Author: admin

ಸರಗೂರು: ಪುನೀತ್ ನಿಧನವು ನಮ್ಮ ಕುಟುಂಬದ ಒಬ್ಬ ಸದಸ್ಯರನ್ನು ಕಳೆದುಕೊಂಡಂತೆ ಬಹಳ ನೋವಾಗುತ್ತಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು. ಹೆಚ್ ಡಿ ಕೋಟೆ ತಾಲ್ಲೂಕಿನ ಪಟ್ಟಣದ ಕೃಷ್ಣಾಪುರ ಗ್ರಾಮದ ಯುವ ಸಮೂಹ ಆಯೋಜಿಸಿದ್ದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಮುಂದಿನ ದಿನಗಳಲ್ಲಿ ಪುನೀತ್ ರಾಜ್‍ಕು ಮಾರ್ ಅವರ ಪುಣ್ಯ ಸ್ಮರಣಾರ್ಥವಾಗಿ ತಾಲೂಕಿನಲ್ಲಿ ಅರ್ಥಪೂರ್ಣವಾಗಿ ಪುನೀತ್ ಅವರು ಮಾಡುತ್ತಿದ್ದ ಸೇವೆಯಂತೆ ನೊಂದ ಬಡಜನರಿಗೆ ನೇರವಾಗುವಂತೆ, ತಾಲೂಕಿನ ಎಲ್ಲಾ ಸರ್ವ ಜನಾಂಗದವರ ಜೊತೆಗೂಡಿ ಪಕ್ಷಾತೀತವಾಗಿ ಕಾರ್ಯಕ್ರಮವನ್ನು ಆಯೋಜನೆ ಮಾಡುವುದಾಗಿ ಅವರು ಹೇಳಿದರು. ಕಾರ್ಯಕ್ರಮದಲ್ಲಿ ಪುರಸಭಾ ಸ್ಥಾಯಿ ಸಮಿತಿಯ ಅದ್ಯಕ್ಷರಾದ. ಹೆಚ್.ಸಿ.ನರಸಿಂಹಮೂರ್ತಿ, ನಾಗನಹಳ್ಳಿ ಪ್ರದೀಪ್, ಪುರಸಭಾ ಸದಸ್ಯರಾದ ಮಧುಕುಮಾರ್, ದಿನೇಶ್, ಜೆಡಿಎಸ್ ಮುಖಂಡರಾದ ಶಿವಯ್ಯ,  ಸೋಮುಪಟೇಲ್, ಯುವ ಮುಖಂಡರಾದ ವೆಂಕಿ ಕೋಟೆ , ಮಹೇಂದ್ರ ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:…

Read More

ಹಾದನೂರು: ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎತ್ತಿಗೆ ಗ್ರಾಮದಲ್ಲಿ ಕೋತಿಗಳು ಹಾವಳಿಗಳಿಂದ ಮನೆಯ ದಿನಸಿ ಪದಾರ್ಥಗಳನ್ನು ನಾಶವಾಗಿದೆ ಎಂದು ಇಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ. ಎತ್ತಿಗೆ ಗ್ರಾಮದಲ್ಲಿ ಕೋತಿಗಳಿಂದ ಜನರು ಭಯ ಪಟ್ಟುವಂತೆ ವಾತಾವರಣ ನಿರ್ಮಾಣವಾಗಿದೆ. ಜನರು ಜಮೀನಿಗೆ ಕೆಲಸ ಮಾಡಲು ಹೋದ ಸಮಯದಲ್ಲಿ ಕೋತಿಗಳು ಮನೆಯ ಚಾವಣಿ ಅಂಚು ತೆಗೆದುಕೊಂಡು ಮನೆಯ ಒಳಗಡೆಯಲ್ಲಿ ಮನೆಯಲ್ಲಿ ಇಂದ ಸಾಮಾನುಗಳನ್ನು ಪದಾರ್ಥ ನಾಶಮಾಡಿ  ನಂತರ ಜನರು ಕೋತಿಗಳನ್ನು ಓಡಿಸಲು ಹೋದರೆ ಜನರನ್ನೇ ಓಡಿಸಿಕೊಂಡು ಬರುತ್ತವೆ ಎಂದರು. ಗ್ರಾಮಸ್ಥರು ಸೇರಿ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಅಲವು ಬಾರಿ ಅರ್ಚಿಯನ್ನು ನೀಡಿದ್ದರು ಕೂಡ  ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಮಾಧ್ಯಮ ಜೊತೆ ಹೇಳಿಕೊಂಡು. ವರದಿ: ಚಂದ್ರಹಾದನೂರು ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ತುಮಕೂರು: ದೇಶದ ವಿದ್ಯಾವಂತರಿಗೂ ಕಾನೂನಿನ ಅರಿವಿಲ್ಲ. ಹೀಗಾಗಿ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡು ಕಾನೂನು ಸೇವಾ ಪ್ರಾಧಿಕಾರದಿಂದ ನ್ಯಾಯ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಬಿ.ವೀರಪ್ಪ ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಭಾರತದ 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ನಗರದ ಗಾಜಿನ ಮನೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ಯಾನ್ ಇಂಡಿಯಾ ಕಾನೂನು ಅರಿವು ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದವರು, ಹೆಣ್ಣು ಮಕ್ಕಳ ಮೇಲೆ ಆಸಿಡ್ ದಾಳಿ ಮಾಡಿದವರನ್ನು ಗಲ್ಲಿಗೇರಿಸುವಂತಹ ಕಾನೂನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದರು.  ನ್ಯಾಯಾಂಗವು ದೇಶದ ಒಳಗಡೆ ನಡೆಯುವ ಅನ್ಯಾಯ, ಅಕ್ರಮ, ದಬ್ಬಾಳಿಕೆ ಸರಿಪಡಿಸಲು ಕಾರ್ಯನಿರ್ವಹಿಸುತ್ತಿದೆ. ಜತೆಗೆ ಸರ್ವರಿಗೂ ನ್ಯಾಯದಾನ ದೊರಕಿಸಲು ಕಾನೂನು ಅರಿವು ಮೂಡಿಸುತ್ತಿದೆ. ಎಲ್ಲರಿಗೂ ನ್ಯಾಯ ದೊರಕಿಸಿಕೊಡಲು ಲೋಕ ಅದಾಲತ್ ನಡೆಸಲಾಗುತ್ತಿದೆ. ಈ ಕಾರ್ಯದಲ್ಲಿ ಜಿಲ್ಲೆ ನಾಲ್ಕು…

Read More

ತುಮಕೂರು: ಬೆಂಗಳೂರು—ತುಮಕೂರು ನಡುವೆ ಸಂಚರಿಸುತ್ತಿದ್ದ ರೈಲನ್ನು ಕೊವಿಡ್ ಸಂದರ್ಭದಲ್ಲಿ ಸಂಚಾರ ನಿಲ್ಲಿಸಲಾಗಿತ್ತು. ಇದೀಗ ಲಾಕ್ ಡೌನ್ ವಾಪಸ್ ಪಡೆದು, ಶಾಲೆಗಳು ಆರಂಭವಾದರೂ ಬೆಂಗಳೂರು—ತುಮಕೂರು ರೈಲು ಸಂಚಾರ ಆರಂಭವಾಗಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ. ಕೋವಿಡ್‌ ಗೆ ಮೊದಲು ಬೆಂಗಳೂರು- ತುಮಕೂರು ನಡುವೆ ನಾಲ್ಕು ಬಾರಿ ಮೆಮೊ ರೈಲು ಸಂಚರಿಸುತಿತ್ತು. ಬೆಂಗಳೂರಿನಿಂದ ಬೆಳಿಗ್ಗೆ 9.20 ಗಂಟೆಗೆ ಹೊರಟು ತುಮಕೂರಿಗೆ 11 ಗಂಟೆಗೆ ತಲುಪುತಿತ್ತು. ತುಮಕೂರಿನಿಂದ 11.20ಕ್ಕೆ ಬಿಟ್ಟು 1 ಗಂಟೆಗೆ ಬೆಂಗಳೂರು ಸೇರುತಿತ್ತು. ಬೆಂಗಳೂರಿನಿಂದ 1.40ಕ್ಕೆ ಹೊರಟು ತುಮಕೂರಿಗೆ 4 ಗಂಟೆಗೆ, ಮತ್ತೆ ಇಲ್ಲಿಂದ 4.15ಕ್ಕೆ ಹೊರಟು ಬೆಂಗಳೂರನ್ನು 6 ಗಂಟೆಗೆ ಸೇರುತಿತ್ತು. ಈ ರೈಲು ವಿದ್ಯಾರ್ಥಿಗಳಿಗೆ, ನೌಕರರಿಗೆ, ಕೂಲಿ ಕಾರ್ಮಿಕರಿಗೆ ಎಲ್ಲರಿಗೂ ನೆರವಾಗಿತ್ತು. ಆದರೆ ಇನ್ನೂ ರೈಲು ಸಂಚಾರ ಪ್ರಾರಂಭವಾಗಿಲ್ಲ. ಆದಷ್ಟು ಶೀಘ್ರವೇ ರೈಲು ಸಂಚಾರ ಆರಂಭಿಸಬೇಕು ಎನ್ನುವ ಒತ್ತಾಯ ಇದೀಗ ತುಮಕೂರಿನಾದ್ಯಂತ ಕೇಳಿ ಬಂದಿದೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರು ನಿಧನರಾದ ನೋವು ಇನ್ನೂ ಅಭಿಮಾನಿಗಳನ್ನು ಬಿಟ್ಟು ಹೋಗಿಲ್ಲ. ಈ ನಡುವೆ  ಆತ್ಮಗಳ ಜೊತೆಗೆ ಮಾತನಾಡುತ್ತೇನೆ ಎಂದು ಹೇಳಿಕೊಳ್ಳುತ್ತಿರುವ ಚಾರ್ಲಿ ಚಿಟ್ಟೆಂಡೆನ್(Charlie Chittenden) ಅವರು ಅಪ್ಪು ಆತ್ಮದೊಂದಿಗೆ ಮಾತನಾಡಿದ್ದಾರೆ. ಸುಶಾಂತ್ ಸೇರಿದಂತೆ ಹಲವರ ಆತ್ಮಗಳ ಜೊತೆಗೆ ಮಾತನಾಡಿದ್ದ ಚಾರ್ಲಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದರು. ಅಂತೆಯೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆತ್ಮದ ಜೊತೆಗೆ ಕೂಡ ಮಾತನಾಡಿದ್ದೇನೆ ಎಂದು ಹೇಳಿ ಅವರು ವಿಡಿಯೋ ಬಿಡುಗಡೆ ಮಾಡಿದ್ದಾರೆ.  ನಿಮ್ಮ ಅಭಿಮಾನಿಗಳಿಗೆ ಏನು  ಹೇಳುತ್ತೀರಿ ಎಂದು ಚಾರ್ಲಿ ಅಪ್ಪು ಅವರನ್ನು ಪ್ರಶ್ನಿಸಿದ್ದು, ಈ ವೇಳೆ “ಐ ಲವ್ ದೆಮ್” (ಎಲ್ಲರನ್ನೂ ಪ್ರೀತಿಸುತ್ತೇನೆ) ಎಂಬ ಪ್ರತಿಕ್ರಿಯೆ ಬಂದಿದೆ.  ಇನ್ನೂ ಹಲವು ಪ್ರಶ್ನೆಗಳನ್ನು ಸ್ಟೀವ್ ಕೇಳಿದ್ದರೂ ಯಾವುದಕ್ಕೂ ಸರಿಯಾದ ಉತ್ತರ ಬಂದಿಲ್ಲ ಎಂದು ಅವರು ಹೇಳಿದ್ದಾರೆ. ಅಪ್ಪುವಿನ ಆತ್ಮದ ಮಾತಿನ ನಡುವೆ ಹಾರ್ಟ್ ಫೇಲ್,  ಡಾಕ್ಟರ್, ಡಾಕ್ಟರ್ ಎಂಬ ಮಾತುಗಳನ್ನು ಅಪ್ಪು ಆಡಿದ್ದಾರೆ ಎಂದು ಚಾರ್ಲಿ…

Read More

ಗುರುಗದಹಳ್ಳಿ. ತಿಪಟೂರು ತಾಲೂಕಿನ ಹೊನವಳ್ಳಿ ಹೋಬಳಿಯ ಗುರುಗದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಯಾಣಿಕರ ತಂಗುದಾಣದ ಅವ್ಯವಸ್ಥೆಯಿಂದ ಕೂಡಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕಿಡಿಗೇಡಿಗಳ ಉಪಟಳದಿಂದ ತಂಗುದಾಣ ಅಸ್ತವ್ಯವಸ್ಥವಾಗಿದೆ. ಹೌದು ಗುರುಗದಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಬರುವ ಪ್ರಯಾಣಿಕರ ನಿಲ್ದಾಣ ತುಂಬಾ ಹದಗೆಟ್ಟು ಶೌಚಾಲಯದಂತೆ ಬಳಕೆಯಾಗುತ್ತಿದೆ. ಮತ್ತು ಮೇಲ್ಚಾವಣಿ ಮುರಿದು ಬೀಳುವ ಸ್ಥಿತಿಯಲ್ಲಿದ್ದು ಪ್ರಯಾಣಿಕರು ಭಯಭೀತರಾಗಿದ್ದಾರೆ. ಇಲ್ಲಿ ರಾತ್ರಿ ಸಮಯ ಪುಂಡ ಪೋಕರಿಗಳ ಹಾವಳಿಯಿಂದ ಪ್ರಯಾಣಿಕರ ನಿಲ್ದಾಣ ಬಾರ್ ನಂತೆ ಕಾಣುತ್ತಿದೆ. ಎಣ್ಣೆಯ ಬಾಟಲ್ ಗಳನ್ನು ನಿಲ್ದಾಣದ ಒಳಗಡೆ ಒಡೆದು ಹಾಕಿ  ಪುಂಡಾಟ ತೋರುತ್ತಿದ್ದಾರೆ ಮತ್ತು ನಿಲ್ದಾಣದ ಅಕ್ಕಪಕ್ಕ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಹೊಲಸು ವಾಸನೆ ಹರಡಿ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಇಲ್ಲಿ ಕುಳಿತುಕೊಳ್ಳುವ ಯಾವ ಯಾವ ವ್ಯವಸ್ಥೆ ಇಲ್ಲ.ಇನ್ನು ಮಳೆಗಾಲ ಆರಂಭವಾದಾಗ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಪ್ರಯಾಣಿಕರಿಗೆ ನಗರಕ್ಕೆ ಹೋಗಲು ಬಸ್ ಕಾಯುವಾಗ ನಿಲ್ದಾಣದ ಒಳಗಡೆ ನಿಲ್ಲಬೇಕು ಆದರೆ ಇಲ್ಲಿನ ಅವ್ಯವಸ್ಥೆ ಮತ್ತು ವಾಸನೆ ವಾಸನೆಯಿಂದ ಒಳಗಡೆ …

Read More

ರಾಮನಗರ: ಚನ್ನಪಟ್ಟಣದ ಎಲೆಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಪುನೀತ್‌ ರಾಜಕುಮಾರ್ ಅಭಿಮಾನಿ ವೆಂಕಟೇಶ್‌ (25) ಮನೆಗೆ ನಟ ರಾಘವೇಂದ್ರ ರಾಜಕುಮಾರ್ ಭಾನುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಪುನೀತ್‌ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ವೆಂಕಟೇಶ್‌ ಇದೇ 4ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಕಣ್ಣುಗಳನ್ನು ಕುಟುಂಬದವರು ದಾನ ಮಾಡಿದ್ದರು. ಅದನ್ನು ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಗತ್ಯವುಳ್ಳವರಿಗೆ ಕಸಿ ಮಾಡಲಾಗಿತ್ತು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಸರಗೂರು: ಹೆಚ್.ಡಿ.ಕೋಟೆ ತಾಲ್ಲೂಕಿನ ಅಂಕನಾಥಪುರ ಗ್ರಾಮ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಗ್ರಾಮವಾಗಿದ್ದು, ಸುಮಾರು 20 ವರ್ಷಗಳಿಂದಲೂ ರಸ್ತೆ  ಕಾಮಗಾರಿ ಚರಂಡಿ ವ್ಯವಸ್ಥೆ ಮನೆ ನಿರ್ಮಾಣ, ಬಸ್ಸು ಸಂಪರ್ಕ, ಸ್ಮಶಾನ ಇನ್ನೂ ಮುಂತಾದ ಸಮಸ್ಯೆ ಗಳ ಪರ್ವ ಗ್ರಾಮದ್ದಾಗಿದೆ. ಅದರ ಮಧ್ಯದಲ್ಲೂ 2019 ರಂದು ಅತಿವೃಷ್ಟಿಯಿಂದಾಗಿ ತಾರಕ ಜಲಾಶಯದಿಂದ ಹರಿದು ಬಂದು ನೀರಿನಿಂದ ಸೇತುವೆ ಸಂಪೂರ್ಣ ಕೊಚ್ಚಿಹೋಗಿದ್ದು ಇದನ್ನು ನಿರ್ಮಿಸಲು ನವಂಬರ್ 2021 ವರಗೆ ಕಾಯಬೇಕಾಯಿತ್ತು. ಆದರೆ ಈ ಸೇತುವೆಯನ್ನು ಕಳಪೆ ಮಟ್ಟದಲ್ಲಿ ನಿರ್ಮಿಸಿ ಗ್ರಾಮದ ಜನರು ಇನ್ನೂ ಹೆಚ್ಚಿನ ಅತಂಕದಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೇತುವೆಯ ಅಕ್ಕ ಪಕ್ಕದಲ್ಲಿ ಕಂದಕಗಳು ಉಂಟಾಗಿದ್ದು ಕಲ್ಲು ಗಳು ಕಿತ್ತುಹೋಗಿವೆ. ಹಾಗೆಯೇ ಮಳೆ ನೀರು ನದಿಗೆ ಹೋಗುವಂತೆ ಚರಂಡಿ ನಿರ್ಮಿಸಿಲ್ಲ ಜೊತೆಗೆ ಸೆತುವೆಗೆ ಸರಿಹೊಂದುವಂತೆ ರಸ್ತೆ ಸಂಪರ್ಕ ವನ್ನು  ನಿರ್ಮಿಸಿಲ್ಲ . ಜೇಡಿ ಮಣ್ಣು ಹಾಕಿದ್ದು, ಬೈಕ್ ಕಾರು ಮತ್ತು ಇತರೆ ವಾಹನಗಳು ಸಂಚರಿಸಲು ಅಗದೆ ಜಾರಿ ಬೀಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ  ಈ ಎಲ್ಲಾ…

Read More

ತುಮಕೂರು: ನಗರದ “ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘ”ಕ್ಕೆ ನೂತನ ಅಧ್ಯಕ್ಷರಾಗಿ ನಟರಾಜು ಜಿ.ಎಲ್. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರಿಗೆ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸಿ.ಸಿ.ಬಾರಕೇರ, ಹಳೆಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಶ್ರೀನಿವಾಸಮೂರ್ತಿ.ಟಿ,  ಪ್ರಧಾನ ಕಾರ್ಯದರ್ಶಿ ಯತೀಶ್ ಕುಮಾರ್, ಖಜಾಂಚಿ ಮಹಮದ್ ಗೌಸ್ ಪೀರ್, ಸಂಚಾಲಕ ಬುದ್ದೇಶ್, ನಿರ್ದೇಶಕ ಪವನ್ ಆರ್. ಹಾಗೂ ಸಂಘದ ಪದಾಧಿಕಾರಿಗಳು, ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳು ಅಭಿನಂದನೆಗಳನ್ನು ತಿಳಿಸಿದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ವರದಿ:  ದೊಡ್ಡೇರಿ ಮಹಾಲಿಂಗಯ್ಯ ಮಧುಗಿರಿ: ಕೋಡಿಹಳ್ಳಿ ಆದಿಜಾಂಬವ ಮಹಾಸಂಸ್ಥಾನ ಬೃಹನ್ನಮಠ ಸಂಸ್ಥಾಪಕರಾದ “ಪರಮಪೂಜ್ಯ  ಶ್ರೀ ಶ್ರೀ ಶ್ರೀ ಮಾರ್ಕಂಡೇಯ ಮುನೀ ದೇಶಿಕೇಂದ್ರ ಸ್ವಾಮೀಜಿ’ ಅವರು ಶಾಂತಿ ಹೊಂದಿದ ಹಿನ್ನೆಲೆಯಲ್ಲಿ ಅವರಿಗೆ ಭಾವಪೂರ್ವಕ ಶ್ರದ್ದಾoಜಲಿ ಹಾಗೂ ನುಡಿ ನಮನ ಕಾರ್ಯಕ್ರಮ ಮಧುಗಿರಿಯ ಅಂಬೇಡ್ಕರ್ ಪ್ರತಿಮೆಯ ಬಳಿ ಶನಿವಾರ ನಡೆಯಿತು. ಇ.ಓ.ದೊಡ್ಡ ಸಿದ್ದಯ್ಯ, ಕೃಷಿಇಲಾಖೆ ಎ.ಡಿ.ಹನುಮಂತರಾಯಪ್ಪ, ಸಿದ್ದಪುರ ರಂಗಶಾಮಣ್ಣ, HMT ನರಸಿಪ್ಪ, ದೊಡ್ಡೇರಿ ಮಹಾಲಿಂಗಪ್ಪ, ಅಶೋಕ , ನಾಗೇಶ್ , ಶಿವಕುಮಾರ್,  ಮಂಜುನಾಥ ಐಡಿಹಳ್ಳಿ, ರವಿ, ಯುವರಾಜು, ಬೇಡತ್ತೂರು ತಿಪ್ಪೇ ಸ್ವಾಮಿ, ಪಾಂಡುರಂಗಯ್ಯ, ದೊಡ್ಡಹೊಸಹಳ್ಳಿಮೂರ್ತಿ, ಸಂಜೀವಮೂರ್ತಿ, ಜೀವಿಕಮಂಜು ಹನುಮಂತರಾಯಪ್ಪ,ಸಿದ್ದಾಪುರಸಂಜೀವಯ್ಯ ನಾಗೇನಹಳ್ಳಿಸುನಿಲ್,  ಹಾಗೂ ಸಮಸ್ತ ಮಾದಿಗ ಸಮುದಾಯ ಹಾಗೂ ಮಾದಿಗ ದಂಡೊರ ಸಂಘಟನೆ ಮಧುಗಿರಿ ಕಾರ್ಯಕ್ರಮದಲ್ಲಿ ಭಾಗಿಯಾಯಿತು.  ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿ ಆದಿಜಾಂಬವ ಮಹಾಸಂಸ್ಥಾನ ಬೃಹನ್ನಮಠ ಸಂಸ್ಥಾಪಕರಾದ “ಪರಮಪೂಜ್ಯ  ಶ್ರೀಶ್ರೀಶ್ರೀ ಮಾರ್ಕಂಡೇಯ ಮುನೀ ದೇಶಿಕೇಂದ್ರ ಸ್ವಾಮೀಜಿ’ ರವರು  ಲಿಂಕೈಕ್ಯರಾಗಿದ್ದು,            ಪರಮಪೂಜ್ಯರು ಮಾದಿಗ ಸಮುದಾಯದ ಎಲ್ಗೆಗಾಗಿ, ಬಡವರ ಧ್ವನಿಯಾಗಿ, ನೊಂದವರಿಗೆ ನೆರಳಾಗಿ,…

Read More