nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರಿಗೆ ಹೆಮ್ಮೆ: ಗೊಲನ ಎಂಟರ್‌ ಪ್ರೈಸಸ್‌ ಗೆ ಕೇಂದ್ರ ಸರ್ಕಾರದ ಮಾನ್ಯತೆ

    July 12, 2025

    ಹೃದಯಾಘಾತದಿಂದ ಖಾಸಗಿ ಬಸ್ ಚಾಲಕ  ಸಾವು

    July 12, 2025

    ನಿರ್ದಯಿ ತಾಯಿ..!: 3 ಮರಿಗಳಿಗೆ ಜನ್ಮ ನೀಡಿ ಬಿಟ್ಟು ಹೋದ ಹುಲಿ, ಮರಿಗಳು ಸಾವು

    July 12, 2025
    Facebook Twitter Instagram
    ಟ್ರೆಂಡಿಂಗ್
    • ತುಮಕೂರಿಗೆ ಹೆಮ್ಮೆ: ಗೊಲನ ಎಂಟರ್‌ ಪ್ರೈಸಸ್‌ ಗೆ ಕೇಂದ್ರ ಸರ್ಕಾರದ ಮಾನ್ಯತೆ
    • ಹೃದಯಾಘಾತದಿಂದ ಖಾಸಗಿ ಬಸ್ ಚಾಲಕ  ಸಾವು
    • ನಿರ್ದಯಿ ತಾಯಿ..!: 3 ಮರಿಗಳಿಗೆ ಜನ್ಮ ನೀಡಿ ಬಿಟ್ಟು ಹೋದ ಹುಲಿ, ಮರಿಗಳು ಸಾವು
    • ಸಿಗಂದೂರು ಸೇತುವೆಗೆ ರಾಜಕೀಯ ವ್ಯಕ್ತಿಗಳ ಹೆಸರು ಬೇಡ: ಎಸ್.ಎನ್.ನಾಗರಾಜು ಒತ್ತಾಯ
    • ಜಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಸಿ.ಡಿ.ಪ್ರಭಾಕರ್ ಅವಿರೋಧ ಆಯ್ಕೆ
    • ಅಕ್ರಮ ಭೂಕಬಳಿಕೆ ಆರೋಪ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಗೆ ಸನ್ಮಾನಿಸಲು ಯತ್ನಿಸಿದ KRS ಪಕ್ಷದ ಕಾರ್ಯಕರ್ತರು ಪೊಲೀಸ್ ವಶಕ್ಕೆ
    • ಶಾಸಕರ ವಿರುದ್ಧ ಅಪಪ್ರಚಾರ: ದೂರು ನೀಡಲು ಮುಂದಾದ ಕಾಂಗ್ರೆಸ್ ಮುಖಂಡರು!
    • ಜನರಿಗೆ ತೊಂದರೆಯಾಗದಂತೆ ವಾಹನ ನಿಲ್ಲಿಸಿ: ವಾಹನ ಚಾಲಕರಿಗೆ ಇನ್ಸ್ಪೆಕ್ಟರ್ ಆರ್. ಕಿರಣ್ ಸಲಹೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » “ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ”: 200 ಕೋಟಿ ರೂ. ಮೀಸಲಿಡಲು  ಒತ್ತಾಯ
    ರಾಜ್ಯ ಸುದ್ದಿ November 8, 2024

    “ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ”: 200 ಕೋಟಿ ರೂ. ಮೀಸಲಿಡಲು  ಒತ್ತಾಯ

    By adminNovember 8, 2024No Comments2 Mins Read
    jain

    ಬೆಂಗಳೂರು:  ಪುರಾತನವಾದ ಜೈನ ಧರ್ಮ ರಾಷ್ಟ್ರದ ಅಲ್ಪಸಂಖ್ಯಾತ ಧರ್ಮವಾಗಿದ್ದು ರಾಜ್ಯ ಸರ್ಕಾರ ಸರಿಯಾದ ಸವಲತ್ತುಗಳನ್ನು ನೀಡದೆ ಜೈನ ಧರ್ಮವನ್ನು ವಂಚಿಸುತ್ತಿದೆ. ಜೈನ ಅಭಿವೃದ್ಧಿ ನಿಗಮ ಸ್ಥಾಪಿಸಿ ಸುಮಾರು ವಾರ್ಷಿಕವಾಗಿ 200 ಕೋಟಿ ರೂ.ಗಳನ್ನು ಮೀಸಲಿಡುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಶ್ರೀ ದಿಗಂಬರ್ ಜೈನ ಗ್ಲೋಬಲ್ ಮಹಾಸಭಾ ಅಧ್ಯಕ್ಷ ಮಹೇಶ್ ಜೈನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಬೆಂಗಳೂರಿನ ಪ್ರೆಸ್ ಕ್ಲಬ್  ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರತಿವರ್ಷ ಜೈನ ಧರ್ಮದ ಅಲ್ಪಸಂಖ್ಯಾತರಿಗೆ 200 ಕೋಟಿ ರೂಗಳನ್ನು ಮೀಸಲಿಡಬೇಕು, ಸರ್ಕಾರ ರಾಜ್ಯದಲ್ಲಿರುವ 414 ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದರಂತೆ ಅಥವಾ ಜೈನ ಜನಸಂಖ್ಯೆಗೆ ಅನುಗುಣವಾಗಿ ಎರಡು ವಿದ್ಯಾರ್ಥಿ ನಿಲಯಗಳು ಜೈನ ಸಮುದಾಯಕ್ಕೆ ಮೀಸಲಿಡಬೇಕು, ಸಸ್ಯಾಹಾರಿ ವಿದ್ಯಾರ್ಥಿ ನಿಲಯಗಳು ಇದ್ದಲ್ಲಿ ಶೇಕಡ 50ರಷ್ಟು ಮೀಸಲಾತಿ ಜೈನ ವಿದ್ಯಾರ್ಥಿಗಳಿಗೆ ಇಡಬೇಕು ಎಂದರು.


    Provided by
    Provided by

    ಇಲ್ಲಿಯವರೆಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ ಜೈನ ಸಮದಾಯಕ್ಕೆ ಸಿಕ್ಕಿಲ್ಲ ಈವರೆಗೆ ನಿಗಮದಲ್ಲಿ ಜೈನ ನಿರ್ದೇಶಕರು ಆಯ್ಕೆಯಾಗಿಲ್ಲ, ಅಧ್ಯಕ್ಷ ಸ್ಥಾನ ಜೈನ ಸಮಾಜಕ್ಕೆ ನೀಡಬೇಕು ಹಾಗೂ ಇಬ್ಬರು ನಿರ್ದೇಶಕರನ್ನು ಆಯ್ಕೆ ಮಾಡಬೇಕು, ನಿಗಮದ ಅಧ್ಯಕ್ಷ ಸ್ಥಾನ  ಎಲ್ಲಾ ಅಲ್ಪಸಂಖ್ಯಾತ ಜನಾಂಗಗಳಿಗೆ ಸಿಗುವಂತೆ ಕಾನೂನು ಜಾರಿಗೆ ತರಬೇಕು ಎಂದರು.

    ಈವರೆಗೆ ಕರ್ನಾಟಕ ಅಲ್ಪಸಂಖ್ಯಾತರ ಆಯೋಗದಲ್ಲಿ ಅಧ್ಯಕ್ಷ ಸ್ಥಾನ ಜೈನ ಸಮಾಜಕ್ಕೆ ಸಿಕ್ಕಿಲ್ಲ ಹಾಗೂ ಆಯೋಗದಲ್ಲಿ ಅಲ್ಪಸಂಖ್ಯಾತ ಸದಸ್ಯರ ಆಯ್ಕೆ ಆಗಿಲ್ಲ. ಆಯೋಗಕ್ಕೆ ಜೈನ ಸದಸ್ಯರ ನೇಮಕ ಹಾಗೂ ಆಯೋಗದ ಅಧ್ಯಕ್ಷ ಸ್ಥಾನ ಎಲ್ಲಾ ಅಲ್ಪಸಂಖ್ಯಾತರ ಸಮುದಾಯಗಳಿಗೆ ಸಿಗುವಂತೆ ಕಾನೂನು ಜಾರಿಗೆ ತರಬೇಕು,  ಜೈನ  ಸಮಾಜಕ್ಕೆ ಅಲ್ಪಸಂಖ್ಯಾತರ ವಿಭಾಗದಲ್ಲಿ ಶೇಕಡ  5 ರಷ್ಟು ಮೀಸಲಾತಿ ಇದ್ದು, ಇದನ್ನು ಶೇಕಡ 20ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

    ಪ್ರಾಚೀನ ಜೈನ ಬಸದಿಗಳು ಹಾಗೂ ಅದರ ಆಸ್ತಿ ಸಂರಕ್ಷಣೆಗೆ ಕಠೋರ ಕಾನೂನು ಜಾರಿಗೆ ತರಬೇಕು. ಎಲ್ಲಾ ಪ್ರಾಚೀನ ಬಸದಿಗಳು ಹಾಗೂ ಆಸ್ತಿಗಳನ್ನು ಸರ್ವೆ ಮಾಡಿ ಅತಿಕ್ರಮಣ ತೆರವಿಗೆ ಹಾಗೂ ಬಸದಿಗಳು ಮತ್ತು ಆಸ್ತಿಗಳ ಸಂರಕ್ಷಣೆಗೆ ಸರ್ಕಾರ ವಿಶೇಷ ಕಾನೂನು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯ ಮಾಡಿದರು.

    ಕರ್ನಾಟಕ ರಾಜ್ಯ ಸರ್ಕಾರ  ಮುಸ್ಲಿಂ ಹಾಗೂ  ಕ್ರಿಶ್ಚಿಯರನ್ನ ಮಾತ್ರ ಅಲ್ಪಸಂಖ್ಯಾತರ ಧರ್ಮದವರು, ಅಲ್ಪಸಂಖ್ಯಾತರ  ವಿಭಾಗಕ್ಕೆ ಈ ಎರಡು ವರ್ಗಗಳು ಮಾತ್ರ ಸೀಮಿತವಾಗಿವೆ ಎಂದು ಜೈನರನ್ನು ಮೂಲೆ ಗುಂಪು ಮಾಡುತ್ತಾ ತಾರತಮ್ಯ ಮಾಡುತ್ತಿದೆ ಎಂದರು.

    ಅಲ್ಪಸಂಖ್ಯಾತ ವಿಭಾಗದ ಸಚಿವ ಪದವಿ, ಅಲ್ಪಸಂಖ್ಯಾತರ ಆಯೋಗಗಳ ಎಲ್ಲಾ ಮಹತ್ವದ ಹುದ್ದೆಗಳು,  ಪದವಿಗಳು ಕೇವಲ ಮುಸ್ಲಿಮರಿಗೆ ಸರ್ಕಾರ ನೀಡುತ್ತಿದೆ ,ಎಲ್ಲಾ ಅಲ್ಪಸಂಖ್ಯಾತರ ಕಚೇರಿಯಲ್ಲಿ ಅವರದ್ದೇ ಮುಸ್ಲಿಂ  ಜನರು ಇದ್ದಾರೆ. ಅಲ್ಪಸಂಖ್ಯಾತರ ನಿಗಮದಲ್ಲಿ   6  ಜನ ಮುಸ್ಲಿಮರು  1  ಕ್ರಿಶ್ಚಿಯನ್ ರನ್ನ ಆಯ್ಕೆ ಮಾಡಿಕೊಂಡಿದ್ದಾರೆ, ಆದರೆ ಜೈನರಿಗೆ ಯಾವುದೇ ಸ್ಥಾನ ನೀಡಿಲ್ಲ. ಅಲ್ಪಸಂಖ್ಯಾತರ ಆಯೋಗದಲ್ಲಿ ಸ್ಥಾನ ನೀಡಿಲ್ಲ. ಅಲ್ಪಸಂಖ್ಯಾತರ ವಿಭಾಗದ ಯೋಜನೆ ಗಳಲ್ಲಿ ಶೇಕಡ  5. ರಷ್ಟುಮೀಸಲಾತಿ ಮಾತ್ರ ನೀಡಿದ್ದಾರೆ ಎಂದರು.

    ಎಲ್ಲಾ ಯೋಜನೆಗಳಲ್ಲೂ ಒಂದೇ ಸಮುದಾಯದ ಫಲಾನುಭವಿಗಳು ಇದ್ದಾರೆ ,ಕ್ರಿಶ್ಚಿಯನ್ ಅಭಿವೃದ್ಧಿಗೆ ಸರ್ಕಾರ ಪ್ರತಿ ವರ್ಷ  200 ಕೋಟಿ ರೂ. ಗಳನ್ನ ಸರ್ಕಾರ ಕೊಡುತ್ತಿದೆ ಆದರೆ ಸರ್ಕಾರ ಜೈನರ ಬೇಡಿಕೆಗಳನ್ನ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ,ಈ ಬೇಡಿಕೆಗಳನ್ನ ಈಡೇರಿಕೆಗೆ ಸರ್ಕಾರ ಒಂದು ತಿಂಗಳ ಗಡುವು ನೀಡುತ್ತಿದೆ. ಮುಂದಿನ ಒಂದು ತಿಂಗಳೊಳಗೆ ಬೇಡಿಕೆಗಳನ್ನ ಈಡೇರಿಸದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಅಥವಾ ಡಿಸೆಂಬರ್ ನಲ್ಲಿ ನಡೆಯಲಿರುವ ಬೆಳಗಾವಿ  ವಿಧಾನಸಭಾ ಅಧಿವೇಶನದ ಸಮಯದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ವಿಭಾಗದ ದಿಗಂಬರ ಜೈನ್ ಗ್ಲೋಬಲ್ ಮಹಾಸಭಾ  ಸದಸ್ಯರಾದ ಡಾ.ರೇಣುಕಾ ರಾಂಕ್  ಜೈನ್,  ವಸಂತಿ ಚೋಪ್ರಾ ಜೈನ್ ,  ಸತೀಶ್ ಜೈನ್,  ಮಿಥುನ್ ಜೈನ್, ಸಾಮಾಜಿಕ ಹೋರಾಟಗಾರ  ಪಚ್ಚೆಶ್ ಜೈನ್ ಮಾತನಾಡಿದರು. ಮಾಳ ಹರ್ಷೇಂದ್ರ ಜೈನ್ ಉಪಸ್ಥಿತರಿದ್ದರು.

    ವರದಿ: ಜೆ. ರಂಗನಾಥ, ತುಮಕೂರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ನಿರ್ದಯಿ ತಾಯಿ..!: 3 ಮರಿಗಳಿಗೆ ಜನ್ಮ ನೀಡಿ ಬಿಟ್ಟು ಹೋದ ಹುಲಿ, ಮರಿಗಳು ಸಾವು

    July 12, 2025

    ಕಿರುತೆರೆ ನಟಿ ಪತಿಯಿಂದ ಚಾಕು ಇರಿತ!

    July 11, 2025

    ನಿಖಿಲ್ ಕುಮಾರಸ್ವಾಮಿ ಕಾರಿನಡಿಗೆ ಸಿಲುಕಿದ ಕಾರ್ಯಕರ್ತ ಸ್ವಲ್ಪದರಲ್ಲೇ ಅಪಾಯದಿಂದ ಪಾರು!

    July 9, 2025
    Our Picks

    ಮಹಾತ್ಮ ಗಾಂಧಿಯವರ ಪ್ರತಿಮೆ ಅಪವಿತ್ರಗೊಳಿಸಲು ಯತ್ನ: ಆರೋಪಿಯ ಬಂಧನ

    July 8, 2025

    ಮದುವೆ ದಿಬ್ಬಣದ ಕಾರು ಭೀಕರ ಅಪಘಾತ: ವರ ಸಹಿತ 8 ಮಂದಿ ಸಾವು

    July 5, 2025

    ಪತಿಯಿಂದಲೇ ಮಹಿಳಾ ಕೌನ್ಸಿಲರ್‌ ಬರ್ಬರ ಹತ್ಯೆ!

    July 4, 2025

    ಪ್ರಧಾನಿ ಮೋದಿಗೆ ಘಾನಾದ ರಾಷ್ಟ್ರೀಯ ಗೌರವ ಪ್ರದಾನ

    July 3, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರಿಗೆ ಹೆಮ್ಮೆ: ಗೊಲನ ಎಂಟರ್‌ ಪ್ರೈಸಸ್‌ ಗೆ ಕೇಂದ್ರ ಸರ್ಕಾರದ ಮಾನ್ಯತೆ

    July 12, 2025

    ತುಮಕೂರು: ತುಮಕೂರಿನ ಗೊಲನ ಎಂಟರ್ ಪ್ರೈಸಸ್ ಉದ್ಯಮ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ಬರೆದಿದ್ದು,  ಕೇಂದ್ರ ಸರ್ಕಾರದ ಮಾನ್ಯತೆಯನ್ನು ಪಡೆಯುವ ಮೂಲಕ…

    ಹೃದಯಾಘಾತದಿಂದ ಖಾಸಗಿ ಬಸ್ ಚಾಲಕ  ಸಾವು

    July 12, 2025

    ನಿರ್ದಯಿ ತಾಯಿ..!: 3 ಮರಿಗಳಿಗೆ ಜನ್ಮ ನೀಡಿ ಬಿಟ್ಟು ಹೋದ ಹುಲಿ, ಮರಿಗಳು ಸಾವು

    July 12, 2025

    ಸಿಗಂದೂರು ಸೇತುವೆಗೆ ರಾಜಕೀಯ ವ್ಯಕ್ತಿಗಳ ಹೆಸರು ಬೇಡ: ಎಸ್.ಎನ್.ನಾಗರಾಜು ಒತ್ತಾಯ

    July 12, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.