕ್ಕೆ ಅಂತಾರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮೇಳ ಏರ್ಪಡಿಸಲಾಗುವುದು ಎಂದು ತಿಳಿಸಿದ ಅವರು, ಪ್ರಸ್ತುತ ಪರಿಸ್ಥಿತಿಯಲ್ಲಿ ಸಾವಯವ ಕೃಷಿ ಅಗತ್ಯವಾಗಿದ್ದು, ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗಬೇಕು. ಇದಕ್ಕಾಗಿ ಸರ್ಕಾರ ಉತ್ಪಾದಕ ಸಂಸ್ಥೆ ಸ್ಥಾಪಿಸುವ ಮೂಲಕ ಕೃಷಿಕರಿಗೆ ಬೆಂಬಲ ನೀಡುತ್ತಿದೆ. ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ್ ಅಡಿ 10 ಕೋಟಿ ರೂ. ಮೀಸಲಿಟ್ಟಿದ್ದಾರೆ ಎಂದು ಅವರು ಹೇಳಿದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ರಾಮನಗರ: ನಾನು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುತ್ತೇನೆ ಎನ್ನುವುದು ಶುದ್ಧ ಸುಳ್ಳು. ಉದ್ದೇಶಪೂರ್ವಕವಾಗಿಯೇ ಈ ರೀತಿ ವದಂತಿ ಹಬ್ಬಿಸಲಾಗುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್ ಸ್ಪಷ್ಟಪಡಿಸಿದ್ದಾರೆ. ಯೋಗೇಶ್ವರ್ ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ ಎಂಬ ಬಗ್ಗೆ ಹರಡಿರುವ ಸುದ್ದಿಯ ಬಗ್ಗೆ ಮಾತನಾಡಿದ ಅವರು, ಬಿಜೆಪಿ ನನಗೆ ವಿಧಾನ ಪರಿಷತ್‌ ಸ್ಥಾನದ ಜೊತೆಗೆ ಹಿಂದಿನ ಸರ್ಕಾರದಲ್ಲಿ ಸಚಿವ ಸ್ಥಾನವನ್ನೂ ನೀಡಿದೆ. ಮುಂದೆಯೂ ಅವಕಾಶ ಸಿಗಲಿದೆ. ಆದಾಗ್ಯೂ ಯಾವುದೇ ಹುದ್ದೆಗೆ ಅಪೇಕ್ಷೆ ಪಡದೇ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಮುಂದಿನ ಚುನಾವಣೆಗಳಲ್ಲೂ ಬಿಜೆಪಿ ಅಭ್ಯರ್ಥಿಯಾಗಿಯೇ ಕಣಕ್ಕೆ ಇಳಿಯುತ್ತೇನೆ ಎಂದು ಹೇಳಿದರು. ಪ್ರತಿ ಆರು ತಿಂಗಳಿಗೆ ಒಮ್ಮೆ ನಾನು ಕಾಂಗ್ರೆಸ್‌ ಸೇರುತ್ತೇನೆ ಎಂದು ವದಂತಿ ಹಬ್ಬಿಸಲಾಗುತ್ತಿದೆ. ಇದರ ಹಿಂದೆ ಯಾವ ಉದ್ದೇಶ ಇದೆಯೋ ಗೊತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ತುಮಕೂರು: ತರಕಾರಿ ಬೆಲೆ ಮತ್ತೆ ಗಗನಕ್ಕೆ ಏರಿದ್ದು,  ಇದೀಗ ಕೊತ್ತಂಬರಿ ಸೊಪ್ಪು ಬಿಟ್ಟರೆ ಬೇರೆಲ್ಲ ತರಕಾರಿಗಳು ದುಬಾರಿ ಎನ್ನುವಂತಾಗಿದೆ. ಈ ಪೈಕಿ ಕ್ಯಾಪ್ಸಿಕಂಗೆ ಭಾರೀ ಬೆಲೆ ಏರಿಕೆಯಾಗಿದ್ದು, ಒಂದು ಕೆ.ಜಿ. ಕ್ಯಾಪ್ಸಿಕಂಗೆ ಬರೊಬ್ಬರಿ 100 ರೂಪಾಯಿಗಳಾಗಿವೆ. ಕ್ಯಾಪ್ಸಿಕಂ ಬೆಲೆ 100 ರೂ ಆಗಿದ್ದರೆ, ಚಿಲ್ಲರೆಯಾಗಿ ಇದು ಮಾರಾಟವಾಗುತ್ತಿರುವ ಸಂದರ್ಭದಲ್ಲಿ  120–140ರವರೆಗೂ ಹಣ ಪೀಕಿಸಲಾಗುತ್ತಿದೆ. ಇನ್ನೊಂದೆಡೆ ಹೂ ಕೋಸಿಗೆ ಕೂಡ ತೀವ್ರ ಬೆಲೆ ಏರಿಕೆಯಾಗಿದೆ. ಒಂದು ಹೂಕೋಸು ಬೆಲೆ 50 ರೂಪಾಯಿಗೂ ಅಧಿಕವಾಗಿ ಏರಿಕೆಯಾಗಿದೆ. ಸದ್ಯ ತರಕಾರಿ ಮಾರುಕಟ್ಟೆಯಲ್ಲಿ  ಬಹುತೇಕ ತರಕಾರಿಗಳು 80ರಿಂದ 100 ರೂಪಾಯಿಗಳವರೆಗೆ ಮಾರಾಟವಾಗುತ್ತಿದೆ. ಇನ್ನೊಂದು ಅಚ್ಚರಿಯ ವಿಚಾರ ಏನೆಂದರೆ, ಸೊಪ್ಪುಗಳಿಗೆ ಕೂಡ ಬೆಲೆ ಏರಿಕೆಯಾಗಿದೆ. ಇನ್ನೊಂದೆಡೆ ಮೀನು, ಮಾಂಸಗಳಿಗೂ ಬೆಲೆ ಏರಿಕೆಯಾಗಿದೆ. ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ

Read More