ಸರಗೂರು: ತಾಲ್ಲೂಕಿನ ಹುಲ್ಲೆಮಾಳ ಗ್ರಾಮದಲ್ಲಿ ನಿನ್ನೆ ಸಂಜೆ ಮಳೆ ಸುರಿದಿದ್ದು, ಈ ವೇಳೆ ಸಿಡಿಲು ಬಡಿದು ಮರವೊಂದು ಹೊತ್ತಿ ಉರಿದಿದ್ದು, ಘಟನೆಯಿಂದಾಗಿ ಜನರು ಆತಂಕಕ್ಕೀಡಾದ ಘಟನೆ ನಡೆದಿದೆ.
ಸುಮಾರು ಒಂದೂವರೆ ಗಂಟೆಗಳ ಕಾಲ ಸಿಡಿಲು, ಮಿಂಚು, ಗಾಳಿ ಸಹಿತವಾಗಿ ಭಾರೀ ಮಳೆ ಸುರಿದಿದ್ದು, ಈ ವೇಳೆ ಕಣ್ಣು ಕೋರೈಸುವಂತೆ ಮರಕ್ಕೆ ಸಿಡಿಲು ಅಪ್ಪಳಿಸಿದ್ದು, ಮರ ಛಿದ್ರವಾಗಿರುವುದಲ್ಲದೇ ಹೊತ್ತಿ ಉರಿದು ಹೋಗಿದೆ.
ಗ್ರಾಮಸ್ಥರು ಮೊದಲ ಬಾರಿಗೆ ಇಂತಹದ್ದೊಂದು ಅಚ್ಚರಿಯ ಘಟನೆಯನ್ನು ನೋಡಿದ್ದು, ಅಚ್ಚರಿಯ ಜೊತೆಗೆ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಅಕಾಲಿಕವಾಗಿ ಬರುವ ಮಳೆ, ಸಿಡಿಲುಗಳು ಅನಾಹುತವನ್ನು ಸೃಷ್ಟಿಸುತ್ತವೆ ಎನ್ನುವ ನಂಬಿಕೆ ಹಳ್ಳಿಗಳಲ್ಲಿದ್ದು, ಹೀಗಾಗಿ ಅಕಾಲಿಕ ಮಳೆ, ಸಿಡಿಲು ಬಂದಾಗ ಜನರು ಆತಂಕ್ಕೀಡಾಗುತ್ತಾರೆ.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB