Author: admin

ತುಮಕೂರು:  ಚಿಕ್ಕನಾಯಕನಹಳ್ಳಿ  ತಾಲ್ಲೂಕಿನ ತಹಶೀಲ್ದಾರ್‌ ತೇಜಸ್ವಿನಿ ಬಿ. ರವರ ವಿರುದ್ಧ ಜ.22 ರಂದು ಅಟ್ರಾಸಿಟಿ ಕಾಯ್ದೆ ಅಡಿಯಲ್ಲಿ ಎಫ್.ಐ.ಆರ್ ದಾಖಲಾಗಿ ಒಂದು ವಾರ ಕಳೆದರೂ ಅವರನ್ನು ಬಂಧಿಸದೇ, ಅಮಾನತ್ತು ಮಾಡದೆ ಸೇವೆಯಲ್ಲಿ ಮುಂದುವರೆಸಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ  ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು,  ಅಟ್ರಾಸಿಟಿ ಆರೋಪ ಹೊತ್ತಿರುವ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ರವರು ಇದೇ ಜಾಗದಲ್ಲಿ ಸೇವೆ ಮುಂದುವರೆಸಿದ್ದಾರೆ. ತಹಶೀಲ್ದಾರ್ ತಮ್ಮ ವಿರುದ್ಧದ ಆರೋಪಗಳ ಬಗ್ಗೆ  ಸಾಕ್ಷಿ ನಾಶಕ್ಕೆ ಮುಂದಾಗುವ ಎಲ್ಲಾ ಸಾಧ್ಯತೆಗಳು ಇರುತ್ತದೆ. ಆದ್ದರಿಂದ ತುರ್ತಾಗಿ ಆರೋಪಿತೆಯನ್ನು ಬಂಧಿಸಿ ಅಮಾನತುಗೊಳಿಸುವಂತೆ ಬುಡಕಟ್ಟು ಮಹಾಸಭಾ ಒತ್ತಾಯಿಸಿದೆ. ಈ ವೇಳೆ ಮಾತನಾಡಿದ ದೂರುದಾರ ಪರಮೇಶ್ ಜಿಲ್ಲಾಧಿಕಾರಿಗಳು ಕೂಡಲೇ ತಾಲ್ಲೂಕು ತಹಶೀಲ್ದಾರ್ ಅವರ ಮೇಲೆ ಸೂಕ್ತ ಕ್ರಮ ವಹಿಸದೆ ಹೋದರೆ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಹೋರಾಟ ನಡೆಸಲಾಗುವುದು ಎಂದರು. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ ವೇಳೆ ಶಾಂತರಾಜು,…

Read More

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1,49,394 ಲಕ್ಷ ಹೊಸದಾಗಿ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ವಾರದ ಏರಿಕೆ ಪ್ರಮಾಣವು 12.03 ರಷ್ಟಿದ್ದು, ದಿನದ ಏರಿಕೆ ಪ್ರಮಾಣವು 12.03 ರಷ್ಟಿದೆ. ಸಕ್ರಿಯ ಪ್ರಕರಣಗಳು 14,35,569 ಇದ್ದು, ಸಕ್ರಿಯ ಪ್ರಕರಣಗಳ ಪ್ರಮಾಣವು 3.42 ರಷ್ಟಿದೆ. ಕಳೆದ 24 ಗಂಟೆಯಲ್ಲಿ 2,46,674 ಜನರು ಚೇತರಿಸಿಕೊಂಡಿದ್ದು, ಚೇತರಿಕೆ ಪ್ರಮಾಣವು 95.39 ರಷ್ಟು ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1,072 ಜನರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯಲ್ಲಿ 16,11,666 ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ಈವರೆಗೆ ದೇಶದಲ್ಲಿ 168.67 ಕೋಟಿ ಕೊರೊನಾ ಲಸಿಕೆಗಳನ್ನು ನೀಡಲಾಗಿದೆ. ನಿನ್ನೆಗಿಂತ ಸೋಂಕಿತರ ಪ್ರಮಾಣವು ಶೇ 13 ರಷ್ಟು ಇಳಿಕೆಯಾಗಿದೆ ಎಂದು ಮಾಹಿತಿ ನೀಡಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಡು – ಗೊಲ್ಲರ ಚಿಂತನ – ಮಂಧನ ಸಭೆ ನಡೆದಿದ್ದು, ಸಭೆಯಲ್ಲಿ ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಶಿವುಯಾದವ್ ಮಾತನಾಡಿದರು. ಕಾಡುಗೊಲ್ಲ ಜನಾಂಗ ತೀರ ಹಿಂದುಳಿದ  ಜನಾಂಗ. ಈ ಜನಾಂಗದಲ್ಲಿ ರಾಜಕೀಯ ಪ್ರಭಾವ ಶಾಲಿಗಳಾಗಳಿಲ್ಲ. , ಅಲ್ಪಸಲ್ಪ ಸರ್ಕಾರಿ ಅಧಿಕಾರಿಗಳು ಇದ್ದಾರೆ . ಆದರೆ ಅವರು ಜನಾಂಗದ  ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿಲ್ಲ ಎಂದರು. ಮುಖಂಡರಾದ ಗೋಪಿಯಾದವ್ ಮಾತನಾಡಿ, ಕಾಡುಗೊಲ್ಲ ಯುವಕರು ಮತ್ತು   ನಾಯಕರಿಗೆಗಳಿಗೆ ಕಾಡುಗೊಲ್ಲ ಹೋರಾಟ ಮನವರಿಕೆಯಾಗಿದೆ . ಎಲ್ಲಾ  ತಾಲ್ಲೂಕಿನಲ್ಲಿ ಕಾಡುಗೊಲ್ಲ ಸಭೆ ಮಾಡುತ್ತಿದ್ದಾರೆ. ಕಾಡುಗೊಲ್ಲ ಬುಡಕಟ್ಟು ಜಾತಿ ಪ್ರಮಾಣ ಪತ್ರ ಎಲ್ಲಾ ತಾಲ್ಲೂಕಿನಲ್ಲಿ ನೀಡುತ್ತಿದ್ದಾರೆ. ಆದರೆ ಮೊಳಕಾಲ್ಮೂರು ತಾಲ್ಲೂಕು ತಹಶೀಲ್ದಾರರು ಮಾತ್ರ  ನೀಡುತ್ತಿಲ್ಲ . ಕಾಡುಗೊಲ್ಲ ಯುವಕರು ಜಾತಿ ಪ್ರಮಾಣ ಪತ್ರ ಕೇಳಿದರೆ,. ಅಸಭ್ಯವಾಗಿ ಮಾತನಾಡುವುದಲ್ಲದೇ ನೀವು ಗುಡ್ಡಗಾಡಿನಲ್ಲಿ ಇರಿ , ಬರಿ ಗೆಣಸು ತಿನ್ನಿರಿ , ಆಗ ನಾನು ಕಾಡುಗೊಲ್ಲ  ಜಾತಿ ಪ್ರಮಾಣ ಪತ್ರ…

Read More

ತುರುವೇಕೆರೆ: ದಕ್ಷ ಅಧಿಕಾರಿಯಾಗಿದ್ದ ತುರುವೇಕೆರೆ ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ರವರ ಅಮಾನತು ಆದೇಶ ಸರ್ಕಾರ ಮೂರು ದಿನದೊಳಗಾಗಿ ಹಿಂಪಡೆಯಬೇಕು, ಇಲ್ಲವಾದಲ್ಲಿ ಪಟ್ಟಣದ ಸಿಪಿಐ ಕಚೇರಿ ಮುಂಭಾಗ ತಾಲೂಕಿನ ವಿವಿಧ ಪರ ಸಂಘಟನೆಗಳು ಹಾಗೂ ನಾಗರಿಕರು ಜೊತೆಗೂಡಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳುವುದಾಗಿ ಮುಖಂಡ ಹೆಡಗಿಹಳ್ಳಿ ವಿಶ್ವನಾಥ್ ಎಚ್ಚರಿಸಿದ್ದಾರೆ. ಪಟ್ಟಣದ ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವನಾಥ್ ರವರು, ಸಿಪಿಐ ನವೀನ್ ರವರು ದಕ್ಷ ಅಧಿಕಾರಿಯಾಗಿದ್ದು, ಸಾಕಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿದ್ದವರಾಗಿದ್ದವರು.  ದಂಡಿನಶಿವರ ವ್ಯಾಪ್ತಿಯ ಕೋಡಿಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ ನವೀನ್ ರವರನ್ನು ಅಮಾನತುಗೊಳಿಸುವುದು ವೈಜ್ಞಾನಿಕವಾಗಿಲ್ಲ. ಯಾರದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ನೀಡಿದಂತಾಗಿದೆ ಎಂಬ ಚರ್ಚೆಯು ಸಾರ್ವಜನಿಕ ವಲಯದಲ್ಲಿ ಪ್ರತಿನಿತ್ಯ ನಡೆಯುತ್ತಿದೆ.ಉತ್ತಮವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ನೈತಿಕ ಸ್ಥೈರ್ಯ ತುಂಬಾಬೇಕಾದದ್ದು ಪ್ರತಿ ನಾಗರಿಕನ ಕರ್ತವ್ಯವಾಗಿದೆ ಎಂದರು. ಸಾರ್ವಜನಿಕ ವಲಯದಲ್ಲಿ ಜನಸ್ನೇಹಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸಿಪಿಐ ನವೀನ್ ರವರ ಬೆಂಬಲಕ್ಕೆ ನಿಲ್ಲುವುದು…

Read More

ಹುಬ್ಬಳ್ಳಿ: ಕೊರೊನಾ ಸೋಂಕಿಗೆ ತುತ್ತಾಗಿ ಲಘು ರೋಗ ಲಕ್ಷಣಗಳಿದ್ದರೆ ಹೋಂ ಐಸೊಲೇಷನ್ ಮಾಡಲಾಗುತ್ತಿದ್ದು, ಇವರ ಮನೆಬಾಗಿಲಿಗೆ ಔಷಧದ ಕಿಟ್ ಸರಿಯಾಗಿ ವಿತರಣೆಯಾಗದೆ ಬಾಧಿತರು ಪರದಾಡುವಂತಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಹೋಂ ಐಸೋಲೇಷನ್ ಕೊರೊನಾ ಸೋಂಕಿತರಿಗೆ ಮಹಾನಗರಪಾಲಿಕೆ ಸರಿಯಾಗಿ ಔಷಧದ ಕಿಟ್ ನೀಡುತ್ತಿಲ್ಲ ಎಂದು ದೂರುಗಳು ಕೇಳಿ ಬರುತ್ತಿವೆ. ಆರೋಗ್ಯ ಇಲಾಖೆಯು ಜನವರಿ 19 ರಿಂದ ಫೆಬ್ರವರಿ 2ರ ವರೆಗೆ ಪಾಲಿಕೆಗೆ 5,779 ಕಿಟ್ ನೀಡಿದೆ. ಪಾಲಿಕೆಯು 3,149 ಜನರ ಮನೆ ಬಾಗಿಲಿಗೆ ಕಿಟ್ ತಲುಪಿಸಿದೆ. ಉಳಿದ 2,630 ಕಿಟ ವಿತರಣೆಯಾಗಿಲ್ಲ. ನಿತ್ಯ ಅರ್ಧದಷ್ಟು ಜನರಿಗೆ ಮಾತ್ರ ಕಿಟ್ ವಿತರಣೆಯಾಗುತ್ತಿದೆ. ಉಳಿದವರಿಗೆ ಮರುದಿನವೂ ನೀಡುವ ವ್ಯವಸ್ಥೆಯಾಗಿಲ್ಲ ಎಂದು ದೂರುಗಳು ಬಂದಿವೆ. ಮಹಾನಗರ ಪಾಲಿಕೆ ಔಷಧಿಗಳನ್ನು ನೀಡಲಂದೇ ತಿಂಗಳ ಬಾಡಿಗೆ ಆಧಾರದ ಮೇಲೆ 30 ಕಾರುಗಳನ್ನು ಬಾಡಿಗೆಗೆ ತೆಗೆದುಕೊಂಡಿದೆ. ತಿಂಗಳಲ್ಲಿ 2,500 ಕಿ.ಮೀ ಸಂಚರಿಸುವ ಷರತ್ತಿನೊಂದಿಗೆ ಜಿಎಸ್ ಟಿ ಸಮೇತ 29 ಸಾವಿರ ಪಾವತಿಸಲಾಗುತ್ತಿದೆ. ಆದರೂ ಬಾಧಿತರ ಮನೆಗೆ ಕಿಟ್ ಗಳನ್ನು ಸರಿಯಾಗಿ ತಲುಪಿಸುವ ಕೆಲಸ ಆಗುತ್ತಿಲ್ಲ…

Read More

ಕೊಪ್ಪ: ತಾಲ್ಲೂಕು ಕಚೇರಿಯ ಕಡತಗಳನ್ನು ಬಚ್ಚಿಟ್ಟುಕೊಂಡು ಭಾರೀ ಭ್ರಷ್ಟಾಚಾರದಲ್ಲಿ ತೊಡಗಿರುವ ಪ್ರಥಮ ದರ್ಜೆ ಸಹಾಯಕ ಪ್ರಕಾಶ್ ಎಂಬುವವರನ್ನು ಕೊಪ್ಪ ತಹಸೀಲ್ದಾರ್ ಪರಮೇಶ್ ಹಾಗೂ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಡಾ.ಎಚ್.ಎನ್.ನಾಗರಾಜ್ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಭಾರೀ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ , ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಇನೇಶ್, ನುಗ್ಗಿ ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಈ ಕುರಿತು ಗಂಭೀರ ಆರೋಪ ಮಾಡಿದ್ದಾರೆ. ಕೊಪ್ಪ ತಹಸೀಲ್ದಾರ್ ಕಚೇರಿಯಲ್ಲಿ ಈ ಹಿಂದೆ ರೈತರು ಹಾಗೂ ಬಡವರ ಫಾರಂ-50, 53 ಕಡತಗಳ ಉಸ್ತುವಾಗಿಯಾಗಿದ್ದ ಪ್ರಥಮ ದರ್ಜೆ ಸಹಾಯಕ ಪ್ರಕಾಶ್ ಸುಮಾರು 300ಕ್ಕಿಂತ ಹೆಚ್ಚು ಕಡತಗಳನ್ನು ದುರುದ್ದೇಶದಿಂದ ಬಚ್ಚಿಟ್ಟುಕೊಂಡು ಹಣ ಕೊಟ್ಟವರ ಕಡತಗಳನ್ನಷ್ಟೇ ಭೂ ಮಂಜೂರಾತಿ ಪ್ರಕ್ರಿಯೆ ಪ್ರಸ್ತಾವನೆಗೆ ಸಲ್ಲಿಸುತ್ತಿದ್ದ.ಈತನ ವರ್ಗಾವಣೆ ಸಂದರ್ಭದಲ್ಲೂ ಕಡತಗಳನ್ನು ಹಸ್ತಾಂತರಿಸದೆ ಗಂಭೀರ ಕರ್ತವ್ಯಲೋಪವೆಸಗಿರುವುದಲ್ಲದೆ ಪ್ರಭಾರ ವಹಿಸಿಕೊಡುವ ಪ್ರಕ್ರಿಯೆಯಲ್ಲೂ ಲೋಪವೆಸಗಿದ್ದಾನೆ. ಕೊಪ್ಪಕ್ಕೆ ಕರ್ತವ್ಯಕ್ಕೆ ಬರುವ ಮುನ್ನವೇ ಈತ…

Read More

ಪುನಿತ್ ರಾಜ್‍ಕುಮಾರ್ ಅವರ ಮೈಸೂರಿನ ಪ್ರೀತಿಯ ಶಕ್ತಿಧಾಮದ ಹೆಣ್ಣು ಮಕ್ಕಳ ಜೊತೆಗೂಡಿ ನಟ ಡಾ.ಶಿವರಾಜ್ ಕುಮಾರ್ ದಂಪತಿ ನಂದಿ ಗ್ರಾಮದ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಪುನೀತ್ ರಾಜ್ ಕುಮಾರ್ ನಿಧನ ನಂತರ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು ಮೈಸೂರಿನಲ್ಲಿರುವ ಶಕ್ತಿಧಾಮದ ಮಕ್ಕಳು. ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಹುಟ್ಟು ಹಾಕಿದ ಸಂಸ್ಥೆಯನ್ನು ಪುನೀತ್ ರಾಜ್ ಕುಮಾರ್ ಅತ್ಯಂತ ಕಾಳಜಿಯಿಂದ ಅಲ್ಲಿರುವ ಹೆಣ್ಣು ಮಕ್ಕಳನ್ನು ಸಾಕಿ ಸಲಹುವ ಜವಾಬ್ದಾರಿ ಹೊತ್ತಿದ್ದರು.ಆದರೆ, ಪುನೀತ್ ರಾಜ್ ಕುಮಾರ್ ನಿಧನದ ನಂತರ ಅವರಿಗೆ ಅನಾಥ ಭಾವ ಕಾಡಬಾರದು ಎಂಬ ಕಾರಣಕ್ಕೆ ಸ್ವತಃ ಡಾ.ಶಿವರಾಜ್ ಕುಮಾರ್ ಅವರೇ ಶಕ್ತಿಧಾಮದ ಹೆಣ್ಣುಮಕ್ಕಳನ್ನು ಚಿಕ್ಕಬಳ್ಳಾಪುರದ ನಂದಿ ಗ್ರಾಮಕ್ಕೆ ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದರು. ಬೆಳಗ್ಗೆ ನಂದಿಯಲ್ಲಿರುವ ಜಗದ್ವಿಖ್ಯಾತ ಭೋಗ ನಂದೀಶ್ವರ ಸ್ವಾಮಿ ದೇವಾಲಯಕ್ಕೆ ಬಂದಿದ್ದ ಮಕ್ಕಳು ಸಾಲಿನಲ್ಲಿ ಹೋಗಿ ದೇವರ ದರ್ಶನ ಪಡೆದರು. ಮಕ್ಕಳೊಂದಿಗೆ ಶಿವರಾಜ್ ಕುಮಾರ್‍ಮತ್ತು ಅವರ ಪತ್ನಿ ಗೀತಾ ಶಿವರಾಜ್…

Read More

ರಾಮನಗರದಲ್ಲಿ ಅತ್ಯಾಧುನಿಕ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ ಸರ್ಕಾರದ ಆದೇಶ ಹೊರಡಿಸಲಾಗಿದೆ. ರಾಮನಗರ-ಚನ್ನಪಟ್ಟಣ ಅವಳಿ ನಗರದ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಿಸಲು ನಿರ್ಧರಿಸಲಾಗಿದ್ದು, ಜನವರಿ 27 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಇದೀಗ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಲಾಗಿದೆ. 10 ದಿನದೊಳಗೆ ಟೆಂಡರ್ ಅಹ್ವಾನ: ಸಚಿವ ಡಾ.ನಾರಾಯಣಗೌಡ ರಾಮನಗರ ಮಾರುಕಟ್ಟೆಗೆ ಪ್ರತಿದಿನ 40-50 ಟನ್ ರೇಷ್ಮೆಗೂಡು ಬರುತ್ತಿದ್ದು, ಹೈಟೆಕ್ ಮಾರುಕಟ್ಟೆ ನಿರ್ಮಾಣವಾದ ಬಳಿಕ 100-150 ಟನ್‍ನಷ್ಟು ರೇಷ್ಮೆಗೂಡು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಹಾಗಾಗಿ, 10ದಿನದೊಳಗೆ ಟೆಂಡರ್ ಕರೆದು, ಆದಷ್ಟು ಬೇಗ ಶಂಕುಸ್ಥಾಪನೆ ನೆರವೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರೇಷ್ಮೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಚನ್ನಪಟ್ಟಣದ ಸರ್ಕಾರಿ ರೇಷ್ಮೆ ತರಬೇತಿ ಸಂಸ್ಥೆಯ 20 ಎಕರೆ ಜಾಗದಲ್ಲಿ 75 ಕೋಟಿ ರೂಪಾಯಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಿಸಲು ನಿರ್ಧರಿಸಲಾಗಿದೆ. ಹೈಟೆಕ್ ರೇಷ್ಮೆ ಮಾರುಕಟ್ಟೆ…

Read More

ಮಗನ ಹೆಸರಿಗೆ ಜಮೀನು ಬರೆದುಕೊಡಲು ನಿರಾಕರಿಸಿದ ಪತಿ ಚನ್ನಿಗರಾಯಪ್ಪನನ್ನು ಕೊಲೆ ಮಾಡಿ ಶವ ಸುಟ್ಟುಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ, ಮಗ ಸೇರಿ ಐದು ಮಂದಿ ಆರೋಪಿಗಳನ್ನು ಬನ್ನೇರುಘಟ್ಟ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪತ್ನಿ ಶೋಭಾ ಅಲಿಯಾಸ್ ಯಶೋಧಾ (33), ಮಗ ನಿಖಿಲ್ ಅಲಿಯಾಸ್ ಅಭಿ (22) ಮತ್ತು ಗುರುಕಿರಣ್ (21), ವಿಶ್ವಾಸ್ (20), ಮಂಜುನಾಥ್ (29) ಬಂಧಿತ ಆರೋಪಿಗಳು. ಕೊರಟಗೆರೆ ತಾಲ್ಲೂಕು ಪಣ್ಣೇನಹಳ್ಳಿ ನಿವಾಸಿಯಾದ ಚನ್ನಿಗರಾಯಪ್ಪನಿಗೆ 21 ಗುಂಟೆ ಕೃಷಿ ಭೂಮಿ ಇದ್ದು, ಈತನಿಗೆ 24 ವರ್ಷಗಳ ಹಿಂದೆ ಯಶೋಧಾ ಜತೆ ಮದುವೆಯಾಗಿದ್ದು, ನಿಖಿಲ್ ಎಂಬ ಗಂಡುಮಗನಿದ್ದಾನೆ. 20 ವರ್ಷಗಳ ಹಿಂದೆ ಎಚ್‍ಎಸ್‍ಆರ್ ಲೇಔಟ್, ಗಾರೆಬಾವಿ ಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ಯಶೋಧಾ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡು ಮಗನೊಂದಿಗೆ ವಾಸವಾಗಿದ್ದರು.ಮಗ ನಿಖಿಲ್ ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದನು. ಪತಿ ಚನ್ನಿಗರಾಯಪ್ಪ ಎರಡನೆ ಮದುವೆಯಾಗಿದ್ದು, ಕೊರಟಗೆರೆ ತಾಲ್ಲೂಕಿನ ಪಣ್ಣೇನಹಳ್ಳಿಯಲ್ಲಿರುವ 21 ಗುಂಟೆ ಜಮೀನು ಮಾರುವ ವಿಚಾರ ಯಶೋಧಾಗೆ ಗೊತ್ತಾಗಿದೆ.ಈ ವಿಚಾರವಾಗಿ ತನ್ನ ಮಗ ನಿಖಿಲ್‍…

Read More

ಪತ್ನಿ-ಮಗಳ ಮೇಲೆ ಬಿಸಿ ಎಣ್ಣೆ ಸುರಿದು ಪರಾರಿಯಾಗಿದ್ದ ಆರೋಪಿಯನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಲ್‍ ಆರ್ ನಗರದ ನಿವಾಸಿ ಥಾಮಸ್(46) ಬಂಧಿತ ಆರೋಪಿ. ಈತನ ಪತ್ನಿ ಮನೆ ಕೆಲಸ ಮಾಡಿ, ಕುಟುಂಬ ನಿರ್ವಹಿಸುತ್ತಾರೆ. ಕುಡಿತದ ಚಟ ಹೊಂದಿದ್ದ ಆರೋಪಿ ವಿನಾ ಕಾರಣ ಪತ್ನಿ ಮಗಳೊಂದಿಗೆ ಜಗಳವಾಡುತ್ತಿದ್ದನು. ಭಿನ್ನಾಭಿಪ್ರಾಯದಿಂದಾಗಿ ದಂಪತಿ ನಡುವೆ ಜಗಳವಾಗುತ್ತಿತ್ತು. ಜ.30ರಂದು ಆರೋಪಿ ಹೊರಗೆ ಹೋಗಿ ಅಡುಗೆ ಎಣ್ಣೆ ತೆಗೆದುಕೊಂಡು ಮನೆಗೆ ಬಂದಿದ್ದಾನೆ. ಈ ಸಂದರ್ಭದಲ್ಲಿ ಪತ್ನಿ-ಮಗಳು ಟಿವಿ ನೋಡುತ್ತಾ ಕುಳಿತ್ತಿದ್ದರು. ಆರೋಪಿ ಸೀದಾ ಅಡುಗೆ ಮನೆಗೆ ಹೋಗಿ ಎಣ್ಣೆ ಕಾಯಿಸಿಕೊಂಡು ಬಂದು ಪತ್ನಿ-ಮಗಳ ಮೇಲೆ ಚೆಲ್ಲಿ ಸ್ಥಳದಿಂದ ಪರಾರಿಯಾಗಿದ್ದನು. ವಿಷಯ ತಿಳಿದು ಆಡುಗೋಡಿ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಸುಟ್ಟ ಗಾಯಗೊಂಡಿದ್ದ ತಾಯಿ-ಮಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು , ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ವರದಿ :ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ…

Read More