ತುಮಕೂರು: ಭೂಮಿ ಮತ್ತು ವಸತಿ ಹಕ್ಕು ವಂಚಿತರ ಅನಿರ್ದಿಷ್ಟವಧಿ ಆಹೋರಾತ್ರಿ ಧರಣಿ 21ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಧರಣಿ ಸ್ಥಳಕ್ಕೆ ಕೊರಟಗೆರೆ ಮಾಜಿ ಶಾಸಕರು ಮತ್ತು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸುಧಾಕರ್ ಲಾಲ್ ಭೇಟಿ ನೀಡಿದರು.
ಧರಣಿ ನಿರತರ ಸಮಸ್ಯೆಗಳನ್ನು ಆಲಿಸಿದ ಸುಧಾಕರ್ ಲಾಲ್ ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಸಂಚಾಲಕರದ ನಾಗಭೂಷಣ್ , ಸಮಸ್ಯೆಗಳನ್ನು ಬಗೆಹರಿಸುವವರೆಗೂ ನಾವು ಧರಣಿಯನ್ನು ಮುಂದುವರಿಸುತ್ತೇವೆ ಎಂದರು.
ಸಾಮಾಜಿಕ ಹೋರಾಟಗಾರ್ತಿ ಗಂಗಾರಣಿ ಮಾತನಾಡಿ, ಎರಡು ಮೂರು ಬರಿ ಮಳೆ ಬಂದಿದ್ದು. ಇಬ್ಬರು ಹೆಣ್ಣುಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಮ್ಮ ಜನಗಳಿಗೆ ಏನಾದರು ತೊಂದರೆಯಾದರೆ, ಅದಕ್ಕೆ ಸರ್ಕಾರವೇ ನೇರ ಹೊಣೆ ಎಂದರು.
ನಾಳೆ ಶ್ರೀರಾಮ ನವಮಿಯನ್ನು ಇದೇ ಧರಣಿಯಲಿ ಆಚರಣೆ ಮಾಡುತ್ತಿದ್ದೇವೆ ಮತ್ತು ಈ ದಿನ ಸಂಜೆ ಎಚ್.ಎಸ್.ದೊರೆ ಸ್ವಾಮಿಯವರ ಜನ್ಮ ದಿನವನ್ನು ಆಚರಣೆ ಮಾಡಲು ಇದೇ ವೇಳೆ ನಿರ್ಧಾರಿಸಲಾಯಿತು. ಈ ಸಂದರ್ಭದ ಜೆ ಸಿ ಬಿ ವೆಂಕಟೇಶ್ ಮಂಜುನಾಥ್ ಉಪಸ್ಥಿತರಿದ್ದರು.
ವರದಿ: ಎ.ಎನ್. ಪೀರ್, ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5