ಬೆಂಗಳೂರು : ಟೀಮ್ ಭಾಸ್ಕರ್ ರಾವ್ ತಂಡದ ವತಿಯಿಂದ ಕೋವಿಡ್ ಕಾಲಘಟ್ಟದಲ್ಲಿ ತಮ್ಮ ಜೀವವನ್ನೇ ಮುಡಿಪಾಗಿಟ್ಟು ಜನರ ಜೀವ ಉಳಿಸಿದಂತಹ (covid warriors) ಕೋವಿಡ್ ಸೇನಾನಿಗಳಿಗೆ ಪ್ರಶಂಸನ ಪತ್ರಗಳನ್ನು ಸೋಮವಾರ ವಿತರಿಸಲಾಯಿತು.
ಕರ್ನಾಟಕ ರಾಜ್ಯ ರೈಲ್ವೆ ADGP, ಮಾಜಿ ಬೆಂಗಳೂರು ಪೊಲೀಸ್ ಕಮಿಷನರ್ ದಕ್ಷ ಐಪಿಎಸ್ ಅಧಿಕಾರಿಯಾಗಿರುವ ಭಾಸ್ಕರ್ ರಾವ್ ಪ್ರಶಂಸನ ಪತ್ರ ವಿತರಿಸಿ ಮಾತನಾಡಿ, ನಿಮ್ಮ ಸೇವೆ ಅನನ್ಯವಾದದ್ದು, ನೂರಾರು ಸಾವಿರಾರು ಜನರಲ್ಲಿ ಆತ್ಮಸ್ಥೈರ್ಯ ತುಂಬುತ್ತಾ, ತಮ್ಮ ಜೀವವನ್ನೇ ಮೂಡಿಪಾಗಿಟ್ಟು, ಜನರ ಜೀವ ಉಳಿಸಿದ್ದಾರೆ.ಇವರೆಲ್ಲರಿಂದಲೇ ಕೋವಿಡ್ ನಂತಹ ಮಹಾಮಾರಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಯಿತು ಎಂದು ಹೇಳಿದರು.
ಜಾತಿ, ಧರ್ಮ, ಮೇಲು, ಕೀಳು ಎಂಬ ಭಾವನೆ ಇಲ್ಲದೇ ಎಲ್ಲದಿಕ್ಕಿಂತ ಮನುಷ್ಯಧರ್ಮ ಮುಖ್ಯ ಸಹಾಯ ಮಾಡುವ ಗುಣವನ್ನು ರೂಢಿಸಿಕೊಳ್ಳಿ ಪರರ ಕಷ್ಟಗಳಿಗೆ ಸ್ಪಂದಿಸಿ ಎಂದು ಅವರು ಇದೇ ವೇಳೆ ಅವರು ಮನವಿ ಮಾಡಿಕೊಂಡರು.
ಇದೇ ವೇಳೆ ನಮ್ಮ ತುಮಕೂರು ಮಾಧ್ಯಮದ ವಿಶೇಷ ವರದಿಗಾರರು, ಪತ್ರಕರ್ತರಾದ ಆಂಟೋನಿ ಅವರಿಗೂ ಪ್ರಶಂಸನ ಪತ್ರ ನೀಡಿ ಗೌರವಿಸಲಾಯಿತು. ಇನ್ನೂ ಆಂಟೋನಿ ಅವರ ಕುರಿತು ಅಭಿನಂದನೆಯ ಮಾತುಗಳನ್ನಾಡಿದ ಭಾಸ್ಕರ್ ರಾವ್, ಟೀಮ್ ಭಾಸ್ಕರ್ ರಾವ್ ತಂಡದವರಿಗೂ ಅಭಿನಂದನೆ ಸಲ್ಲಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5