Author: admin

ಪಾವಗಡ: ತಾಲೂಕು ನಿಡಗಲ್ ಹೋಬಳಿ ಸಿಕೆ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಟಿ.ಎನ್.ಕೋಟೆ ಯಲ್ಲಿ ಬೋವಿ ಕಾಲೋನಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಗುದ್ದಲಿ ಪೂಜೆ ನಡೆಯಿತು. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ವೆಂಕಟೇಶಣ್ಣ ಮತ್ತು ಟಿ.ಎಂ.ಕೋಟೆಯ ಪ್ರಭಾಕರ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಚಿನ್ನೇನಹಳ್ಳಿಯ ಭೋಜ ರಾಜಣ್ಣ ಮತ್ತು ಗ್ರಾಮದ ಹನುಮಂತರಾಯಪ್ಪ ಹಾಗೂ ಕೊಂಡಪ್ಪ ರವಿಕುಮಾರ್ ಪಾಳ್ಯದ ನಾಗೇಂದ್ರಪ್ಪ ಹನುಮನ ಪಾಳ್ಯದ ಶಿವಮೂರ್ತಿ ಮತ್ತು ಪ್ರಸಾದ್ ಗ್ರಾಮಸ್ಥರು ಈ ಸಂದರ್ಭ ಜೊತೆಗಿದ್ದರು. ವರದಿ: ನಂದೀಶ್ ಕೊತ್ತೂರು, ನಿಡಗಲ್ ಹೋಬಳಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಗುಬ್ಬಿ:  ತಾಲೂಕಿನ ಅಮ್ಮನಘಟ್ಟ ಗ್ರಾಮದಲ್ಲಿ ಶಾರದಮ್ಮ ಲೇಟ್  ದೊಡ್ಡತಿಮ್ಮಯ್ಯ ಎಂಬುವವರ ಜಮೀನಿನಲ್ಲಿ ಯಾವುದೇ ನೋಟಿಸ್ ನೀಡದೆ, ಮೀಸಲು ಅರಣ್ಯ ಪ್ರದೇಶ ಎಂದು ವಲಯ ಅರಣ್ಯ ಇಲಾಖೆಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಪೊಲೀಸ್ ಭದ್ರತೆಯಲ್ಲಿ ಅಡಕೆ ಮರ ಹಾಗೂ ತೆಂಗಿನ ಮರಗಳನ್ನು ತೆರವುಗೊಳಿಸುತ್ತಿದ್ದು, ಇದರಿಂದಾಗಿ  ಬಡ ರೈತ ಕುಟುಂಬ  ಕಂಗಾಲಾಗಿದೆ. ಇಂದು ಗುಬ್ಬಿ ವಲಯ ಅರಣ್ಯ ಅಧಿಕಾರಿ ದುರ್ಗಪ್ಪ ಮತ್ತು ಸಿಬ್ಬಂದಿ ಪೊಲೀಸ್ ಇಲಾಖೆಯ ಬಂದೋ ಬಸ್ತ್ ಪಡೆದು ರೈತ ಅಡಿಕೆ ಮತ್ತು ತೆಂಗಿನ ಮರಗಳ ತೆರವಿಗೆ ಮುಂದಾದರು. ಈ ವೇಳೆ ರೈತ ಮಹಿಳೆ ಶಾರದಮ್ಮ ಕೋರ್ಟ್ ಗೆ ಆಫೀಲ್ ಹೋಗಿದ್ದು, ತಡೆ ಅರ್ಜಿಯನ್ನು ಸೋಮವಾರ ತೋರಿಸುತ್ತೇವೆ ಎಂದು ಅಂಗಲಾಚಿದರು ಅರಣ್ಯಾಧಿಕಾರಿಗಳು ಯಾವುದಕ್ಕೂ ಜಗ್ಗಲಿಲ್ಲ. ಕಳೆದ 10 ವರ್ಷಗಳ ಹಿಂದೆ ಅರಣ್ಯ ಅಧಿಕಾರಿಗಳು ಬಂದು ಸರ್ವೇ ಕಲ್ಲನ್ನು ಹಾಕಿದ್ದಾರೆ. ಇಂದು ಯಾವುದೇ ಮಾಹಿತಿಯನ್ನು ನೀಡದೆ ಏಕಾಏಕಿ ಅಡಿಕೆ, ತೆಂಗು ಮರಗಳನ್ನು ಉರುಳಿಸುತ್ತಿರುವುದು ಆರಣ್ಯಧಿಕಾರಿಗಳ  ಸರ್ವಾಧಿಕಾರಿ ಧೋರಣೆ ಕಂಡು ಬರುತ್ತಿದೆ ಅಧಿಕಾರಿಗಳ ದೌರ್ಜನ್ಯದ ವಿರುದ್ಧ…

Read More

ತುಮಕೂರು: ಜಿಲ್ಲೆಯಲ್ಲಿ ಭೂಮಿ ವಸತಿಗಳ ಸಮಸ್ಯೆಗಳನ್ನು ಪರಿಹರಿಸುವಂತೆ ಎರಡು ತಲೆಮಾರುಗಳಿಂದ ಹೋರಾಟ ನಡೆಸಿಕೊಂಡು ಬರಲಾಗುತ್ತಿದ್ದರೂ, ಈವರೆಗೆ ತುಮಕೂರು ಜಿಲ್ಲಾಡಳಿತ ಸಮಸ್ಯೆ ಬಗೆ ಹರಿಸಿಲ್ಲ. ಹೀಗಾಗಿ ಮಾರ್ಚ್ 15ರಿಂದ ಭೂಮಿ ಮತ್ತು ವಸತಿ ಹೋರಾಟ ಸಮಿತಿಯು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಭೂಮಿ ವಸತಿ ಹಕ್ಕಿಗಾಗಿ ಅನಿರ್ದಿಷ್ಟ ಕಾಲ ಅಹೋ ರಾತ್ರಿ ಧರಣಿ  ಹಮ್ಮಿಕೊಂಡಿದೆ. ಜಿಲ್ಲೆಯ ಸಾವಿರಾರು ಭೂ ರಹಿತರು  ಭೂಮಿ ಮತ್ತು ವಸತಿಗಾಗಿ ಅರ್ಜಿಗಳನ್ನು ಹಾಕಿ ಇಂದು, ನಾಳೆ ಭೂಮಿ ವಸತಿಗೆ ಸಾಗುವಳಿ, ಹಕ್ಕುಪತ್ರ ಸಿಗಬಹುದು ಎಂಬ ಆಶಾ ಭಾವನೆಯಿಂದ ಕಾಯುತ್ತಿದ್ದಾರೆ.  ಅನೇಕ ಬಾರಿ ಕಛೇರಿಯಿಂದ ಕಛೇರಿಗಳಿಗೆ ಅಲೆದರೂ ಕೂಡ ಇದುವರೆಗು ಅರ್ಹರಿಗೆ ಭೂಮಿ ವಸತಿ ದೊರೆತಿಲ್ಲ. ರಾಜ್ಯ ಸೇರಿದಂತೆ ತುಮಕೂರು ಜಿಲ್ಲೆಯ ಈ ಭೂಮಿ ವಸತಿ ಸಮಸ್ಯೆಗಳನ್ನು ಬಗೆ ಹರಿಸಲು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ಶ್ರೀ ಹೆಚ್.ಎಸ್.ದೊರೆಸ್ವಾಮಿ ರವರ ನೇತೃತ್ವದ ಭೂಮಿ ವಸತಿ ಹೋರಾಟ ಸಮಿತಿಯಿಂದ 2018 ನೇ ಸಾಲಿನಿಂದ ಅನೇಕ ಬಾರಿ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ,ತಾಲ್ಲೂಕು ಕಛೇರಿಗಳ…

Read More

ಸಿರಾ: ಸಹಕಾರ ಸಂಘಗಳು ರೈತ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ.ನಾಗೇಶ್  ಹೇಳಿದರು. ತುಮಕೂರು ಒಕ್ಕೂಟದ ವತಿಯಿಂದ ಜಿಲ್ಲೆಯ ಸಿರಾ ನಗರದ ಚಂಗಾವರ ರಸ್ತೆಯ ಶೀಥಲ ಕೇಂದ್ರದ ಆವರಣದಲ್ಲಿ ಸುಮಾರು 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನಂದಿನಿ ಕ್ಷೀರ ಭವನ ಹಾಗೂ ವಿವಿಧ ರೈತಪರ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ಭಾರತ ಅತ್ಯಂತ ಪ್ರಭಾವಶಾಲಿ ರಾಷ್ಟ್ರವಾಗಿತ್ತು. ಎಲ್ಲ ಸಹಕಾರಿ ಆಧಾರದ ಮೇಲೆ ನಡೆಸಲಾಗುತ್ತಿತ್ತು. ಗ್ರಾಮಗಳಲ್ಲಿ ಎಲ್ಲರೂ ಒಗ್ಗೂಡಿ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಿದ್ದು. ಸಮಾಜದ ಎಲ್ಲರೂ ಸುಖವಾಗಿರಬೇಕೆಂದು ಯೋಚನೆ ಮಾಡುತ್ತಿದ್ದರು. ಕೆರೆ ಕಟ್ಟೆಗಳನ್ನು ಎಲ್ಲರೂ ಒಟ್ಟಿಗೆ ಸೇರಿ ನಿರ್ಮಿಸುತ್ತಿದ್ದಾರೆ. ಅದರ ಆಧಾರದ ಮೇಲೆ ನಡೆದುಕೊಂಡು ಬಂದಿದೆ. ಸರಕಾರಗಳು ಸಹ ಉತ್ತಮ ಸಹಕಾರ ನೀಡುತ್ತಿವೆ ಎಂದರು. ಸಿರಾ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಮಾತನಾಡಿ, ಸಂಘಟನೆ ಸದೃಡತೆ ಸಹಕಾರಿ ಕ್ಷೇತ್ರದಲ್ಲಿ ಏನು ಬೇಕಾದರೂ ಸಾಧಿಸಬಹುದು. ಅದರ ಉದಾಹರಣೆಯಾಗಿ. ಕರ್ನಾಟಕ ಸಹಕಾರ ಹಾಲು ಮಹಾಮಂಡಳಿ ಉದಾಹರಣೆಯಾಗಿದೆ. ರೈತರಿಗೆ ಅನುಕೂಲಗಳ ಬಗ್ಗೆ…

Read More

ಚಿತ್ರದುರ್ಗ:  ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಟಿ‌.ಬಿ. ಸರ್ಕಲ್ ಬಳಿ ಇರುವ  ನಗರದ ಪ್ರವಾಸಿ ಮಂದಿರದಲ್ಲಿ ಭಾರತೀಯ ದಲಿತ ಸಂಘರ್ಷ ಸಮಿತಿ ರಾಜ್ಯ ಅಧ್ಯಕ್ಷರಾದ ಸಮಾಜ ಸೇವಾ ರತ್ನ ಡಾ.ಎಚ್.ಪ್ರಕಾಶ್ ಬಿರಾವರ್ ಸಮ್ಮುಖದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ  ಸಭೆಯಲ್ಲಿ ಚಿತ್ರದುರ್ಗ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷರಾಗಿ ಗಾಂಧಿನಗರ ಮಹಂತೇಶ್  ಅವರನ್ನು ಹಾಗೂ ಹಿರಿಯೂರು ತಾಲ್ಲೂಕು ಅಧ್ಯಕ್ಷರಾಗಿ ಸೂರಗೊಂಡನಹಳ್ಳಿ ರಮೇಶ್ ಅವರನ್ನು ಆಯ್ಕೆ ಮಾಡಲಾಯಿತು. ಹಿರಿಯೂರು ಹಿಂದುಳಿದ ವರ್ಗಗಳ ತಾಲ್ಲೂಕು ಕಾರ್ಯಾಧ್ಯಕ್ಷರಾಗಿ ದರ್ಶನ್  ಅವರನ್ನು, ಹಿಂದುಳಿದ ವರ್ಗಗಳ ತಾಲ್ಲೂಕು ಪ್ರಧಾನ  ಕಾರ್ಯದರ್ಶಿಗಳಾಗಿ ರವಿಕುಮಾರ್ ಸೋಮೇರಹಳ್ಳಿ ರವರನ್ನು  ತಾಲ್ಲೂಕು  ಸಂಘಟನಾ ಕಾರ್ಯದರ್ಶಿಯಾಗಿ ಮಧು ಸೋಮೇರಹಳ್ಳಿ ರವರನ್ನು  ಆಯ್ಕೆಮಾಡಲಾಯಿತು. ಈ ಸಭೆಯಲ್ಲಿ ರಾಜ್ಯ ಕಾರ್ಯಧ್ಯಕ್ಷರಾದ ಕೆ.ತಿಮ್ಮರಾಜು, ಉಪಾಧ್ಯಕ್ಷರುಗಳಾದ ರಾಜಣ್ಣ, ಘಾಟ್ ಚಂದ್ರಪ್ಪ, ಜಗದೀಶ್, ಯುವ ಘಟಕದ ರಾಜ್ಯ ಅಧ್ಯಕ್ಷರಾದ ಎಂ.ಡಿ.ರಮೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ(ಎಳನೀರು ವೆಂಕಟೇಶ್), ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾದ ಹರೀಶ್, ಉಪಾಧ್ಯಕ್ಷರಾದ ಕರುಣ್ ಕುಮಾರ್, ಕಾರ್ಯದರ್ಶಿಗಳಾದ ಮೋಹನ್ ಕುಮಾರ್, ಕಾರ್ಯದರ್ಶಿಯಾದ ದಿವಾಕರ್ ಘಾಟ್, ದಲಿತ…

Read More

ಪಾವಗಡ: ಮಹಾಶಿವರಾತ್ರಿ ಅಂಗವಾಗಿ ಜೇಡಿ ಮಣ್ಣಿನಲ್ಲಿ ಶಿವಲಿಂಗಗಳನ್ನು ರಚಿಸಿ,  ಭಾರತಮಾತೆಯ ಮಧ್ಯಭಾಗದಲ್ಲಿ ಶಿವನ ಚಿತ್ರ ಬಿಡಿಸುವ ಮೂಲಕ ಸಾವಿರಾರು ಜನತೆಯ ಪ್ರಸಂಸೆಗೆ ಪ್ರೀತಿ ಪಾತ್ರವಾದ ಪಾವಗಡ ಪಟ್ಟಣದ ಬ್ರಾಹ್ಮಣರ ಬೀದಿಯ 70 ವರ್ಷದ ರಾಧಮ್ಮಜ್ಜಿಗೆ ಇಂದು ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್  ಶಾಲು ಹೊದಿಸಿ ಗೌರವ ಪೂರಕವಾಗಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಧಮ್ಮಜ್ಜಿ, ಕೋವಿಡ್ ಸಂಕಷ್ಟದಿಂದ ಭಾರತವನ್ನು ಪಾರು ಮಾಡುವಂತೆ ಪರಮಾತ್ಮ ಶಿವನನ್ನು   ಪೂಜಿಸುವ ಕಲಾಕೃತಿಯನ್ನು ಸುಮಾರು 2 ತಿಂಗಳುಗಳಿಂದ ಜೇಡಿ ಮಣ್ಣಿನಲ್ಲಿ ಶಿವಲಿಂಗಗಳನ್ನು ರಚಿಸಿ ಸಾಕಷ್ಟು ಶ್ರಮ ವಹಿಸಿ ನನ್ನ ಪ್ರತಿಭೆಯನ್ನು ತೋರ್ಪಡಿಸಿದ್ದೇನೆ. ಕಲಾ ಕೃತಿಯನ್ನು ವೀಕ್ಷಿಸಲು ಸಾವಿರಾರು ಭಕ್ತಾದಿಗಳು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಆದರೆ ಇಂದು ನಮ್ಮ ನಿವಾಸಕ್ಕೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಹಾಗೂ ತಂಡ ನನ್ನ ಪ್ರತಿಭೆಯನ್ನು ಗುರುತಿಸಿ ಆತ್ಮೀಯವಾಗಿ ಸನ್ಮಾನಿಸಿರುವುದು ನನಗೆ ತುಂಬಾ ಸಂತೋಷಕರವಾಗಿದೆ ಎಂದು  ಹೇಳಿದರು. ಹೆಲ್ಪ್ ಸೊಸೈಟಿ ತಂಡಕ್ಕೆ ಇಂತಹ ಪ್ರತಿಭೆಗಳನ್ನು ಮತ್ತಷ್ಟು ಗುರುತಿಸಿ ಸೇವೆ…

Read More

ಸರಗೂರು ಮತ್ತು ಹೆಚ್ ಡಿ ಕೋಟೆ ಹೆಗ್ಗಡ ದೇವನ ಕೋಟೆ ವಿಧಾನ ಸಭಾ ಕ್ಷೇತ್ರದ  ಶಾಸಕರಾದ ಅನಿಲ್ ಚಿಕ್ಕಮಾದುರವರ ಮಗಳ 2ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಶನಿವಾರ  ಮೈಸೂರಿನ  ವಿಜಯ ನಗರದ ಶ್ರೀ ಯೋಗಾನರಸಿಂಹ  ಸ್ವಾಮಿ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ತೆರಳಿ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು. ನಂತರ ದೇವಾಲಯದ ಆವರಣದಲ್ಲಿ ಜನರಿಗೆ ಊಟದ ಹಾಗೂ ಸಿಹಿಯನ್ನು ಶಾಸಕ ಅನೀಲ್ ಚಿಕ್ಕಮಾದು ಮತ್ತು ಅವರ ಧರ್ಮ ಪತ್ನಿ ಸೌಮ್ಯ ಅನೀಲ್ ಅವರು ವಿತರಣೆ ಮಾಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಚಿತ್ರದುರ್ಗ:  ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಪ್ರತಿ   ಬುಧವಾರ ಹಾಗೂ ಶನಿವಾರದ ಸಂತೆಗಳು ನಡೆಯುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕೊವಿಡ್ ಹಿನ್ನೆಲೆಯಲ್ಲಿ ವಾರದ ಸಂತೆಗಳನ್ನು ರದ್ದುಪಡಿಸಲಾಗಿತ್ತು. ಇದೀಗ ಕೊವಿಡ್ ನಿಯಂತ್ರಣಕ್ಕೆ ಬಂದಿರುವ ಸಂತೆಯನ್ನು ಮತ್ತೆ ಆರಂಭ ಮಾಡಲಾಗಿದೆ. ಹಿರಿಯೂರು ನಗರಸಭೆ ಆಡಳಿತದ ಅಧಿಕಾರಿಗಳ ಆದೇಶದ ಸಂಖ್ಯೆ  ನ. ಸ.ಹಿ.ಕ. ಶಾ. ಸಿ . ಆರ್ ೧/೨೦೨೧-೨೨  ನಗರಸಭೆ ಕಾರ್ಯಾಲಯದ  ಆದೇಶದ ಪ್ರಕಾರ ಕೋವಿಡ್ ಮತ್ತು ಓಮಿಕ್ರೋನ್ ಸಾಂಕ್ರಾಮಿಕ ರೋಗವು ಸಹಜ ಸ್ಥಿತಿಗೆ ತಲುಪಿರುವುದರಿಂದ  ನಗರಸಭೆ ಕಾರ್ಯಾಲಯದ ಆಡಳಿತ ಅಧಿಕಾರಿಗಳ ಆದೇಶದ ಮೇರೆಗೆ ವಾರದ  ಸಂತೆಯನ್ನು ಎ ಪಿ ಎಂಸಿ ಮಾರ್ಕೆಟ್ ನಿಂದ ಮೊದಲಿನಂತೆ  ಶನಿವಾರ ಹಿರಿಯೂರು ಸರ್ಕಾರಿ ಬಸ್ ನಿಲ್ದಾಣದ ಹಿಂಭಾಗದಲ್ಲಿನ ಬನ್ನಿಮಂಟಪ ಸಂತೇಪೇಟೆಯಲ್ಲಿ ಹಾಗೂ ಬುಧವಾರದ  ಟಿ.ಬಿ.ಸರ್ಕಲ್ ಬಳಿ ಮೊದಲಿನಂತೆ ಸಂತೆಯನ್ನು ಮಾಡುವಂತೆ ನಗರಸಭೆ ಆದೇಶ ಮಾಡಿತ್ತು. ಕಳೆದ ಎರಡು ಮೂರು ವರ್ಷಗಳಿಂದ ಕೊರೊಣ ಹಾಗೂ ಓಮಿಕ್ರೋನ್ ಸಾಂಕ್ರಾಮಿಕ ರೋಗದಿಂದ ತರಕಾರಿ ವ್ಯಾಪಾರಿಗಳ ಪರಿಸ್ಥಿತಿ ಗಳು ನೆಲಗುಂದಿದ್ದವು. ನಗರಸಭೆ ಆಡಳಿತ…

Read More

ತುಮಕೂರು: ಪದ್ಮಶ್ರೀ ಪುರಸ್ಕೃತ ಡಾ.ಸೂಲಗಿತ್ತಿ ನರಸಮ್ಮನವರ 101ನೇ ಜನ್ಮ ದಿನಾಚರಣೆಯು ಮಾರ್ಚ್ 6ರಂದು ಆಚರಿಸಲು ಉದ್ದೇಶಿಸಿದ್ದು,  101ನೇ ಜನ್ಮ ದಿನದ ಆಚರಣೆ ಸಮಿತಿಯು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ತುಮಕೂರಿನ ಎಂ.ಜಿ.ರಸ್ತೆಯ ಬಾಲ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಸಚಿವರಾದ ಎ.ನಾರಾಯಣ ಸ್ವಾಮಿ ಅವರು ಕಾರ್ಯಕ್ರಮಕ್ಕೆ ಸ್ವಾಗತ ಕೋರಿದ್ದಾರೆ. ಬೆಳಗ್ಗೆ 9 ಗಂಟೆಗೆ ಸ್ಥಳದಲ್ಲೇ ಡಾ.ಸೂಲಗಿತ್ತಿ ನರಸಮ್ಮನವರ ಭಾವಚಿತ್ರ ಕಲಾಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು,  ಸ್ಪರ್ಧೆಯಲ್ಲಿ ಆಯ್ಕೆಯಾದವರಿಗೆ ಪ್ರಥಮ ಬಹುಮಾನ 5 ಸಾವಿರ ರೂ. ದ್ವಿತೀಯ ಬಹುಮಾನ 3 ಸಾವಿರ ರೂಪಾಯಿ,  ತೃತೀಯ ಬಹುಮಾನವಾಗಿ 2 ಸಾವಿರ ರೂಪಾಯಿ ನಗದು ಘೋಷಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಗಂಗಸಂದ್ರದ ಸ್ಮಾರಕ ಸ್ಥಳದಲ್ಲಿ ಗದ್ದಿಗೆ ಪೂಜೆ ನೆರವೇರಲಿದೆ. 11:30ಕ್ಕೆ ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ರಾಷ್ಟ್ರೀಯ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು 101 ಗರ್ಭಿಣಿಯರಿಗೆ  ಸೀಮಂತ ಕಾರ್ಯ ಮತ್ತು ಮಡಿಲು ತುಂಬುವ ಕಾರ್ಯಕ್ರಮ ಹಾಗೂ 180 ಸೂಲಗಿತ್ತಿಯರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ…

Read More

ಗುಬ್ಬಿ: ಚೀರನಹಳ್ಳಿ ಮತ್ತು ಬೆಳ್ಳಳ್ಳಿ ಗ್ರಾಮದಲ್ಲಿ ದುರಸ್ತಿ ಮತ್ತು ಪರಿವರ್ತಕ ಸ್ಥಳಾಂತರಕ್ಕೆ ಸೂಚಿಸಿದ್ದರೂ ಬೇಜವಾಬ್ದಾರಿ ತೋರಿದ ಬೆಸ್ಕಾಂ ಸಿಬ್ಬಂದಿ  ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಅವರು ಬೆಸ್ಕಾಂ ಮುಖ್ಯ ಎಂಜಿನಿಯರ್ ಲೋಕೇಶ್ ಅವರಿಗೆ ಮೊಬೈಲ್ ಮೂಲಕ ತರಾಟೆಗೆ ತೆಗೆದುಕೊಂಡ ಘಟನೆ ಇಂದು ಚೀರನಹಳ್ಳಿ ಗ್ರಾಮದ ವಿವಿಧ ಕಾಮಗಾರಿ ಪೂಜಾ ಕಾಮಗಾರಿಗೆ ಆಗಮಿಸಿದ ಸಂದರ್ಭದಲ್ಲಿ ಜರುಗಿತು . ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿಯ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾದ ಹಿನ್ನೆಲೆ ಗದ್ದೆಹಳ್ಳಿ ಗ್ರಾಮದಲ್ಲಿ ಕಳೆದ 15 ವರ್ಷಗಳಿಂದಲೂ ಕೆಲ ಕುಟುಂಬಗಳ ಮನೆಗೆ ವಿದ್ಯುತ್ ಸಂಪರ್ಕ ಇಲ್ಲದಿರುವ ಬಗ್ಗೆ ತುಮಕೂರು ಜಿಪಂ ಕೆಡಿಪಿ ಸಭೆಯಲ್ಲಿ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ಬಗ್ಗೆ ಪ್ರಸ್ತಾಪಿಸಿ ಕೂಡಲೇ ಚೀರನಹಳ್ಳಿಯಲ್ಲಿ ವಿದ್ಯುತ್ ದುರಸ್ಥಿ ಹಾಗೂ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿ ಹಲವು ಮನೆಗಳ ಕತ್ತಲು ನಿವಾರಿಸಲು ಸೂಚಿಸಿದ್ದರೂ, ಜಿಲ್ಲಾ ಸಚಿವರ ಮುಂದೆ ಕೆಲಸ ಮಾಡುವ ಮಾತು ಆಡಿದ ಸಿಬ್ಬಂದಿ ಈಗ ಕಾಲ ಕಳೆಯುತ್ತಿರುವುದು ಅವರ…

Read More