Author: admin

ತುಮಕೂರು:  ಜಿಲ್ಲೆಯ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಗುಬ್ಬಿ ತಾಲ್ಲೂಕಿನ ಗದ್ದೆಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧೀನದ ಇಲಾಖೆ ಕೆ.ಆರ್.ಐ.ಡಿ.ಎಲ್  ವತಿಯಿಂದ  ಕಾಂಕ್ರೀಟ್ ರಸ್ತೆ ಕಾಮಗಾರಿಗೆ ತುರುವೇಕೆರೆ ಶಾಸಕ ಮಸಾಲೆ ಜಯರಾಂ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ  ಮಾತನಾಡಿದ ಅವರು ಜನತೆಗೆ ಚುನಾವಣೆಗೂ ಮೊದಲು ಕೊಟ್ಟ ಮಾತಿನಂತೆಯೇ ಈ ಭಾಗಕ್ಕೆ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಮಾಡಲಾಗಿದ್ದು, ಸಿ.ಎಸ್.ಪುರ ಹೋಬಳಿಯನ್ನು ಮಾದರಿ ಹೋಬಳಿಯಾಗಿ ಮಾಡುವಲ್ಲಿ ಶ್ರಮಿಸಿದ್ದೇನೆ ಎಂದರು. ಈ ಭಾಗದ ಎಲ್ಲಾ ಕೆರೆಗಳು ಕಟ್ಟೆಗಳಿಗೆ ಹೇಮಾವತಿ ನೀರು ಹರಿಸುವ ಮೂಲಕ ಈ ಭಾಗದ ಜನತೆಯ ಋಣ ತೀರಿಸಲು ಬದ್ದನಾಗಿದ್ದು, ಈಗಾಗಲೇ ಶೇ.80ರಷ್ಟು ಭಾಗ ಎಲ್ಲಾ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಅನುದಾನ ತರುವ ಮೂಲಕ, ಕ್ಷೇತ್ರವನ್ನು ಮಾದರಿ ಕ್ಷೇತ್ರ ವಾಗಿ ಮಾಡಲಾಗುತ್ತದೆ ಎಂದರು. ಈ ಗದ್ದೆಹಳ್ಳಿಯಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವುದರಿಂದ ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ನವಗ್ರಾಮ ಯೋಜನೆಯಡಿ ಗದ್ದೆಹಳ್ಳಿ ಗ್ರಾಮವನ್ನು ಆಯ್ಕೆ ಮಾಡಿದ್ದು ಹೆಚ್ಚಿನ ಅನುದಾನ ಈ…

Read More

ಪಾವಗಡ:  ತಾಲ್ಲೂಕಿನ ಬ್ಯಾಡನೂರು ಗ್ರಾ.ಪಂ. ವ್ಯಾಪ್ತಿಯ ಬಿ.ದೊಡ್ಡಹಟ್ಟಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಾಸಕ ವೆಂಕಟರಮಣಪ್ಪ ಅವರು ಗುದ್ದಲಿಪೂಜೆ ಮಾಡಿದರು. ಈ ಸಂದರ್ಭದಲ್ಲಿ ಅವರು ಹೈಮಾಸ್ಕ್ ವಿದ್ಯುತ್ ದೀಪವನ್ನೂ ಉದ್ಘಾಟಿಸಿದರು. ಇದೇ ವೇಳೆ ಇಲ್ಲಿನ ದೇವಸ್ಥಾನದ ಆವರಣದಲ್ಲಿ ಸಿಸಿ ರಸ್ತೆಯನ್ನು ನಿರ್ಮಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರುಗಳಾದ ಎಚ್ ಜೋಗಪ್ಪ, ಕೆ ಪಾಲೇಳ್ಳಪ್ಪ, ಡಿ.ಎಂ.ಮಲ್ಲಯ್ಯ, ಡಿ.ಎಂ.ಮಹೇಶ್,  ಡಿ.ಹೆಚ್. ದೇವರಾಜು, ಯಾದವ ಮುಖಂಡರುಗಳಾದ  ಮುಗದಾಳ ಬೆಟ್ಟ ನರಸಿಂಹಪ್ಪ, ರೈತ ಮುಖಂಡ ನರಸಿಂಹರೆಡ್ಡಿ, ಪೂಜಾರಪ್ಪ,ಹಾಗೂ  ಇಲಾಖಾಧಿಕಾರಿಗಳಾದ ಜಿ.ಪಂ. ಎ ಇ ಇ ಸುರೇಶ್, ಬಸವಲಿಂಗಪ್ಪ, ದೇಶಪಾಂಡೆ, ಪಾಪಣ್ಣ ವಿ.ಹೆಚ್.ಪಾಳ್ಯ, ಹನುಮೇಶ್, ಶಿಕ್ಷಕ ಮಲ್ಲಯ್ಯ, ಶಿವರಾಜು, ಕನಕ ಸೇರಿ ಇನ್ನೂ ಹಲವಾರು ಸ್ಥಳೀಯ ನಾಯಕರು ಉಪಸ್ಥಿತರಿದ್ದರು. ವರದಿ: ದೇವರಹಟ್ಟಿ ನಾಗರಾಜು, ಕಸಬಾ ಹೋಬಳಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More

ಸರಗೂರು: ತಾಲ್ಲೂಕಿನ ನುಗು ಡ್ಯಾಂನಿಂದ ಮುಳ್ಳೂರುವರೆಗೆ  ಸುಮಾರು 3 ಕಿ.ಮೀ.  ಉದ್ದದವರೆಗೂ ಕಳಪೆ  ಕಾಮಗಾರಿ ಮಾಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಗುತ್ತಿಗೆದಾರ ಶಾಂತಮಲ್ಲಪ್ಪ ಕೋತ್ತೇಗಾಲ ,  ಸರಿಯಾದ ರೀತಿಯಲ್ಲಿ ಕೆಲಸ ಮಾಡಿಸಿಲ್ಲ ಎಂದು ಇಲ್ಲಿನ ನಿವಾಸಿಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು,  ಸುಮಾರು ವೆಚ್ಚ 4.30 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ. ಆದರೆ, ಗುತ್ತಿಗೆದಾರ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಣವನ್ನು ದುರುಪಯೋಗ ಮಾಡಿಕೊಂಡು ಕಳಪೆ ಕಾಮಗಾರಿ ನಡೆಸಿದ್ದಾರೆ. ರಸ್ತೆಯ ಪ್ಯಾಚಿಂಗ್ ಡಾಂಬರೀಕರಣ ಮಾಡದೇ ರಸ್ತೆಗೆ ಮಣ್ಣು ಹಾಕಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ರಸ್ತೆಯ ಕೋತ್ತೇಗಾಲ ಗ್ರಾ.ಪಂ. ಸದಸ್ಯ ಮಹದೇವ ಮಾತನಾಡಿ, ಈ ರಸ್ತೆಗೆ ಡಾಂಬರಿಕರಣ ಮಾಡಿಲ್ಲ. ರಸ್ತೆಯ ಗುಂಡಿಗಳಿಗೆ ಪ್ಯಾಚಿಂಗ್ ಮಾಡದೇ, ಬರೇ ಮಣ್ಣು ಹಾಕಿ ಬಿಟ್ಟಿದ್ದಾರೆ.  ಅಧಿಕಾರಿಗಳು ಮತ್ತು ಗುತ್ತಿಗೆದಾರ ಸೇರಿ ಕಳಪೆ ಕಾಮಗಾರಿ ಮಾಡಿ  ಅನ್ಯಾಯ ಮಾಡಿದ್ದಾರೆ. ಇಂಜಿನಿಯರ್ ಮತ್ತು ಗುತ್ತಿಗೆದಾರರ ವಿರುದ್ಧ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.…

Read More

ಪಾವಗಡ: ಕೊವಿಡ್ ನಿಂದ ಸಂಕಷ್ಟಕ್ಕೊಳಗಾಗಿರುವ  ಬಡ ಕುಟುಂಬಗಳಿಗೆ  ತಮಟೆ ಸಂಸ್ಥೆ ವತಿಯಿಂದ ಆಹಾರದ ಕಿಟ್ ವಿತರಣೆ ಕಾರ್ಯಕ್ರಮವನ್ನು ಪಾವಗಡ ನಗರದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ  ಡಾ.ಕೆ.ಬಿ. ಓಬಳೇಶ್,  ಪಾವಗಡ ತಾಲ್ಲೂಕು ಗಡಿ ತಾಲ್ಲೂಕಾಗಿದ್ದು, ಈ ತಾಲ್ಲೂಕಿನ ಗ್ರಾಮೀಣ ಭಾಗದ ಬಡಜನರು ಕೋವಿಡ್ ನಿಂದಾಗಿ ಬಹಳಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ನಮ್ಮ ತಮಟೆ ಸಂಸ್ಥೆ ವತಿಯಿಂದ ಸುಮಾರು 200 ಜನರಿಗೆ ರೇಷನ್ ಹಂಚುತ್ತಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ಪಾವಗಡ ಅಭಿವೃದ್ದಿಗೆ ನಮ್ಮ ಸರ್ಕಾರ‌ ಇದ್ದಾಗ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೆವು.  ದೇಶಕ್ಕೆ ಕೋವಿಡ್ ಬಂದು ಎರಡು ವರ್ಷಗಳು ಕಳೆಯುತ್ತಾ ಬಂತು.  ಇಂತಹ ಸಂದರ್ಭದಲ್ಲಿ ಕೊವಿಡ್ ನಿಂದ ಸಂಕಷ್ಟಕ್ಕೊಳಗಾಗಿರುವ ಕುಟುಂಬಗಳಿಗೆ ತಮಟೆ ಸಂಸ್ಥೆ ಆಹಾರ ಕಿಟ್ ವಿತರಣೆ ಮಾಡುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಕಲಾವಿದರಾದ ಸಿ.ಕೆ. ಪುರ ಹನುಮಂತರಾಯಪ್ಪ ನವರು ಅಂಬೇಡ್ಕರ್ ಕುರಿತು ಹೋರಾಟದ ಹಾಡನ್ನು…

Read More

ತುಮಕೂರು:   ಕರ್ನಾಟಕ ರಾಜ್ಯ ಸೌಹಾರ್ದತೆ ಮತ್ತೊಂದು ಹೆಸರು ಅಂತಹ ಸೌಹಾರ್ದತೆಗೆ ಯಾವುದೇ ಕಾರಣಕ್ಕೂ ಧಕ್ಕೆಯಾಗಬಾರದು ಎಂದು ಕರ್ನಾಟಕ ರಾಜ್ಯ ವರ್ಕ್ ಬೋರ್ಡ್ ರಾಜ್ಯಾಧ್ಯಕ್ಷ ಮೌಲಾನ ಮಹಮ್ಮದ್ ಶಫಿ ಆಜಾದಿ ತಿಳಿಸಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಅವರು , ಸಿದ್ದಗಂಗಾ ಶ್ರೀಗಳೊಂದಿಗೆ  ಹಿಜಾಬ್ ಹಾಗೂ ಕೇಸರಿ ಶಾಲಿನ ವಿವಾದಕ್ಕೆ ಸಂಬಂಧಿಸಿದಂತೆ ಸುದೀರ್ಘವಾಗಿ ಚರ್ಚಿಸಿದರು. ಬಳಿಕ ಪತ್ರಕರ್ತ ಜೊತೆಗೆ ಮಾತನಾಡಿದ ಅವರು ಕರ್ನಾಟಕದ  ಸೌಹಾರ್ದತೆಗೆ ತುಮಕೂರಿನ ಸಿದ್ದಗಂಗಾ ಮಠ ಪ್ರಸಿದ್ಧ. ಪ್ರಥಮಬಾರಿಗೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದೇನೆ. ಸಹೋದರ ಧರ್ಮೀಯ ಸ್ವಾಮೀಜಿಯವರೊಂದಿಗೆ ಇಂದಿನ ಸ್ಥಿತಿ ಗತಿಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು,  ಮುಂಚೆ ನಮ್ಮ ಕರ್ನಾಟಕ ಯಾವ ರೀತಿಯ ಸೌಹಾರ್ದಯುತವಾಗಿ ಇತ್ತು, ಅದೇ ರೀತಿಯಲ್ಲಿ ಮುಂದುವರಿಯಬೇಕು ಅದಕ್ಕೆ ಧಕ್ಕೆ ಬರಬಾರದು ಸೌಹಾರ್ದ ಹಾಗೂ ಸಾಮರಸ್ಯವನ್ನು ಹಾಳುಮಾಡುವ ವ್ಯಕ್ತಿಗಳನ್ನು ನಾವೆಲ್ಲರೂ ಸೇರಿ ಮಟ್ಟಹಾಕಬೇಕು. ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಮಸ್ಯೆಯಾಗಬಾರದು ಎಂದರು. ಪ್ರಕರಣ ಹೈಕೋರ್ಟ್ ನಲ್ಲಿದ್ದು, ತೀರ್ಪು ಏನು ಬರುತ್ತೆ ನೋಡಬೇಕು.  ಕೋರ್ಟ್ ತೀರ್ಪು ಸೌಹಾರ್ದಯುತವಾಗಿ ಬರುವ…

Read More

ಪಾವಗಡ: ತಾಲೂಕು ನಿಡಗಲ್ ಹೋಬಳಿ ವ್ಯಾಪ್ತಿಯಲ್ಲಿರುವ ದವಡಬೆಟ್ಟ ಗ್ರಾಮದ ತಾಂಡಾದಲ್ಲಿ ಶ್ರೀಮತಿ ಸಾಯಿ ಸುಮನ್  ಹನುಮಂತರಾಯಪ್ಪ ಅಭಿಮಾನಿಗಳ ಬಳಗದ ವತಿಯಿಂದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್ ಪಂದ್ಯಾವಳಿಗೆ ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು,  ಸಾಯಿ ಸುಮನ್ ಸಮಾಜ ಸೇವೆಯ ಹಾಗೂ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ, ಅವರು ಅನೇಕ ಜನಪ್ರಿಯ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಸಾಯಿ ಸುಮನ್ ಹನುಮಂತರಾಯಪ್ಪ ಮಾತನಾಡಿ,  ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಸರ್ಕಾರದ ವತಿಯಿಂದ ಸಹಾಯ-ಸಹಕಾರ ನೀಡುವ ಬಗ್ಗೆ ತಾಲೂಕು ಮಟ್ಟದಲ್ಲಿ ಕ್ರೀಡಾ ತರಬೇತಿ ಕೇಂದ್ರವನ್ನು ಸರ್ಕಾರ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಈ ಗ್ರಾಮದ ಮುಖಂಡರುಗಳಾದ ಹನುಮಂತರಾಯಪ್ಪ, ಈರಣ್ಣ, ನಾಗರಾಜಪ್ಪ, ಕೃಷ್ಣಪ್ಪ ನಾಯಕ್,  ರಾಜಕುಮಾರ್,  ಜಗನ್ನಾಥ್,  ಮಾರಪ್ಪ,  ಹೆಂಜಾರಪ್ಪ ಮತ್ತಿತರು ಭಾಗವಹಿಸಿದ್ದರು. ವರದಿ: ನಂದೀಶ್,  ಕೊತ್ತೂರ್ ನಿಡಗಲ್ ಹೋಬಳಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ತುಮಕೂರು: ಹಿಂದೂ ಮುಸ್ಲಿಂರ ನಡುವಿನ ಬಾಂಧವ್ಯ ಸೋದರತೆ, ಭಾವೈಕ್ಯತೆ ಸಾರುವ ಪರಂಪರೆಯನ್ನು ಇಂದು ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದಿಂದ ಶಾಂತಿ ಕದಡುವಂತಾಗುತ್ತಿದೆ, ಬದಲಿಗೆ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಬಿ.ಕಲ್ಕೆರೆ ಅಲ್ಲಮ ಪ್ರಭು ಪೀಠಾಧ್ಯಕ್ಷರಾದ ತಿಪ್ಪೇರುದ್ರ ಸ್ವಾಮೀಜಿ ಅಭಿವ್ಯಕ್ತಪಡಿಸಿದರು. ನಗರದ ಖಾಸಗಿ ಹೋಟೆಲ್ನಲ್ಲಿ ಶನಿವಾರ ನಡೆದ ಹಿಜಾಬ್ ಹಾಗೂ ಕೇಸರಿ ಶಾಲು, ಶಾಲಾ ಕಾಲೇಜು ತೆರೆಯುವ ಕುರಿತಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,  ಹಿಜಾಬ್ ಹಾಗೂ ಕೇಸರಿ ಶಾಲು ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದೆಲ್ಲೆಡೆ ಉದ್ವಿಗ್ನ ವಾತಾವರಣ ತಾರಕಕ್ಕೇರಿರುತ್ತಿದೆ. ಪರಿಣಾಮ ಹಿಂದೂ ಮುಸ್ಲಿಂ  ನಡುವೆ ಸೋದರ ಸಮಾನತೆ ಭಾವನೆಗೆ ಧಕ್ಕೆಯುಂಟಾಗುತ್ತಿದೆ. ಅಲ್ಲದೆ ಬಂಗಾರದಂತಹ ಭವಿಷ್ಯ ಕಟ್ಟಿಕೊಳ್ಳುವ ಮಕ್ಕಳ ಬದುಕಲ್ಲಿ ಹಿಜಾಬ್ , ಸಮವಸ್ತ್ರದ ಕಿಡಿ ಬರೆ ಎಳೆದಂತಾಗುತ್ತಿದೆ. ವಿಚಾರದಲ್ಲಿ ಈ  ಸ್ವಾರ್ಥ ರಾಜಕೀಯ ನಾಯಕರ ಹಸ್ತಕ್ಷೇಪವಿದೆ ಎಂದು ಆರೋಪಿಸಿದರು. ಈಗಾಗಲೇ ಕೊರೊನಾ ಎಂಬ ಮಹಾಮಾರಿ ಅಟ್ಟಹಾಸದಿಂದ ನಲುಗಿದ್ದ ಮಕ್ಕಳು ಶಾಲೆ ಕಾಲೇಜುಗಳಿಂದ ದೂರ ಉಳಿಯಬೇಕಾಯಿತು. ಪೋಷಕರು ಪ್ರತಿದಿನ ಗೊಂದಲಕ್ಕೀಡಾಗುವ ಆತಂಕದ…

Read More

ಹುಬ್ಬಳ್ಳಿ- ಧಾರವಾಡ : ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಅವಮಾನ ಎಸಗಿದ ರಾಯಚೂರು ಜಿಲ್ಲಾ ಮ್ಯಾಜಿಸ್ಟ್ರೇಟ್ ಮಲ್ಲಿಕಾರ್ಜುನ ಗೌಡ ವಿರುದ್ಧ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ  ಭಾರತೀಯ ದಲಿತ ಸಂಘರ್ಷ ಸಮಿತಿ  ಧಾರವಾಡ ತಹಶೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿತು. ಹುಬ್ಬಳ್ಳಿ- ಧಾರವಾಡ ಮಹಾನಗರದ ಸಮಾಜ ಸೇವಾ ರತ್ನ ಡಾ.ಹೆಚ್ ಪ್ರಕಾಶ ಬೀರಾವರ ನೇತೃತ್ವದಲ್ಲಿ  ಮನವಿ ಸಲ್ಲಿಸಲಾಯಿತು. ಗಣರಾಜ್ಯೋತ್ಸವ ಸಂದರ್ಭದಲ್ಲಿ ಅಂಬೇಡ್ಕರ್ ಫೋಟೋವನ್ನು ತೆರವುಗೊಳಿಸಿದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಉದ್ಧಟತನ ತೋರಿದ್ದಾರೆ. ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸುವಂತೆ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಹು.ದಾ.ಮ.ನ. ಅಧ್ಯಕ್ಷರಾದ ಲಕ್ಷ್ಮಣಕುಡ್ಲೂರು, ರಾಜ್ಯ ಹಿರಿಯ ಉಪಾಧ್ಯಕ್ಷರಾದ ಕಲ್ಮೇಶ ಹಾದಿಮುನಿ, ಬೆಳಗಾವಿ ವಿಭಾಗಿ ಅಧ್ಯಕ್ಷರಾದ  ಶಂಕರಪ್ಪ  ಎಲಿಮೇತ್ರಿ,  ಧಾರವಾಡ ಜಿಲ್ಲಾ ಅಧ್ಯಕ್ಷರಾದ ಶಿವಾನಂದ ಹಲಮನಿ ಇತರರು ಉಪಸ್ಥಿತರಿದ್ದರು. ವರದಿ: ಮುರುಳಿಧರನ್  ಆರ್. ಚಿತ್ರದುರ್ಗ ( ಹುಬ್ಬಳ್ಳಿ- ಧಾರವಾಡ ) ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…

Read More

ಮಾಯಸಂದ್ರ : ಐದು ವರ್ಷಕ್ಕೊಮ್ಮೆ ನಡೆಯುವ ಕನ್ನಡ ಸಾಹಿತ್ಯ ಪರಿಷತ್  ಅಧ್ಯಕ್ಷರ ಆಯ್ಕೆಯಲ್ಲಿ ಒಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಿ‌ ಐದು ವರ್ಷ ಅಧಿಕಾರದಲ್ಲಿರುವುದು ವಾಡಿಕೆ. ಆದರೆ ಕನ್ನಡ ಸಾಹಿತ್ಯ ಪರಿಷತ್ತು ಮಾಯಸಂದ್ರ ಹೋಬಳಿ ಘಟಕಕ್ಕೆ ಇಂದು ನಡೆದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಐದು ವರ್ಷಕ್ಕೆ ಐದು ಅಧ್ಯಕ್ಷರನ್ನು‌ ಸದಸ್ಯರು ಆಯ್ಕೆ ಮಾಡುವ ಮೂಲಕ ಹೊಸದೊಂದು ಪ್ರಯೋಗ ಮತ್ತು ಇತಿಹಾಸಕ್ಕೆ ಕ.ಸಾ.ಪ ಸಾಕ್ಷಿಯಾಯಿತು. ಮಾಯಸಂದ್ರದ ಕನ್ನಡ ಭವನದಲ್ಲಿ ಇಂದು ನಡೆದ ಅಧ್ಯಕ್ಷರ ಆಯ್ಕೆ ಸಭೆಯಲ್ಲಿ ತಾಲ್ಲೂಕಿನ ಕ.ಸಾ.ಪ. ಪ್ರಮುಖರು ಮತ್ತು ಸದಸ್ಯರ ಸಮ್ಮುಖದಲ್ಲಿ ಮಾತನಾಡಿದ ಕ.ಸಾ.ಪ ನಿಕಟಪೂರ್ವ ಅಧ್ಯಕ್ಷರಾದ ಎನ್.ಆರ್.ಜಯರಾಮ್,  ” ಕನ್ನಡ ತಾಯಿಯ ಸೇವೆ ಮಾಡಲು ಅನೇಕರು ಬಹಳ ಉತ್ಸುಕರಾಗಿದ್ದು, ಎಲ್ಲರಿಗೂ ಅವಕಾಶ ಸಿಗಬೇಕೆಂದರೆ ವರ್ಷಕ್ಕೊಮ್ಮೆಯಂತೆ ಅಧ್ಯಕ್ಷರು ಆಯ್ಕೆಯಾಗಿ ಕನ್ನಡ ಸೇವೆ ಮಾಡಬೇಕೆಂಬುದೇ ನನ್ನ ಅಭಿಪ್ರಾಯ ” ಎಂದರು. ಎನ್.ಆರ್.ಜಯರಾಮ್’ರವರ ಅಭಿಪ್ರಾಯಕ್ಕೆ ಸರ್ವಸದಸ್ಯರಿಂದ ವ್ಯಾಪಕ ಬೆಂಬಲ ವ್ಯಕ್ತವಾದ ಕಾರಣ, ತಕ್ಷಣ ಇದೇ ನಿರ್ಧಾರವನ್ನು ಸಭೆಯಲ್ಲಿ ಅಂಗೀಕರಿಸಲಾಯಿತು. ಇದರಂತೆ ವರ್ಷಕ್ಕೊಮ್ಮೆಯಂತೆ ಐದು ವರ್ಷಗಳಿಗೆ ಆಯ್ಕೆಯಾದ…

Read More

ತುಮಕೂರು: ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ವಿವಾದದ ಹಿನ್ನೆಲೆಯಲ್ಲಿ  ಸಾರ್ವಜನಿಕರಲ್ಲಿ ಧೈರ್ಯ ತುಂಬುವ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಕಿಡಿಗೇಡಿಗಳಿಗೆ ಎಚ್ಚರಿಸುವ ಸಲುವಾಗಿ ಇಂದು ತುಮಕೂರು ನಗರದಲ್ಲಿ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪಥಸಂಚಲನ ನಡೆಸಲಾಯಿತು. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಕೆಎಸ್ ಆರ್ ಪಿ ತುಕಡಿಗಳು ಪಥಸಂಚಲನ ನಡೆಸಿದ್ದು, ತುಮಕೂರು ನಗರದ ಗುಬ್ಬಿ ಗೇಟ್ ನಿಂದ, ಸಂತೆಪೇಟೆ, ಬಿ.ಜೆ. ಪಾಳ್ಯ ವೃತ್ತ, ಎಸ್.ಎಸ್ ಟೆಂಪಲ್ ರೋಡ್, ಚಾಂದಿನಿ ರಸ್ತೆ, ವೀರಸಾಗರ, ದಾನ ಪ್ಯಾಲೇಸ್, ಸದಾಶಿವನಗರ ಬನಶಂಕರಿ ಮುಖ್ಯರಸ್ತೆ, ಶಾಂತಿನಗರ ವಿಶ್ವಣ್ಣ ಲೇಔಟ್, ಮರಳೂರು ದಿಣ್ಣೆ ರಸ್ತೆಗಳಲ್ಲಿ ಪೊಲೀಸ್ ಪಥಸಂಚಲನ ನಡೆಯಿತು. ಈಗಾಗಲೇ ಹಿಜಾಬ್ ಮತ್ತು ಕೇಸರಿ ಶಾಲಿನ ಪ್ರಕರಣ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಹಾಗೂ ನ್ಯಾಯಾಲಯ ನೀಡುವ ಆದೇಶ ಸೂಚನೆಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಭಟನೆ ಧರಣಿ ಮುಂತಾದವುಗಳನ್ನು ಮಾಡಬಾರದು ಹಾಗೂ ಸುಳ್ಳು ಸಂದೇಶ ಮತ್ತು ವದಂತಿಗಳಿಗೆ ಕಿವಿ ಕೊಡಬಾರದು ಹಾಗೂ ಸಾಮಾಜಿಕ…

Read More