Author: admin

ಬೆಂಗಳೂರು: ಗಣರಾಜ್ಯೋತ್ಸವ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋ ತೆರವುಗೊಳಿಸಿ ವಿವಾದಕ್ಕೀಡಾಗಿದ್ದ ರಾಯಚೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ವರ್ಗಾವಣೆ ಮಾಡಲಾಗಿದೆ. ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ ಆದೇಶ ಹೊರಡಿಸಿದ್ದಾರೆ. ಸಿಜೆ ಅವರ ನಿರ್ದೇಶನದ ಮೇರೆಗೆ ರಾಯಚೂರಿನಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನ ಗೌಡ ಅವರನ್ನು ಬೆಂಗಳೂರಿನಲ್ಲಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮೇಲ್ಮನವಿ ಪ್ರಾಧಿಕಾರದ ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಆದೇಶಿಸಲಾಗಿದೆ. ಮಲ್ಲಿಕಾರ್ಜುನ ಗೌಡ ಅವರನ್ನು ಬೆಂಗಳೂರಿನಲ್ಲಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮೇಲ್ಮನವಿ ಪ್ರಾಧಿಕಾರದ ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಆದೇಶಿಸಲಾಗಿದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ  ಧ್ವಜಾರೋಹಣ ಸ್ಥಳದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವ ಚಿತ್ರ ಹಾಗೂ ಗಾಂಧೀಜಿ ಭಾವ ಚಿತ್ರವನ್ನಿಡಲಾಗಿತ್ತು. ಆದರೆ, ಅಂಬೇಡ್ಕರ್ ಚಿತ್ರವನ್ನು ತೆರವುಗೊಳಿಸಿ ಬಳಿಕ ಮಲ್ಲಿಕಾರ್ಜುನ ಗೌಡ ಧ್ವಜಾರೋಹಣ ಮಾಡಿದ್ದು, ಇದರ ವಿರುದ್ಧ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಯುತ್ತಿದೆ.…

Read More

ಪಾವಗಡ: ಅಂಬೇಡ್ಕರ್ ಭವನದ ಮೇಲೆಯೇ ವಿದ್ಯುತ್ ತಂತಿಯೊಂದು ಹಾದು ಹೋಗಿದ್ದು, ಇದನ್ನು ತೆರವುಗೊಳಿಸಲು ಸಾಕಷ್ಟು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ. ಪಾವಗಡ ತಾಲೂಕಿನ ನಿಡಿಗಲ್ ಹೋಬಳಿಯ ಸಿ.ಕೆ.ಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುತ್ತೂರು ಗ್ರಾಮದಲ್ಲಿ ಇಂತಹದ್ದೊಂದು ಸಮಸ್ಯೆ ಉದ್ಭವವಾಗಿದ್ದು,  ಇಲ್ಲಿನ ಅಂಬೇಡ್ಕರ್ ಭವನದ ಮೇಲೆ ಅಪಾಯಕಾರಿ ಅಂತರದಲ್ಲಿ ವಿದ್ಯುತ್ ತಂತಿ ಹಾದು ಹೋಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಯ ಬಗ್ಗೆ ಇಲ್ಲಿನ ನಿವಾಸಿಗಳು ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಜರಗಿಸಿಲ್ಲ ಎಂದು ಗ್ರಾಮಸ್ಥರಾದ ಹನುಮಂತರಾಯಪ್ಪ, ಸಣ್ಣಪ್ಪ, ಚಿಕ್ಕಣ್ಣ ಆಕ್ರೋಶ ವ್ಯಕ್ತಪಡಿಸಿದರು. ವರದಿ: ನಂದೀಶ್ ಕೊತ್ತೂರ್, ನಿಡಿಗಲ್ ಹೋಬಳಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ತುಮಕೂರು: ರಾಜ್ಯ ಸರ್ಕಾರದ ಬಳಿ: 19.39 ಲಕ್ಷ ಎಕರೆ ಜಮೀನು, ಲಭ್ಯವಿದ್ದು, ಈ ಜಮೀನನ್ನು ರಾಜ್ಯ ಸರ್ಕಾರ ಖಾಸಗಿ ಸಂಘ, ಸಂಸ್ಥೆ, ಧಾರ್ಮಿಕ ಕೇಂದ್ರ ಟ್ರಸ್ಟ್, ಇತ್ಯಾದಿ ಬೃಹತ್ ಉದ್ಯಮಿಗಳಿಗೆ ಗೋಮಾಳ ಸರ್ಕಾರಿ ಭೂಮಿಯನ್ನು ಗುತ್ತಿಗೆ ಭೋಗ್ಯಕ್ಕೆ ನೀಡಲು ಈಗಾಗಲೇ ಕಂದಾಯ ಸಚಿವರ ನೇತೃತ್ವದಲ್ಲಿ ಉಪ ಸಮಿತಿ ರಚನೆ ಮಾಡಿರುವುದು ಖಂಡನೀಯವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ ತುಮಕೂರು ಘಟಕದ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಸಿ.ಪಿ.ಐ. , ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐ ನ ಜಿಲ್ಲಾ ಕಾರ್ಯದರ್ಶಿ ಗಿರೀಶ್, ರಾಜ್ಯಾದ್ಯಂತ ಈ ಹಿಂದೆಯೇ ಲಕ್ಷಾಂತರ ಬಗರ್ ಹುಕುಂ ಸಾಗುವಳಿದಾರರು ತಾವು ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿಯ ಹಕ್ಕು ಪತ್ರ ಕೋರಿ ಫಾರ್ಮ್ ನಂಬರ್ 50, 53, ಮತ್ತು 57ರಲ್ಲಿ ಅಕ್ರಮ-ಸಕ್ರಮ ಸಮಿತಿಗೆ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಇನ್ನೂ ಭೂಮಿ ಮಂಜೂರಾಗಿಲ್ಲ. ಹೀಗಿರುವಾಗ ಇಂತಹ ಬಗರ್ ಹುಕುಂ…

Read More

ತುಮಕೂರು:  ತುಮಕೂರಿನ ಯುವಕರೇ ಸೇರಿ ನಿರ್ಮಿಸಿರುವ  ಮಾಡಿರುವ ‘ದೋಖಾ ದೋಸ್ತಿ’ ಚಿತ್ರ ನಗರದ ಗಾಯತ್ರಿ ಚಿತ್ರಮಂದಿರದಲ್ಲಿ  ಬಿಡುಗಡೆಯಾಗಿದೆ. ಚಿತ್ರದ ಕುರಿತು ಮಾತನಾಡಿದ  ದೋಖಾ ದೋಸ್ತಿ ಚಿತ್ರದ ನಾಯಕ, ಯುವ ಪ್ರತಿಭೆಗಳು ಸೇರಿ ಈ ಚಿತ್ರ ಮಾಡಿದ್ದೇವೆ. ಈ ಸಿನಿಮಾವನ್ನು ತುಂಬಾ ಜನರು ನೋಡಿ ನಮ್ಮನ್ನು  ಆಶೀರ್ವದಿಸಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಚಿತ್ರ ನೋಡಿ ನಮ್ಮನ್ನು ಆಶೀರ್ವದಿಸಿ. ನಾವು ನಿಮ್ಮ ಮನೆಯ ಮಕ್ಕಳು, ತುಮಕೂರಿನ ಯುವ ಪ್ರತಿಭೆಗಳು ಈ ಚಲನಚಿತ್ರವನ್ನು ನೋಡಿ ಯುವಪ್ರತಿಭೆಗಳನ್ನು ಬೆಳೆಸಿ ಎಂದು ಮನವಿ ಮಾಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಚಿತ್ರದುರ್ಗ:  ಮನೆಗೆ ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ, ಮನೆ ಸುಟ್ಟು ಭಸ್ಮವಾಗಿ ಕುಟುಂಬ ಬೀದಿಪಾಲಾದ ಘಟನೆ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಆದಿವಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆದಿವಾಲ ಬಿ ಬ್ಲಾಕ್ ನಲ್ಲಿ ನಡೆದಿದೆ. ಚಂದ್ರಶೇಖರ್ ಹಾಗೂ ಮಹದೇವಮ್ಮ ಎಂಬವರು ಈ ಮನೆಯಲ್ಲಿ ವಾಸಿಸುತ್ತಿದ್ದು, ದಿನ ಕೂಲಿಯಿಂದ ಜೀವನ ನಡೆಸುತ್ತಿದ್ದಾರೆ. ಚಂದ್ರಶೇಖರ್, ಮಹದೇವಮ್ಮ ಹಾಗೂ ಮಗ ರಾಧಾಕೃಷ್ಣನ್ ಎಲ್ಲರೂ ಕೆಲಸಕ್ಕಾಗಿ ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಮನೆಗೆ ಬೆಂಕಿ ಬಿದ್ದಿದ್ದು, ಮನೆ ಸುಟ್ಟು ಭಸ್ಮವಾಗಿದೆ. ಇನ್ನೂ ಘಟನೆಯ ಮಾಹಿತಿ ತಿಳಿದು ತಾಲೂಕಿನ ಮಾಜಿ ಶಾಸಕರು ಹಾಗೂ ಮಾಜಿ ಸಚಿವರಾದ ಡಿ.ಸುಧಾಕರ್ ಸ್ಥಳಕ್ಕೆ ಭೇಟಿ ನೀಡಿ, ಅತೀ ಶೀಘ್ರದಲ್ಲಿ ಸರ್ಕಾರದಿಂದ ಮನೆ ಮಂಜೂರು ಮಾಡಿಸುವುದಾಗಿ ತಿಳಿಸಿದರು. ಇನ್ನೂ ಮನೆಕಳೆದುಕೊಂಡು ನಿರಾಶ್ರಿತರಾಗಿರುವ ಕುಟುಂಬಕ್ಕೆ ಸರ್ಕಾರ ತಕ್ಷಣವೇ ಮನೆ ಮಂಜೂರು ಮಾಡಿಕೊಡಬೇಕು, ನೊಂದ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು  ಆದಿವಾಲ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ವರದಿ: ಮುರುಳಿಧರನ್ ಆರ್., ಹಿರಿಯೂರು ( ಚಿತ್ರದುರ್ಗ) ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ದಾವಣಗೆರೆ:  ನಾಡಿನ ಹಿರಿಯ ಕವಿ ನಾಡೋಜ ಚೆನ್ನವೀರ ಕಣವಿಯವರ ನಿಧನದ ಹಿನ್ನಲೆಯಲ್ಲಿ ಅವರ ಗೌರವಾರ್ಥ  ದಾವಣಗೆರೆ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷರಾದ ಬಿ ವಾಮದೇವಪ್ಪ,  ಕಣವಿಯವರು ಸದಾ ಸಾಮಾಜಿಕ ಬದಲಾವಣೆಗೆ ತುಡಿಯುತ್ತಿದ್ದ ಸಮನ್ವಯ ಕವಿ. ಅವರಿಗೆ ಸರಕಾರವು ರಾಷ್ಟ್ರ ಕವಿ ಗೌರವ ನೀಡಬೇಕೆಂದು ಮನವಿ ಮಾಡಿದರು. ಯುವ ಪ್ರತಿಭೆಗಳನ್ನು ಪ್ರೀತಿಯಿಂದ ಬೆನ್ನು ತಟ್ಟಿ ಮಾರ್ಗದರ್ಶನ ಮಾಡಿ ಪ್ರೋತ್ಸಾಹಿಸುವ ಗುಣ ಅವರದಾಗಿತ್ತು. ಆ ಕಾರಣಕ್ಕಾಗಿ ಚೆನ್ನವೀರ ಕಣವಿ ಎಂದರೆ ಎಲ್ಲರಿಗೂ ಅತ್ಯಂತ ಪ್ರೀತಿ ಮತ್ತು ಗೌರವ ಭಾವನೆಯಿತ್ತು ಎಂದು ವಾಮದೇವಪ್ಪ ಹೇಳಿದರು. ಜಾನಪದ ತಜ್ಞ ಎಂ.ಜಿ.ಈಶ್ವರಪ್ಪ  ಮಾತನಾಡಿ,  ಚೆನ್ನವೀರ ಕಣವಿಯವರಂತಹ ಶ್ರೇಷ್ಠ ಕವಿಯನ್ನು ಕಳೆದುಕೊಂಡು ಕನ್ನಡ ನಾಡು ಬಡವಾಗಿದೆ. ನವೋದಯ-ನವ್ಯ ಕಾವ್ಯ ಕಾಲಘಟ್ಟದಲ್ಲಿ ಕಣವಿಯವರು ತನ್ನತನವನ್ನು ಉಳಿಸಿಕೊಳ್ಳುವ ಬದ್ಧತೆಯನ್ನು ತೋರಿದ್ದು ವಿಶೇಷವಾಗಿತ್ತು ಎಂದರು. ರಂಗಭೂಮಿ ಕರ್ಮಿ ಬಾ.ಮ. ಬಸವರಾಜಯ್ಯ ಮಾತನಾಡಿ,  ಕನ್ನಡದ ಶ್ರೇಷ್ಠ ಕವಿ ಹಾಗೂ ಬರಹಗಾರರಾಗಿದ್ದ…

Read More

ಹಿರಿಯೂರು: ದಕ್ಷಿಣಕಾಶಿ ಎಂದೇ ಪ್ರಖ್ಯಾತವಾದ ಶ್ರೀ ತೇರುಮಲ್ಲೇಶ್ವರಸ್ವಾಮಿ  ಬ್ರಹ್ಮರಥೋತ್ಸವ ವೈಭವದಿಂದ ನೆರವೇರಿತು.  ಈ ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಕ್ತಿಯಿಂದ ಭಾಗವಹಿಸಿ ಸ್ವಾಮಿಯ ಕೃಪಾಶೀರ್ವಾದ ಪಡೆದರು. ಜಾತ್ರೆಯಲ್ಲಿ  ಮಾಜಿ ಸಚಿವರಾದ ಡಿ.ಸುಧಾಕರ್ ಅವರು  ಭಾಗವಹಿಸಿ ಈ ವರ್ಷದ ಜಾತ್ರೋತ್ಸವದ ಮುಕ್ತಿಬಾವುಟವನ್ನು ಹರಾಜಿನಲ್ಲಿ 12 ಲಕ್ಷ ರೂ.ಗಳಿಗೆ ಪಡೆದು ಶ್ರೀ ತೇರುಮಲ್ಲೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿದರು. ಸುಮಾರು 30 ಅಡಿ ಎತ್ತರದ ನಾಲ್ಕು ಕಲ್ಲಿನ ಚಕ್ರದ ರಥವನ್ನು ಭಕ್ತರು ಹರಹರ ಮಹಾದೇವ ಎಂಬ ಜಯಘೋಷದೊಂದಿಗೆ ದೇವಸ್ಥಾನದ ಮುಂಭಾಗದಿಂದ ಸುಮಾರು 500 ಮೀಟರ್ ದೂರವಿರುವ ಸಿದ್ದನಾಯಕ ಸರ್ಕಲ್ ವರೆಗೆ  ಭಕ್ತಿಭಾವದಿಂದ  ಎಳೆದರು.  ರಥದಲ್ಲಿ ಕುಳ್ಳಿರಿಸಲಾದ ದೇವರಿಗೆ ದಾರಿಯುದ್ದಕ್ಕೂ ಭಕ್ತರು ಬಾಳೆಹಣ್ಣು, ಧವನಗಳನ್ನು ಎಸೆದು ಭಕ್ತಿ ಸಮರ್ಪಿಸಿದರು. ಇನ್ನೂ ರಥೋತ್ಸವ ಕಾರ್ಯಕ್ರಮದಲ್ಲಿ ಹಿರಿಯೂರು ತಾಲ್ಲೂಕಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ನಗರಸಭೆ ಪೌರಯುಕ್ತರಾದ ಡಿ ಉಮೇಶ್,ನಗರಸಭೆ ಅಧ್ಯಕ್ಷರಾದ ಶಂಶುದ್ ಉನ್ನಿಸಾ , ಉಪಾಧ್ಯಕ್ಷರಾದ ಬಿ ಎನ್ ಪ್ರಕಾಶ್ ಭಾಗವಹಿಸಿದ್ದರು. ವರದಿ: ಮುರುಳಿಧರನ್ ಆರ್.,  ಹಿರಿಯೂರು ( ಚಿತ್ರದುರ್ಗ )…

Read More

ಕೊರಟಗೆರೆ: ತುಮಕೂರು ಜಿಲ್ಲೆಯ ಯುವಕರು  ‘ದೋಖಾ ದೋಸ್ತಿ’  ಎಂಬ ಚಿತ್ರವನ್ನು ನಿರ್ಮಿಸಿದ್ದು, ಫೆಬ್ರವರಿ 18 ರಂದು ಜಿಲ್ಲೆಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ದೋಖಾ ದೋಸ್ತಿ ಚಿತ್ರದ  ನಿರ್ದೇಶಕ ಮಾತನಾಡಿ, ತುಮಕೂರು ಜಿಲ್ಲೆಯ ಯುವಕರು ಸೇರಿ ದೋಖಾ ದೊಸ್ತಿ ಎಂಬ ಚಿತ್ರವನ್ನು ಚಿತ್ರಿಕರಣ ಮಾಡಿದ್ದೇವೆ, ಫೆಬ್ರವರಿ 18 ರಂದು ತುಮಕೂರು ಜಿಲ್ಲೆಯ  ಚಿತ್ರಮಂದಿಗಳಲ್ಲಿ ದೋಖಾ ದೋಸ್ತಿ ಚಿತ್ರ ಬಿಡುಗಡೆಯಾಗುತ್ತಿದ್ದು,  ಪ್ರೇಕ್ಷಕರು ಸಿನಿಮಾವನ್ನು  ಚಿತ್ರಮಂದಿರಕ್ಕೆ ಬಂದು ವೀಕ್ಷಿಸಿ ನಮ್ಮ ಚಿತ್ರತಂಡಕ್ಕೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿಕೊಂಡರು. ದೋಖಾ ದೋಸ್ತಿ ಚಿತ್ರದ ನಾಯಕ  ಮಾತನಾಡಿ, ತುಮಕೂರು ಜಿಲ್ಲೆಯ ಯುವಕರ ತಂಡದಿಂದ ಈ ಚಿತ್ರವನ್ನು ಚಿತ್ರಿಕರಣ ಮಾಡಲಾಗಿದೆ . ಈ ಚಿತ್ರದಲ್ಲಿ ಸುಮಾರು 35 ರಿಂದ 40 ಜನರು ನಟನೆ ಮಾಡಿದ್ದಾರೆ ಎಂದು ತಿಳಿಸಿದರು. ಚಿತ್ರ ಪ್ರೇಮಿಗಳು ಚಿತ್ರಮಂದಿರಕ್ಕೆ ಬಂದು ಸಿನಿಮಾವನ್ನು ನೋಡಿ ತುಮಕೂರು ಜಿಲ್ಲೆಯ ಹಳ್ಳಿ ಪ್ರತಿಭೆಗಳಿಗೆ ಆಶೀರ್ವಾದ ಮಾಡುವಂತೆ ಅವರು ಕೋರಿದ್ದಾರೆ. ವರದಿ: ಮಂಜುಸ್ವಾಮಿ ಎಂ.ಎನ್. ,  ಕೊರಟಗೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ತುಮಕೂರು : ಬಹುಜನ ಸಮಾಜ ಪಾರ್ಟಿ ವತಿಯಿಂದ ‘ಜನಾಂದೋಲನ ತುಮಕೂರು’ ಜಿಲ್ಲಾಧಿಕಾರಿಗಳ ಕಚೇರಿ ಎದುರು  ಧರಣಿ ಸತ್ಯಾಗ್ರಹ ನಡೆಯಿತು. ಈ ಸಂದರ್ಭ ಮಾತನಾಡಿದ ಬಿಎಸ್ ಪಿ ಮುಖಂಡರು, ಭಾರತ ದೇಶವು ಸಂಪತ್ಭರಿತವಾದ ದೇಶವಾಗಿದೆ.  ಆದರೆ ಈ ದೇಶದಲ್ಲಿ ಬಹುಸಂಖ್ಯಾತರು ಬಡವರಾಗಿದ್ದಾರೆ.  ನಮ್ಮ ದೇಶದ ಭೂಮಿಯ ಒಡೆತನ ಬಂಡವಾಳ ಮತ್ತು ಅಧಿಕಾರ ಸ್ಥಾನಗಳನ್ನು ಜಾತಿ ವ್ಯವಸ್ಥೆಗೆ ಅನುಗುಣವಾಗಿ ಹಂಚಿಕೆಯಾಗಿವೆ,  ಅಂದರೆ ಕೆಲವೇ ಕೆಲವು ಮೇಲ್ಜಾತಿ ಜನರ ಒಡೆತನದಲ್ಲಿ ಪ್ರಮಾಣದ ಕೃಷಿ ಭೂಮಿ ಕೈಗಾರಿಕೆಗಳು ಉದ್ದಿಮೆಗಳು ಮತ್ತು ನೌಕರಿಗಳು ಇಂದಿಗೂ ಉಳಿದಿದೆ.  ಆದ್ದರಿಂದಲೇ ಬಹುಸಂಖ್ಯಾತರಾದ ಎಸ್ಸಿ ಎಸ್ಟಿ ಓಬಿಸಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ನಿರ್ಗತಿಕ ಬಡ ಕೂಲಿ ಕಾರ್ಮಿಕರಾಗಿ ಅನಕ್ಷರಸ್ಥರಾಗಿ ಹಾಗೂ ನಿರುದ್ಯೋಗಿಗಳಾಗಿದ್ದಾರೆ  ಎಂದರು. ಈ ಅಸಮಾನತೆಯನ್ನು ತೊಲಗಿಸಿ ಸರ್ವರಿಗೂ ಸಮಪಾಲು ನೀಡಬೇಕೆಂದು ಬಾಬಾಸಾಹೇಬರು ಸಂವಿಧಾನವು ಸರ್ಕಾರದ ನಿರ್ದೇಶನ ನೀಡಿದೆ. ಈ ನಿಟ್ಟಿನಲ್ಲಿ ನಡೆದ ಹಲವು ಜನಪರ ಚಳುವಳಿಗಳ ಫಲವಾಗಿ ಸರ್ಕಾರಗಳು ಭೂ ಪರಿಮಿತಿ ಕಾಯ್ದೆ ಭೂಸುಧಾರಣಾ ಕಾಯಿದೆ ಭೂ ಮಂಜೂರಾತಿ ಕಾಯ್ದೆ ಪರಿಶಿಷ್ಟ…

Read More

ಬೆಂಗಳೂರು: ಸೇಡು ತೀರಿಸಿಕೊಳ್ಳಲು ವ್ಯಕ್ತಿ ಯಾವ ಮಟ್ಟಕ್ಕೂ ಇಳಿಯಬಹುದು. ಕೌಟುಂಬಿಕ ಸಂಬಂಧಗಳ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ. ಇಂತಹದೊಂದು ಪ್ರಕರಣ ಕರ್ನಾಟಕದಲ್ಲಿ ಮುನ್ನೆಲೆಗೆ ಬಂದಿದೆ. ಇಲ್ಲಿ ಒಬ್ಬ ವ್ಯಕ್ತಿ ತನ್ನ ಹೆಂಡತಿಯ (Wife) ಮೇಲೆ ಸೇಡು ತೀರಿಸಿಕೊಳ್ಳಲುಮಾಡಿದ ಕೆಲಸ ಕೇಳಿದರೆ ನೀವು ಆಶ್ಚರ್ಯಪಡುತ್ತೀರಿ. ಆರೋಪಿಯು ಕ್ಯಾಬ್ ಚಾಲಕನಾಗಿದ್ದು, ಆತ ಎಚ್‌ಐವಿ (HIV) ಸೋಂಕಿತನಾಗಿದ್ದ. 2015 ರಲ್ಲಿ 28 ವರ್ಷದ ಯುವತಿಯನ್ನು ವಿವಾಹವಾಗಿದ್ದ. ಆರೋಪಿ ಎಚ್‌ ಐವಿ ಸೋಂಕಿತನಾಗಿದ್ದರೂ, ಸಂತ್ರಸ್ತೆ ಆತನೊಂದಿಗೆ ವಾಸಿಸಲು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಮಯದಲ್ಲಿ, ಇಬ್ಬರೂ ಸುರಕ್ಷಿತ ದೈಹಿಕ ಸಂಪರ್ಕ ಹೊಂದಿದ್ದರು. ಈ ಸಮಯದಲ್ಲಿ, ಇಬ್ಬರೂ ಸುಮಾರು 6 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದಾರೆ. ಈ ಸಮಯದಲ್ಲಿ, ಮಹಿಳೆಯು ಎಚ್ಐವಿ ಪರೀಕ್ಷೆ ಮಾಡಿಸಿದ್ದಾರೆ. ಆದರೆ ಆಕೆ ಸೋಂಕಿಗೆ ಒಳಗಾಗಿಲ್ಲ. ಪತಿಗೆ ಅಕ್ರಮ ಸಂಬಂಧ, ದೂರವಾದ ಪತ್ನಿ: ಈ ಎಲ್ಲದರ ಮಧ್ಯೆ ಆರೋಪಿಯು ಮತ್ತೋರ್ವ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಪತಿಯು (Husband) ಆ ಮಹಿಳೆಯನ್ನು…

Read More