Author: admin

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನೇತ್ರದಾನದ ಬಗ್ಗೆ ಕನ್ನಡಿಗರಲ್ಲಿ ಮೂಡಿಸಿರುವ ಜಾಗೃತಿ ಎಂದೆಂದಿಗೂ ಜೀವಂತ. ಹೀಗೆ ಕನ್ನಡದ ಪ್ರತಿಷ್ಠಿತ ಝೀ ವಾಹಿನಿಯಲ್ಲಿ ಪ್ರಸಾರವಾಗುವ ‘ಕಾಮಿಡಿ ಕಿಲಾಡಿಗಳು’ ಷೋ ಖ್ಯಾತಿಯ ದಂಪತಿ ತಮ್ಮ ಸೀಮಂತ ಕಾರ್ಯಕ್ರಮದಲ್ಲಿ ನೇತ್ರದಾನ ಶಿಬಿರ ಆಯೋಜಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ‘ನೇತ್ರದಾನ ಮಹಾದಾನ'(Eye Donation) ಎಂಬ ಮಾತಿದೆ. ಈ ಮಾತಿಗೆ ಮತ್ತಷ್ಟು ಮಹತ್ವ ತಂದುಕೊಟ್ಟವರೇ ವರನಟ ಡಾ.ರಾಜ್‌ಕುಮಾರ್‌(Dr.Rajkumar). ವರನಟ ರಾಜ್‌ಕುಮಾರ್‌ ಅವರು ನೇತ್ರದಾನ ಮಾಡುವ ಮೂಲಕ ಕೋಟ್ಯಂತರ ಅಭಿಮಾನಿಗಳಿಗೆ ಮಾದರಿಯಾಗಿದ್ದರು. ಹಾಗೇ ದಿವಂಗತ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಕೂಡ ತಮ್ಮ ನೇತ್ರದಾನ ಮಾಡಿ ಕನ್ನಡಿಗರಲ್ಲಿ ನೇತ್ರದಾನದ ಬಗ್ಗೆ ಅರಿವು ಮೂಡಿಸಿದ್ದಾರೆ. ಹೀಗೆ ಮಹಾನ್‌ ನಟರು ಮೂಡಿಸಿರುವ ನೇತ್ರದಾನದ ಅರಿವು ಇಂದು ದೊಡ್ಡ ಜ್ಯೋತಿಯಾಗಿ ಕನ್ನಡಿಗರ ಹೃದಯದಲ್ಲಿ ಬೆಳಗುತ್ತಿದೆ. ಜನಮೆಚ್ಚಿದ ಶಿಬಿರ: ಅಂದಹಾಗೆ ‘ಕಾಮಿಡಿ ಕಿಲಾಡಿಗಳು’ ಷೋ ಖ್ಯಾತಿಯ ಗೋವಿಂದೇಗೌಡರ  ಪತ್ನಿ ದಿವ್ಯಶ್ರೀ(Govinde Gowda and Divyashree)ಯವರ ಸೀಮಂತ ಕಾರ್ಯಕ್ರಮ ಸರಳವಾಗಿ ನಡೆಯಿತು. ಆದರೆ ಈ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಶಿಬಿರವೊಂದು…

Read More

ಮನೆಯಲ್ಲಿ ಕುಳಿತು ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸುವ ಮತ್ತು ನವೀಕರಿಸುವ ಪ್ರಕ್ರಿಯೆಯನ್ನು ಸರಾಗಗೊಳಿಸಲಾಗಿದೆ. ಈ ಸೇವೆಗಳನ್ನು ಪಡೆಯಲು ಬಯಸುವ ಅರ್ಜಿದಾರರು ಇನ್ನು ಮುಂದೆ ಆನ್‌ಲೈನ್‌ನಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾದ ಕಾರಣ ಸರತಿ ಸಾಲಿನಲ್ಲಿ ಕಾಯಬೇಕಾಗಿಲ್ಲ. ಚಾಲನಾ ಪರವಾನಗಿಯನ್ನು ನವೀಕರಿಸಲು(Driving license Renew) ಅಥವಾ ನಕಲಿಸಲು ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಯಾವುದೇ ಅನಾನುಕೂಲತೆಯನ್ನು ಎದುರಿಸಬಾರದು ಎಂದು ಅಧಿಕಾರಿಗಳು ಈ ಪ್ರಕ್ರಿಯೆಯನ್ನು ಸುಲಭಗೊಳಿಸಿದ್ದಾರೆ. ಇನ್ನು ಮುಂದೆ, ಈ ಪ್ರಕ್ರಿಯೆಗಾಗಿ ಅರ್ಜಿದಾರರು ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ.ಗಮನಾರ್ಹವಾಗಿ, ಅರ್ಜಿದಾರರು ತಮ್ಮ ಚಾಲನಾ ಪರವಾನಗಿಯನ್ನು(DLA) ಪಡೆಯಲು RTO ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. DL ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿದಾರರು ಅಧಿಕೃತ ವೆಬ್‌ಸೈಟ್ ಅಂದರೆ https://parivahan.gov.in/parivahan/ ಗೆ ಭೇಟಿ ನೀಡಬಹುದು ಮತ್ತು ತಮ್ಮ ಡ್ರೈವಿಂಗ್ ಲೈಸೆನ್ಸ್‌ಗಳ ನಕಲು, ನವೀಕರಣ ಮತ್ತು ಮಾರ್ಪಾಡುಗಾಗಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೋಡ್(Online) ಅನ್ನು ಪರಿಚಯಿಸುವ ಮೊದಲು, ಅರ್ಜಿದಾರರು ಸ್ಮಾರ್ಟ್‌ಚಿಪ್ ಕಂಪನಿಯ ಮೂಲಕ ಡ್ರೈವಿಂಗ್ ಲೈಸೆನ್ಸ್ ಅನ್ನು ನವೀಕರಿಸಬೇಕಾಗಿತ್ತು ಅಥವಾ ನಕಲು ಮಾಡಬೇಕಾಗಿತ್ತು.…

Read More

ಈ ವರ್ಷದ ನಾಗರಿಕ ಸೇವಾ ಪರೀಕ್ಷೆಯ ಮೂಲಕ ಐಆರ್‌ಎಂಎಸ್ ಗ್ರೂಪ್ ‘ಎ’ಗೆ 150 ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. IRMS ನಲ್ಲಿ ಖಾಲಿ ಇರುವ 150 ಹುದ್ದೆಗಳಲ್ಲಿ ಆರು ಹುದ್ದೆಗಳನ್ನು ಬೆಂಚ್‌ಮಾರ್ಕ್ ಅಸಾಮರ್ಥ್ಯ ಹೊಂದಿರುವ ವ್ಯಕ್ತಿಗಳಿಗೆ (PWBD) ಕಾಯ್ದಿರಿಸಲಾಗಿದೆ.ಆದ್ದರಿಂದ, ಸಿವಿಲ್ ಸರ್ವೀಸ್ ಪರೀಕ್ಷೆಯ ತಾತ್ಕಾಲಿಕ ಖಾಲಿ ಹುದ್ದೆಗಳ ಸಂಖ್ಯೆಯು ಈ ಹಿಂದೆ ಸೂಚಿಸಿದಂತೆ 861 ರ ಬದಲಿಗೆ 1,011 ಆಗಿರುತ್ತದೆ.ಕೊನೆಯ ಬಾರಿಗೆ, ಯುಪಿಎಸ್ಸಿ 2016 ರಲ್ಲಿ 1,000 ಕ್ಕಿಂತ ಹೆಚ್ಚಿನ ಖಾಲಿ ಹುದ್ದೆಗಳನ್ನು ಘೋಷಿಸಿತು.ಆ ಸಮಯದಲ್ಲಿ, 1,079 ಉದ್ಯೋಗ ಪೋಸ್ಟ್‌ಗಳನ್ನು ಬಿಡುಗಡೆ ಮಾಡಲಾಗಿತ್ತು.ಅದರ ನಂತರ, 2017 ರಲ್ಲಿ, ಇದು 2017 ರಲ್ಲಿ 980, 2018 ರಲ್ಲಿ 782 ಮತ್ತು 2019 ರಲ್ಲಿ 896, 2020 ರಲ್ಲಿ 796, ಮತ್ತು 2021 ರಲ್ಲಿ 712 ಹುದ್ದೆಗಳನ್ನು ನಾಗರಿಕ ಸೇವೆ ಪರೀಕ್ಷೆಗಳ ಮೂಲಕ ನೇಮಕ ಮಾಡಿಕೊಳ್ಳಲಾಗಿತ್ತು.ಅಧಿಕೃತ ಅನುಬಂಧದ ಪ್ರಕಾರ, ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಗುರುವಾರ ನಾಗರಿಕ ಸೇವಾ ಪರೀಕ್ಷೆಯ ಮೂಲಕ ನೇಮಕಾತಿಗಾಗಿ ಸೇವೆಗಳ…

Read More

1. ಗೋವಾನಲ್ಲಿದೆ ಫಾರೆನರ್ಸ್ ಓನ್ಲಿ ಬೀಚ್ – ಹೆಚ್ಚಿನ ಸಂಖ್ಯೆಯ ಭಾರತೀಯ ಮತ್ತು ವಿದೇಶಿ ಪ್ರವಾಸಿಗರು ಗೋವಾಕ್ಕೆ ಆಗಮಿಸುತ್ತಾರೆ, ಆದರೆ ಇಲ್ಲಿ ಕೆಲವು ಕಡಲತೀರಗಳಿಗೆ ಭಾರತೀಯರ ಪ್ರವೇಶವನ್ನು ನಿಷೇಧಿಸಲಾಗಿದೆ. ಕೆಲವು ಕಡಲತೀರಗಳು ವಿದೇಶಿಯರಿಗೆ ಮಾತ್ರ ಇವೆ. ವಿದೇಶಿ ಪ್ರವಾಸಿಗರಿಗಾಗಿಯೇ ಇಂತಹ ಬೀಚ್ ಮಾಡಲು ಕಾರಣ ಎಂದರೆ ಅವರ ಆಚಾರ-ವಿಚಾರ ಮತ್ತು ಸಾಂಸ್ಕೃತಿಕ ವಾತಾವರಣ ಭಾರತಕ್ಕಿಂತ ಭಿನ್ನವಾಗಿದೆ. ಈ ಕಡಲತೀರಗಳಲ್ಲಿ, ಅವರು ತನ್ನ ಜಾಗದಲ್ಲಿ ವಾಸಿಸುವಾಗ ಆರಾಮವಾಗಿ ಪ್ರಕೃತಿಯನ್ನು ಆನಂದಿಸುತ್ತಾನೆ. ಅವರ ಖಾಸಗಿತನವನ್ನು ಇಲ್ಲಿ ಸಂಪೂರ್ಣವಾಗಿ ನೋಡಿಕೊಳ್ಳಲಾಗುತ್ತದೆ. 2. ನಾರ್ತ್ ಸೆಂಟಿನಲಿ ಐಲ್ಯಾಂಡ್ ನಲ್ಲಿ ಹೊರಗಿನವರಿಗೆ ಅವಕಾಶ ಇಲ್ಲ – ಉತ್ತರ ಸೆಂಟಿನೆಲ್ ಇದು ದಕ್ಷಿಣ ಅಂಡಮಾನ್‌ನ ಬಂಗಾಳ ಕೊಲ್ಲಿಯಲ್ಲಿರುವ ಸಣ್ಣ ದ್ವೀಪವಾಗಿದೆ. ಇಲ್ಲಿ ವಾಸಿಸುವ ಬುಡಕಟ್ಟುಗಳ ರಕ್ಷಣೆಯ ಉದ್ದೇಶದಿಂದ ಭಾರತ ಸರ್ಕಾರವು ಸಂರಕ್ಷಿತ ಪ್ರದೇಶವೆಂದು ಘೋಷಿಸಿದೆ. ಈ ದ್ವೀಪದಲ್ಲಿ ವಾಸಿಸುವ ಬುಡಕಟ್ಟುಗಳಿಗೆ ಹೊರ ಪ್ರಪಂಚದ ಸಂಪರ್ಕವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬುಡಕಟ್ಟುಗಳನ್ನು ಸುರಕ್ಷಿತವಾಗಿಡುವ ಉದ್ದೇಶದಿಂದ ಯಾವುದೇ ರೀತಿಯ ಹೊರಗಿನವರ ಪ್ರವೇಶವನ್ನು ನಿಷೇಧಿಸಲಾಗಿದೆ. 2011…

Read More

ನಿವೇಶನ ಕಬಳಿಸಿರುವ ವಿಚಾರವಾಗಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಕುಟುಂಬಸ್ಥರ ವಿರುದ್ಧ ಆರೋಪ‌ ಕೇಳಿಬಂದಿದ್ದು, ಈ ಸಂಬಂಧ‌ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ. ಶಾಹೀತಾ ನಾಜೀನ್ ಎಂಬುವರು ಶಾಸಕ ಜಮೀರ್ ಅಹಮದ್ ಹಾಗೂ ಅವರ ಸಹೋದರ ಜಮೀಲ್ ಅಹಮದ್ ತಮಗೆ ಮಾರಾಟ ಮಾಡಲಾಗಿದ್ದ ನಿವೇಶನಗಳನ್ನು ಕಬಳಿಸಲು ಯತ್ನಿಸಿದ್ದರು.‌ಪ್ರಶ್ನಿಸಿದರೆ ಅವರ ಕಡೆಯವರು ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಇದೇ ವೇಳೆ ವಾದ-ಪ್ರತಿವಾದ ಆಲಿಸಿದ 7 ನೇ ಎಸಿಎಂಎ ನ್ಯಾಯಾಲಯ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸುವಂತೆ ಸಂಪಿಗೆಹಳ್ಳಿ ಪೊಲೀಸರಿಗೆ ನಿರ್ದೇಶನ ನೀಡಿದ ಮೇರೆಗೆ ಈಗ ಅವರು ಶಾಸಕ ಜಮೀರ್ ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ‌‌.2015 ರಲ್ಲಿ ಚೊಕ್ಕನಹಳ್ಳಿ ಬಡಾವಣೆಯಲ್ಲಿರುವ ನಿವೇಶನವನ್ನ ಜೆ.ಸಿ.ನಗರ ನಿವಾಸಿ ಶಾಹೀತಾ ನಾಜೀನ್ ಎಂಬುವರು ಜಮೀರ್ ಕುಟುಂಬಸ್ಥರಿಂದ ಖರೀದಿ ಮಾಡಿದ್ದರು. 2018 ರಲ್ಲಿ ಜಮೀರ್ ಕುಟುಂಬಸ್ಥರಿಂದಲೇ ಮತ್ತೊಂದು ಸೈಟ್ ಖರೀದಿಸಿದ್ದರು.ನಿವೇಶನ ಖರೀದಿಸಿ ಕೆಲವರ್ಷಗಳಾದರೂ ಸೈಟ್ ಗಳ ಕಡೆ…

Read More

ಉಕ್ರೇನ್‌ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರವು (Govt Of India) ತನ್ನ ರಾಜತಾಂತ್ರಿಕರ ಕುಟುಂಬಗಳನ್ನು ದೇಶಕ್ಕೆ ಮರಳುವಂತೆ ಕೇಳಿದೆ. ರಾಜತಾಂತ್ರಿಕರ ಕುಟುಂಬಗಳು ಉಕ್ರೇನ್ ತೊರೆದು ಆದಷ್ಟು ಬೇಗ ಭಾರತಕ್ಕೆ ಮರಳುವಂತೆ ಕೇಳಿಕೊಳ್ಳಲಾಗಿದೆ. ಮೂಲಗಳ ಪ್ರಕಾರ, ಉಕ್ರೇನ್‌ನ (Ukraine) ಪೂರ್ವ ಪ್ರದೇಶಗಳಲ್ಲಿ ಸರ್ಕಾರಿ ಸೇನೆ ಮತ್ತು ರಷ್ಯಾದ ಪರ ಪ್ರತ್ಯೇಕತಾವಾದಿಗಳ ನಡುವೆ ಘರ್ಷಣೆಗಳು ಪ್ರಾರಂಭವಾಗಿವೆ. ಈ ಘರ್ಷಣೆಯಲ್ಲಿ (Ukraine Russia Crisis) ಇಬ್ಬರು ಉಕ್ರೇನ್ ಸೈನಿಕರು ಸಾವನ್ನಪ್ಪಿದ್ದಾರೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಎರಡೂ ಕಡೆಯಿಂದ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿದ್ದಾರೆ. ಉಕ್ರೇನ್‌ನಲ್ಲಿನ ಈ ಪರಿಸರದ ದೃಷ್ಟಿಯಿಂದ, ಭಾರತ ಸರ್ಕಾರವು ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಉಕ್ರೇನ್‌ನಲ್ಲಿ ಪರಿಸ್ಥಿತಿ (Ukraine Russia Crisis) ನಿರಂತರವಾಗಿ ಕ್ಷೀಣಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರವು (Govt Of India) ಅಲ್ಲಿ ನಿಯೋಜಿಸಲಾದ ತನ್ನ ರಾಜತಾಂತ್ರಿಕರ ಕುಟುಂಬಗಳನ್ನು ದೇಶಕ್ಕೆ ಹಿಂತಿರುಗುವಂತೆ ನಿರ್ದೇಶಿಸಿದೆ.ಉಕ್ರೇನ್‌ನಲ್ಲಿ 20 ಸಾವಿರ ಭಾರತೀಯರು ವಾಸಿಸುತ್ತಿದ್ದಾರೆ: ಪ್ರಸ್ತುತ, ಉಕ್ರೇನ್‌ನಲ್ಲಿ ಸುಮಾರು 20,000 ಭಾರತೀಯ…

Read More

ಕೊರಟಗೆರೆ : ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಅರಸಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಶಾಪುರ ಗ್ರಾಮದಲ್ಲಿ ಕಂದಾಯ ಇಲಾಖೆ,ಕೊರಟಗೆರೆ ತಾಲ್ಲೂಕು ಆಡಳಿತ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಹಯೋಗದೊಂದಿಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಒಂದು ದಿನದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ದಂಡಾಧಿಕಾರಿಗಳಾದ ನಾಹೀದಾ ಜಮ್ ಜಮ್ ರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಮಾತನಾಡಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಗ್ರಾಮದ ಎಲ್ಲಾ ರೈತರಿಗೆ ಇಲಾಖೆಯ ಸವಲತ್ತುಗಳನ್ನು ನೇರವಾಗಿ ತಮ್ಮ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮ ಇದಾಗಿದ್ದು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಲು ತಿಳಿಸಿದರು. ಕಾಶಾಪುರ ಗ್ರಾಮವು ಅರಸಾಪುರ ಗ್ರಾಮ ಪಂಚಾಯತಿಗೆ ಸೇರಿದ್ದು.ತಾಲ್ಲೂಕಿನ ಗಡಿಭಾಗದಲ್ಲಿರುವ ಈ ಗ್ರಾಮದಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಲವು ಯೋಜನೆಗಳ ಬಗ್ಗೆ ಮತ್ತು ಇಲಾಖೆಗಳಿಂದ ದೊರೆಯುವ ಸವಲತ್ತುಗಳನ್ನು ಹಾಗೂ ಸಾರ್ವಜನಿಕರು, ಬಹುತೇಕ ರೈತರು ತಮ್ಮ ಸಮಸ್ಯೆಗಳನ್ನು ನೇರವಾಗಿ ಅಯಾ ಇಲಾಖೆಯ ಕೌಂಟರ್ ಗಳಲ್ಲಿ…

Read More

ಜಗಳೂರು: ಯಕ್ಷಗಾನ ಕಲೆಯು ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯ ಜಗಳೂರು ಭಾಗ ಹಾಗೂ ಚಿತ್ರದುರ್ಗ ಬಳ್ಳಾರಿ ಜಿಲ್ಲೆಯಲ್ಲಿ ಇಂದಿಗೂ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡಿರುವುದು ಆಧುನಿಕ ಕಾಲದಲ್ಲಿ ಒಂದು ಅದ್ಭುತವೆ ಸರಿ ಎಂದು ಎಚ್ಚೆತ್ತ ಕರ್ನಾಟಕ ನವ ನಿರ್ಮಾಣ ವೇದಿಕೆಯ ಸಂಸ್ಥಾಪಕ ಮಹಾಲಿಂಗಪ್ಪ ಜೆ ಹೆಚ್ ಎಮ್ ಹೊಳೆ ತಿಳಿಸಿದರು. ಯಕ್ಷಗಾನ ಬಯಲಾಟ ನಾಟಕ ಎಂಬುವುದು ಒಂದು ಗಂಡು ವಿದ್ಯೆ. ತಾಳ ಮೇಳ ತಮಟೆ ಗೆಜ್ಜೆ ತಬಲ ಶಾನಹಿ ಮುಂತಾದ ವಾದ್ಯಮೇಳಗಳ ಮುಖಾಂತರ ಪಾತ್ರಧಾರಿಗಳನ್ನು ಉರಿದುಂಬಿಸುವ ಬಯಲಾಟ, ಭಾಗವತರ ಪರಿ ನೋಡಲು, ಕೇಳಲು ಅದ್ಭುತವಾಗಿರುತ್ತದೆ. ಮನಮೋಹಕ ಸ್ತ್ರೀ ಪಾತ್ರವನ್ನು ಪುರುಷರು ಮಹಿಳೆಯರೇ ನಾಚುವಂತೆ ಅಭಿನಯಿಸುವುದು ಸೋಜಿಗ ಎಂದರು. ವಿಜ್ಞಾನ, ತಂತ್ರಜ್ಞಾನ ಮುಂದುವರಿದ ಈ ಯುಗದಲ್ಲಿ ಸಿನಿಮಾ, ಧಾರವಾಹಿಗಳ ಮೋರೆಹೋಗುತ್ತಿರುವ ಕಾಲಘಟ್ಟದಲ್ಲಿ ಇಂದಿಗೂ ಸಹ ಜಗಳೂರು ತಾಲೂಕು ಹಿರೆಮಲ್ಲನಹೊಳೆ ಗೊಲ್ಲರಹಟ್ಟಿಯಲ್ಲಿ ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಬಯಲಾಟವನ್ನ ಉಳಿಸಿ ಬೆಳಸಿಕೊಂಡು ಬರುತ್ತಿರುವುದು ಗ್ರಾಮಿಣ ಕಲೆಗೆ ಇರುವ ಶಕ್ತಿಯನ್ನ ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು.…

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಬಗ್ಗನಡು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಸಂಸ್ಥಾಪಕ ರಾಜ್ಯ ಅಧ್ಯಕ್ಷರು ಸ್ವಾಭಿಮಾನಿ ಡಾ.ಆರ್ ಕೋದಂಡ ರಾಮ್ ಮಾರ್ಗದರ್ಶನದಲ್ಲಿ ಬಗ್ಗನಾಡು ಗ್ರಾಮ ಶಾಖೆಯ ನಾಮಫಲಕವನ್ನು ಮಾಜಿ ಸಚಿವ ಡಿ.ಸುಧಾಕರ್ ಅವರು ಉದ್ಘಾಟನೆ ಮಾಡಿದರು. ಹಿರಿಯೂರು ತಾಲ್ಲೂಕು ಅಧ್ಯಕ್ಷರಾದ ಶಿವಕುಮಾರ್.ವಿ. ಅಧ್ಯಕ್ಷತೆ ವಹಿಸಿದ್ದರು. ಜೆ.ಜಿ.ಹಳ್ಳಿ ಹೋಬಳಿಯ ಉಪಾಧ್ಯಕ್ಷರಾದ ರಂಗನಾಥ್ ನೇತೃತ್ವವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿಗಳು ಮತ್ತು ಜಿಲ್ಲಾ ಅಧ್ಯಕ್ಷರಾದ ರಾಮಚಂದ್ರ ಕೆ. ಗೌಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗಭೂಷಣ್ ಗೌಡ, ಆರ್.ಟಿ.ಗ್ರಾಮ ಪಂಚಾಯಿತಿ ಸದಸ್ಯರಾದ ನಿಂಗಮ್ಮ, ಹನುಮಂತಪ್ಪ, ರಂಗಮ್ಮ, ರಾಜಣ್ಣ , ಜಿಲ್ಲಾ ಗೌರವ ಅಧ್ಯಕ್ಷರಾದ ತಿಪ್ಪೇಸ್ವಾಮಿ ಪಿ.ಎಂ., ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಸ್. ವೃಷಬೇಂದ್ರ ಬಾಬು, ಬಿ.ರೊಪ್ಪ ಜಿಲ್ಲಾ ಕಾರ್ಯದರ್ಶಿಗಳಾದ ಚಂದ್ರಣ್ಣ, ಟಿ.ಸಿ. ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ರೇವಣ್ಣ ಸಿದ್ದಪ್ಪ, ಬಿ.(ಕಲ್ಕುಂಟೆ) ಚಳ್ಳಕೆರೆ ತಾಲ್ಲೂಕು ಅಧ್ಯಕ್ಷರಾದ ವಿನೋದ್ ಕುಮಾರ್, ಹಿರಿಯೂರು ತಾಲ್ಲೂಕು ಕಾರ್ಯಾಧ್ಯಕ್ಷರಾದ ರಾಘವೇಂದ್ರ ಆರ್., ತಾಲ್ಲೂಕು ಯುವ ಘಟಕದ ಅಧ್ಯಕ್ಷರಾದ…

Read More

ಕೊರಟಗೆರೆ : ತಾಲ್ಲೂಕಿನ ಬೈಪಾಸ್ ರಸ್ತೆಯಲ್ಲಿ ಬೆಂಗಳೂರು ಮಾರ್ಗವಾಗಿ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಕೊರಟಗೆರೆ ಮಾರ್ಗವಾಗಿ ಹೋಗುತ್ತಿದ್ದ ಕಾರೊಂದು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅಪಘಾತದ ತೀವ್ರತೆಗೆ ದ್ವಿಚಕ್ರ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು,  ದ್ವಿಚಕ್ರ ವಾಹನ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಠಾಣಾ ಸಿಬ್ಬಂದಿ ರಾಜಶೇಖರ್  ಭೇಟಿ ನೀಡಿ ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳವನ್ನು ಪರಿಶೀಲಿಸಿ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವ ಯುವಕ ಕೊರಟಗೆರೆ ತಾಲ್ಲೂಕಿನ  ಕಂಬದಹಳ್ಳಿಯ ಶೇಖರಪ್ಪ ಎನ್ನುವವರ ಪುತ್ರ  23ವರ್ಷ ವಯಸ್ಸಿನ ಚೇತನ್ ಎಂದು ತಿಳಿದುಬಂದಿದೆ.  ಈ ಅಪಘಾತಕ್ಕೆ ಅತಿವೇಗದ ಚಾಲನೆಯೇ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ. ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More