Author: admin

ಕಲ್ಪತರು ನಾಡಿನಲ್ಲಿ ವಿದ್ಯಾ ರ್ಥಿಗಳ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿದ್ದು ಕಳೆದ ಒಂದು ವಾರದಿಂದ ಮೂವರು ನೇಣಿಗೆ ಕೊರಳೊಡ್ಡಿದ್ದು ಪೋಷಕರಲ್ಲಿ ಆತಂಕ ಎದುರಾಗಿದೆ. ಕಳೆದ ಸೋಮವಾರ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 6ನೇ ಸೆಮಿಸ್ಟರ್‍ನಲ್ಲಿ ಓದುತ್ತಿದ್ದ ಮಹಾರಾಷ್ಟ್ರ ಮೂಲದ ಸೋಹನ್‍ನಾಥ್ ಬಾಲಂಕರ್, ಮತ್ತೊಂದು ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಮೈಸೂರು ಮೂಲದ ವಿದ್ಯಾರ್ಥಿನಿ ಶುಕ್ರವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡರೆ, ಹಿರಿಯೂರು ಮೂಲದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಾರದಲ್ಲಿ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. ದ್ವಿತೀಯ ಪಿಯುಸಿ ಆಂತರಿಕ ಪಠ್ಯದಲ್ಲಿ ಕಡಿಮೆ ಅಂಕ ಬಂದಿತೆಂದು ಮನನೊಂದು ಪ್ರಮೋದ್ ನೇಣಿಗೆ ಶರಣಾಗಿದ್ದರೆ, ಉಳಿದ ಇಬ್ಬರು ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದುಬಂದಿಲ್ಲ. ಈ ಘಟನೆಯಿಂದ ಇಡೀ ನಗರವೇ ಬೆಚ್ಚಿಬಿದ್ದಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೋಲೀಸರು ವಿದ್ಯಾರ್ಥಿಗಳ ಆತ್ಮಹತ್ಯೆಗೆ ನಿಖರ ಕಾರಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.…

Read More

ತಿಪಟೂರು: ವಾಹನ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳುತ್ತಿಲ್ಲ. ಬಹುತೇಕ ದ್ವಿಚಕ್ರ ಸವಾರರು ಹ್ಯಾಂಡ್ ಲಾಕ್ ಮಾಡದೇ ಹಾಗೆಯೇ ಬೈಕ್ ನ್ನು ಬಿಟ್ಟು ಹೋಗುತ್ತಿರುವುದು ಬೈಕ್ ಕಳ್ಳರಿಗೆ ವರದಾನವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಬಿಸಿ ಮುಟ್ಟಿಸಲು ಪೊಲೀಸರೇ ಕಾರ್ಯಾಚರಣೆಗಿಳಿದ ಘಟನೆ ತಿಪಟೂರಿನಲ್ಲಿ ನಡೆದಿದೆ. ತಿಪಟೂರು ನಗರ ಠಾಣೆ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ,  ಹ್ಯಾಂಡ್ ಲಾಕ್ ಮಾಡದೆ ವಾಹನ ಸವಾರರು ಜಾಗರೂಕತೆಯಿಂದ ಬಿಟ್ಟು ಹೋದ ವಾಹನಗಳು ಹಾಗೂ ವಾಹನದಲ್ಲೇ  ಕೀ ಬಿಟ್ಟು ಹೋದ ನೂರಾರು ವಾಹನಗಳನ್ನ ವಶಕ್ಕೆ ಪಡೆದರು. ನಗರಠಾಣೆ ವೃತ್ತನಿರೀಕ್ಷಕರಾದ ಶ್ರೀಶೈಲಕುಮಾರ್, ನಗರಠಾಣಾ ಸಬ್ ಇನ್ಸ್ ಪೆಕ್ಟರ್ ದ್ರಾಕ್ಷಣಮ್ಮ, ಶಿವಣ್ಣ,  ಕೃಷ್ಣಕುಮಾರ್, .ಎಎಸ್ ಐ ನಿಸಾರ್,  ರಾಮಣ್ಣ ಸೇರಿದಂತೆ ಸಿಬ್ಬಂದಿ ಭಾಗವಹಿಸಿದರು . ನಗರದ ಬಿ.ಹೆಚ್.ರಸ್ತೆ, ಕೆ.ಎಸ್ ಆರ್.ಟಿ ಸಿ ಬಸ್ ಸ್ಯಾಂಡ್ ರಸ್ತೆ ಹಾಗೂ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ರಸ್ತೆ ಸೇರಿದಂತೆ ವಿವಿಧೆಡೆ ಕಾರ್ಯಾಚರಣೆ ನಡೆಸಲಾಯಿತು  ವರದಿ: ಆನಂದ ತಿಪಟೂರು…

Read More

ಬೆಂಗಳೂರು, ಜೂ. ೧೦- ರಾಜ್ಯದಲ್ಲಿ ಬಿಜೆಪಿಯ ಬಿ ಟೀಮ್ ಸಿದ್ದರಾಮಯ್ಯ ಎಂಬುದು ರಾಜ್ಯಸಭಾ ಚುನಾವಣೆಯಿಂದ ಜಗಜ್ಜಾಹೀರಾಗಿದೆ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇನ್ನು ಮುಂದೆ ಕಾಂಗ್ರೆಸ್ ಜತೆ ಯಾವತ್ತೂ ಮೈತ್ರಿ ಇಲ್ಲ. ಡೋರ್ ಕ್ಲೋಸ್ ಎಂದಿದ್ದಾರೆ.ರಾಜ್ಯಸಭಾ ಚುನಾವಣೆಯ ಮತದಾನ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂಬ ಮನವಿಗೆ ಕಾಂಗ್ರೆಸ್ ಸ್ಪಂದಿಸಿಲ್ಲ. ಈ ಚುನಾವಣೆಯ ಮೂಲಕ ರಾಜ್ಯದಲ್ಲಿ ಬಿಜೆಪಿಯ ಬಿ ಟೀಮ್ ಸಿದ್ದರಾಮಯ್ಯ ಎನ್ನುವುದು ಜಗಜ್ಜಾಹೀರಾಗಿದೆ ಎಂದರು.ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಜೆಡಿಎಸ್‌ಗೆ ೨ನೇ ಪ್ರಾಶಸ್ತ್ಯ ಮತ ನೀಡಿದ್ದರೂ ಸಾಕಾಗಿತ್ತು. ಆದರೆ ಅವರು ಬಿಜೆಪಿಯನ್ನು ಗೆಲ್ಲಿಸಲು ನಮಗೆ ಬೆಂಬಲ ನೀಡಿಲ್ಲ. ಜನ ಎಲ್ಲವನ್ನು ತೀರ್ಮಾನ ಮಾಡುತ್ತಾರೆ ಎಂದರು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜತೆ ಮೈತ್ರಿಗೆ ಹೋಗಲ್ಲ. ಮೈತ್ರಿ ಎಂಬುದು ಮುಗಿದ ಅಧ್ಯಾಯ. ನಾಳೆಯಿಂದ ರಾಜ್ಯದಲ್ಲಿ ಹೊಸ ಇತಿಹಾಸ ಆರಂಭವಾಗಲಿದೆ ಎಂದರು.ಜೆಡಿಎಸ್‌ನ ೩೨ ಶಾಸಕರ ಪೈಕಿ ೩೧ ಶಾಸಕರು ಜೆಡಿಎಸ್ ಅಭ್ಯರ್ಥಿ ಕುಪೇಂದ್ರರೆಡ್ಡಿಯವರಿಗೆ…

Read More

ಸುಂಕದಕಟ್ಟೆ ಬಳಿ ಯುವತಿಯೊಬ್ಬರ ಮೇಲೆ ಭಗ್ನಪ್ರೇಮಿ ನಡೆಸಿದ ಆಸಿಡ್ ದಾಳಿ ಕೃತ್ಯವು ಮಾಸುವ ಮುನ್ನವೇ ನಗರದಲ್ಲಿ ಮಹಿಳೆಯೊಬ್ಬರ ಮೇಲೆ ಇಂದು ಹಾಡುಹಗಲೇ ಆಸಿಡ್ ದಾಳಿ ನಡೆದಿರುವುದು ಜನರನ್ನು ಬೆಚ್ಚಿ ಬೀಳಿಸಿದೆ. ವಿವಾಹವಾಗಲು ಒಪ್ಪದಿದ್ದರಿಂದ ಮೂರು ಮಕ್ಕಳಿದ್ದ ೩೨ ವರ್ಷದ ಮಹಿಳೆಯ ಮೇಲೆ ಆಕ್ರೋಶಗೊಂಡ ವ್ಯಕ್ತಿಯೊಬ್ಬರು ಆಸಿಡ್ ದಾಳಿ ನಡೆಸಿದ ಮೃಗೀಯ ಕೃತ್ಯ ಕುಮಾರಸ್ವಾಮಿ ಲೇಔಟ್ ನಲ್ಲಿ ನಡೆದಿದ್ದು ಆತಂಕಕ್ಕೆ ಕಾರಣವಾಗಿದೆ. ಆಸಿಡ್ ದಾಳಿಗೊಳಗಾಗಿರುವ ಮಹಿಳೆಯ ಮುಖಕ್ಕೆ ಕಣ್ಣಿಗೆ ಹಾನಿಯುಂಟಾಗಿದ್ದು ಸಂಜಯಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಕೆಯು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ. ದಾಳಿ ನಡೆಸಿ ಪರಾರಿಯಾಗಿರುವ ಮಹಿಳೆಯ ಸಹೋದ್ಯೋಗಿ ಗೋರಿಪಾಳ್ಯದ ಆರೋಪಿ ಅಹ್ಮದ್ ಸುಳಿವು ದೊರೆತಿದ್ದು ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದರು. ಸಂತ್ರಸ್ತ ಮಹಿಳೆ ಹಾಗೂ ಆರೋಪಿಯು ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯ ಕರ್ನಾಟಕ ಅಗರಬತ್ತಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಮಹಿಳೆಗೆ ವಿವಾಹವಾಗಿ ಮೂವರು ಮಕ್ಕಳಿದ್ದು ಪತಿಯನ್ನು ತೊರೆದಿದ್ದ ಆಕೆ ವಿಚ್ಛೇದನ ಪಡೆದಿದ್ದರು.ಆರೋಪಿಗೆ ಕೂಡ…

Read More

ಪ್ರವಾದಿ ಮುಹಮ್ಮದ್ ಅವರ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿ ಅಮಾನತ್ತು ಗೊಂಡಿರುವ ಬಿಜೆಪಿ ನಾಯಕಿ ನೂಪರ್ ಶರ್ಮಾ ವಿರುದ್ದ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.ಪ್ರವಾದಿ ವಿವಾದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ ಪ್ರಚೋದನಾತ್ಮಕ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಶರ್ಮಾ ವಿರುದ್ಧ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡನೇ ಎಫ್‌ಐಆರ್‌ನಲ್ಲಿ ಬಿಜೆಪಿಯ ನವೀನ್ ಜಿಂದಾಲ್, ಪತ್ರಕರ್ತೆ ಸಾಬಾ ನಖ್ವಿ ಮತ್ತು ಇತರ ಕೆಲವರ ಹೆಸರಿದ್ದು, ಇಬ್ಬರನ್ನೂ ವಿಶೇಷ ಘಟಕ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.ಎಫ್‌ಐಆರ್‌ನಲ್ಲಿ ನದೀಮ್, ಅಬ್ದುರ್ ರೆಹಮಾನ್, ಗುಲ್ಜಾರ್ ಅನ್ಸಾರಿ ವ್ಯಕ್ತಿಗಳನ್ನು ಹೆಸರಿಸಲಾಗಿದೆ, ದೆಹಲಿ ಪೊಲೀಸರು ಆರೋಪಿಗಳಿಗೆ ಸಮನ್ಸ್ ಕಳುಹಿಸುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. “ದ್ವೇಷದ ಭಾಷಣ ಮಾಡುವ , ವಿವಿಧ ಗುಂಪುಗಳು ಹಾಗು ಪ್ರಚೋದಿಸುವ ಮತ್ತು ಸಾರ್ವಜನಿಕ ನೆಮ್ಮದಿಯ ನಿರ್ವಹಣೆಗೆ ಹಾನಿಕಾರಕ ಸನ್ನಿವೇಶಗಳನ್ನು ಸೃಷ್ಟಿಸುವವರ ವಿರುದ್ಧ ದೆಹಲಿ ಪೊಲೀಸರು ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರ…

Read More

ರಷ್ಯಾ-ಉಕ್ರೇನ್ ನಡುವಿನ ಕದನ ಮತ್ತಷ್ಟು ತೀವ್ರ ಸ್ವರೂಪಕ್ಕೆ ತಿರುಗುತ್ತಿರುವ ನಡುವೆಯೇ ಇದೀಗ ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದೆ. ಇದೇ ತಿಂಗಳು ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ನಡೆಯಲಿರುವ ನ್ಯಾಟೋ ಶೃಂಗಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭಾಗವಹಿಸುವುದು ಖಚಿತವಾಗಿದೆ. ಅದೂ ಅಲ್ಲದೆ ಮೈತ್ರಿಗಳ ರಾಷ್ಟ್ರಗಳ ಪಾಲುದಾರ ರಾಷ್ಟ್ರಗಳ ಪೈಕಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಾಲ್ಕು ಹೊಸ ದೇಶಗಳು ಕೂಡ ಭಾಗಿಯಾಗಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನ್ಯಾಟೋ (ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ) ಕಾರ್ಯದರ್ಶಿ ಜನರಲ್ ಮಿರ್ಸಿಯಾ ಜೊಆನ್, ಖಂಡಿತವಾಗಿಯೂ ಇದು ನ್ಯಾಟೋದ ವಿಸ್ತರಣೆ ಹಾಗೂ ತೆರೆದ ಬಾಗಿಲು ನೀತಿಯ ಬಗ್ಗೆ ಪ್ರಮುಖ ಚರ್ಚೆ ನಡೆಯಲಿದೆ. ಫಿನ್ಲೆಂಡ್ ಹಾಗೂ ಸ್ವೀಡನ್ ನಮ್ಮ ಗುಂಪಿಗೆ ಸೇರಲಿದೆ ಎಂಬ ಭಾವನೆಯಿದೆ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಕೂಡ ಭಾಗಿಯಾಗಲಿದ್ದು, ಹಾಗಾಗಿ ಉಕ್ರೇನ್ ಸೇರ್ಪಡೆ ಬಗ್ಗೆ ಕೂಡ ಪ್ರಮುಖವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಝೆಲೆನ್ಸ್ಕಿ ಅಲ್ಲದೆ ಪೆಸಿಫಿಕ್ ಮಹಾಸಾಗರದ ಪ್ರಮುಖ ರಾಷ್ಟ್ರಗಳಾದ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಜಪಾನ್ ಹಾಗೂ ದಕ್ಷಿಣ…

Read More

ತುಮಕೂರು: ಮನೆ ಮುಂದೆ ನಿಲ್ಲಿಸಲಾಗಿದ್ದ ಯಮಹಾ RX 135 ಬೈಕ್ ನ್ನು ಕಳ್ಳರು ರಾತ್ರಿ ವೇಳೆಯಲ್ಲಿ ಕದ್ದೊಯ್ದ ಘಟನೆ ನಡೆದಿದೆ. ನಗರದ ಹನುಮಂತಪುರ ರಸ್ತೆಯ ಕೋತಿತೋಪು ಸರ್ಕಲ್ ನಿನ್ನೆ ರಾತ್ರಿ 1:45ರ ವೇಳೆ ಈ ಘಟನೆ ನಡೆದಿದೆ. ಕಳ್ಳರು ಬೈಕ್ ನ್ನು ಕದ್ದೊಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಾಜಿ ನಗರಸಭಾ ಉಪಾಧ್ಯಕ್ಷ ವಾಲೆ ಚಂದ್ರಯ್ಯನವರ ಪುತ್ರ ವಾಸು ಅವರಿಗೆ ಸೇರಿದ ಬೈಕ್ ಇದಾಗಿದ್ದು, ರಾತ್ರೋರಾತ್ರಿ ಆಗಮಿಸಿದ ಕಳ್ಳರು ಬೈಕ್ ನ್ನು ಕದ್ದೊಯ್ದಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಕಳ್ಳರ ಕೈಚಳಕ ಸೆರೆಯಾಗಿದೆ. ವರದಿ: ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಕುರಾನ್‌ ಗೆ ಅಗೌರವ ತೋರಿಸಿದ್ದಾರೆಂದು ಆರೋಪಿಸಿ ಪ್ರಸಿದ್ಧ ಆಫ್ಘಾನ್ ಫ್ಯಾಷನ್ ಮಾಡೆಲ್ ಸೇರಿದಂತೆ ಮೂವರನ್ನು ತಾಲಿಬಾನ್ ಬಂಧಿಸಿದೆ. ಮಾಡೆಲಿಂಗ್, ಕಾರ್ಯಕ್ರಮಗಳಗೆ ಹೆಸರು ವಾಸಿಯಾದ ಅಜ್ಮಲ್ ಹಖಿಕಿ ಅವರನ್ನು ಬಂಧಿಸಲಾಗಿದೆ ಎಂದು ತಾಲಿಬಾನ್ ಗುಪ್ತಚರ ಸಂಸ್ಥೆ ಟ್ವಿಟರ್‌ ನಲ್ಲಿ ಪೋಸ್ಟ್ ಮಾಡಿದೆ. ಅಜ್ಮಲ್ ಹಖಿಕಿ ಹಾಸ್ಯದ ರೀತಿಯಲ್ಲಿ ಕುರಾನ್‌ ನ ಪದ್ಯಗಳನ್ನು ಅರೇಬಿಕ್‌ ನಲ್ಲಿ ಪಠಿಸಿದ ವಿಡಿಯೋ ವೈರಲ್ ಆಗಿತ್ತು. ಬಂಧನದ ನಂತರ, ತಾಲಿಬಾನ್ ಹಖಿಕಿ ಮತ್ತು ಅವರ ಸಹೋದ್ಯೋಗಿಗಳ ವೀಡಿಯೊವನ್ನು ಬಿಡುಗಡೆ ಮಾಡಿದೆ. ಜೈಲು ಸಮವಸ್ತ್ರದಲ್ಲಿ ನಿಂತು ತಾಲಿಬಾನ್ ಸರ್ಕಾರ ಮತ್ತು ಧಾರ್ಮಿಕ ವಿದ್ವಾಂಸರಲ್ಲಿ ಹಖಿಕಿ ಕ್ಷಮೆಯಾಚಿಸಿದರು. ಇನ್ನೂ, ಕುರಾನ್ ಪದ್ಯಗಳನ್ನು ಅಥವಾ ಪ್ರವಾದಿ ಮಹಮ್ಮದ್ ಅವರ ಮಾತುಗಳನ್ನು ಅವಮಾನಿಸಲು ಯಾರಿಗೂ ಅವಕಾಶವಿಲ್ಲ ಎಂದು ವಿಡಿಯೊನಲ್ಲಿ ಉಲ್ಲೇಖಿಸಲಾಗಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ತುಮಕೂರು: ನನಗಿರುವ ಮಾಹಿತಿ ಪ್ರಕಾರ ಕುಮಾರಸ್ವಾಮಿ ಮನೆಯವರೇ ನಾಟಕ ಮಾಡ್ತಿದ್ದಾರೆ. ನನ್ನನ್ನು ಮುಗಿಸಬೇಕು ಅಂತಾ ಹೇಳಿ ಅವರೇ ತಮಗೆ ಬೇಕಾದವರಿಂದ ಕ್ರಾಸ್ ವೋಟಿಂಗ್ ಮಾಡಿಸಿದ್ದಾರೆ ಎಂದು ಜೆಡಿಎಸ್ ನ ಅಸಮಾಧಾನಿತ ಶಾಸಕ ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ. ಕ್ರಾಸ್ ವೋಟಿನ ವಿಚಾರವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ಬ್ಯಾಲೆಟ್ ಪೇಪರ್ ತೋರಿಸುವಾಗ ಸರಿಯಾಗಿಯೇ ತೋರ್ತಿದ್ದೇನೆ. ಮೂರ್ನಾಲ್ಕು ನಿಮಿಷ ಹಿಡಿದುಕೊಂಡಿದ್ದೇನೆ. ಅದಾದ ಮೇಲೆ ಹೋಗಿ ವೋಟ್ ಹಾಕಿದ್ದೇನೆ. ಅವನೇನು ಕತ್ತೆ ಕಾಯುತ್ತಿದ್ದನಾ…? ಹೆಬ್ಬೆಟ್ಟು ತೆಗಿ ಅನ್ನಬೇಕಿತ್ತು. ನನಗಿರುವ ಮಾಹಿತಿ ಪ್ರಕಾರ ಕುಮಾರಸ್ವಾಮಿ ಮನೆಯವರೇ ನಾಟಕ ಮಾಡ್ತಿದ್ದಾರೆ ಎಂದು ಶ್ರೀನಿವಾಸ್ ಕುಮಾರಸ್ವಾಮಿ ವಿರುದ್ಧ ಏಕ ವಚನದಲ್ಲಿಯೇ ವಾಗ್ದಾಳಿ ನಡೆಸಿದರು. ಕುಮಾರಸ್ವಾಮಿ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತಿದ್ದಾರೆ. ನನಗೂ, ಅವರಿಗೂ ಆಗೊಲ್ಲ ಅನ್ನೋದು ಗೊತ್ತು. ಈಗಾಗಲೇ ನನ್ನನ್ನು ಸೋಲಿಸಲೇ ಬೇಕು ಅಂತಾ ಷಡ್ಯಂತರ ಮಾಡಿದ್ದಾರೆ. ಇದು ಕೂಡ ಅದೇರೀತಿ ಷಡ್ಯಂತರ. ಇದೇ ಕುಮಾರಸ್ವಾಮಿ ಕ್ರಾಸ್ ವೋಟಿಂಗ್ ಮಾಡ್ಸಿ, ನನ್ನ ಮೇಲೆ ಹಾಕುತ್ತಿದ್ದಾರೆ. ಅವರಿಗೆ…

Read More

ಗುಬ್ಬಿ: ತಾಲೂಕಿನ ಮಂಚಲದೊರೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಗಿಡಗಳನ್ನು ನೀಡುವುದರ ಮೂಲಕ ಆಚರಣೆ ಮಾಡಲಾಯಿತು. ಕಾರ್ಯಕ್ರಮದ ಬಗ್ಗೆ ಕಾಲೇಜು ಮತ್ತು ಪ್ರೌಢಶಾಲಾ ಮಕ್ಕಳಿಗೆ ಯೋಜನೆಯ ಕೃಷಿ ಮೇಲ್ವಿಚಾರಕರಾದ ರಘುರಾಜು ಮಾತನಾಡಿ, ಪರಿಸರ ಸಂರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಲು ಪ್ರತಿಯೊಬ್ಬರೂ ಒಂದೊಂದು ಗಿಡ-ಮರಗಳನ್ನು ಬೆಳೆಸುವುದು ನಮ್ಮೆಲ್ಲರ ಹೊಣೆಯಾಗಿದ್ದು,  ಪರಿಸರ ಉಳಿವಿಗಾಗಿ ಶ್ರೀ  ಕ್ಷೇತ್ರದ  ಧರ್ಮಸ್ಥಳದ ಧರ್ಮಾಧಿಕಾರಿ  ವೀರೇಂದ್ರ ಹೆಗಡೆಯವರು   ಇಂತಹ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಅವರ ಸಲಹೆ ಸೂಚನೆ ಮೇರೆಗೆ ಪ್ರತಿಯೊಂದು ತಾಲೂಕನ ವಿವಿಧ ಕಡೆ 2,000 ಗಿಡಗಳನ್ನು ನೆಡಲಾಗಿದೆ. ಶಾಲಾ ಮಕ್ಕಳಿಗೆ ದತ್ತು ನೀಡಿ ಪಾಲನೆ-ಪೋಷಣೆ ಮಾಡಿ ಬೆಳೆಸುವಂತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮಂಚಲದೊರೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಿದ್ದಗಂಗಮ್ಮ , ಉಪಾಧ್ಯಕ್ಷರಾದ ಕವಿತಾ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಪ್ರಸಾದ್, ಬಸವರಾಜು, ಮುಖ್ಯ ಶಿಕ್ಷಕರಾದ ಚೇತನ್, ಗ್ರಾಮ ಪಂಚಾಯತಿ…

Read More