Subscribe to Updates
Get the latest creative news from FooBar about art, design and business.
- ತುಮಕೂರು: ವಿವಿಧ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
- ಜುಲೈ 1: ರಾಷ್ಟ್ರೀಯ ಪತ್ರಿಕಾ ದಿನ: ಪತ್ರಿಕಾ ದಿನಾಚರಣೆಯ ಶುಭಾಶಯಗಳು
- ಮನೆ ಮುಂದೆ ಕಸ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಕಂಬಕ್ಕೆ ಕಟ್ಟಿಹಾಕಿ ಮಹಿಳೆಗೆ ಹಲ್ಲೆ!
- ಬಿಗ್ ಬಾಸ್ ಸೀಸನ್ 12ಕ್ಕೂ ಕಿಚ್ಚ ಸುದೀಪ್ ನಿರೂಪಣೆ ಫಿಕ್ಸ್!
- ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: 8 ಕಾರ್ಮಿಕರು ಸಾವು
- DIGITAL ARREST ಬಗ್ಗೆ ಎಚ್ಚರವಿರಲಿ!
- ಆಷಾಢ ಏಕಾದಶಿ ಪ್ರಯುಕ್ತ ಪಂಢರಪುರಕ್ಕೆ ವಿಶೇಷ ರೈಲು
- ತುಮಕೂರು: 3ನೇ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿ
Author: admin
ಕೊರಟಗೆರೆ: ಪಟ್ಟಣದ ಪ್ರಸಿದ್ದ ಗಂಗಾಧರೇಶ್ವರಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚನೆಯಾಗಿದ್ದು, ಅಧ್ಯಕ್ಷರಾಗಿ ಕೆ.ವಿ.ಪುರುಷೋತ್ತಮ ಅವಿರೋಧವಾಗಿ ಆಯ್ಕೆಯಾದರು. ಕರ್ನಾಟಕ ಸರ್ಕಾರ, ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಸುತ್ತೋಲೆ ಹಾಗೂ ಅಧ್ಯಕ್ಷರು ಜಿಲ್ಲಾ ಧಾರ್ಮಿಕ ಪರಿಷತ್ತು ಹಾಗೂ ಜಿಲ್ಲಾಧಿಕಾರಿ ತುಮಕೂರು ಇವರ ನಡವಳಿಕೆಯಂತೆ ಶ್ರೀ ಗಂಗಾಧರೇಶ್ವರಸ್ವಾಮಿ ದೇವಸ್ಥಾನಕ್ಕೆ ತಾಲೂಕು ಕಛೇರಿಗೆ ವ್ಯವಸ್ಥಾಪನಾ ಸಮಿತಿಗೆ ಸಾರ್ವಜನಿಕರಿಂದ ಅರ್ಜಿ ಸಲ್ಲಿಸಲಾಗಿತ್ತು, ಸರ್ಕಾರದ ನಿಯಮದಂತೆ ಆರ್ಚಕ ಬಾಲಾಜಿ, ಕೆ.ರಾಘವೇಂದ್ರ, ಎಸ್.ಸುಷ್ಮಾರಾಣಿ, ಆರ್,ಎನ್.ನೇತ್ರಾ, ಡಾ.ಮಲ್ಲಿಕಾರ್ಜುನ್, ಕೆ.ವಿ.ಪುರುಷೋತ್ತಮ, ಕೆ.ಎನ್.ಗಂಗಾಧರ, ಕೆ.ಎಲ್.ಗಿರೀಶ್, ಕೆ.ಎನ್.ಮಂಜುನಾಥ ಸೇರಿದಂತೆ 9 ಸದಸ್ಯರ ಸಮಿತಿ ರಚನೆಗೊಂಡಿತು, ಸೋಮವಾದಂದು ನಡೆದ ಅಧ್ಯಕ್ಷ ಚುಣಾವಣೆಯಲ್ಲಿ ತಾಲೂಕು ತಹಸೀಲ್ದಾರ್ ನಾಹಿದಾ ಜಮ್ ಜಮ್ ರವರು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಅಧ್ಯಕ್ಷ ಸ್ಥಾನಕ್ಕೆ ಎಲ್ಲಾ ಸದಸ್ಯರು ಕೆ.ವಿ.ಪುರುಷೋತ್ತಮ ರವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು. ಆಯ್ಕೆ ಪ್ರಕ್ರಿಯೆ ನಂತರ ತಹಶೀಲ್ದಾರ್ ನಹಿದಾ ಜಮ್ ಜಮ್ ಮಾತನಾಡಿ, ಸರ್ಕಾರದ ಸುತ್ತೋಲೆಯಂತೆ ಸಿ, ವರ್ಗದ ಶ್ರೀ ಗಂಗಾಧರೇಶ್ವರಸ್ವಾಮಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಗೆ 9 ಅರ್ಜಿಗಳು ನಮ್ಮ ಕಛೇರಿಗೆ ಸಲ್ಲಿಯಾಗಿದ್ದವು,…
ತುಮಕೂರು: ಮಹೇಶ್ ಪಿಯು ಶಿಕ್ಷಣ ಸಂಸ್ಥೆಯು ರಾಜ್ಯದಲ್ಲಿ ಒಂದೊಳ್ಳೆ ಶಿಕ್ಷಣ ಸಂಸ್ಥೆಯಾಗಿದ್ದು, ತುಮಕೂರು ಜಿಲ್ಲೆಯಲ್ಲಿ ಹೆಸರಾಂತ ಶಿಕ್ಷಣ ಸಂಸ್ಥೆಯಾಗಿದೆ,ಎಂದು ತುಮಕೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸ್ವಾಮೀಜಿಯವರು ತಿಳಿಸಿದರು. ಪಟ್ಟಣದ ಅಶೋಕ ನಗರದಲ್ಲಿರುವ ಮಹೇಶ್ ಪಿಯು ಕಾಲೇಜಿನಲ್ಲಿ ಬುಧವಾರ “ವಿವೇಕಾನಂದ ಸ್ಟಡಿ ಸೆಂಟರ್” ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಂಡಿದ್ದ ಸಂದರ್ಭದಲ್ಲಿ, ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕತ್ತಲಿನಿಂದ ಬೆಳಕಿನ ನಡೆಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ, ದಾರಿ ತೋರುವವನು ಗುರುವಾಗಿದ್ದಾನೆ. ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಇಂದಿನ ಶಿಕ್ಷಣ ಕ್ಷೇತ್ರದಲ್ಲಿ, ಮಹೇಶ್ ಪಿಯು ಶಿಕ್ಷಣ ಸಂಸ್ಥೆಯು ರಾಜ್ಯ ವ್ಯಾಪ್ತಿಯಲ್ಲಿ ಉತ್ತಮ ಹೆಗ್ಗಳಿಕೆಗೆ ಪಾತ್ರವಾಗಿದ್ದು, ನಮ್ಮ ತುಮಕೂರು ಜಿಲ್ಲೆಯಲ್ಲಿಯೂ ಸಹ ಪ್ರತಿವರ್ಷವೂ ಉತ್ತಮ ಫಲಿತಾಂಶ ನೀಡುವ ಶಿಕ್ಷಣ ಸಂಸ್ಥೆಯಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಿಂದಲೇ ರಾಜ್ಯವ್ಯಾಪ್ತಿ ಸೇರಿದಂತೆ ರಾಷ್ಟ್ರವ್ಯಾಪ್ತಿಗಳಲ್ಲೂ ಉತ್ತಮ ವಿದ್ಯಾರ್ಥಿಗಳನ್ನು ತಮ್ಮ ಸಂಸ್ಥೆಯಿಂದ ಕೊಡುಗೆಯಾಗಿ ನೀಡಲಿ ಎಂದು ಆಶೀರ್ವದಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳು ಮತ್ತು ನಾಗರಿಕರು, ಭಾರತ ದೇಶ ಏನೆಂಬುದು…
ತಿಪಟೂರು: ನಗರದ ತ್ರಿಮೂರ್ತಿ ಥಿಯೇಟರ್ ನಲ್ಲಿ ಜೇಮ್ಸ್ ಚಿತ್ರ ಇಂದು ಪ್ರದರ್ಶನಗೊಳ್ಳುತ್ತಿದ್ದು, ಪುನೀತ್ ರಾಜಕುಮಾರ್ ಅಭಿಮಾನಿಗಳು ಜೇಮ್ಸ್ ಸಿನಿಮಾದ ಬ್ಯಾನರ್ ಗಳನ್ನು ಹಾಕಿ ಸಂಭ್ರಮಿಸಿದ್ದಾರೆ. ಇನ್ನು ತ್ರಿಮೂರ್ತಿ ಥಿಯೇಟರ್ ಕಲರ್ಫುಲ್ ನಲ್ಲಿ ಮಿಂಚುತ್ತಿದೆ ಅಭಿಮಾನಿಗಳು ಸಿನಿಮಾ ವೀಕ್ಷಿಸಲು ಬೆಳಗಿನಿಂದಲೇ ಕಾದು ಕುಳಿತಿರುವುವ ದೃಶ್ಯ ಕಂಡು ಬಂತು. ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳೂ ಹಾಕಿರುವ ಬ್ಯಾನರ್ ಗಳಲ್ಲಿ ಅಪ್ಪು ನೀವೆಂದು ಅಮರ ಎಂದು ಬರೆಯಲಾಗಿದೆ. ಅಪ್ಪು ನಿಧನದ ಸಂಕಟ ಒಂದೆಡೆಯಾದರೆ, ಅವರ ಜೇಮ್ಸ್ ಚಿತ್ರ ಬಿಡುಗಡೆಯ ಸಂಭ್ರಮ ಇನ್ನೊಂದೆಡೆಯಾಗಿದೆ. ಇಂದು ದೇಶಾದ್ಯಂತ ವಿವಿಧ ಭಾಷೆಗಳಲ್ಲಿ ಜೇಮ್ಸ್ ಬಿಡುಗಡೆಯಾಗಲಿದ್ದು, ಸುಮಾರು 4 ಸಾವಿರ ಸಿನಿಮಾ ಮಂದಿರಗಳಲ್ಲಿ ಜೇಮ್ಸ್ ಚಿತ್ರ ಬಿಡುಗಡೆಯಾಗಲಿದೆ. ವರದಿ: ಮಂಜು ಗುರುಗದಹಳ್ಳಿ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಹಿರಿಯೂರು: ಕರ್ನಾಟಕದಾದ್ಯಂತ ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಚಿತ್ರವು ಬಿಡುಗಡೆಯಾಗಿದೆ. ಇದೇ ಸಂದರ್ಭದಲ್ಲಿ ಹಿರಿಯೂರಿನಲ್ಲಿ ನಿನ್ನೆಯೇ ಟಿಕೆಟ್ ಗಳು ಖರೀದಿಯಾಗಿದೆ. ತಾಲ್ಲೂಕಿನ ನಂಜುಂಡೇಶ್ವರ ಚಿತ್ರಮಂದಿರದಲ್ಲಿ ಜೇಮ್ಸ್ ಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ನಿನ್ನೆಯೇ ಪ್ರೇಕ್ಷಕರು ಟಿಕೆಟ್ ಖರೀದಿಸುತ್ತಿರುವುದು ಕಂಡು ಬಂತು. ಒಂದೆಡೆ ಪುನೀತ್ ರಾಜ್ ಕುಮಾರ್ ಅವರು ನಿಧನರಾದ ನೋವು ಇನ್ನೊಂದೆಡೆ ಅವರ ಕೊನೆ ಚಿತ್ರ ನೋಡುವ ಕಾತರ ಈ ಎರಡೂ ಭಾವನೆಗಳನ್ನು ಸಾರ್ವಜನಿಕರು ನಮ್ಮತುಮಕೂರು.ಕಾಂ ಜೊತೆಗೆ ಹಂಚಿಕೊಂಡರು. ಮೈಸೂರಿನ ಶಕ್ತಿ ಧಾಮ ಆಶ್ರಮದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಪುನೀತ್, `ಬೆಂಗಳೂರು ಪ್ರೀಮೀಯರ್ ಪುಟ್ ಬಾಲ್ ತಂಡದ ಒಡೆತನವನ್ನು ಹೊಂದಿದ್ದಾರೆ. ಕರ್ನಾಟಕ ಸರ್ಕಾರದ ನಂದಿನಿ ಹಾಲು ಉತ್ಪನ್ನಗಳು ಮತ್ತು LED ಬಲ್ಬ್ ಗಳ ರಾಯಭಾರಿಯಾಗಿ ಕೂಡ ಆಗಿದ್ದಾರೆ. ಒಂದು ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಭಾರಿಯಾಗಿದ್ದರು ಎಂಬುದಾಗಿ ಪುನೀತ್ ಅಭಿಮಾನಿಗಳು ತುಮಕೂರು ಮಾಧ್ಯಮದ ಮೂಲಕ ತಿಳಿಸಿದರು. ಪುನೀತ್ ರಾಜಕುಮಾರ್ ರವರ ಸಿನಿಮಾ ರಂಗಕ್ಕೆ ನೀಡಿದ ಕೊಡುಗೆ ಮತ್ತು ಸಮಾಜಮುಖಿ ಕಳಕಳಿಯನ್ನು…
ತುಮಕೂರು: ಪತ್ನಿಯನ್ನು ಲಾಡ್ಜ್ ಗೆ ಕರೆತಂದ ಪತಿಯೋರ್ವ, “ಪತ್ನಿಯ ಕಾಲು ಕತ್ತರಿಸಿದ್ದೇನೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಬೇಕು. ನಾಲ್ವರು ಹುಡುಗರನ್ನು ಕಳುಹಿಸಿಕೊಡಿ” ಎಂದು ಹೊಟೇಲ್ ಮಾಲಿಕರಿಗೆ ಕರೆ ಮಾಡಿ ಹೇಳಿದ ವಿಲಕ್ಷಣ ಘಟನೆ ನಡೆದಿದೆ. ತುಮಕೂರಿನ ಅಶೋಕ ಲಾಡ್ಜ್ ನಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಗದಗ ಮೂಲದ 34 ವರ್ಷ ವಯಸ್ಸಿನ ಬಾಬು ಎಂಬಾತ ಈ ಕೃತ್ಯ ನಡೆಸಿದ್ದು, ತುಮಕೂರಿನ ಅಶೋಕ ಲಾಡ್ಜ್ ಗೆ ಬಂದಿದ್ದ ಈತ ಪತ್ನಿಯನ್ನು ಹತ್ಯೆ ಮಾಡುವ ಉದ್ದೇಶದಿಂದ ಬ್ಯಾಗ್ ನಲ್ಲಿ ಮಚ್ಚು ಹಿಡಿದುಕೊಂಡು ಬಂದಿದ್ದ ಎನ್ನಲಾಗಿದೆ. ಲಾಡ್ಜ್ ನಲ್ಲಿ ಪತ್ನಿ, ಮಧುಗಿರಿ ಮೂಲದ ಅನಿತಾ ಅವರ ಕಾಲಿಗೆ ಮಚ್ಚಿನಿಂದ ಗಾಯಗೊಳಿಸಿದ್ದು, ಬಳಿಕ ತಾನೂ ಹೊಟ್ಟೆಗೆ ಚೂರಿ ಹಾಕಿಕೊಂಡು ಹೈಡ್ರಾಮಾ ಆಡಿದ್ದಾನೆ. ಬಳಿಕ ಹೊಟೇಲ್ ಮಾಲಿಕರಿಗೆ ಕರೆ ಮಾಡಿ ಹುಡುಗರನ್ನು ಕರೆಸುವಂತೆ ಹೇಳಿದ್ದಾನೆ ಎನ್ನಲಾಗಿದೆ. ಅನಿತಾ ಅವರನ್ನು ಆರೋಪಿಯು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡ ಅನಿತಾ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಬಾಬುನನ್ನು ತುಮಕೂರು…
ತುಮಕೂರು: ತುಮಕೂರಿನಲ್ಲಿ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಶಾಕ್ ನೀಡಿದ್ದು, ಮೂರು ಕಡೆಯ ಫಾಮ್ ಹೌಸ್ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿ ಶ್ರೀನಿವಾಸ್ ಎಂಬುವವರಿಗೆ ಸೇರಿದ ತುಮಕೂರು ತಾಲ್ಲೋಕಿನ ಕೌತಮಾರನಹಳ್ಳಿ, ಕಟ್ಟಿಗೆ ಗೊಲ್ಲಹಳ್ಳಿ ಹಾಗೂ ಮಧುಗಿರಿ ತಾಲ್ಲೂನ ಪುರವರ ಬಳಿಯಿರುವ ಎ.ಜಿ.ಒ. ಫಾರ್ಮ್ ಹೌಸ್ ಮೇಲೆ ಮೇಲೆ ದಾಳಿ ನಡೆಸಿದ ಎ.ಸಿ.ಬಿ. ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಪರಿಶೀಲಿಸಿ ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀನಿವಾಸ್ ಎಂಬುವವರ ಮನೆಗಳಮೇಲೆ ದಾಳಿ ನಡೆದಿದ್ದು, ದಾಳಿಯ ವೇಳೆ ಎ.ಸಿ.ಬಿ.ಯ ಹದಿನಾರು ಮಂದಿ ಅಧಿಕಾರಿಗಳು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ. ಬುಧವಾರ ಬೆಳಿಗ್ಗೆ 7 ಗಂಟೆಯಿಂದ ದಾಳಿ ಪ್ರಾರಂಭವಾಗಿದ್ದು ಏಕ ಕಾಲದಲ್ಲಿ ಶ್ರೀನಿವಾಸ್ ರವರಿಗೆ ಸೇರಿರುವ ಮನೆಗಳು ಹಾಗೂ ಫಾರಗಮ್ ಹೌಸ್ ನ ಮೇಲೆ ದಾಳಿ ನಡೆದು ದಾಖಲೆಗಳ ಪರಿಶೀಲನೆ ನಡೆಯಿತು. ವರದಿ: ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ…
ಪಾವಗಡ: ಪಾವಗಡ ತಾಲೂಕಿನಲ್ಲಿ ಕೊಡಿಗೆಹಳ್ಳಿ ಗ್ರಾಮದ ಲೋಕೇಶ್ ಅವರ ಪುತ್ರಿ ಪ್ರತಿಕ್ಷಾ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಬೆಂಗಳೂರಿನ ರಾಜ್ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಗುವಿನ ಚಿಕಿತ್ಸೆಗೆ ಪಾವಗಡದ ಹೆಲ್ಪ್ ಸೊಸೈಟಿ ನೆರವು ನೀಡಿತು. ಧನು ಸಿಂಹಾದ್ರಿ ಪಾವಗಡ, ಸೂರಿ ಮಧುಸೂದನ್, ಅನಿಲ್ ಕುಮಾರ್ ಪಾವಗಡ ಸೇರಿದಂತೆ ಹಲವರು ಮಗುವಿನ ಚಿಕಿತ್ಸೆಗೆ ನೆರವು ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡಿದ್ದರು. ಈ ಸಂದೇಶವನ್ನು ನೋಡಿದ ಪಾವಗಡದ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಅವರು ಸ್ಪಂದಿಸಿದ್ದಾರೆ. ಹೆಲ್ಪ್ ಸೊಸೈಟಿ ಕಚೇರಿಯಲ್ಲಿ ಮಗುವಿನ ಚಿಕಿತ್ಸೆಗೆ ನೆರವನ್ನು ನೀಡಲಾಯಿತು. ಬಳಿಕ ಮಾತನಾಡಿದ ಶಶಿಕಿರಣ್, ಸಾಮಾಜಿಕ ಜಾಲತಾಣಗಳಲ್ಲಿನ ಸಂದೇಶಗಳನ್ನು ನೋಡಿ ಅವರಿಗೆ ಏನಾದರೂ ಸಹಾಯ ಮಾಡಬೇಕು ಎಂದು ನನಗೆ ಅನ್ನಿಸಿತು. ಆ ಪುಟ್ಟ ಕಂದಮ್ಮನಿಗೆ ನಮ್ಮ ಕೈಲಾದಷ್ಟು ಆರ್ಥಿಕ ನೆರವನ್ನು ನೀಡಿದ್ದೇವೆ. ಇದೇ ರೀತಿ ಪಾವಗಡ ತಾಲೂಕಿನ ಎಲ್ಲಾ ವರ್ಗದ ಜನರು ಕೂಡ ಮಗುವಿಗೆ ನೆರವಾಗಲು ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು. ಇದೇ…
ಸರಗೂರು: ಮುಂದಿನ ದಿನಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಆರ್ .ಚೇತನ್ ಅವರು ತಿಳಿಸಿದರು. ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿರುವ ಜನಧ್ವನಿ ಸಮುದಾಯ ಬಾನುಲಿ ಕೇಂದ್ರದಲ್ಲಿ ನಡೆದ ನೇರಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಕುರಿತು ಸಾಕಷ್ಟು ದೂರುಗಳು ಬರುತ್ತಿವೆ. ಇದನ್ನು ನಿಯಂತ್ರಿಸಲು ಇಲಾಖೆಯು ಸಂಪೂರ್ಣವಾಗಿ ಸಿದ್ಧತೆಗೊಂಡಿದೆ ಎಂದರು. ಹಾಡಿಗಳಿಗೆ ಹೆಚ್ಚಿನ ರೀತಿಯಲ್ಲಿ ಅಕ್ರಮ ಮದ್ಯ ಸರಬರಾಜು ಆಗುತ್ತಿದೆ. ಅಕ್ರಮ ಮದ್ಯ ಮಾರಾಟದಲ್ಲಿ ಎಷ್ಟೇ ಪ್ರಭಾವಿ ವ್ಯಕ್ತಿಗಳು ಒಳಗೊಂಡಿದ್ದರು ಸಹ ಅವರ ವಿರುದ್ಧವು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಹೇಳಿದರು. ಇನ್ನೂ ಸಂಚಾರಿ ನಿಯಮಗಳ ಬಗ್ಗೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಲಾಖೆಯು ಮುಂದಿನ ದಿನಗಳಲ್ಲಿ ಕಿರು ನಾಟಕವನ್ನು ಏರ್ಪಡಿಸಲಾಗುವುದು. ಆರೋಗ್ಯದ ದೃಷ್ಠಿಯಿಂದ ದಯವಿಟ್ಟು ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡಿ. ಹಾಗೂ ವಾಹನಗಳಿಗೆ ವಿಮೆಯನ್ನು ಕಡ್ಡಾಯವಾಗಿ ಮಾಡಿಸಿ ಎಂದು…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪ್ರಧಾನ ರಸ್ತೆಯಾದ ಗಾಂಧಿಸರ್ಕಲ್ ನಿಂದ ಹಿರಿಯೂರು ನಗರದ ರಂಜಿತ ಲಾಡ್ಜ್ ನವರೆಗೂ ಬೀದಿ ದೀಪಗಳು ಕೆಟ್ಟು ಹೋಗಿ ತಿಂಗಳುಗಳೇ ಕಳೆದರೂ ಸಂಬಂಧಪಟ್ಟ ಆಡಳಿತ ಅಧಿಕಾರಿಗಳು ಹಾಗು ಸ್ಥಳೀಯ ಶಾಸಕರು ಇದರ ಬಗ್ಗೆ ಗಮನಹಿಸದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರು ಹಾಗೂ ಬಾಂಬೆ , ರಾಯಚೂರು ಹುಬ್ಬಳ್ಳಿ-ಧಾರವಾಡ ಕ್ಕೆ ತೆರಳುವಂತಹ ಪ್ರಧಾನ ರಸ್ತೆ ಇದಾಗಿದ್ದು, ಗಾಂಧಿಸರ್ಕಲ್ ನಿಂದ ಹಿರಿಯೂರು ಸಾರಿಗೆ ಬಸ್ ನಿಲ್ದಾಣ ಹಾಗೂ ರಂಜಿತ ಲಾಡ್ಜ್ ನವರೆಗೂ ಸಹ ಬೀದಿ ದೀಪಗಳು ಕೆಟ್ಟುಹೋಗಿದ್ದು, ಈವರೆಗೆ ಸಂಬಂಧಪಟ್ಟ ಆಡಳಿತ ಅಧಿಕಾರಿಗಳಾಗಲಿ , ಸ್ಥಳೀಯ ಶಾಸಕರಾಗಲಿ ಇದರ ಬಗ್ಗೆ ಸ್ವಲ್ಪವೂ ಸಹ ಗಮನಹರಿಸಿಲ್ಲ ಎನ್ನುವ ಅಸಮಾಧಾನ ಸಾರ್ವಜನಿಕರಿಂದ ಕೇಳಿ ಬಂದಿದೆ. ಬೀದಿ ದೀಪಗಳಿಲ್ಲದ ಕಾರಣ ಈ ಪ್ರದೇಶಗಳು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದ್ದು, ಈ ಪ್ರದೇಶಗಳಲ್ಲಿ ಸಾರ್ವಜನಿಕರು ಭೀತಿಯಿಂದ ಓಡಾಡುವಂತಾಗಿದೆ ಎಂದು ನಮ್ಮತುಮಕೂರು.ಕಾಂ ಜೊತೆಗೆ ಸಾರ್ವಜನಿಕರು ಅಭಿಪ್ರಾಯ ಹಂಚಿಕೊಂಡರು. ಇನ್ನೂ ಇಲ್ಲಿನ ಸಾರಿಗೆ ಸಂಸ್ಥೆಯ ವ್ಯವಸ್ಥೆಯು ಸಹ ಹದಗೆಟ್ಟಿದೆ…
ತಿಪಟೂರು: ಪರಿಶಿಷ್ಟಜಾತಿ ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆಯು, ನಗರದ ಕಲ್ಪತರು ಸಭಾಂಗಣ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಅಶೋಕ್, ಗೌಡನಕಟ್ಟೆ ದಲಿತರಿಗೆ ಈ ರಾಜ್ಯದಲ್ಲಿ ಆಗುತ್ತಿರುವ ಅನ್ಯಾಯಗಳ ಬಗ್ಗೆ ತಹಸೀಲ್ದಾರ್ ಅವರ ಗಮನ ಸೆಳೆದರು. ತಾಲೂಕಿನ ಹೋನವಳ್ಳಿ ಹೋಬಳಿಯ ಗುರುಗದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಗುರುಗದಹಳ್ಳಿ ಕಾಲೋನಿಯಲ್ಲಿ ಖಾಲಿ ಜಾಗವಿದ್ದು, ಈ ಜಾಗ ಪಕ್ಕದ ಮನೆಯವರು ಈ ಜಾಗ ನಮ್ಮದು ಎಂದು ಕಾಲೋನಿಯ ನಿವಾಸಿಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಈ ಸಂಬಂಧ ನಾವು ನಿಮ್ಮ ಗಮನಕ್ಕೆ ತಂದಿದ್ದೇವೆ. ಈ ಜಾಗವನ್ನು ಅಳತೆ ಮಾಡಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಂಜೂರು ಮಾಡಬೇಕೆಂದು ತಹಶೀಲ್ದಾರ್ ಗೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹಾಗೂ ತಾಲೂಕು ಪಂಚಾಯಿತಿ ಇಓ ಸುದರ್ಶನ್, ತಾಲೂಕು ಡಿಎಸ್ಎಸ್ ಅಧ್ಯಕ್ಷ ಅಶೋಕ ಗೌಡನಕಟ್ಟೆ, ತಾಲೂಕು ಉಪಾಧ್ಯಕ್ಷ ಮತ್ತಿಘಟ್ಟ ಶಿವಕುಮಾರ್, ಪರಿಶಿಷ್ಟ ಜಾತಿ-ಪರಿಶಿಷ್ಟಪಂಗಡದ ಮುಖಂಡರುಗಳು ಭಾಗಿಯಾಗಿದ್ದರು. ವರದಿ:…