Author: admin

ಪಾವಗಡ: ತಾಲೂಕಿನ ಪಳವಳ್ಳಿ ಕಟ್ಟೆಯ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡವರನ್ನು ಕೇಂದ್ರ ಸಚಿವರದ ಎ.ನಾರಾಯಣಸ್ವಾಮಿ  ಪಾವಗಡ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಧೈರ್ಯ ತುಂಬಿದರು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿ, ಅಪಘಾತ ನಡೆದ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ತೆರಳಿ ಮಾಹಿತಿ ಪಡೆದರು. ಮೃತರ ಆತ್ಮಕ್ಕೆ ಶಾಂತಿ ಕೋರುತ್ತಾ, ಚಿಕಿತ್ಸೆ ಪಡೆಯುತ್ತಿರುವ 25ಕ್ಕೂ ಹೆಚ್ಚು ಗಾಯಾಳುಗಳು ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು. ವರದಿ: ನಂದೀಶ್ ನಾಯ್ಕ ಪಿ. ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ,ಹೋಬಳಿ  ಸೊರವನಹಳ್ಳಿ ಗ್ರಾಮದಲ್ಲಿ , ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯಕಡೆಗೆ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನುದ್ದೇಶಿಸಿ, ಮಾತನಾಡಿದ  ತಾಲ್ಲೂಕು ಪಂಚಾಯ್ತಿ ಕಾರ್ಯನಿರವಾಹಣಾಧಿಕಾರಿ ಸತೀಶ್, ಆಧುನಿಕತೆ ಬೆಳೆದ ಹಾಗೆ, ಈ ದೇಶದಲ್ಲಿ  ಪ್ರಜಾಪ್ರಭುತ್ವ ಸರ್ಕಾರಗಳು ಜಾರಿಗೆ ಬಂದ ಮೇಲೆ ಎಲ್ಲಾ ಸರ್ಕಾರಗಳು ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದವು. ಅದರಲ್ಲಿ ನಮ್ಮ ಈಗಿನ ರಾಜ್ಯ ಸರ್ಕಾರ ತಂದ ಕಾರ್ಯಕ್ರಮಗಳಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯಕಡೆಗೆ’ ಕಾರ್ಯಕ್ರಮ   ವಿನೂತನ ಕಾರ್ಯಕ್ರಮ ಎಂದರು. ಜಿಲ್ಲಾಧಿಕಾರಿಗಳೇ ,ಹಳ್ಳಿಗಳಿಗೆ ತೆರಳಿ ಜನ ಸಾಮಾನ್ಯರ , ರೈತರ , ಶೋಷಿತರ ಇನ್ನು ಮುಂತಾದವರ ಸಮಸ್ಯೆ ಆಲಿಸಿ  ಸಾಧ್ಯವಾಗುವ ಸಮಸ್ಯೆಗಳನ್ನ, ಸ್ಥಳದಲ್ಲೇ ಬಗೆಹರಿಸುವುದು ಈ ಕಾರ್ಯಕ್ರಮದ ಉದ್ದೇಶ, ಆದುದರಿಂದ ಜಿಲ್ಲಾಧಿಕಾರಿಗಳು ಕೇವಲ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಮಸ್ಯೆ ಆಲಿಸಲು ಮಾತ್ರ ಸಾಧ್ಯ, ಇನ್ನುಳಿದ  ಕಾರ್ಯಕ್ರಮಗಳನ್ನು ಆಯಾ ತಾಲೂಕಿನ ತಹಶೀಲ್ದಾರರು ಮತ್ತು ತಾಲ್ಲೂಕು ಮಟ್ಟದ ಹಿರಿಯ ಅಧಿಕಾರಿಗಳು ಭಾಗವಹಿಸಿ, ಸಮಸ್ಯೆ ಆಲಿಸಿ ಸ್ಥಳದಲ್ಲಿ ಸಾಧ್ಯವಾಗುವ ಸಮಸ್ಯೆಯನ್ನು, ಬಗೆಹರಿಸ ಬೇಕಾಗುತ್ತದೆ…

Read More

ಸರಗೂರು: ತಾಲ್ಲೂಕಿನ ಹುಲ್ಲೆಮಾಳ ಗ್ರಾಮದಲ್ಲಿ ನಿನ್ನೆ ಸಂಜೆ ಮಳೆ ಸುರಿದಿದ್ದು, ಈ ವೇಳೆ ಸಿಡಿಲು ಬಡಿದು ಮರವೊಂದು ಹೊತ್ತಿ ಉರಿದಿದ್ದು, ಘಟನೆಯಿಂದಾಗಿ ಜನರು ಆತಂಕಕ್ಕೀಡಾದ ಘಟನೆ ನಡೆದಿದೆ. ಸುಮಾರು ಒಂದೂವರೆ ಗಂಟೆಗಳ ಕಾಲ ಸಿಡಿಲು, ಮಿಂಚು, ಗಾಳಿ ಸಹಿತವಾಗಿ ಭಾರೀ ಮಳೆ ಸುರಿದಿದ್ದು, ಈ ವೇಳೆ ಕಣ್ಣು ಕೋರೈಸುವಂತೆ ಮರಕ್ಕೆ ಸಿಡಿಲು ಅಪ್ಪಳಿಸಿದ್ದು, ಮರ ಛಿದ್ರವಾಗಿರುವುದಲ್ಲದೇ ಹೊತ್ತಿ ಉರಿದು ಹೋಗಿದೆ. ಗ್ರಾಮಸ್ಥರು ಮೊದಲ ಬಾರಿಗೆ ಇಂತಹದ್ದೊಂದು ಅಚ್ಚರಿಯ ಘಟನೆಯನ್ನು ನೋಡಿದ್ದು,  ಅಚ್ಚರಿಯ ಜೊತೆಗೆ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ  ಅಕಾಲಿಕವಾಗಿ ಬರುವ ಮಳೆ, ಸಿಡಿಲುಗಳು  ಅನಾಹುತವನ್ನು ಸೃಷ್ಟಿಸುತ್ತವೆ ಎನ್ನುವ ನಂಬಿಕೆ ಹಳ್ಳಿಗಳಲ್ಲಿದ್ದು, ಹೀಗಾಗಿ ಅಕಾಲಿಕ ಮಳೆ, ಸಿಡಿಲು ಬಂದಾಗ ಜನರು ಆತಂಕ್ಕೀಡಾಗುತ್ತಾರೆ. ವರದಿ: ಚಂದ್ರ ಹಾದನೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಹಿರಿಯೂರು: ನದಿ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುವುದನ್ನು ತಪ್ಪಿಸಲು ನದಿ ಜೋಡಣೆ ಮೂಲಕ ದೇಶದ ಎಲ್ಲಾ ಕೆರೆಕಟ್ಟೆಗಳನ್ನು ತುಂಬಿಸುವ ಮೂಲಕ ಕುಡಿಯುವ ನೀರು ಮತ್ತು ನೀರಾವರಿ ಸಮಸ್ಯೆ ಬಗೆಹರಿಸಬೇಕು ಎಂದು ರಾಜ್ಯ ರೈತಸಂಘ ಮತ್ತು ಹಸಿರುಸೇನೆ ರಾಜ್ಯ ಸಂಚಾಲಕ ಕನಕಂಜೇನಹಳ್ಳಿ ಪಟೇಲ್ ಪ್ರಸನ್ನ ಕುಮಾರ್ ಒತ್ತಾಯಿಸಿದರು. ನಗರದ ತಾಲ್ಲೂಕು ಕಚೇರಿಗೆ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಕನಕಂಜೇನಹಳ್ಳಿಯಿಂದ ನದಿ ಜೋಡಣೆಗೆ ಒತ್ತಾಯಿಸಿ ಹಮ್ಮಿಕೊಂಡಿರುವ ರಾಷ್ಟ್ರಪತಿ ಭವನ್ ಚಲೊ ಜಾಥಾ ಬುಧವಾರ ಆಗಮಿಸಿದಾಗ ತಾಲ್ಲೂಕು ರೈತ ಸಂಘದ ನೇತೃತ್ವದಲ್ಲಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ನಂತರ ಸ್ಥಳೀಯ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು. ನದಿ ಜೋಡಣೆ ಕಾರ್ಯಕ್ರಮ ಯಶಸ್ವಿಯಾದರೆ ರೈತರ ಜಮೀನುಗಳಿಗೆ ಸಾಕಷ್ಟು ನೀರು ಹರಿದು ಬರುತ್ತದೆ. ಇದರಿಂದ ಕೃಷಿ  ಉತ್ಪನ್ನ ಪ್ರಮಾಣ ಸಹ  ಹೆಚ್ಚುತ್ತದೆ ಎಂದರು. ಆಹಾರೋತ್ಪಾದನೆಯಲ್ಲಿ ದೇಶ ಅದ್ಭುತ ಸಾಧನೆ ತೋರುತ್ತದೆ. ಪ್ರಯುಕ್ತ ಉತ್ತರದ ಹಿಮಾಲಯದಿಂದ ದಕ್ಷಿಣದ ಹಿಂದೂ ಮಹಾಸಾಗರದವರೆಗೆ, ಪಶ್ಚಿಮದ ಗುಜರಾತಿನಿಂದ ಪೂರ್ವದ ಅರುಣಾಚಲದವರೆಗೆ ಹರಿಯುವ ನದಿಗಳ ಪಟ್ಟಿಯನ್ನು…

Read More

ತುಮಕೂರು: ತಾಲ್ಲೂಕು ಹೊನ್ನುಡಿಕೆ ಬಳಿಯ ಅರೇಹಳ್ಳಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಚಿರತೆ ದಾಳಿ ನಡೆಸಿದ್ದು, ಗ್ರಾಮದ ಹೊಸಮನೆ ವೆಂಕಟಪ್ಪ ಎನ್ನುವವರಿಗೆ ಸೇರಿದ ಮೂರು ಕುರಿಗಳು ಮೃತಪಟ್ಟಿವೆ. ಶುಕ್ರವಾರ ರಾತ್ರಿ ಎಂದಿನಂತೆ ವೆಂಕಟಪ್ಪನವರು ತಮ್ಮ ಕುರಿಗಳನ್ನು ಮನೆಯ ಕಾಂಪೌಂಡ್ ನಲ್ಲಿ ಕಟ್ಟಿ ಹಾಕಿದ್ದು ಬೆಳಿಗ್ಗೆ ಎದ್ದು ನೋಡುವಷ್ಟರಲ್ಲಿ ಚಿರತೆ ದಾಳಿ ನಡೆಸಿರುವ ಬಗ್ಗೆ ತಿಳಿದಿದೆ. ಇನ್ನು ಈ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ಧಂತೆ ಅರೇಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದು ಕೂಡಲೇ ಚಿರತೆಯನ್ಮು ಬಂಧಿಸಬೇಕೆಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ವರದಿ : ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಹಿರಿಯೂರು: ಏಪ್ರಿಲ್ 2, 3 ರಂದು ಕರ್ನಾಟಕದಾದ್ಯಂತ ಕನ್ನಡಿಗರ ಚೈತ್ರ ಮಾಸದ ಯುಗಾದಿ ಹಬ್ಬವನ್ನು ಆಚರಿಸಲ್ಪಡುತ್ತಿದ್ದು, ಹಬ್ಬದ ಸಂದರ್ಭದಲ್ಲಿ ಹಿರಿಯೂರು ತಾಲ್ಲೂಕಿನಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಾಲೂಕು ದಂಡಾಧಿಕಾರಿಗಳ ನೇತೃತ್ವದಲ್ಲಿಸಭೆ ನಡೆಸಿ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರಾದ ಡಿ . ಉಮೇಶ್ ತಿಳಿಸಿದರು. ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆಗಳು ಆಗದಂತೆ ಸಾರ್ವಜನಿಕರು ಸಹಕರಿಸಬೇಕು. ಪೊಲೀಸ್ ಇಲಾಖೆ ಹಾಗೂ ತಾಲೂಕು ದಂಡಾಧಿಕಾರಿಗಳ ಸಹಕಾರದೊಂದಿಗೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಸಾರ್ವಜನಿಕರಿಗೆ ಈ ಸಂಬಂಧ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕೈಗೊಳ್ಳಲು ಕ್ರಮವಹಿಸಲಾಗುತ್ತದೆ. ನಗರ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಲು ಸಮನ್ವಯತೆ ಸಭೆ ನಡೆಯಲಿದೆ ಎಂದು ಅವರು ತಿಳಿಸಿದರು. ನಮ್ಮತುಮಕೂರು ನ್ಯೂಸ್ ನ್ನು ನಾನು ವೀಕ್ಷಿಸುತ್ತಿದ್ದೇನೆ. ಉತ್ತಮವಾದ ವಿಚಾರಗಳನ್ನು ಕ್ರೂಢೀಕರಿಸಿ, ಪ್ರಚಾರ ಮಾಡುತ್ತಿದ್ದಾರೆ. ಸಾರ್ವಜನಿಕರು ಕೂಡ ಮಾಧ್ಯಮಕ್ಕೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಮಾಧ್ಯಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಡಿ .ಉಮೇಶ್, ಸಾರ್ವಜನಿಕರಿಗೆ ಇದೇ…

Read More

ಗುಬ್ಬಿ: ತಾಲ್ಲೂಕಿನ ನೇರಲೆಕೆರೆ ಗ್ರಾಮದಲ್ಲಿ ಕಂದಾಯ ಇಲಾಖೆಯ ವತಿಯಿಂದ ಜಿಲ್ಲಾಧಿಕಾರಿ ನಡೆ ಹಳ್ಳಿಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮ ವನ್ನು ಶಾಸಕರು ಹಾಗೂ ತಾಲ್ಲೂಕಿನ ದಂಢಾಧಿಕಾರಿ ಮತ್ತು ಇತರೆ ಇಲಾಖೆ ಅಧಿಕಾರಿಗಳು ಗೈರಾಗಿದ್ದು ಕಾಟಚಾರಕ್ಕೆ ಕಾರ್ಯಕ್ರಮ ಮಾಡುತ್ತಿದ್ದೀರಿ ಎಂದು ಸಾರ್ವಜನಿಕರು ಅಧಿಕಾರಿಗಳು ಮತ್ತು ಶಾಸಕ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಕಾರ್ಯಕ್ರಮದ ಬಗ್ಗೆ ಸಮರ್ಪಕವಾಗಿ ಕರ್ತವ್ಯ ನಿರ್ವಾಹಣೆ ಮಾಡದೆ ಸ್ಥಳೀಯರಿಗೆ ಕಾರ್ಯಕ್ರಮ ಆಯೋಜನೆ ಮಾಡಿರುವ ಬಗ್ಗೆ ಮಾಹಿತಿ ನೀಡದೆ ಕರ್ತವ್ಯ ಲೋಪ ವೆಸಗಿದ ನಿಟ್ಟೂರು ಕಂದಾಯ ನಿರೀಕ್ಷಕ ನಾರಾಯಣ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಅಧಿಕಾರಿಯ ದುರ್ವತನೆ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಒಟ್ಟಾರೆ ಯಾಗಿ ಇಂದು ನಡೆಸಿದ ಜಿಲ್ಲಾಧಿಕಾರಿ ಗಳ ನಡೆ ಹಳ್ಳಿ ಎಂಬ ಕಾರ್ಯಕ್ರಮ ವಿಫಲವಾಗಿದ್ದು ಕೆಲ ಇಲಾಖೆ ಅಧಿಕಾರಿಗಳು ಗೈರು ಹಾಜರಿಯಿಂದ ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿ ಯಾಯಿತು. ವರದಿ: ಮಂಜುನಾಥ್, ಗುಬ್ಬಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…

Read More

ಪಾವಗಡ: ಸಾರಿಗೆ ಸಚಿವ ಶ್ರೀರಾಮುಲು ಬಸ್ ಅವಘಡ ನಡೆದ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಮೃತಪಟ್ಟವರಿಗೆ 5 ಲಕ್ಷ ರೂಪಾಯಿ, ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಘೋಷಿಸಿದರು. ಪಾವಗಡ ತಾಲ್ಲೂಕು ಪಳವಳ್ಳಿ ಕೆರೆ ಕಟ್ಟೆಯ ಬಳಿ ಖಾಸಗಿ ಬಸ್ ಪಲ್ಟಿ ಹೊಡೆದು ಮೃತಪಟ್ಟವರ ಕುಟುಂಬಗಳಿಗೆ ಸಾರಿಗೆ ಸಚಿವ ಶ್ರೀರಾಮುಲು ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಇಂದು ಬೆಳಗ್ಗೆ ಬಸ್ ದುರಂತ ಸಂಭವಿಸಿ ವಿದ್ಯಾರ್ಥಿಗಳು ಸೇರಿದಂತೆ 9 ಮಂದಿ ಮೃತಪಟ್ಟಿದ್ದರು. ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಘೋಷಿಸುವಂತೆ ಎಸ್ಎಫ್ಐ ಜಿಲ್ಲಾಧ್ಯಕ್ಷ ಈ ಶಿವಣ್ಣ ಸೇರಿದಂತೆ ಸಾರ್ವಜನಿಕರು ಸೂಕ್ತ ಪರಿಹಾರ ಘೋಷಣೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಇದಕ್ಕೆ ಸ್ಪಂದಿಸಿರುವ ಸಾರಿಗೆ ಸಚಿವ ಶ್ರೀರಾಮುಲು ಬಸ್ ಅವಘಡ ನಡೆದ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಮೃತಪಟ್ಟವರಿಗೆ 5 ಲಕ್ಷ ರೂಪಾಯಿ, ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು…

Read More

ತುಮಕೂರು: ಶನಿವಾರ ನಡೆದ ಪಾವಗಡದ ಬಸ್ ದುರಂತದಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿ ಜಿಲ್ಲೆಯ ಜನತೆಯನ್ನು ಆತಂಕಕ್ಕೆ ದೂಡಿದ್ದು, ತುಮಕೂರು ಜಿಲ್ಲೆಯಲ್ಲಿ ಜವರಾಯನ ಅಟ್ಟಹಾಸಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಚಾಲಕನ ಅಜಾಗರೂಕತೆಯ ಚಾಲನೆಯಿಂದ ಪ್ರಾಣ ಕಳೆದುಕೊಂಡ ಅಮಾಯಕರು ಒಂದೆಡೆಯಾದರೆ, ಸಾಕಷ್ಟು ಕನಸುಗಳನ್ನು ಹೊತ್ತು ವಿದ್ಯಾಭ್ಯಾಸಕ್ಕಾಗಿ ಹಳ್ಳಿಯಿಂದ ಪಾವಗಡ ಪಟ್ಟಣಕ್ಕೆ ಆಗಮಿಸಿ ವಿದ್ಯಾಭ್ಯಾಸದಲ್ಲಿ ನಿರತರಾಗುತ್ತಿದ್ದ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಸಮೀಪವಿರುವ ಪರೀಕ್ಷೆಯನ್ನು ಎದುರಿಸುವುದು ಹೇಗೆ ಎನ್ನುವ ಆತಂಕ ಸೃಷ್ಟಿಯಾಗಿದೆ. ಈ ಅಪಘಾತದಲ್ಲಿ ಗಾಯಗೊಂಡ ಯುವಕ ರಾಜು ಎಂಬಾತ ತನ್ನ ಎಡಕೈ ಅನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾನೆ. ಇತ್ತೀಚೆಗೆ ಯುವಕ ರಾಜು ಗಾರೆ ಕೆಲಸ ನಿರ್ವಹಿಸುತ್ತಿದ್ದು, ಕುಟುಂಬದ ನಿರ್ವಹಣೆಯ ಜವಾಬ್ದಾರಿಯನ್ನು ತಾನು ಹೊತ್ತುಕೊಂಡಿದ್ದ. ಇತ್ತೀಚೆಗೆ ಆತ ತನ್ನ ತಂಗಿಯ ಮದುವೆಯನ್ನು ಸಹ ನೆರವೇರಿಸಿ ಸುಮಾರು ಐದು ಲಕ್ಷಕ್ಕೂ ಹೆಚ್ಚು ಸಾಲವನ್ನು ಮಾಡಿದ್ದಾನೆ. ಸಾಲ ತೀರಿಸುವ ಸಲುವಾಗಿ ಪ್ರತಿನಿತ್ಯ ಗರೆ ಕೆಲಸಕ್ಕಾಗಿ ಪಾವಗಡಕ್ಕೆ ಆಗಮಿಸುತ್ತಿದ್ದ ಇದರ ನಡುವೆಯೇ ಇಂದು ನಡೆದ ಬಸ್ ಅಪಘಾತದಲ್ಲಿ ರಾಜು ತನ್ನ ಎಡಗೈಯನ್ನು ಕಳೆದುಕೊಂಡು…

Read More

ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ: ಬೇಸಿಗೆಯಲ್ಲಿ ಅಡಿಕೆ ಮರಗಳ ತೇವಾಂಶವನ್ನು ಕಾಪಾಡಲು ವಿವಿಧ ರೀತಿಯ ಹಸಿರು ಗೊಬ್ಬರದ ಗಿಡಗಳನ್ನು ಬೆಳೆಸುವ ಪದ್ದತಿ, ಈಗಲೂ ತಾಲ್ಲೂಕಿನ ಹಲವು ಗ್ರಾಮಗಳ ರೈತರ ಅಡಿಕೆ ತೋಟಗಳಲ್ಲಿ ಜೀವಂತವಾಗಿದೆ. ಆರೇಳು ವರ್ಷಗಳಿಂದ ಜಿಲ್ಲೆಯಲ್ಲಿ ಇತರೆ ಯಾವುದೇ ಬೆಳೆಗಳಿಗಿಂತ ಹೆಚ್ಚು ಪ್ರದೇಶದಲ್ಲಿ ಅಡಿಕೆ ಸಸಿಗಳ ನಾಟಿ‌ ನಡೆಯುತ್ತದೆ. ಅಡಿಕೆ ಬೆಳೆಗೆ ಇತರೆ ಬೆಳೆಗಳಿಗಿಂತ ಸಮೃದ್ಧವಾದ ನೀರು ಬೇಕು.ಬೇಸಿಗೆ ಕಾಲದಲ್ಲಿ ಅಡಿಕೆ ಬೆಳೆಗೆ ನೀರು ನೀಡುವುದು ಸುಲಭದ ಕೆಲಸವಲ್ಲ. ಬಹಳ ಹಿಂದಿನಿಂದಲೂ ಸ್ಥಳೀಯರು ಸರಳವಾದ ಉಪಯೋಗಕರ ಪರಿಹಾರ ಕ್ರಮಗಳನ್ನು ಹುಡುಕಿಕೊಂಡಿದ್ದಾರೆ. ರೈತರು ಅಡಿಕೆ ತೋಟದಲ್ಲಿ ಸಿರಿ ಧಾನ್ಯಗಳಾದ ಕೊರಲೆ  ಮತ್ತು ಹಾರಕ ಬೆಳೆದು ತೇವಾಂಶವನ್ನು  ತೋಟದ ಮಣ್ಣಿನಲ್ಲಿ ಉಳಿಸುವುದು.  ಅಳಿಲು ಮತ್ತು ಇಲಿಗಳು ಅಡಿಕೆ ಮರಗಳನ್ನು ಹತ್ತಿ ಅಡಿಕೆ ಪೀಚುಗಳನ್ನು ಕಡಿದು ನೆಲಕ್ಕೆ ಬೀಳಿಸುತ್ತಿದ್ದವು.ಇದನ್ನು ರೈತರು ಗಮನಿಸಿ ಈ ಪ್ರಾಣಿಗಳಿಗೆ ಆಹಾರ ಸಿಗುವಂತೆ ತೋಟದ ನೆಲದಲ್ಲಿ ಸಿರಿ ಧಾನ್ಯ ಬೆಳೆಗಳನ್ನು ಬೆಳೆಯುತ್ತಾರೆ. ರೈತರು ತಮ್ಮ ತೋಟಗಳಲ್ಲಿ ಅಲಸಂದೆ, ಹೆಸರು , ಸೆಣಬು, ಉದ್ದು…

Read More