ಗುಬ್ಬಿ: ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಯರೇಕಾವಲ್ ನ ದಲಿತ ಮುಖಂಡ ನರಸಿಂಹಯ್ಯ ಎಂಬುವರ ಜಮೀನಿನಲ್ಲಿ ಕಸವಿಲೆವಾರಿ ಘಟಕ ಮುಂಜೂರು ಮಾಡಲಾಗಿದ್ದು , “ನಮ್ಮ ಗಮನಕ್ಕೆ ತರದೇ ಏಕಾಏಕಿ ಕಸವಿಲೇವಾರಿ ಘಟಕ ಮಂಜೂರು ಮಾಡಿರುವುದು ಸರಿಯಲ್ಲ ಎಂದು ನರಸಿಂಹಯ್ಯ ಆಕ್ರೋಶ ವ್ಯಕ್ತಪಡಿಸಿ, ಜಮೀನಿನಲ್ಲಿ ಪ್ರತಿಭಟನೆ ನಡೆಸಿದರು.
ಸುಮಾರು 30 ವರ್ಷಗಳಿಂದ ನಮ್ಮ ಜಮೀನಿನಲ್ಲಿ ನಾವೇ ಉಳುಮೆ ಮಾಡಿಕೊಂಡು ಬಂದಿದ್ದು, ಜಮೀನಿನಲ್ಲಿ ಸಾಲ ಸೂಲ ಮಾಡಿ ಬೋರ್, ಟಿಸಿ , ತೆಂಗಿನ ಗಿಡಗಳನ್ನು ನೆಟ್ಟಿದ್ದೇವೆ. ಈಗ ಏಕಾಏಕಿ ಅಧಿಕಾರಿಗಳು ನಮ್ಮ ಜಮೀನಿನಲ್ಲಿ ಕಸವಿಲೆವಾರಿ ಘಟಕ ಮಾಡುವುದಕ್ಕೆ ಮುಂದಾಗಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ನಮ್ಮ ಜಮೀನಿನಲ್ಲಿ ಕಸವಿಲೆವಾರಿ ಘಟಕ ಮಾಡುವುದಕ್ಕೆ ಅವಕಾಶ ಕೊಡಲ್ಲ. ಈ ಜಮೀನು ಬಿಟ್ಟರೆ ನಮ್ಮಗೆ ವಿಷ ಕುಡಿಯುವುದೇ ವಾಸಿ ಎಂದು ನರಸಿಂಹಯ್ಯ ಅಧಿಕಾರಿಗಳ ಮುಂದೆ ಆಕ್ರೋಶ ಹೊರ ಹಾಕಿದರು.
ಈ ವೇಳೆ ಚೇಳೂರು ಪೋಲೀಸರು ಮಧ್ಯೆ ಪ್ರವೇಶಿಸಿದರು. ಗ್ರಾಮಸ್ಥರು ಹಾಗೂ ಫೋಲೀಸರ ನಡುವೆ ಮಾತಿನ ಚಕಮಾಕಿ ನಡೆಯಿತ್ತು.
ಪಿಡಿಓ ಮಂಜುನಾಥ್ ಮಾತನಾಡಿ, ಮೇಲಾಧಿಕಾರಿಗಳಿಂದ ನಮಗೆ ಮಾಹಿತಿ ಬಂದಿದೆ. ಯರೇಕಾವಲ್ ಸರ್ವೆ ನಂಬರ್ ನಲ್ಲಿ ಕಸವಿಲೆವಾರಿ ಘಟಕ ಮಂಜೂರು ಆಗಿದೆ ಅಂತ. ಅದಕ್ಕೆ ನಾವು ಇಲ್ಲಿಗೆ ಬಂದು ಜಾಗ ಗುರುತಿಸಿದ್ದೇವೆ. ಮೊನ್ನೆ ಇಓ, ನಾವು ಸ್ಥಳ ನೋಡಿ ಹೋಗಿದ್ದೆವು. ಕಸವಿಲೆವಾರಿ ಘಟಕ ಮಾಡುವುದಕ್ಕೆ ನೋಟಿಸ್ ಕಳುಹಿಸಿದ್ರು. ನಾವು ಕೂಡ ರೈತರಗೆ ನೋಟಿಸ್ ಪೋಸ್ವ್ ಮಾಡಿದೇವೆ. ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಕಡೆಯಿಂದ ಮಾಹಿತಿ ಬಂದಿದೆ ಈಗಲ್ಲೂ ಅಷ್ಠೇ ಸಂಬಂಧಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎಎಸ್ ಐ ಜಗಧೀಶ್, ಗ್ರಾಮ ಪಂಚಾಯಿತಿ ಸದಸ್ಯ ಶಂಕರಪ್ಪ, ಮುಖಂಡರಾದ ಜಗದೀಶ್ , ಮಂಜುನಾಥ್ , ನಾಗರಾಜು , ವಾಸಣ್ಣ, ನರಸಿಂಹಯ್ಯ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ: ಮಂಜುನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB