ಸರಗೂರು: ತಾಲ್ಲೂಕಿನ ಹಂಚೀಪುರ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದ ಮೇಲೆ ಲಿಂಗಾಯತ ಸಮುದಾಯಕ್ಕೆ ಸೇರಿದ ಹಲವು ಜಮೀನುದಾರರು ಪರಿಶಿಷ್ಟ ಜಾತಿಯವರ ಜಮೀನಿಗೆ ಹೋಗಲು ದಾರಿಯೇ ಬಿಡದೆ ತೊಂದರೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಕಳೆದ 30 ರಿಂದ 45 ವರ್ಷಗಳಿಂದ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಬಂದಿದ್ದೇವೆ. ಇಲ್ಲಿನ ಸರ್ಕಾರಿ ಜಮೀನು ಮೂಲಕ ತಿರುಗಾಡುತ್ತಿದ್ದೇವೆ ಹಾಗೂ ದನಕರುಗಳನ್ನು ಇಲ್ಲೇ ಮೇಯಿಸುತ್ತಿದ್ದೇವೆ. ಆದರೆ ಇತ್ತೀಚಿನ ಮೂರು ವರ್ಷಗಳಿಂದ ಜಮೀನಲ್ಲಿ ವ್ಯವಸಾಯ ಮಾಡಲು ಹಾಗೂ ತಿರುಗಾಡಲು ದನಕರುಗಳು ಮೇಯಿಸಲು ಬಿಡದೇ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಲಿಂಗಾಯತ ಸಮುದಾಯದ ಸುರೇಶ್, ಮಹೇಶ್, ನವೀನ್, ಶೃತಿ, ಸಣ್ಣ ಮುದಪ್ಪ, ಮಹದೇವಪ್ಪ, ಲೋಕೇಶ್ ಇನ್ನೂ ಮುಂತಾದವರು ನಮಗೆ ತೊಂದರೆ ನೀಡುತ್ತಿದ್ದಾರೆ. ಅವರಿಂದ ನಮಗೆ ನಮ್ಮ ಜಮೀನಿಗೆ ತಿರುಗಾಡಲು ಹಾಗೂ ದನಕರುಗಳನ್ನು ಮೇಯಿಸಲು ಅನುಮತಿ ನೀಡಬೇಕೆಂದು ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಮನವಿ ಮಾಡಲಾಗಿದೆ.
ಸರ್ಕಾರಿ ಜಮೀನಿನ ಸರ್ವೇ ನಂಬರ್ 14/2.ರಲ್ಲಿ20 ಗುಂಟೆ ಹಾಗೂ 15 ರಲ್ಲಿ20 ಗುಂಟೆ, ಹಳಿಯೂರು ಗ್ರಾಮದ ಸರ್ವೇ ನಂಬರ್ ರಲ್ಲಿ ಕುರುಬನಕಟ್ಟೆ 2ಎಕರೆ ಇದೆ. ಆದರೆ ಲಿಂಗಾಯತ ಸಮುದಾಯದ ಪಕ್ಕದ ಜಮೀನುದಾರರು ಈ ಜಮೀನು ನಮಗೆ ಸೇರಿದೆ ಎಂದು ಹೇಳುತ್ತಿದ್ದಾರೆ, ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ನಮಗೆ ತೊಂದರೆ ನೀಡುತ್ತಿದ್ದಾರೆ ಎಂದು ಹೇಳಿದರು.
ನಮ್ಮ ಪರಿಶಿಷ್ಟ ಜಾತಿ ಸಮುದಾಯದ ಜನರು ತಿರುಗಾಡಲು ದನಕರುಗಳನ್ನು ಮೇಯಿಸಲು ಹೋದಾಗ, ಜಾತಿ ನಿಂದನೆ ಮಾಡಿ, ಜಾತಿ ಬಗ್ಗೆ ಕೈ ತೋರಿಸಿ ಅಶ್ಲೀಲವಾಗಿ ಬೈಯ್ಯುತ್ತಿದ್ದಾರೆ. ತಿರುಗಾಡುತ್ತಿದ್ದಾರೆ. ಪರಿಶಿಷ್ಟ ಜಾತಿಯವರು ನಮ್ಮ ಮುಂದೆ ತಿರುಗಾಡಬೇಡಿ, ನಮಗೆ ನಿಮ್ಮ ಮುಖ ತೋರಿಸಬೇಡಿ ಬಾಯಿಗೆ ಬಂದಂತೆ ಬೈದುಕೊಂಡು ತೊಂದರೆ ನೀಡುತ್ತಿದ್ದಾರೆ. ನಾವುಗಳು ನಮ್ಮ ಜಮೀನಿಗೆ ಹೋಗಬೇಕಾದರೆ ಹಳಿಯೂರು ಹಾಗೂ ನರಸೀಪುರ ಗ್ರಾಮಗಳ ಬಳಸಿಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.
ತಹಸೀಲ್ದಾರ್ ರವರಿಗೆ ದೂರು ಕೊಟ್ಟ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮೇರೆಗೆ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಹಾಗೂ ಸರ್ವೇಯರ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಬಂದಿದ್ದಾರೆ. ಲಿಂಗಾಯತ ಸಮುದಾಯದವರು ಮಹೇಶ್ ಕುಟುಂಬದವರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಕಂದಾಯ ಇಲಾಖೆ ಗುರುತಿಸಿದರು ಕೂಡ ಜಾಗವನ್ನು ಬಿಡದೆ, ಪರಿಶಿಷ್ಟ ಜಾತಿ ನಿಂದನೆ ಮಾಡಿಕೊಂಡು ಮಾನಸಿಕ ತೊಂದರೆ ನೀಡುತ್ತಾ ಬಂದಿದ್ದಾರೆ ಎಂದು ಗ್ರಾಮದ ಮುಖಂಡ ಸುರೇಶ್ ಹೇಳಿದರು.
ಈಗಾಗಲೇ ಹೈಕೋರ್ಟ್ ನ್ಯಾಯಾಲಯದಲ್ಲಿ ಹಿಂದಿನ ಜಮೀನವರು ತಿರುಗಾಡಲು ತೊಂದರೆ ಕೊಡಬಾರದು ಆದೇಶ ಇದೆ ಎಂದರು. ಪರಿಶಿಷ್ಟ ಜಾತಿ ಸಮುದಾಯಕ್ಕೆ ತೊಂದರೆ ನೀಡಿದ ಸವರ್ಣೀಯರು ಕುಟುಂಬದವರ ಮೇಲೆ ಮಹೇಶ್ ಮತ್ತು ಲೋಕೇಶ್ ಕುಟುಂಬದವರು ಮೇಲೆ ಎಸ್ಸಿ ಎಸ್ಟಿ ಕಾಯ್ದೆಯಡಿಲ್ಲಿ ದೂರು ದಾಖಲು ಮಾಡಿ, ಅವರ ವಿರುದ್ಧ ಕಾನೂನಾತ್ಮಕವಾಗಿ ಸೂಕ್ತ ಕ್ರಮವಹಿಸಿ ಎಂದು ನಮಗೆ ಜಮೀನಿನಲ್ಲಿ ತಿರುಗಾಡಲು ಹಾಗೂ ಸರ್ಕಾರಿ ಜಮೀನನ್ನು ಬಿಡಿಸಿಕೊಡ ಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA