ನಿಯಮ ಉಲ್ಲಂಘನೆಗಾಗಿ ಸಂಚಾರಿ ಪೊಲೀಸರು ಚಲನ್ ಕಡಿತಗೊಳಿಸುವುದು (Challen) ಅವರ ಕರ್ತವ್ಯದ ಒಂದು ಭಾಗ, ತಮಿಳುನಾಡಿನಲ್ಲಿ ಚಲನ್ ಕಡಿತಗೊಳಿಸುವ ಘಟನೆ ಬೆಳಕಿಗೆ ಬಂದಿರುವುದು ಅಚ್ಚರಿ ಮೂಡಿಸಿದೆ.
ಶನಿವಾರ ರಾತ್ರಿ ಲಾರಿ ಚಾಲಕ ಸಂತೋಷ್ ಕುಮಾರ್ (Santosh Kumar) ಲಾರಿಯಲ್ಲಿ ಕೊಂಡ್ಲಂಪಟ್ಟಿ (Kodlampatti) ಕ್ರಾಸ್ ಕಡೆಗೆ ಹೋಗುತ್ತಿದ್ದರು. ಆಗ ಅಲ್ಲಿ ವಾಹನದ ಹುಡುಕಾಟದಲ್ಲಿ ನಿರತರಾಗಿದ್ದ ಪೊಲೀಸರು ಅವನ ವಾಹನವನ್ನು ನಿಲ್ಲಿಸಿ ಪರಿಶೀಲನೆ (Crime News) ನಡೆಸಿದ್ದಾರೆ. ತನಿಖೆ ವೇಳೆ ಪೊಲೀಸರು ಸಂತೋಷ್ ಕುಮಾರ್ ಪಾನಮತ್ತನಾಗಿದ್ದ ಎಂದು ಆರೋಪಿಸಿ, ವಾಹನ ಜಪ್ತಿ ಮಾಡುವುದರ ಜತೆಗೆ ಹತ್ತು ಸಾವಿರ ರೂಪಾಯಿ ದಂಡ ಪಾವತಿಸುವಂತೆ ಒತ್ತಾಯಿಸಿದ್ದಾರೆ. ಈ ಘಟನೆಯಿಂದ ವಿಚಲಿತನಾದ ಸಂತೋಷ್ ಬಂಕ್ ನಿಂದ ಪೆಟ್ರೋಲ್ ಖರೀದಿಸಿ ಬೆಂಕಿ ಹಚ್ಚಿಕೊಂಡಿದ್ದಾನೆ.
ಸಂತೋಷ್ ಕಿರುಚಾಡುವ ಸದ್ದು ಕೇಳಿದಾಗ ಅಲ್ಲೇ ಇದ್ದ ಪೊಲೀಸರು ಧಾವಿಸಿ ಸಂತೋಷ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ವರದಿಯ ಪ್ರಕಾರ, 25 ವರ್ಷದ ಲಾರಿ ಚಾಲಕ ಸಂತೋಷ್ ತಮಿಳುನಾಡಿನ ಅಮಾನಿ ಕೊಂಡ್ಲಂಪಟ್ಟಿ ಪ್ರದೇಶದ ನಿವಾಸಿಯಾಗಿದ್ದಾನೆ. ಪ್ರಸ್ತುತ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಪೂರ್ಣ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಸಂತೋಷ್ ಕುಮಾರ್ ಬೆಂಕಿ ಹಚ್ಚಿಕೊಂಡಿರುವ ಸಿಸಿಟಿವಿ ದೃಶ್ಯಾವಳಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ವರದಿ: ಆಂಟೋನಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB