ಮಧುಗಿರಿ: ‘ನಾಕುತಂತಿ’ ‘ಮೀಟಿದ’ ‘ನಾದಲೀಲೆ’ಯ ಗಾರುಡಿಗ ಯುಗದ ದನಿ ಬೇಂದ್ರೆ ಎಂದು ಹಿರಿಯ ಸಾಹಿತಿ ಪ್ರೊಪೆಸರ್ ಮೊ .ಲ.ನ.ಮೂರ್ತಿ ತಿಳಿಸಿದರು.
ಪಟ್ಟಣದ ಟಿ.ವಿ.ವೆಂಕಟಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಏರ್ಪಡಿಸಿದ್ದ ದ.ರಾ.ಬೇಂದ್ರೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಸಿ ಕಾವ್ಯಪರಂಪರೆ ಮುಂದುವರೆಸಿಕೊಂಡು ಸ್ವಂತಿಕೆಯನ್ನು ತೋರಿದ ಕವಿ ನೋವನ್ನು ಅರಗಿಸಿಕೊಂಡು ಪಟ್ಟಪಾಡನ್ನೆಲ್ಲ ಹುಟ್ಟುಹಾಡನ್ನಾಗಿ ಜನಕೆ ನೀಡಿದರು. ನಂತರ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದರು ಎಂದರು.
ಬೇಂದ್ರೆ ಕುರಿತು ಮಾತನಾಡಿದ ಉಪನ್ಯಾಸಕ ಎಚ್.ನರಸಿಂಹರಾಜು ನೆಲಮೂಲ ಸಂಸ್ಕೃತಿಯ ಕಸುವನ್ನು ಕನ್ನಡಕಾವ್ಯಕ್ಕೆ ತಂದಿತ್ತ ಕವಿ ಜನಸಾಮಾನ್ಯರ ಭಾಷೆಯನ್ನು ಕಾವ್ಯಕ್ಕೆ ಕೊಟ್ಟ ಕೀರ್ತಿ ಅವರದು, ತಿಳಿದು ಬದುಕಿರಿ, ತುಳಿದು ಬದುಕದಿರಿ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಸಿ.ಕೃಷ್ಣಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೇಂದ್ರೆ ಕನ್ನಡ ಕಾವ್ಯಕ್ಕೆ ಹೊಸ ರೂಪರೇಖೆಗಳನ್ನು ತಂದುಕೊಟ್ಟ ವರಕವಿ. ಅವರ ಕಾವ್ಯ ಪ್ರಭಾವ ಮುಂದಿನ ಕವಿಗಳ ಮೇಲೆ ಆಗಿರುವುದನ್ನು ಅಲ್ಲಲ್ಲಿ ಕಾಣಬಹುದಾಗಿದೆ ಎಂದರು.
ಉಪನ್ಯಾಸಕರಾದ ಗೋವಿಂದರಾಜು, ಮಣಿಕಂಠ, ವಿನುಕುಮಾರ್ ಬೇಂದ್ರೆಯ ‘ಮೇಘಧೂತ’ ಅನುವಾದ ಕುರಿತು ಮಾತನಾಡಿದರು. ಚಿತ್ತಯ್ಯ, ರಂಗಸ್ವಾಮಯ್ಯ ಬೇಂದ್ರೆ ಕವಿತೆಗಳನ್ನು ವಾಚಿಸಿದರು.
ವಿದ್ಯಾರ್ಥಿಗಳಾದ ದೀಪಿಕಾ ಪ್ರಾರ್ಥಿಸಿದರು. ಐಶ್ವರ್ಯ ಸ್ವಾಗತಿಸಿದರು. ಉಪನ್ಯಾಸಕ ರಮೇಶ್ ವಂದಿಸಿದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB