Author: admin

ತುಮಕೂರು:  ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಕಳೆದ 20ವರ್ಷಗಳಿಂದ ಶನೇಶ್ವರ ಸ್ವಾಮಿ ಸೇವಾಸಮಿತಿ ಮಹಾಶಿವರಾತ್ರಿ ಹಬ್ಬದ ಮರುದಿವಸ ಪ್ರತಿ ವರ್ಷವು ಸಹ ಮಹಾ ದಾಸೋಹ ನಡೆಸುವ ಮೂಲಕ  ದೇವಾಲಯವು ಹೆಸರುಗಳಿಸಿದೆ. ಪ್ರತಿ ಬಾರಿಯೂ ಸಹ ಭಕ್ತರ ಸಹಕಾರ ದಿಂದ ದಾಸೋಹ ಸೇವೆಗಳು ನೆಡೆದುಕೊಂಡು ಬರುತ್ತಿದೆ. ಕಲ್ಲೂರು ಗ್ರಾಮಕ್ಕೆ ಸೇರಿರುವ ಸಾಕಷ್ಟು ಹಳ್ಳಿ ಗಳಿಂದ ಶ್ರೀ ಶನೇಶ್ವರ ಸ್ವಾಮಿ ದೇವಾಲಯದ ಪೂಜಾ ಕಾರ್ಯಕ್ರಮ ದಲ್ಲಿ ಭಾಗವಹಿಸುವ ಸಹಾಸ್ರರು ಭಕ್ತರು ಮಹಾಶಿವರಾತ್ರಿ ಹಬ್ಬದ ಮರುದಿವಸ ದಾಸೋಹ ವ್ಯವಸ್ಥೆಯನ್ನು ದವಸ ಧಾನ್ಯಗಳನ್ನು ನೀಡುವ ಮೂಲಕ ಭಕ್ತರು ತಮ್ಮ ಸೇವೆಯನ್ನು ನೀಡುತ್ತಿದ್ದಾರೆ. ಇತಿಹಾಸ ಪ್ರಸಿದ್ಧ ವಾದ ಈ ಶನೇಶ್ವರ ಸ್ವಾಮಿ ದೇವಾಲಯವು ಈ ಭಾಗದ ಜನತೆಯ ಆರಾಧ್ಯದೈವವಾಗಿದೆ.  ಮಹಾಶಿವರಾತ್ರಿ ಹಬ್ಬದ ದಿನದಲ್ಲಿ ಶನೇಶ್ವರ ಸ್ವಾಮಿ ಗೆ ವಿಶೇಷ ಅಲಂಕಾರ. ಪೂಜಾ ಕಾರ್ಯಕ್ರಮ ನೆಡೆಯಲಿದ್ದು ದೂರದ ಜಿಲ್ಲೆ. ತಾಲೂಕು ಕೇಂದ್ರಗಳಿಂದ ಕ್ಷೇತ್ರ ಕ್ಕೆ ಭಕ್ತರು ಆಗಮಿಸುತ್ತಾರೆ. ಎಂದು ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ತಿಳಿಸಿದ್ದಾರೆ. ಕಲ್ಲೂರು  ಗ್ರಾಮ…

Read More

ತುಮಕೂರು: ಮೈಸೂರಿಗೆ ದಸರಾ ಹಬ್ಬ ಹೇಗೆ ಭೂಷಣವೋ, ಹಾಗೆಯೇ ಕಲ್ಪತರು ನಾಡಿಗೆ ಸಿದ್ದಗಂಗಾ ಮಠ ಜಾತ್ರೆ ಕೂಡ ಪ್ರಮುಖ ಹಬ್ಬವಾಗಿದೆ. ಈ ಜಾತ್ರೆಯ ಸಂದರ್ಭದಲ್ಲಿ ಮಠದಲ್ಲಿ ಭಕ್ತರಿಗೆ ವಿತರಿಸಲಾಗುವ ಪ್ರಸಾದ ಕೂಡ ವಿಶೇಷತೆಯಿಂದ ಕೂಡಿದೆ. ಕೊರೊನಾದಿಂದ ಕಳೆಗುಂದಿದ್ದ ಜಾತ್ರೆಯನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಜಾತ್ರೆಗೆ ಆಗಮಿಸುತ್ತಿರುವ ಭಕ್ತರಲ್ಲಿ ಹಬ್ಬದ ಸಡಗರ ಮನೆ ಮಾಡಿದೆ. ಶಿವರಾತ್ರಿ  ಅಂಗವಾಗಿ ಪ್ರತಿ ಬಾರಿಯಂತೆ ಈ ಬಾರಿಯೂ ತಂಬಿಟ್ಟು ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಕಡ್ಲೆ, ಶೇಂಗಾ, ಅಕ್ಕಿ, ಎಳ್ಳು, ಕೊಬ್ಬರಿ,  ಏಲಕ್ಕಿಯಂತಹ ತರಹೇವಾರಿಯ 34 ಸಾವಿರ ತಂಬಿಟ್ಟು ತಯಾರಿಸಲಾಗಿದೆ. ಈ ವಿಶೇಷ ಸಂದರ್ಭದಲ್ಲಿ ಮಾತನಾಡಿದ ಸಿದ್ದಗಂಗಾ ಮಠದ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಕೆ.ಎಸ್. ಉಮಾಮಹೇಶ್ , ನಮ್ಮ ಸಿದ್ದಗಂಗಾಮಠವು ಸುಮಾರು ಏಳು  ಶತಮಾನವುಳ್ಳ ಮಠವಾಗಿದೆ. ಗ್ರಾಮೀಣ ಪ್ರದೇಶದವರ ಶ್ರೇಯೋಭಿವೃದ್ಧಿಗಾಗಿ ತುಡಿತ ಹೊಂದಿದ್ದ ಲಿಂಗೈಕ್ಯ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರು 1964ರಲ್ಲಿ ಸಣ್ಣ ಪ್ರಮಾಣದಲ್ಲಿ ಈ ವಸ್ತು ಪ್ರದರ್ಶನವನ್ನು ಪ್ರಾರಂಭಿಸಿದರು. ಇಂದು ಹೆಮ್ಮರವಾಗಿ ಬೆಳೆದು…

Read More

ಪಾವಗಡ: ಶ್ರೀ ರಾಮಕೃಷ್ಣ  ಸೇವಾಶ್ರಮ , ಪಾವಗಡ  ಹಾಗೂ ಇನ್ಫೋಸಿಸ್ ಫೌಂಡೇಶನ್  ಪ್ರವಾಹ ಪರಿಹಾರ ಕಾರ್ಯದ ಮುಂದುವರಿ ಭಾಗವಾಗಿ, ಲಕ್ಷಾಂತರ ರೂಪಾಯಿ ಬೆಲೆಬಾಳುವ ವಿದ್ಯಾಭ್ಯಾಸದ ಸಾಮಗ್ರಿಗಳನ್ನು ಆಂಧ್ರಪ್ರದೇಶದ  ಕಡಪ, ಚಿತ್ತೂರ್, ತಿರುಪತಿ  ಪ್ರವಾಹದ ಪ್ರದೇಶಗಳಿಗೆ ನೀಡಲಾಯಿತು. ಸರಿಸುಮಾರು 126 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಈ ಸಾಮಗ್ರಿಗಳನ್ನು ವಿತರಿಸಲು ಏರ್ಪಾಡು ಮಾಡಲಾಗಿದೆ. ಕಂಪ್ಯೂಟರ್ ಗಳು, ನೋಟ್ ಬುಕ್ಸ್, ಮೇಜು, ಬೆಂಚುಗಳು, ಅಡುಗೆಪಾತ್ರೆಗಳು, ನೀರಿನ ಬಾಟಲಿಗಳು ಸೇರಿದಂತೆ ನಾನಾ ರೀತಿಯ ಶಿಕ್ಷಣ ಪರಿಕರಗಳನ್ನು ಎರಡು ಬೃಹತ್ ಲಾರಿಗಳಲ್ಲಿ ರವಾನಿಸಲಾಯಿತು. ಸ್ವಾಮಿ ಜಪಾನಂದಜೀ ರವರ ನೇತೃತ್ವದಲ್ಲಿ ಈ ಯೋಜನೆ ಕಳೆದ ಹಲವಾರು ತಿಂಗಳುಗಳಿಂದ ಏಕ ಪ್ರಕಾರವಾಗಿ ನಡೆಯುತ್ತಿದೆ. ಇಂದು ಎಲ್ಲಾ ಪರಿಕರಗಳನ್ನು  ಹೊತ್ತ ವಾಹನ ಕಡಪದ ಕಡೆಗೆ ಹೊರಟಿತು . ಈ ಸಂದರ್ಭದಲ್ಲಿ ಆಶ್ರಮದ ಸೇವಾವೃತ್ತಿಗಳಾದ ಸುಧೇಶಬಾಬುಜಿ, ಲೋಕೇಶ್ ದೇವರಾಜ್ ಹಾಗೂ  ಬೆಂಗಳೂರ ಶ್ರೀ ರಾಮಕೃಷ್ಣ  ಮಠದ ಸ್ವಯಂ ಸೇವಕರು ಭಾಗವಹಿಸಿದ್ದರು . ವರದಿ:  ನಂದೀಶ,  ಕೊತ್ತೂರು ನಿಡಗಲ್ ಹೋಬಳಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ತುರುವೇಕೆರೆ:  ತಾಲ್ಲೂಕಿನ ಜೋಡಿಲಿಂಗೇಶ್ವರ ಕ್ಷೇತ್ರವಾದ ಕೋಡಿನಾಗಸಂದ್ರದಲ್ಲಿ ಇಂದು  ಶ್ರೀ ಕೋಡಿಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬಹಳ ವೈಭವದ ಮತ್ತು ವಿಜೃಂಭಣೆಯಿಂದ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಳೆದ 14 ವರ್ಷಗಳಿಂದ ಇಲ್ಲಿ ಮಹಾಶಿವರಾತ್ರಿ ಹಬ್ಬ ನಡೆಯುತ್ತಿದೆ. ಈ ವಿಶೇಷ ಪೂಜಾ ಕಾರ್ಯಕ್ಕೆ ಸಾವಿರಾರು ಜನರು ಸೇರುತ್ತಿದ್ದಾರೆ. ಈ ಬಾರಿ ಪೂಜಾ ಕಾರ್ಯಕ್ಕೆ  ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರು ಆಗಮಿಸಿ ದೇವರ ದರ್ಶನ ಪಡೆದುಕೊಂಡರು. ಮಹಾಶಿವರಾತ್ರಿಯ ಪ್ರಯುಕ್ತ ಪಕ್ಕದ ಕೆರೆಯಲ್ಲಿ ವಿಶೇಷವಾಗಿ ಲಿಂಗವನ್ನು ಪ್ರತಿಷ್ಠಾಪನೆ ಮಾಡಿದ್ದು, ಇದು ಪೂಜಾ ಕಾರ್ಯದ ಕೇಂದ್ರ ಬಿಂದುವಾಗಿತ್ತು. ಮೆರವಣಿಗೆ ಮತ್ತು ಪೂಜಾ ಕಾರ್ಯಕ್ರಮ ಮುಗಿದ ಮೇಲೆ, ನೆರೆದಿದ್ದ ಸಾವಿರಾರು ಭಕ್ತರಿಗೆ ಗ್ರಾಮಸ್ಥರಿಂದ ಅನ್ನ ಸಂತರ್ಪಣೆ ಕಾರ್ಯ ನಡೆಯಿತು. ವರದಿ : ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಯುದ್ಧಪೀಡಿತ ಉಕ್ರೇನ್‍ನಿಂದ ವಿದ್ಯಾರ್ಥಿಗಳನ್ನು ವಾಪಸ್ ಕರೆತರಲು ಕಾರ್ಯಾಚರಣೆಗಿಳಿಯುವಂತೆ ಪ್ರಧಾನಿ ನರೇಂದ್ರಮೋದಿ ಭಾರತೀಯ ವಾಯುಸೇನೆಗೆ ಸೂಚನೆ ನೀಡಿದ್ದಾರೆ. ಕಳೆದ ಗುರುವಾರದಿಂದ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ್ದು, ಯುದ್ದ ಆರಂಭವಾಗಿದೆ. ಉಕ್ರೇನ್‍ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ವಾಪಸ್ ಕರೆತರಲು ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೂ ಖಾಸಗಿ ವಿಮಾನಗಳನ್ನು ಬಳಕೆ ಮಾಡಿ ಆಪರೇಷನ್ ಗಂಗಾ ನಡೆಸಲಾಗುತ್ತಿದೆ. ಉಕ್ರೇನ್‍ನಲ್ಲಿ ಪರಿಸ್ಥಿತಿ ದಿನೇ ದಿನೇ ವಿಳಂಬ ಮಾಡುವುದು ಅಪಾಯಕಾರಿ ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ವಾಯುಸೇನೆಗೆ ಈ ಸೂಚನೆ ನೀಡಿದ್ದು, ಇಂದಿನಿಂದಲೇ ಸಿ-17 ವಿಮಾನಗಳ ಮೂಲಕ ಸೇನೆ ಕಾರ್ಯಾಚರಣೆಗಿಳಿಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ವರದಿ:  ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಕೋಲಾರ: ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಬಂದ ಆರು ಮಂದಿ ಡಕಾಯಿತರು ಎಪಿಎಂಸಿ ಮಾಜಿ ಅಧ್ಯಕ್ಷರ ಮನೆಗೆ ನುಗ್ಗಿ ಪಿಸ್ತೂಲು, ಮಾರಕಾಸ್ತ್ರ ತೋರಿಸಿ ಬೆದರಿಸಿ 25 ಲಕ್ಷ ನಗದೂ ಸೇರಿದಂತೆ 45 ಲಕ್ಷ ಮೌಲ್ಯದ 1 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಕೋಲಾರದ ಸಿ.ಬೈರೇಗೌಡನಗರ(ಬೆಮೆಲ್ ಲೇಔಟ್)ದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ್ ಅವರ ಮನೆಯಲ್ಲಿ ಈ ಡಕಾಯಿತಿ ನಡೆದಿದೆ. ಎರಡು ಅಂತಸ್ತಿನ ಮನೆಯ ಮೊದಲನೆ ಮಹಡಿಯಲ್ಲಿ ಪತ್ನಿ, ಮಗನೊಂದಿಗೆ ರಮೇಶ್ ವಾಸವಾಗಿದ್ದಾರೆ. ಬೆಳಗ್ಗೆ ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ರಮೇಶ್ ಅವರು ರಾತ್ರಿ 7.30ರಲ್ಲಿ ಮನೆಗೆ ಬಂದಿದ್ದಾರೆ. 8 ಗಂಟೆ ಸುಮಾರಿನಲ್ಲಿ ಇನೋವಾ ಕಾರಿನಲ್ಲಿ ಬಂದ ಆರು ಮಂದಿ ಡಕಾಯಿತರು ರಮೇಶ್ ಅವರ ಮನೆ ಬಾಗಿಲು ತಟ್ಟಿದ್ದಾರೆ. ಒಳಗಿನಿಂದಲೇ ಯಾರೆಂದು ವಿಚಾರಿಸಿದಾಗ, ತಾವು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ನಿಮ್ಮ ಮನೆ ತಪಾಸಣೆ ಮಾಡಬೇಕೆಂದು ಹೇಳಿದ್ದಾರೆ. ರಮೇಶ್ ಅವರ ಪತ್ನಿ ಅನುಮಾನಗೊಂಡು…

Read More

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ರಾಜ್ಯಾದ್ಯಂತ 8,73,794 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಕಳೆದ ವರ್ಷ 8.76 ಲಕ್ಷ ವಿದ್ಯಾರ್ಥಿಗಳು ಹೆಸರು ನೊಂದಾಯಿಸಿದ್ದರು. ಆದರೆ ಪರೀಕ್ಷೆಗೆ 8.71 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.ಕಳೆದ ಎರಡು ವರ್ಷಗಳ ಎಲ್ಲಾ ಬಡ್ತಿ ನೀತಿಯಿಂದಾಗಿ ಈ ಸಂಖ್ಯೆಗೆ ಕಾರಣವಾಗಿದೆ ಎಂದು ಶಿಕ್ಷಕರು ಹೇಳುತ್ತಾರೆ. ಈ ವಿದ್ಯಾರ್ಥಿಗಳು 8ನೇ ತರಗತಿ (2019-20) ಮತ್ತು 9ನೇ ತರಗತಿ (2020-21)ಯಲ್ಲಿದ್ದಾಗ ಪರೀಕ್ಷೆಗಳನ್ನು ತೆಗೆದುಕೊಂಡಿಲ್ಲ. ಎರಡೂ ವರ್ಷಗಳಲ್ಲಿ ಎಲ್ಲರಿಗೂ ಬಡ್ತಿ ನೀಡಲಾಗಿದೆ. ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಾರ್ಷಿಕ ಪರೀಕ್ಷೆ ಬರೆಯುತ್ತಿದ್ದಾರೆ.ಹಿಂದಿನ ವರ್ಷಗಳಿಗೆ ಹೋಲಿಸಿದರೆ ಖಾಸಗಿ ಅಭ್ಯರ್ಥಿಗಳ ಸಂಖ್ಯೆಯೂ ಹೆಚ್ಚಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಕೆಎಸ್‍ಇಇಬಿ) ಹೇಳಿದೆ. ಸಾಮಾನ್ಯವಾಗಿ ಸುಮಾರು 20,000-25,000 ಅಭ್ಯರ್ಥಿಗಳು ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಾರೆ. ಈ ಬಾರಿ ಆ ಸಂಖ್ಯೆ 46,421 ಆಗಿದೆ.ಕಳೆದ ಬಾರಿ ಸರ್ಕಾರ ವಿದ್ಯಾರ್ಥಿಗಳಿಗೆ ಎಲ್ಲಾ ಬಡ್ತಿ ನೀತಿಯನ್ನು ಘೋಷಿಸಿದರೆ, ಅನೇಕರು ಈ ಬಾರಿಯೂ ಅದೇ ರೀತಿಯ ವಿನಮ್ರತೆಯನ್ನು ನಿರೀಕ್ಷಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳ ನೋಂದಣಿಗೆ…

Read More

ಯುದ್ಧ ಪೀಡಿತ ಪ್ರದೇಶದಲ್ಲಿ ಜನ ಆತಂಕಗೊಳಗಾಗಿದ್ದು, ಸುಮಾರು 50 ಲಕ್ಷಕ್ಕೂ ಹೆಚ್ಚು ಮಂದಿ ಉಕ್ರೇನ್ ತೊರೆಯುತ್ತಿದ್ದಾರೆ. ಪೋಲ್ಯಾಂಡ್ ಗಡಿ ಭಾಗದಲ್ಲಿ ಸುಮಾರು ಎರಡೂವರೆ ಲಕ್ಷ ಜನ ಕಿಕ್ಕಿರಿದು ತುಂಬಿದ್ದು, ತಮಗೆ ಆಶ್ರಯ ಕಲ್ಪಿಸುವಂತೆ ಮೊರೆಯಿಡುತ್ತಿದ್ದಾರೆ. ಉಕ್ರೇನ್ ಮೂರು ದಿಕ್ಕುಗಳ ನೆರೆ ರಾಷ್ಟ್ರಗಳಿಗೂ ಮಹಾವಲಸೆ ಆರಂಭವಾಗಿದೆ. ಸುಮಾರು 50 ಲಕ್ಷಕ್ಕೂ ಅಕ ಮಂದಿ ಉಕ್ರೇನ್ ತೊರೆದಿದ್ದಾರೆ. ರಷ್ಯಾ ನಾಗರಿಕ ಪ್ರದೇಶಗಳನ್ನೂ ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿರುವುದರಿಂದ ಜನ ಪ್ರಾಣ ಭೀತಿಯಿಂದ ಇದ್ದು, ಪೋಲ್ಯಾಂಡ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಆಶ್ರಯ ಬಯಸುತ್ತಿದ್ದಾರೆ. ಈವರೆಗೂ ಆತ್ಮವಿಶ್ವಾಸದಿಂದ ಹೋರಾಟ ನಡೆಸಿದ ಉಕ್ರೇನ್ ನಿನ್ನೆಯಿಂದ ಹಿನ್ನಡೆ ಅನುಭವಿಸುವಂತೆ ಭಾಸವಾಗಿದೆ. ರಷ್ಯನ್ ಪಡೆ ಬಹುತೇಕ ಉಕ್ರೇನ್ ನಗರಗಳನ್ನು ಸುತ್ತುವರೆದು ಮಾರಣಾಂತಿಕ ಆಕ್ರಮಣಕ್ಕೆ ಸಜ್ಜುಗೊಂಡಿದೆ. ಕೊನೆ ಹಂತದ ಮಾತುಕತೆಯ ಫಲಶೃತಿಯನ್ನು ನಿರೀಕ್ಷಿಸಲಾಗುತ್ತಿದ್ದು, ಒಂದು ವೇಳೆ ಅಲ್ಲಿ ಸಂಧಾನ ಸಾಧ್ಯವಾಗದೇ ಹೋದರೆ ಶತ್ರು ಪಡೆ ಉಕ್ರೇನನ್ನು ಕೈ ವಶ ಮಾಡಿಕೊಳ್ಳಲು ಸಜ್ಜಾಗಿದೆ. ಉಪಗ್ರಹ ಆಧಾರಿತ ಚಿತ್ರಗಳು, ಸೇನಾ ಪಡೆಯ ಜಮಾವಣೆಯನ್ನು ಖಚಿತ ಪಡಿಸಿವೆ. ಈ…

Read More

ಸರ್ಕಾರದ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಲು ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ ಈ ಮೂಲಕ ಇಡೀ ಜಿಲ್ಲಾಡಳಿತ ಆಡಳಿತ ಯಂತ್ರವನ್ನ ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಮೂಲಕ ಜನರ ಸಂಕಷ್ಟಗಳಿಗೆ ಮಿಡಿಯುವ ಜನಸ್ನೇಹಿ ಸರ್ಕಾರ ನಮ್ಮದಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು. ಹೊನ್ನಾಳಿ ಪಟ್ಟಣದ ಅಂಗಳ ಮೈದಾನದಲ್ಲಿ ಹಮ್ಮಿಕೊಂಡಿದ್ದ ನೂತನ ಕಂದಾಯ ಉಪವಿಭಾಗದ ಉಪವಿಭಾಗಾಧಿಕಾರಿಗಳ ಕಚೇರಿ ಉದ್ಘಾಟನಾ ಸಮಾರಂಭ ಹಾಗೂ ಸಂಜೀವಿನಿ ಯೋಜನೆ ಅಡಿಯಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ನಿಧಿ ಚೆಕ್ ವಿತರಣೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ 1035 ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಲಾಗಿದೆ.ದಾವಣಗೆರೆ ಜಿಲ್ಲೆಯಲ್ಲಿ 84 ಜನವಸತಿ ಪ್ರದೇಶಗಳ 39 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿದ್ದು ಅದರಲ್ಲಿ ಹೊನ್ನಾಳಿ ತಾಲ್ಲೂಕಿನಲ್ಲಿ 5 ಗ್ರಾಮಗಳು ಕೂಡ ಸೇರ್ಪಡೆಯಾಗಿವೆ. ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡುವುದರಿಂದ ಆ ಗ್ರಾಮಕ್ಕೆ ಸರ್ಕಾರದ…

Read More

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಮ್ಮ ಆದಾಯ 10 ಪಟ್ಟು ಹೆಚ್ಚಾಗಿದೆ ಎಂದು ದೋಣಿ ನಿರ್ವಾಹಕರು ಹೇಳಿದ್ದಾರೆ. ದೇಶದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಇದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.  ನಮ್ಮ ಆದಾಯವು ವೃದ್ಧಿಸಿದೆ ಎಂದು ದೋಣಿ ನಡೆಸುವ ಸೋನಿನಿಸಾದ್ ತಿಳಿಸಿದ್ದಾರೆ. ನಮ್ಮ ಮುತ್ತಾತ ಅವರು ಆಸಿಘಾಟ್‍ ನಲ್ಲಿ ದೋಣಿ ನಡೆಸುತ್ತಿದ್ದರು. ಈ ಭಾಗದಲ್ಲಿ ಸುಮಾರು ಒಂದೂವರೆ ಲಕ್ಷ ಕುಟುಂಬಗಳು ಈ ವೃತ್ತಿ ಅವಲಂಬಿಸಿವೆ. ಅವರ ದೈನಂದಿನ ಖರ್ಚು, ವೆಚ್ಚಗಳನ್ನು ನಿಬಾಯಿಸುವುದು ಒಂದು ಕಾಲದಲ್ಲಿ ಕಷ್ಟವಾಗಿತ್ತು. ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನದಿಗಳನ್ನು ಸ್ವಚ್ಛಗೊಳಿಸಿದ್ದರಿಂದ, ದೇವಸ್ಥಾನಗಳನ್ನು ಪುನರುಜ್ಜೀವನಗೊಳಿಸಿದ್ದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ ಎಂದಿದ್ದಾರೆ. ಚಂದನ್ ಶೈನಿ ಮಾತನಾಡಿ, ದೋಣಿಗಳಿಗೆ ಗ್ಯಾಸ್ ಸಂಪರ್ಕ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. 84 ಘಾಟ್‍ಗಳು ಸುಸಜ್ಜಿತವಾಗಿವೆ. ಪ್ರಯಾಣಿಕರಿಗೆ ನಾಲ್ಕು ಪಟ್ಟು ಹೆಚ್ಚಾಗಿದೆ. ಆದಾಯವೂ ದ್ವಿಗುಣಗೊಂಡಿದೆ ಎಂದಿದ್ದಾರೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ…

Read More