ತುಮಕೂರು: ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮತ್ತು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ತುಮಕೂರು ಜಿಲ್ಲಾ ಘಟಕದ ನೇತೃತ್ವದಲ್ಲಿ ಭೂಮಿ ವಸತಿಗಾಗಿ ಅನಿರ್ದಿಷ್ಟಾವದಿ ಅಹೋರಾತ್ರಿ ಧರಣಿ ಮಾರ್ಚ್ 21 ರಿಂದ ಸತತವಾಗಿ ನಡೆಸಿಕೊಂಡು ಬರುತ್ತಿದ್ದು, ಇಂದು 11 ನೇ ದಿನಕ್ಕೆ ಕಾಲಿಟ್ಟಿದೆ.
ಈ ಸಂದರ್ಭದಲ್ಲಿ ಪತ್ರ ಚಳುವಳಿ ಹಮ್ಮಿಕೊಂಡಿದ್ದು, ಇದರ ಭಾಗವಾಗಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಿಗೆ ಭೂಮಿ ಮತ್ತು ವಸತಿ ಹಕ್ಕು ವಂಚಿತರು ಪತ್ರ ಬರೆಯುವ ಮುಖಾಂತರ, ಅವರ ಗಮನವನ್ನು ಸೆಳೆದು, ಆದಷ್ಟು ಬೇಗ ಸರ್ಕಾರದ ಮೇಲೆ ಒತ್ತಡ ತಂದು, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಲಾಯಿತು ಎಂದು ಹಂದ್ರಾಳ್ ನಾಗಭೂಷಣ್ ತಿಳಿಸಿದ್ದಾರೆ.
ಧರಣಿಯ ಹಕ್ಕೊತ್ತಾಯಗಳು:
*ತುರ್ತಾಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ CEO , ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮೂರು ಬಾರಿ ನೀಡಿರುವ ಸಮಸ್ಯೆಗಳ ಪಟ್ಟಿಯನ್ನು ಪರಿಶೀಲಿಸಿ, ಬಗೆಹರಿಸಬೇಕು.
* MLA ಗಳ ಅಧ್ಯಕ್ಷತೆಯಲ್ಲಿನ ಬಗರ್ ಹುಕ್ಕು ಸಮಿತಿಯು ಏಪ್ರಿಲ್ 20 ಕ್ಕೆ ಮುಗಿಯುವುದರಿಂದ ಪ್ರಸ್ತುತ ಧರಣಿಯಲ್ಲಿರುವ ಫಲಾನುಭವಿಗಳ ಸುಮಾರು ನಾಲ್ಕು ಮುಖ್ಯ ಸಮಸ್ಯೆಗಳನ್ನು ಮಧುಗಿರಿ ಹಾಗೂ ಕೊರಟಗೆರೆ ಶಾಸಕರ ಗಮನಕ್ಕೆ ತಂದು ತುರ್ತು ಸಭೆ ಕೈಗೊಂಡು ಸ್ಥಳದಲ್ಲೇ ಸಾಗುವಳಿ ಪತ್ರ ವಿತರಿಸಲು ಅನುವು ರೂಪಿಸಬೇಕು.
* ಹೆಬ್ಬೂರು ಪೊಲೀಸ್ ಠಾಣೆಯ ಜಾಗಕ್ಕೆ ಇ-ಸ್ವತ್ತು ಮಾಡಿಕೊಡಬೇಕಿದೆ.
* ಅಟ್ರಾಸಿಟಿ ಆರೋಪ ಹೊತ್ತಿರುವ ಚಿ.ನಾ.ಹಳ್ಳಿ ತಹಸಿಲ್ದಾರ್ ರವರನ್ನು ಅಮಾನತ್ತುಗೊಳಿಸಬೇಕು.
* ಬ್ಯಾಲ್ಯ ಗ್ರಾಮ ಪಂಚಾಯ್ತಿಯಲ್ಲಿನ ಭ್ರಷ್ಟ ನೌಕರರನ್ನು ಕೂಡಲೆ ಸೇವೆಯಿಂದ ವಜಾ ಮಾಡಬೇಕಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy