Subscribe to Updates
Get the latest creative news from FooBar about art, design and business.
- ಮನೆ ಮುಂದೆ ಕಸ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಕಂಬಕ್ಕೆ ಕಟ್ಟಿಹಾಕಿ ಮಹಿಳೆಗೆ ಹಲ್ಲೆ!
- ಬಿಗ್ ಬಾಸ್ ಸೀಸನ್ 12ಕ್ಕೂ ಕಿಚ್ಚ ಸುದೀಪ್ ನಿರೂಪಣೆ ಫಿಕ್ಸ್!
- ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: 8 ಕಾರ್ಮಿಕರು ಸಾವು
- DIGITAL ARREST ಬಗ್ಗೆ ಎಚ್ಚರವಿರಲಿ!
- ಆಷಾಢ ಏಕಾದಶಿ ಪ್ರಯುಕ್ತ ಪಂಢರಪುರಕ್ಕೆ ವಿಶೇಷ ರೈಲು
- ತುಮಕೂರು: 3ನೇ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿ
- ಕ್ಯಾಂಟರ್ – ಕಾರಿನ ನಡುವೆ ಡಿಕ್ಕಿ: ಒಂದೇ ಕುಟುಂಬದ ನಾಲ್ವರು ಸಾವು
- “ಪ್ರತಿಯೊಬ್ಬರೂ ಪರಿಸರ ಸಂರಕ್ಷಿಸಬೇಕು”: ವಿಶ್ವ ಪರಿಸರ ದಿನಾಚರಣೆ
Author: admin
ವರದಿ: ಚಂದ್ರಹಾದನೂರು ಸರಗೂರು: ತಾಲ್ಲೂಕಿನ ಸಮೀಪದ ನಂಜನಗೂಡು ತಾಲ್ಲೂಕಿನ ಹೆಡಿಯಾಲ ಗ್ರಾ.ಪಂ.ಯಲ್ಲಿ ಕಸದರಾಶಿ ಬಿದ್ದಿದ್ದು, ದುರ್ವಾಸನೆಯಿಂದ ಮೂಗು ಮುಚ್ಚಿಕೊಳ್ಳುವಂತಾಗಿದೆ. ಸರಗೂರು, ಗುಂಡ್ಲುಪೇಟೆ ಮುಖ್ಯ ರಸ್ತೆಯ ಹೆಡಿಯಾಲ ಮಾರ್ಗವಾಗಿ ಹೋಗುವ ರಸ್ತೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಸರಾಶಿ, ಸತ್ತ ನಾಯಿ, ಕೋಳಿ ತ್ಯಾಜ್ಯಗಳನ್ನು ಅಲ್ಲೆ ಎಸೆಯಲಾಗಿದ್ದು, ಕಸ ವಿಲೇವಾರಿಯಾಗದೆ ಸಾಂಕ್ರಾಮಿಕ ರೋಗದ ಭೀತಿ ಉಂಟಾಗಿದೆ. ಸಾಂಕ್ರಾಮಿಕ ರೋಗ ಕೊವಿಡ್ 19 ಎರಡನೇ ಅಲೆಯ ಸಂದರ್ಭದಲ್ಲಿಯೂ ಎಚ್ಚೆತ್ತು ಕೊಳ್ಳದ ಹೆಡಿಯಾಲ ಗ್ರಾಪಂಹಾಗೂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹೆಡಿಯಾಲ ಆಸ್ಪತ್ರೆಯ ಅಧಿಕಾರಿಗಳು ಜನರ ಆರೋಗ್ಯ ದ ಗಮನ ಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಪಂಚಾಯಿತಿ ಅಧಿಕಾರಿಗಳು ಹಾಗೂ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದರೂ, ಕಂಡೂ ಕಾಣದಂತಿದ್ದಾರೆ. ಪಂಚಾಯಿತಿ ವತಿಯಿಂದ ಕಸದರಾಶಿಯನ್ನು ತೆರುವುಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇಲ್ಲಿನ ಭಾರತ್ ಗ್ಯಾಸ್ ಏಜೆನ್ಸಿ ಎದುರುಗಡೆ ಇರುವ ರಸ್ತೆಯ ಬದಿಯಲ್ಲಿ ಕಸದ ರಾಶಿ ಬಿದ್ದಿದೆ. ಇದರಿಂದಾಗಿ ಹೆಡಿಯಾಲ ಗ್ರಾಮಸ್ಥರು ಇಲ್ಲಿ ತಿರುಗಾಡಲು ಕೂಡ ಕಷ್ಟಕರವಾಗಿದೆ ಎಂದು…
ಬೆಂಗಳೂರು : ಕರೋನಾ ಸಾಂಕ್ರಾಮಿಕ ಹಾಗೂ ಲಾಕ್ ಡೌನ್ ನಿಂದಾಗಿ ಕರಕುಶಲ ಕರ್ಮಿಗಳು ಸರಿಯಾದ ಮಾರುಕಟ್ಟೆ ಇಲ್ಲದೆ ತೊಂದರೆಗೀಡಾಗಿದ್ದಾರೆ. ಕರಕುಶಲ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ದೊರಕದೇ ತೊಂದರೆಗೆ ಸಿಲುಕಿರುವ ಕರಕುಶಲ ಕರ್ಮಿಗಳ ಸಹಾಯಕ್ಕೆ ಇಂತಹ ಮೇಳಗಳ ಬಹಳ ಸಹಕಾರಿ ಎಂದು ಖ್ಯಾತ ನಟಿ ಸಿಂಧು ಲೋಕನಾಥ್ ಅಭಿಪ್ರಾಯಪಟ್ಟರು. ಇಂದು ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಇಂದಿನಿಂದ 10 ದಿನಗಳ ಆಯೋಜಿಸಿರುವ ಹಿಂದುಸ್ತಾನ್ ಆರ್ಟ್ ಮತ್ತು ಕ್ರಾಫ್ಟ್ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರೋನಾ ಲಾಕ್ಡೌನ್ ನಿಂದಾಗಿ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕದೇ ಕರಕುಶಲಕರ್ಮಿಗಳು ತೊಂದರೆಗೀಡಾಗಿದ್ದರು. ಅವರಿಗೆ ಸರಿಯಾದ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ 10 ದಿನಗಳ ಕಾಲ ಕಾಲಾವಕಾಶವನ್ನು ಒದಗಿಸಲಾಗಿದೆ. ಸಾರ್ವಜನಿಕರು ಈ ಮೇಳಕ್ಕೆ ಭೇಟಿ ನೀಡಿ ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಕರಕುಶಲ ಕರ್ಮಿಗಳ ಉತ್ಪನ್ನಗಳನ್ನು ಕೊಂಡು ಅವರಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಹೇಳಿದರು. ಈ ಮೇಳದಲ್ಲಿ ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ…
ಕೊರಟಗೆರೆ: ಮಾಜಿ ಉಪ ಮುಖ್ಯಮಂತ್ರಿ, ಶಾಸಕ, ಹಿರಿಯ ಕಾಂಗ್ರೆಸ್ ನಾಯಕರಾದ ಡಾ.ಜಿ.ಪರಮೇಶ್ವರ್ ಅವರು ಸ್ಥಳೀಯ ರೈತರು ಹಾಗೂ ಜನಪ್ರತಿನಿಧಿಗಳ ಜೊತೆಗೂಡಿ ಇಂದು ಗಂಗಾ ಮಾತೆಗೆ ಬಾಗಿನ ಅರ್ಪಿಸಿದರು. ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬೆಳಧರ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊಲ್ಲಹಳ್ಳಿ ಕೆರೆಯ ಗಂಗಾಮಾತೆಗೆ ಬಾಗಿನ ಅರ್ಪಿಸಿದ ಜಿ.ಪರಮೇಶ್ವರ್, ಇದೇ ವೇಳೆ ಗಂಗಾ ಮಾತೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಾಗಿನ ಅರ್ಪಿಸಲು ಆಗಮಿಸಿದ್ದ ಸಂದರ್ಭದಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿದ್ದರೂ, ಜಿ.ಪರಮೇಶ್ವರ್ ಅವರು ಮಳೆಯ ನಡುವೆಯೂ ಸ್ಥಳೀಯ ರೈತರು ಹಾಗೂ ಜನಪ್ರತಿನಿಧಿಗಳ ಜೊತೆಗೂಡಿ ಬಾಗಿನ ಅರ್ಪಿಸಿದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಹೆಚ್.ಡಿ.ಕೋಟೆ: ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹೆಚ್.ಡಿ.ಕೋಟೆ ತಾಲೂಕು ವಿಕಲಚೇತನರ ಹಾಗೂ ಸಬಲೀಕರಣ ಇಲಾಖೆ ಇವರ ಸಹಯೋಗದೊಂದಿಗೆ. ಹೆಚ್.ಡಿ.ಕೋಟೆ ತಾಲೂಕಿನ ಹೆಬ್ಬಲಗುಪ್ಪೆ , ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಾನಸಿಕ ಕಾಯಿಲೆ ಇರುವ ಹಾಗೂ ವಿಕಲಚೇತನರಿಗೆ ಕಾನೂನು ಅರಿವು ಮತ್ತು ಆರೋಗ್ಯ ಸೇವಾ ಸೌಲಭ್ಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ವನ್ನೂ ಏರ್ಪಡಿಸಲಾಗಿತ್ತು. ಈ ಕಾರ್ಯ ಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು ಮಾನಸಿಕ ಕಾಯಿಲೆ ಇರುವವರಿಗೆ ಹಾಗೂ ವಿಕಲಚೇತನರಿಗೆ ನಮ್ಮ ತಾಲೂಕಿನಲ್ಲಿ ಸುಮಾರು 4500 ಜನ ವಿಕಲಚೇತನರ ಇದರೆ ಹೆಬ್ಬಲ ಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 18 ಜನ ವಿಕಲಚೇತನರು ಇದ್ದರೆ ಎಲ್ಲಾ ರು ಕಾನೂನಿನಲ್ಲಿ ಸಿಗುವ ಸರ್ಕಾರಿ ಸೌಲಭ್ಯಗ ಳನ್ನು ಪಡೆದುಕೊಳ್ಳಿ ಹಾಗೂ ಪ್ರತಿಯೊಬ್ಬ ವಿಕಲಚೇತನರು UD id ಕಾರ್ಡ್ ಗಳನ್ನು ತಪ್ಪದೆ ಪಡೆದುಕೊಳ್ಳಿ ಶೇಕಡ 70ರಷ್ಟು ವಿಕಲಚೇತನ ಇರುವವರು ಸರ್ಕಾರದಿಂದ ಸಿಗುವ ಉಚಿತವಾದ ಬೈಸಿಕಲ್ ಪಡೆದುಕೊಳ್ಳಿ ಹಾಗೂ ಎಲ್ಲಾ ವಿಕಲಚೇತನರು ಆರೋಗ್ಯ ಕಾರ್ಡ್…
ವರದಿ: ಚಂದ್ರಹಾದನೂರು ಮೈಸೂರು: ಇವತ್ತೇನಾದ್ರೂ ಕೋರೋನಾ ಲಾಕ್ ಡೌನ್ ನಾ ಅಥವಾ ಕರ್ನಾಟಕ ಬಂದ್ ಗಿಂದ್ ಏನಾದ್ರೂ ಆಗಿದ್ದೀಯಾ ಬಸ್ ಸ್ಟ್ಯಾಂಡ್ ನಲ್ಲಿ ಒಂದು ಕೆಂಪು ಬಸ್ ಕೂಡ ಕಾಣ್ತಿಲ್ವಲ್ಲ ಅಂತಿದ್ದೀರಾ. ಆಗಿದ್ರೇ ನಿಮ್ಮ ಊಹೆ ತಪ್ಪು ಸ್ವಾಮಿ. ಈ ತಾಲೂಕಿನಲ್ಲಿ ಬೃಹತ್ ಬಸ್ ನಿಲ್ದಾಣ ಇದೆ ಆದ್ರೂ ಕೂಡ ಪ್ರತಿದಿನ ಲಾಕ್ ಡೌನ್, ಬಂದ್ ಆಗಿರುವ ವಾತಾವರಣವೇ ಕಣ್ಣಿಗೆ ಕಾಣೋದು. ನಿಲ್ದಾಣಕ್ಕೆ ಬಂದೌರೆಲ್ಲ ಗಂಟೆಗಟ್ಟಲೇ ಕಾದರೂ ಬಸ್ಬರಲೇ ಇಲ್ಲ.ಈಗಲಾದ್ರೂ ಬಸ್ ಬರುತ್ತಾ ಸ್ವಾಮಿ ಎಂದು ಕೇಳೋದೇ ಆಯ್ತು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಾರಿಗೆ ಸೌಲಭ್ಯ ಇಲ್ಲ ಅಂತ ಸುದ್ದಿ ಆಗೋದುಂಟು. ಅದ್ರೇ ಇದು ಒಂದು ತಾಲೂಕು ತಾಲೂಕಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲ ಅಂದ್ರೇ ನೀವು ನಂಬುವಿರ. ಆದರೂ ನೀವು ನಂಬಲೇ ಬೇಕು. ಹೌದು ಮೈಸೂರು ಜಿಲ್ಲೆ ಸರಗೂರು ತಾಲೂಕಿನಲ್ಲಿ ಪ್ರತಿದಿನ ಸರಿಯಾದ ಸಮಯಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೇ ಜನರು ಹೈರಾಣಾಗಿದ್ದಾರೆ.ಅದಕ್ಕೆ ಪ್ರತ್ಯಕ್ಷ ಉದಾಹರಣೆ ಅಂದ್ರೇ ಇದು ನೋಡಿ. ಬಸ್…
ಡಾ.ವಡ್ಡಗೆರೆ ನಾಗರಾಜಯ್ಯ 8722724174 ಹಿಂದೊಮ್ಮೆ ಇದು ವಜ್ರಯಾನ ಕವಲಿನ ಬೌದ್ಧ ಕೇಂದ್ರವಾಗಿದ್ದು ಕಾಲಾನಂತರದಲ್ಲಿ ಕಾಪಾಲಿಕ ಶಾಕ್ತ ಕೇಂದ್ರವಾಗಿ, ಕಾಪಾಲಿಕದಿಂದ ಪಲ್ಲಟಗೊಂಡು ಭೈರವಾರಾಧಕ ನಾಥಸಿದ್ಧರ ನೆಲೆಯಾಗಿ, ಆನಂತರದಲ್ಲಿ ಬೌದ್ಧ- ಕಾಪಾಲಿಕ – ನಾಥ ಪಂಥಗಳು ಒಂದರೊಳಗೊಂದು ಬೆರೆತು ಬಹುರೂಪಿ ದೇಶಿ ಧಾರೆಗಳ ಸಂಗಮ ಕ್ಷೇತ್ರವಾಗಿ ರೂಪಾಂತರವಾಗಿರುವ ಅನೇಕ ಕುರುಹುಗಳನ್ನು ನಾನಿಲ್ಲಿ ಕಂಡುಕೊಂಡೆನು. ಹೆಂಜೇರು ಹೇಮಾವತಿಯ ಸಿದ್ದೇಶ್ವರನ ಆಲಯದ ಪೌಳಿಯಲ್ಲಿ ನಿರ್ಮಿಸಲಾಗಿರುವ ಉಪ ಆಲಯಗಳಲ್ಲಿ ಬೌದ್ಧ ಮತ್ತು ಕಾಪಾಲಿಕ ಪಂಥದ ಕುರುಹುಗಳೊಂದಿಗೆ ನಾಥ ಪಂಥದ ಕುರುಹುಗಳು ಈಗಲೂ ಉಳಿದುಕೊಂಡಿವೆ. ಹೆಂಜೇರು ಹೇಮಾವತಿ ಪ್ರಧಾನವಾಗಿ ಒಂದು ಶೈವ ಕೇಂದ್ರವಾಗಿದೆ. ಇಲ್ಲಿರುವ ಹೆಂಜೇರು ಸಿದ್ದೇಶ್ವರನನ್ನು ಜನಪದರು ಹೆಂಜೇರಪ್ಪ, ಹೆಂಜಾರಪ್ಪ, ಯಂಜಾರಪ್ಪ, ಹೆಂಜಾರ ಸಿದ್ದಪ್ಪ, ಹೆಂಜಾರು ಸಿದ್ದೇಶ್ವರ ಮುಂತಾದ ಹೆಸರುಗಳಿಂದ ಆರಾಧಿಸುತ್ತಾರೆ. ಈಗ ಹೇಮಾವತಿ ಎಂಬ ಹೆಸರಿನಿಂದ ಕರೆಯಲಾಗುತ್ತಿರುವ ಈ ಊರನ್ನು ಹೆಂಜೇರು (ಕನ್ನಡ) – ಪೆಂಜೇರು ಅಥವಾ ಪೆರುಂಚೇರೈ (ತಮಿಳು) ಹೆಸರುಗಳಿಂದ ಕರೆಯಲಾಗುತ್ತಿತ್ತೆಂದು ಇಲ್ಲಿನ ಸ್ಥಳನಾಮ ಚರಿತ್ರೆಯಿಂದ ತಿಳಿದುಬರುತ್ತದೆ. ಹೆಂಜೇರು ಅಂದರೆ ಅತಿ ಹೆಚ್ಚು ವಿಸ್ತಾರವಾಗಿ ಹಾಗೂ…
ಎಲ್ಲವೂ ಬದಲಾದ ಸ್ಥಿತಿಯಲ್ಲಿ ಶಿಕ್ಷಕವರ್ಗ ಮಾತ್ರ ಬದಲಾಗಿಲ್ಲ. ಸಮಾಜವನ್ನು ಸರಿದಾರಿಗೆ ತರುವ ಶಿಕ್ಷಕರಿಗೆ ಸಮಾಜವೇ ಬೇರೆದಾರಿಗೆ ಸೆಳೆಯುತ್ತಿದೆ ಎನ್ನುವುದೇ ವಾಸ್ತವದ ಸ್ಥಿತಿಗತಿ. ಇದನ್ನು ವಿವರಿಸುವಲ್ಲಿ ಹಲವಾರು ವಿಷಯಗಳು ಸಿಗುವಂಥದ್ದೇ ನಮಗೆ ಗಮನೀಯ ಮತ್ತು ವಿಪರ್ಯಾಸದ ಸಂಗತಿ. ಎಲ್ಲವೂ, ಒಳಿತು-ಕೆಡುಕುಗಳನ್ನು ಒಳಗೊಂಡಂತೆ ಶಿಕ್ಷಕ ಸಮುದಾಯವೂ ಸಹ ಒಳಗೊಂಡಿದೆ. ಹಿಂದೆಲ್ಲಾ ಗುರುವಿನ ಸ್ಥಾನವನ್ನು ಸಾಮಾನ್ಯರು ತುಂಬುವಂತಿರಲಿಲ್ಲ, ಅದಕ್ಕೆ ಒಂದು ಮೌಲ್ಯಯುತ ನೈತಿಕ ವ್ಯಕ್ತಿತ್ವವಿರಬೇಕಾಗಿತ್ತು, ನಂತರವೇ ಬೋಧನೆ ಎಂಬುವುದು ಜರಗುತ್ತಿತ್ತು. ಹಾಗಾಗಿಯೂ ಸ್ವತಃ ಯಾರ್ಯಾರೋ ಆ ಹುದ್ದೆಯನ್ನು ಬಯಸುತ್ತಿರಲಿಲ್ಲ. ಆ ಹುದ್ದೆಗೆ ತಾನು ಸೂಕ್ತ ಮತ್ತು ಪ್ರಾಮಾಣಿಕ ಕರ್ತವ್ಯನಿಷ್ಠನಾಗಿರುವೆ ಎನಿಸಿದಾಗಲೇ ಆಸಕ್ತಿಗನುಗುಣವಾಗಿ ಮತ್ತು ಅಭ್ಯಾಸ ಪೂರ್ಣವಾಗಿ ಆ ಗುರುಸ್ಥಾನವನ್ನು ಅಲಂಕರಿಸುತ್ತಿದ್ದರು. ಆದರೆ ಈಗ ಹಾಗಲ್ಲ, ಪದವಿಗಳನ್ನು ಹೊಂದಿದರೆ ಸಾಕು ಅವರೆಲ್ಲರೂ ಶಿಕ್ಷಕರಾಗಲು ಒಂದು ವಿಧದಲ್ಲಿ ಅರ್ಹರೇ. ಇನ್ನೊಂದು ಪ್ರಮುಖ ವಿಷಯ ಎಂದರೆ ಆಗಿನ ಗುರುಗಳಿಗೆ ಒಂದು ಸೂಚ್ಯವಾದ ವೇಷಭೂಷಣ, ನಡೆ-ನುಡಿ, ಜೀವನ ಶೈಲಿ ಎಲ್ಲವೂ ಇತ್ತು. ಯಾರೇ ಅವರನ್ನು ಕಂಡರೂ ತಕ್ಷಣ ಹೇಳಿಬಿಡುತ್ತಿದ್ದರು ಇವರು ಗುರುಗಳು…
ವರದಿ: ಚಂದ್ರಹಾದನೂರು ಹೆಚ್.ಡಿ.ಕೋಟೆ :ಇಂದು ಬೆಳಿಗ್ಗೆ ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿಲ್ ಚಿಕ್ಕಮಾದು ಅವರು ಬೆಂಗಳೂರಿನ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿದೇ೯ಶಕರಾದ ಜಯಪ್ರಕಾಶ್ ರವರನ್ನು ಭೇಟಿ ಮಾಡಿ. ನಮ್ಮ ತಾಲ್ಲೂಕಿನ ಕೆರೆಗಳು ಬತ್ತಿ ಹೋಗಿವೆ. ಕೆರೆಗೆ ನೀರು ತುಂಬಿಸುವ ವಿಚಾರವನ್ನು ಪ್ರಸ್ತಾಪಿಸಿದಾಗ ಅನುಮತಿ ನೀಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲು ಭರವಸೆ ನೀಡಿದರು. ಜೊತೆಯಲ್ಲಿ ಸರಗೂರು ತಾಲ್ಲೂಕಿನ ಕಪಿಲ ನದಿ ಹಾಗೂ ನುಗು ಜಲಾಶಯದ ಮೇಲ್ದಂಡೆಯಲ್ಲಿನ ಹಳೆಯೂರು ಬೆಜ್ಜಲಪುರ ಹುಲ್ಲೇಮಾಳ ದೇವಲಾಪುರ ವಲ್ಲಹಳ್ಳಿ ಮಟಕೆರೆ ಹಿರೇಹಳ್ಳಿ ಮೊಳೆಯೂರು ಅಳಗಂಚಿ ಕಾಟವಾಳು ಸಾಗರೆ ಚೆನ್ನೀಪುರ ಹಂಚೀಪುರ ರಾಚಯ್ಯನ ಅವಳಿ ಕೆರೆಗುರುವಯ್ಯನ ಕೆರೆ ನರಸೀಪುರ ಹಾಗೂ ಇನ್ನಿತರೆ ಗ್ರಾಮಗಳ ಬರಿದಾದ ಕೆರೆಗಳಿಗೆ ಕುಡಿಯುವ ನೀರಿಗಾಗಿ ಏತ ನೀರಾವರಿ ಯೋಜನೆಗೆ ಅನುದಾನ ನೀಡುವಂತೆ ಕೋರಿದರು. ಮೈಸೂರು ಮಾನಂದವಾಡಿ ರಸ್ತೆ ಹೈರಿಗೆ ಗ್ರಾಮದಿಂದ ನಾಲೆ ಮುಖಾಂತರ ಹಳೆ ಹೈರಿಗೆ ಗ್ರಾಮಕ್ಕೆ ಹಾದುಹೋಗುವ ರಸ್ತೆ ತೀವ್ರ ಹದಗೆಟ್ಟಿರುವುದರಿಂದ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಲು ಮನವಿ ಮಾಡಿರುತ್ತಾರೆ. ಇದರ…
ವರದಿ: ಯೋಗೀಶ್ ಮೇಳೇಕಲ್ಲಹಳ್ಳಿ ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ವ್ಯಾಪ್ತಿಯ ರಾಜೇನಹಳ್ಳಿ ಸಂಪರ್ಕ ದ ಸೇತುವೆ ಕುಸಿದು ಸಂಪೂರ್ಣ ಸ್ಥಳೀಯ ಹೊಲ ಗದ್ದೆ ಗಳಿಗೆ ನೀರು ಹರಿದು ಲಕ್ಷಾಂತರ ರೂ ಬೆಳೆ ನಷ್ಟ ಸಂಭವಿಸಿದ್ದರು ಸಹ ಸಂಬಂಧ ಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರಾಜೇನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ. ಸುರಿದ ಮಳೆಗೆ ಕುಸಿದ ಸೇತುವೆ.ಇತ್ತೀಚೆಗೆ ಸುರಿದ ಮಳೆಯಿಂದ ಸೇತುವೆ ಕುಸಿದು ಸಂಚಾರಕ್ಕೆ ತೊಂದರೆಯಾದ ಹಿನ್ನಲೆಯಲ್ಲಿ ಸ್ವತಃ ಗ್ರಾಮಸ್ಥರು ನೀರು ಪೋಲಾಗುವುದನ್ನು ತಡೆಯವಲ್ಲಿ ಸಾಕಷ್ಟು ಪರಿಶ್ರಮ ವಹಿಸಿದರು ಸಹ ಯಾವುದೇ ಪ್ರಯೋಜನ ವಾಗದ ಹಿನ್ನೆಲೆಯಲ್ಲಿ ತಾತ್ಕಾಲಿಕ ಮಣ್ಣಿನ ತಡೆಗೋಡೆ ನಿರ್ಮಾಣ ಕ್ಕೆ ಮುಂದಾದರು ಇನ್ನೂ ಸ್ಥಳಕ್ಕೆ ಶಾಸಕ ಮಸಾಲೆ ಜಯರಾಂ ಭೇಟಿ ನೀಡಿ ಸೇತುವೆ ಪರಿಶೀಲನೆ ನೆಡೆಸಿ ಕಾಮಗಾರಿ ಪ್ರಾರಂಭ ದ ಬಗ್ಗೆ ಸಂಬಂಧ ಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಕಾಮಗಾರಿ ಪ್ರಾರಂಭ ಮಾಡುವ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದರು. ಶಾಸಕರ ಮಾತಿಗೆ ಕಿಮ್ಮತ್ತು ನೀಡದ ಲೋಕೋಪಯೋಗಿ ಅಧಿಕಾರಿಗಳು.ತುರುವೇಕೆರೆ…
ಸರಗೂರು: ತಾಲ್ಲೂಕಿನ ಕೊತ್ತೇಗಾಲ ಗ್ರಾ.ಪಂ.ನ ಕೊತ್ತೇಗಾಲ ಗ್ರಾಮದಲ್ಲಿ ರೈತ ಕ್ಷೇತ್ರ ಪಾಠ ಶಾಲೆ ವತಿಯಿಂದ ಶ್ರೀಗಂಧದ ಮರ ಬೆಳೆಯಲು ರೈತ ಪಾಠಶಾಲೆ ಕ್ಷೇತ್ರೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಲ್. ಶಿವಣ್ಣ ವಹಿಸಿದ್ದರು. ನಂತರ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ನಿವೃತ್ತಿ ಅಧಿಕಾರಿಗಳಾದ ಡಿ.ಎ.ಎಫ್. ಪ್ರಸನ್ನಕುಮಾರ್ ಹಾಗೂ ಮುಖಂಡರು ಸೇರಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನಾ ಮಾಡಿದರು. ಕಾರ್ಯಕ್ರಮ ಕುರಿತು ನಿವೃತ್ತ ಅರಣ್ಯ ಇಲಾಖೆ ಡಿ.ಎ.ಎಫ್. ಪ್ರಸನ್ನಕುಮಾರ್ ಮಾತನಾಡಿ, ಇಲಾಖೆಯಲ್ಲಿ ರೈತರಿಗೆ ಸಿಗುವ ಸೌಲಭ್ಯಗಳನ್ನು ವಿವಿಧ ಮರಗಳು ಸಿಗುತ್ತವೆ ಹಾಗೂ ಶ್ರಿಗಂಧ ಸಸಿಗಳನ್ನು ರೈತರು ಹಾಕಿದ್ದಾರೆ ತುಂಬಾ ಲಾಭ ಪಡೆಯಲು ಅವಕಾಶವಾಗುತ್ತದೆ ಎಂದರು. ಡಿ ಎ ಎಫ್ ಅವರ ಭಾಷಣವನ್ನು ಕೇಳಿ ಸ್ಥಳದಲ್ಲೇ 60 ಜನ ರೈತರು ಅರಣ್ಯ ಕೃಷಿ ಮಾಡಲು ಅಧಿಕಾರಿಗಳ ಎದುರಿಗೆ ಅರಣ್ಯ ಇಲಾಖೆಯ ಸಸಿಗಳನ್ನು ನೆಟ್ಟು ಮಾಡುತ್ತೇವೆ ಎಂದು ರೈತರು ಹೇಳಿದರು. ನಂತರ ಕೃಷಿ ಇಲಾಖೆ ಅಧಿಕಾರಿಗಳಾದ ಮಹೇಶ ಕುಮಾರ್ ಇಲಾಖೆಯಲ್ಲಿ ಶ್ರೀಗಂಧದ ಬೆಳೆಯುವ ಬಗ್ಗೆ ಸೌಲಭ್ಯದ ಬಗ್ಗೆ…